ETV Bharat / bharat

ಆಂಧ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ: YSRCP ಭರ್ಜರಿ ಜಯಭೇರಿ

ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ YSRCP ಭರ್ಜರಿ ಜಯ ಸಾಧಿಸಿದೆ. ಏಪ್ರಿಲ್ 8 ರಂದು ನಡೆದಿದ್ದ ಚುನಾವಣಾ ಫಲಿತಾಂಶ ನಿನ್ನೆ ಹೊರ ಬಿದ್ದಿದೆ.

author img

By

Published : Sep 20, 2021, 10:44 AM IST

ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ

ಅಮರಾವತಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ (YSRCP) ಭರ್ಜರಿ ಜಯ ಸಾಧಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವು ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ (MPTC) ಶೇಕಡಾ 90 ರಷ್ಟು ಮತ್ತು ಜಿಲ್ಲಾ ಪರಿಷತ್‌ನ ಪ್ರಾದೇಶಿಕ ಕ್ಷೇತ್ರಗಳಲ್ಲಿ (ZPTC) ಶೇಕಡಾ 99 ರಷ್ಟು ಗೆಲುವು ಸಾಧಿಸಿದೆ.

ಏಪ್ರಿಲ್ 8 ರಂದು 515 ZPTC ಮತ್ತು 7,220 MPTC ಗಳಿಗೆ ಚುನಾವಣೆ ನಡೆಸಲಾಗಿತ್ತು. ಏಪ್ರಿಲ್ 10 ರಂದು ಚುನಾವಣಾ ಫಲಿತಾಂಶ ಘೋಷಿಸಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಆದರೆ, ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿದ ಬಳಿಕ ರಾಜ್ಯ ಸರ್ಕಾರವು ಮಾದರಿ ನೀತಿ ಸಂಹಿತೆ ಪಾಲಿಸಿಲ್ಲ ಎಂದು ಆರೋಪಿಸಿ ತೆಲುಗುದೇಶಂ ಪಕ್ಷ ಮತ್ತು ಬಿಜೆಪಿ ಆಂಧ್ರ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆ ಮತ ಎಣಿಕೆ ಸ್ಥಗಿತಗೊಳಿಸಲಾಗಿತ್ತು.

ಸೆಪ್ಟೆಂಬರ್​ 16 ರಂದು (ಗುರುವಾರ) ಹೈಕೋರ್ಟ್‌ನ ವಿಭಾಗೀಯ ಪೀಠ ಮತ ಎಣಿಕೆಗೆ ಅನುಮತಿ ನೀಡಿತು. ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ 553 ರಲ್ಲಿ 547 ZPTC ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ. 8,083 MPTC ಕ್ಷೇತ್ರಗಳ ಪೈಕಿ 7,284 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಜಗನ್​ ಪಕ್ಷ, ರಾಜ್ಯದ 75 ಪುರಸಭೆಗಳು ಮತ್ತು 74 ನಗರ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲೂ ಗೆಲುವು ಸಾಧಿಸಿದೆ.

ಅಮರಾವತಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ (YSRCP) ಭರ್ಜರಿ ಜಯ ಸಾಧಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವು ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ (MPTC) ಶೇಕಡಾ 90 ರಷ್ಟು ಮತ್ತು ಜಿಲ್ಲಾ ಪರಿಷತ್‌ನ ಪ್ರಾದೇಶಿಕ ಕ್ಷೇತ್ರಗಳಲ್ಲಿ (ZPTC) ಶೇಕಡಾ 99 ರಷ್ಟು ಗೆಲುವು ಸಾಧಿಸಿದೆ.

ಏಪ್ರಿಲ್ 8 ರಂದು 515 ZPTC ಮತ್ತು 7,220 MPTC ಗಳಿಗೆ ಚುನಾವಣೆ ನಡೆಸಲಾಗಿತ್ತು. ಏಪ್ರಿಲ್ 10 ರಂದು ಚುನಾವಣಾ ಫಲಿತಾಂಶ ಘೋಷಿಸಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಆದರೆ, ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿದ ಬಳಿಕ ರಾಜ್ಯ ಸರ್ಕಾರವು ಮಾದರಿ ನೀತಿ ಸಂಹಿತೆ ಪಾಲಿಸಿಲ್ಲ ಎಂದು ಆರೋಪಿಸಿ ತೆಲುಗುದೇಶಂ ಪಕ್ಷ ಮತ್ತು ಬಿಜೆಪಿ ಆಂಧ್ರ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆ ಮತ ಎಣಿಕೆ ಸ್ಥಗಿತಗೊಳಿಸಲಾಗಿತ್ತು.

ಸೆಪ್ಟೆಂಬರ್​ 16 ರಂದು (ಗುರುವಾರ) ಹೈಕೋರ್ಟ್‌ನ ವಿಭಾಗೀಯ ಪೀಠ ಮತ ಎಣಿಕೆಗೆ ಅನುಮತಿ ನೀಡಿತು. ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ 553 ರಲ್ಲಿ 547 ZPTC ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ. 8,083 MPTC ಕ್ಷೇತ್ರಗಳ ಪೈಕಿ 7,284 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಜಗನ್​ ಪಕ್ಷ, ರಾಜ್ಯದ 75 ಪುರಸಭೆಗಳು ಮತ್ತು 74 ನಗರ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲೂ ಗೆಲುವು ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.