ETV Bharat / bharat

ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ ಬರ್ತಾರಾ 'ಬಿಸಿಸಿಐ ಬಾಸ್​' ?: ಊಹಾಪೋಹಗಳಿಗೆ ಕಾರಣವೇನು?

author img

By

Published : Jun 1, 2022, 8:02 PM IST

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಸಚಿವ ಅಮಿತ್​ ಶಾ ಅವರೊಂದಿಗೆ ಸೇರಿ ಗಂಗೂಲಿ ಊಟವನ್ನೂ ಮಾಡಿದ್ದರು. ಹೀಗಾಗಿ ದಾದಾ ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ.

Rumours on sourav ganguly entry to politics
ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ ಬರ್ತಾರಾ ಬಿಸಿಸಿಐ ಬಾಸ್

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮಾಡಿದ್ದ ಒಂದು ಟ್ವೀಟ್​ ಬುಧವಾರ ಭಾರಿ ಸಂಚಲನವನ್ನು ಮೂಡಿಸಿದೆ. ದಾದಾ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆಯುತ್ತಾರೆ ಮತ್ತು ರಾಜಕೀಯಕ್ಕೆ ಸೇರುತ್ತಾರೆ ಎಂಬ ದೊಡ್ಡ ಮಟ್ಟದ ಚರ್ಚೆಯನ್ನೂ ಟ್ವೀಟ್​ ಹುಟ್ಟು ಹಾಕಿದೆ. ಆದರೆ, ಇದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

'1992ರಲ್ಲಿ ಆರಂಭವಾದ ನನ್ನ ಕ್ರಿಕೆಟ್ ವೃತ್ತಿ ಜೀವನ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನ ಕ್ರಿಕೆಟ್ ವೃತ್ತಿಬದುಕಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ' ಎಂದು ದಾದಾ ಟ್ವೀಟ್​ ಮಾಡಿರುವುದೇ ಇಷ್ಟೆಲ್ಲ ಊಹಾಪೋಹಗಳಿಗೂ ಕಾರಣವಾಗಿದೆ.

'ನನ್ನ ಕ್ರಿಕೆಟ್ ವೃತ್ತಿ ಬದುಕಿನೊಂದಿಗೆ ಜೊತೆಯಾದ ಮತ್ತು ಇಂದು ನಾನು ಈ ಸ್ಥಾನಕ್ಕೆ ಬರಲು ಬೆಂಬಲಿಸಿದ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಇವತ್ತು, ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ. ಇದು ಹಲವರಿಗೆ ನೆರವಾಗಲಿದೆ ಎಂಬ ಭಾವನೆ ನನ್ನಲ್ಲಿದೆ. ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನನಗೆ ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಗಂಗೂಲಿ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ?: ದಾದಾ ಮಾಡಿದ್ದ ಈ ಟ್ವೀಟ್ ಕ್ರಿಕೆಟ್ ಮಾತ್ರವಲ್ಲದೇ ರಾಜಕೀಯದಲ್ಲೂ ಸಂಚಲನ ಸೃಷ್ಟಿಸುವಂತೆ ಮಾಡಿತ್ತು. ಯಾಕೆಂದರೆ ಹಲವು ದಿನಗಳಿಂದಲೂ ಗಂಗೂಲಿ ರಾಜಕೀಯಕ್ಕೆ ಬರುತ್ತಾರೆ ಮತ್ತು ಅವರನ್ನು ಸೆಳೆಯಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೆಲ ವರ್ಷಗಳಿಂದಲೂ ಸುಳಿದಾಡುತ್ತಿವೆ.

ಅದರಲ್ಲೂ ಕಳೆದ ಲೋಕಸಭಾ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಜೋರಾಗಿಯೇ ಕೇಳಿ ಬಂದಿದ್ದವು. ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೊಂದಿಗೆ ಸೇರಿ ಗಂಗೂಲಿ ಊಟವನ್ನೂ ಮಾಡಿದ್ದರು. ಮಮತಾ ಜೊತೆ ಔತಣಕೂಟದಲ್ಲಿ ಬಳಿಕ ದಾದಾ, ಮಮತಾ ಬ್ಯಾನರ್ಜಿ ನನಗೆ ತುಂಬಾ ಹತ್ತಿರ ವ್ಯಕ್ತಿ ಎಂದು ಹೇಳಿದ್ದರು.

ಇತ್ತ, ಅಮಿತ್​ ಶಾ ಕಳೆದ ಮೇ 5ರಂದು ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಾಗ ತಾವೇ ಗಂಗೂಲಿ ಮನೆಗೆ ಭೇಟಿ ಕೊಟ್ಟು ರಾತ್ರಿಯ ಔತಣಕೂಟವನ್ನು ಸ್ವೀಕರಿಸಿದ್ದರು. 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಅಮಿತ್​ ಶಾ ಕೋಲ್ಕತ್ತಾಕ್ಕೆ ತೆರಳಿದಾಗ ಗಂಗೂಲಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಈ ಸಮಯದಲ್ಲಿ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಶಾ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರೆ, ಅಮಿತ್​ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ದಾದಾ ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ.

ಸ್ಪಷ್ಟನೆ ಕೊಟ್ಟ ಜಯ್ ಶಾ: 49 ವರ್ಷದ ಗಂಗೂಲಿ 2019ರಿಂದ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕುತೂಲಹಕಾರಿ ಟ್ವೀಟ್​ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದರಿಂದ ಖುದ್ದು ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಾ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳನ್ನು ಅವರು ಅಲೆಗೆಳೆದಿದ್ದು, ಗಂಗೂಲಿ ರಾಜೀನಾಮೆ ನೀಡುವುದಿಲ್ಲ ಹೇಳಿದ್ದಾರೆ.

