ETV Bharat / bharat

ಪಿಸಿಐ ನೂತನ ಮುಖ್ಯಸ್ಥರಾಗಿ ನಿವೃತ್ತ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ನೇಮಕ - ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ

ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ)ಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಈ ಮೂಲಕ ಮಾಧ್ಯಮ ವೀಕ್ಷಣಾ ಸಂಸ್ಥೆಯ ಮುಖ್ಯಸ್ಥರಾದ ಮೊದಲ ಮಹಿಳೆಯಾಗಿದ್ದಾರೆ.

Justice Ranjana Prakash Desai
ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ
author img

By

Published : Jun 18, 2022, 7:00 AM IST

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಶುಕ್ರವಾರ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಅವರ ನೇಮಕಾತಿಯನ್ನು ಸರ್ಕಾರ ಔಪಚಾರಿಕವಾಗಿ ಪ್ರಕಟಿಸಿದೆ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಪಿಸಿಐ ಸದಸ್ಯ ಪ್ರಕಾಶ್ ದುಬೆ ಅವರನ್ನೊಳಗೊಂಡ ಸಮಿತಿಯು ಇತ್ತೀಚೆಗೆ ಪಿಸಿಐ ಅಧ್ಯಕ್ಷ ಸ್ಥಾನಕ್ಕೆ ನ್ಯಾಯಮೂರ್ತಿ ದೇಸಾಯಿ ಅವರ ಹೆಸರನ್ನು ಸೂಚಿಸಿತ್ತು.

ಸೆಪ್ಟೆಂಬರ್ 13, 2011 ರಿಂದ ಅಕ್ಟೋಬರ್ 29, 2014 ರವರೆಗೆ ಅವರು ಸುಪ್ರೀಂಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಮೊದಲು, ಅವರು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು. 72 ವರ್ಷದ ನ್ಯಾಯಮೂರ್ತಿ ದೇಸಾಯಿ ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಡಿಲಿಮಿಟೇಶನ್ ಆಯೋಗದ ನೇತೃತ್ವ ವಹಿಸಿದ್ದರು. ಇದನ್ನು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಮರುವಿನ್ಯಾಸ ಮಾಡಲು ಸ್ಥಾಪಿಸಲಾಯಿತು.

ನ್ಯಾಯಮೂರ್ತಿ ಚಂದ್ರಮೌಳಿ ಕುಮಾರ್ ಪ್ರಸಾದ್ (ನಿವೃತ್ತ) ತಮ್ಮ ಅವಧಿಯನ್ನು ಪೂರ್ಣಗೊಳಿಸಿದಾಗಿನಿಂದ ಪಿಸಿಐ ಅಧ್ಯಕ್ಷರ ಹುದ್ದೆಯು ಕಳೆದ ನವೆಂಬರ್‌ನಲ್ಲಿ ಖಾಲಿಯಾಗಿದೆ.

ಇದನ್ನೂ ಓದಿ: ಬಾಲಿಕಾ ಪಂಚಾಯತ್ ಆರಂಭಿಸಿದ ದೇಶದ ಮೊದಲ ರಾಜ್ಯ ಗುಜರಾತ್

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಶುಕ್ರವಾರ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಅವರ ನೇಮಕಾತಿಯನ್ನು ಸರ್ಕಾರ ಔಪಚಾರಿಕವಾಗಿ ಪ್ರಕಟಿಸಿದೆ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಪಿಸಿಐ ಸದಸ್ಯ ಪ್ರಕಾಶ್ ದುಬೆ ಅವರನ್ನೊಳಗೊಂಡ ಸಮಿತಿಯು ಇತ್ತೀಚೆಗೆ ಪಿಸಿಐ ಅಧ್ಯಕ್ಷ ಸ್ಥಾನಕ್ಕೆ ನ್ಯಾಯಮೂರ್ತಿ ದೇಸಾಯಿ ಅವರ ಹೆಸರನ್ನು ಸೂಚಿಸಿತ್ತು.

ಸೆಪ್ಟೆಂಬರ್ 13, 2011 ರಿಂದ ಅಕ್ಟೋಬರ್ 29, 2014 ರವರೆಗೆ ಅವರು ಸುಪ್ರೀಂಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಮೊದಲು, ಅವರು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು. 72 ವರ್ಷದ ನ್ಯಾಯಮೂರ್ತಿ ದೇಸಾಯಿ ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಡಿಲಿಮಿಟೇಶನ್ ಆಯೋಗದ ನೇತೃತ್ವ ವಹಿಸಿದ್ದರು. ಇದನ್ನು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಮರುವಿನ್ಯಾಸ ಮಾಡಲು ಸ್ಥಾಪಿಸಲಾಯಿತು.

ನ್ಯಾಯಮೂರ್ತಿ ಚಂದ್ರಮೌಳಿ ಕುಮಾರ್ ಪ್ರಸಾದ್ (ನಿವೃತ್ತ) ತಮ್ಮ ಅವಧಿಯನ್ನು ಪೂರ್ಣಗೊಳಿಸಿದಾಗಿನಿಂದ ಪಿಸಿಐ ಅಧ್ಯಕ್ಷರ ಹುದ್ದೆಯು ಕಳೆದ ನವೆಂಬರ್‌ನಲ್ಲಿ ಖಾಲಿಯಾಗಿದೆ.

ಇದನ್ನೂ ಓದಿ: ಬಾಲಿಕಾ ಪಂಚಾಯತ್ ಆರಂಭಿಸಿದ ದೇಶದ ಮೊದಲ ರಾಜ್ಯ ಗುಜರಾತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.