ETV Bharat / bharat

ಸೈಕಲ್​​ನಲ್ಲಿ ಪತ್ನಿಯ ಶವ..ದಿಕ್ಕುತೋಚದ ಸ್ಥಿತಿಯಲ್ಲಿ ಪತಿ..! - ಜೌನ್​ಪುರದಲ್ಲಿ ಪತ್ನಿ ಮೃತದೇಹವನ್ನು ಸೈಕಲ್​ ಮೇಲೆ ಸಾಗಿಸಿದ ಪತಿ,

ಪೊಲೀಸರು ತಿಲಕಧರಿ ಸಿಂಗ್​ಗೆ ಹಣದ ಸಹಾಯ ಮಾಡಿದಲ್ಲದೇ, ಅವರ ಪತ್ನಿಯ ಶವವನ್ನು ರಾಮ್​ಘಾಟ್​ಗೆ ಸಾಗಿಸಲು ವ್ಯವಸ್ಥೆಯೂ ಮಾಡಿ ಮಾನವೀಯತೆ ಮೆರೆದರು..

Husband rushed to the crematorium with wife body,  Husband rushed to the crematorium with wife body on bicycle, Jaunpur news, ಪತ್ನಿ ಮೃತದೇಹವನ್ನು ಸೈಕಲ್​ ಮೇಲೆ ಸಾಗಿಸಿದ ಪತಿ, ಜೌನ್​ಪುರದಲ್ಲಿ ಪತ್ನಿ ಮೃತದೇಹವನ್ನು ಸೈಕಲ್​ ಮೇಲೆ ಸಾಗಿಸಿದ ಪತಿ, ಜೌನ್​ಪುರ್​ ಸುದ್ದಿ,
ಪತ್ನಿಯ ಶವವನ್ನು ಸೈಕಲ್​ ಮೇಲೆ ಸಾಗಿಸಲು ಒದ್ದಾಡಿದ ಪತಿ
author img

By

Published : Apr 28, 2021, 2:34 PM IST

Updated : Sep 8, 2021, 6:14 PM IST

ಜೌನಪುರ್​ : ಇಲ್ಲಿನ ಅಮರ್​ಪುರ ಗ್ರಾಮದ ತಿಲಕಧರಿ ಸಿಂಗ್ ಎಂಬಾತನ ಪತ್ನಿ ರಾಜಕುಮಾರಿ ಎಂಬುವರು ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಜಿಲ್ಲಾಸ್ಪತ್ರೆ ಮೃತದೇಹವನ್ನು ಸಾಗಿಸಲು ಸಹಾಯ ಮಾಡಿಲ್ಲ. ಕೊರೊನಾ ಭಯದಿಂದಾಗಿ ತಿಲಕಧರಿ ಸಿಂಗ್‌ಗೆ​ ಸಂಬಂಧಿಕರು ಸಹ ಆಸ್ಪತ್ರೆಯತ್ತ ಸುಳಿದಿಲ್ಲ.

ಹೀಗಾಗಿ, ಬಡವ ತಿಲಕಧರಿ ಸಿಂಗ್​ ಬಳಿ ಹಣವಿಲ್ಲದೆ ಮತ್ತು ವಿಧಿಯಿಲ್ಲದೆ ತನ್ನ ಪತ್ನಿಯ ಶವವನ್ನು ಸೈಕಲ್​ ಮೇಲೆಯೇ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಪತಿ ತಿಲಕಧರಿ ಸಿಂಗ್​ ಸುಸ್ತಾಗಿ ಅಲ್ಲಲ್ಲಿ ರಸ್ತೆ ಪಕ್ಕ ಕುಳಿತುಕೊಳ್ಳುತ್ತಿದ್ದರು. ಆದರೂ ಜನರು ತಿಲಕಧರಿ ಸಿಂಗ್​ ಸಹಾಯಕ್ಕೆ ಮುಂದೆ ಬರದೆ ಮೂಕ ಪ್ರೇಕ್ಷರಂತೆ ನೋಡುತ್ತಿದ್ದರು. ಅಂತ್ಯಕ್ರಿಯೆಗೂ ಗ್ರಾಮಸ್ಥರು ನಿರಾಕರಿಸಿದರು. ಈ ಸುದ್ದಿ ಪೊಲೀಸರಿಗೆ ತಿಳಿದಿದೆ.

ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತಿಲಕಧರಿ ಸಿಂಗ್‌ಗೆ​ ಸಹಾಯ ಮಾಡಿದರು. ಪೊಲೀಸರು ತಿಲಕಧರಿ ಸಿಂಗ್​ಗೆ ಹಣದ ಸಹಾಯ ಮಾಡಿದ್ದಲ್ಲದೆ, ಅವರ ಪತ್ನಿಯ ಶವವನ್ನು ರಾಮ್​ಘಾಟ್​ಗೆ ಸಾಗಿಸಲು ವ್ಯವಸ್ಥೆಯೂ ಮಾಡಿ ಮಾನವೀಯತೆ ಮೆರೆದರು.

ಜೌನಪುರ್​ : ಇಲ್ಲಿನ ಅಮರ್​ಪುರ ಗ್ರಾಮದ ತಿಲಕಧರಿ ಸಿಂಗ್ ಎಂಬಾತನ ಪತ್ನಿ ರಾಜಕುಮಾರಿ ಎಂಬುವರು ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಜಿಲ್ಲಾಸ್ಪತ್ರೆ ಮೃತದೇಹವನ್ನು ಸಾಗಿಸಲು ಸಹಾಯ ಮಾಡಿಲ್ಲ. ಕೊರೊನಾ ಭಯದಿಂದಾಗಿ ತಿಲಕಧರಿ ಸಿಂಗ್‌ಗೆ​ ಸಂಬಂಧಿಕರು ಸಹ ಆಸ್ಪತ್ರೆಯತ್ತ ಸುಳಿದಿಲ್ಲ.

ಹೀಗಾಗಿ, ಬಡವ ತಿಲಕಧರಿ ಸಿಂಗ್​ ಬಳಿ ಹಣವಿಲ್ಲದೆ ಮತ್ತು ವಿಧಿಯಿಲ್ಲದೆ ತನ್ನ ಪತ್ನಿಯ ಶವವನ್ನು ಸೈಕಲ್​ ಮೇಲೆಯೇ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಪತಿ ತಿಲಕಧರಿ ಸಿಂಗ್​ ಸುಸ್ತಾಗಿ ಅಲ್ಲಲ್ಲಿ ರಸ್ತೆ ಪಕ್ಕ ಕುಳಿತುಕೊಳ್ಳುತ್ತಿದ್ದರು. ಆದರೂ ಜನರು ತಿಲಕಧರಿ ಸಿಂಗ್​ ಸಹಾಯಕ್ಕೆ ಮುಂದೆ ಬರದೆ ಮೂಕ ಪ್ರೇಕ್ಷರಂತೆ ನೋಡುತ್ತಿದ್ದರು. ಅಂತ್ಯಕ್ರಿಯೆಗೂ ಗ್ರಾಮಸ್ಥರು ನಿರಾಕರಿಸಿದರು. ಈ ಸುದ್ದಿ ಪೊಲೀಸರಿಗೆ ತಿಳಿದಿದೆ.

ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತಿಲಕಧರಿ ಸಿಂಗ್‌ಗೆ​ ಸಹಾಯ ಮಾಡಿದರು. ಪೊಲೀಸರು ತಿಲಕಧರಿ ಸಿಂಗ್​ಗೆ ಹಣದ ಸಹಾಯ ಮಾಡಿದ್ದಲ್ಲದೆ, ಅವರ ಪತ್ನಿಯ ಶವವನ್ನು ರಾಮ್​ಘಾಟ್​ಗೆ ಸಾಗಿಸಲು ವ್ಯವಸ್ಥೆಯೂ ಮಾಡಿ ಮಾನವೀಯತೆ ಮೆರೆದರು.

Last Updated : Sep 8, 2021, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.