ಇದನ್ನೂ ಓದಿ: 'ಜೀವನದ ಹೊಸ ಅಧ್ಯಾಯ'ದ ಬಗ್ಗೆ ಗಂಗೂಲಿ 'ನಿಗೂಢ' ಟ್ವೀಟ್​.. ರಾಜಕೀಯ ಸೇರ್ತಾರಾ ದಾದಾ?

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮಾಡಿದ್ದ ಒಂದು ಟ್ವೀಟ್​ ಬುಧವಾರ ಭಾರಿ ಸಂಚಲನವನ್ನು ಮೂಡಿಸಿದೆ. ದಾದಾ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆಯುತ್ತಾರೆ ಮತ್ತು ರಾಜಕೀಯಕ್ಕೆ ಸೇರುತ್ತಾರೆ ಎಂಬ ದೊಡ್ಡ ಮಟ್ಟದ ಚರ್ಚೆಯನ್ನೂ ಟ್ವೀಟ್​ ಹುಟ್ಟು ಹಾಕಿದೆ. ಆದರೆ, ಇದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

'1992ರಲ್ಲಿ ಆರಂಭವಾದ ನನ್ನ ಕ್ರಿಕೆಟ್ ವೃತ್ತಿ ಜೀವನ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನ ಕ್ರಿಕೆಟ್ ವೃತ್ತಿಬದುಕಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ' ಎಂದು ದಾದಾ ಟ್ವೀಟ್​ ಮಾಡಿರುವುದೇ ಇಷ್ಟೆಲ್ಲ ಊಹಾಪೋಹಗಳಿಗೂ ಕಾರಣವಾಗಿದೆ.

'ನನ್ನ ಕ್ರಿಕೆಟ್ ವೃತ್ತಿ ಬದುಕಿನೊಂದಿಗೆ ಜೊತೆಯಾದ ಮತ್ತು ಇಂದು ನಾನು ಈ ಸ್ಥಾನಕ್ಕೆ ಬರಲು ಬೆಂಬಲಿಸಿದ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಇವತ್ತು, ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ. ಇದು ಹಲವರಿಗೆ ನೆರವಾಗಲಿದೆ ಎಂಬ ಭಾವನೆ ನನ್ನಲ್ಲಿದೆ. ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನನಗೆ ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಗಂಗೂಲಿ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ?: ದಾದಾ ಮಾಡಿದ್ದ ಈ ಟ್ವೀಟ್ ಕ್ರಿಕೆಟ್ ಮಾತ್ರವಲ್ಲದೇ ರಾಜಕೀಯದಲ್ಲೂ ಸಂಚಲನ ಸೃಷ್ಟಿಸುವಂತೆ ಮಾಡಿತ್ತು. ಯಾಕೆಂದರೆ ಹಲವು ದಿನಗಳಿಂದಲೂ ಗಂಗೂಲಿ ರಾಜಕೀಯಕ್ಕೆ ಬರುತ್ತಾರೆ ಮತ್ತು ಅವರನ್ನು ಸೆಳೆಯಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೆಲ ವರ್ಷಗಳಿಂದಲೂ ಸುಳಿದಾಡುತ್ತಿವೆ.

ಅದರಲ್ಲೂ ಕಳೆದ ಲೋಕಸಭಾ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಜೋರಾಗಿಯೇ ಕೇಳಿ ಬಂದಿದ್ದವು. ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೊಂದಿಗೆ ಸೇರಿ ಗಂಗೂಲಿ ಊಟವನ್ನೂ ಮಾಡಿದ್ದರು. ಮಮತಾ ಜೊತೆ ಔತಣಕೂಟದಲ್ಲಿ ಬಳಿಕ ದಾದಾ, ಮಮತಾ ಬ್ಯಾನರ್ಜಿ ನನಗೆ ತುಂಬಾ ಹತ್ತಿರ ವ್ಯಕ್ತಿ ಎಂದು ಹೇಳಿದ್ದರು.

ಇತ್ತ, ಅಮಿತ್​ ಶಾ ಕಳೆದ ಮೇ 5ರಂದು ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಾಗ ತಾವೇ ಗಂಗೂಲಿ ಮನೆಗೆ ಭೇಟಿ ಕೊಟ್ಟು ರಾತ್ರಿಯ ಔತಣಕೂಟವನ್ನು ಸ್ವೀಕರಿಸಿದ್ದರು. 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಅಮಿತ್​ ಶಾ ಕೋಲ್ಕತ್ತಾಕ್ಕೆ ತೆರಳಿದಾಗ ಗಂಗೂಲಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಈ ಸಮಯದಲ್ಲಿ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಶಾ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರೆ, ಅಮಿತ್​ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ದಾದಾ ಕ್ರಿಕೆಟ್​ ಅಂಗಳದಿಂದ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ.

ಸ್ಪಷ್ಟನೆ ಕೊಟ್ಟ ಜಯ್ ಶಾ: 49 ವರ್ಷದ ಗಂಗೂಲಿ 2019ರಿಂದ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕುತೂಲಹಕಾರಿ ಟ್ವೀಟ್​ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದರಿಂದ ಖುದ್ದು ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಾ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳನ್ನು ಅವರು ಅಲೆಗೆಳೆದಿದ್ದು, ಗಂಗೂಲಿ ರಾಜೀನಾಮೆ ನೀಡುವುದಿಲ್ಲ ಹೇಳಿದ್ದಾರೆ.

ಇದನ್ನೂ ಓದಿ: 'ಜೀವನದ ಹೊಸ ಅಧ್ಯಾಯ'ದ ಬಗ್ಗೆ ಗಂಗೂಲಿ 'ನಿಗೂಢ' ಟ್ವೀಟ್​.. ರಾಜಕೀಯ ಸೇರ್ತಾರಾ ದಾದಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.