ETV Bharat / bharat

ಐಸಿಸ್​ ಉಗ್ರರ ನಂಟು ಶಂಕೆ: ಮನೆ-ಕಾಲೇಜು ಮೇಲೆ NIA ದಾಳಿ, ತುಮಕೂರಲ್ಲಿ ಓರ್ವ ವಶಕ್ಕೆ

author img

By

Published : Jul 31, 2022, 4:29 PM IST

Updated : Jul 31, 2022, 6:03 PM IST

ಉಗ್ರ ಚಟುವಟಿಕೆಗಳ ಕುರಿತಾಗಿ ಎನ್‌ಐಎ ಅಧಿಕಾರಿಗಳು ಆರು ರಾಜ್ಯಗಳಲ್ಲಿ ದಾಳಿ ಮಾಡಿದ್ದು, ಶೋಧ ಕಾರ್ಯ ನಡೆಸಲಾಗಿದೆ. ಈ ಬಗ್ಗೆ ಎನ್‌ಐಎ ಅಧಿಕೃತವಾಗಿ ಟ್ವೀಟ್​ ಮಾಡಿ ಮಾಹಿತಿ ನೀಡಿದೆ.

IS module case: NIA conducts searches in 6 states
IS module case: ಕರ್ನಾಟಕದ ಭಟ್ಕಳ, ತುಮಕೂರು ಸೇರಿ ದೇಶದ 13 ಸ್ಥಳದಲ್ಲಿ NIA ದಾಳಿ

ನವದೆಹಲಿ: ಐಸಿಸ್ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಕರ್ನಾಟಕ ಸೇರಿ ಆರು ರಾಜ್ಯಗಳ 13 ಸ್ಥಳಗಳಲ್ಲಿ ದಾಳಿ ಮಾಡಿ, ಶಂಕಿತರಿಗಾಗಿ ಶೋಧ ನಡೆಸಿದೆ.

ಕರ್ನಾಟಕದ ಭಟ್ಕಳ ಮತ್ತು ತುಮಕೂರು ನಗರ, ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸನ್, ಗುಜರಾತ್‌ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ ಜಿಲ್ಲೆ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ನಾಂದೇಡ್ ಜಿಲ್ಲೆ ಮತ್ತು ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಯಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.

  • NIA Conducts Searches at Multiple Locations in 6 States into the Activities of ISIS Module Case (RC-26/2022/NIA-DLI) pic.twitter.com/AdY6Lz63Sn

    — NIA India (@NIA_India) July 31, 2022 " class="align-text-top noRightClick twitterSection" data=" ">

ಕರ್ನಾಟಕದ ಭಟ್ಕಳದಲ್ಲಿ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಇತ್ತ, ಮಧ್ಯಪ್ರದೇಶದ ಭೋಪಾಲ್​ನಲ್ಲೂ ಓರ್ವ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಮೂರ್ನಾಲ್ಕು ಜನರನ್ನೂ ವಿಚಾರಣೆಗೊಳಪಡಿಸಲಾಗಿದೆ. ಜೊತೆಗೆ ಗುಜರಾತ್​ನ ಸೂರತ್​ನಲ್ಲೂ ಓರ್ವ ಯುವಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಜೂನ್ 25ರಂದು ಐಪಿಸಿ ಸೆಕ್ಷನ್ 153 ಎ ಮತ್ತು 153 ಬಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40ರ ಅಡಿಯಲ್ಲಿ ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇಂದು ನಡೆಸಲಾದ ದಾಳಿ ಮತ್ತು ಶೋಧ ಕಾರ್ಯವು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲು ಸಹಕಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಸ್​ ಉಗ್ರರ ನಂಟು ಶಂಕೆ: ಮನೆ-ಕಾಲೇಜು ಮೇಲೆ NIA ದಾಳಿ, ತುಮಕೂರಲ್ಲಿ ಓರ್ವ ವಶಕ್ಕೆ

ತುಮಕೂರಿನ ಮನೆ-ಕಾಲೇಜು ಮೇಲೆ ದಾಳಿ: ತುಮಕೂರಿನ‌ಲ್ಲಿ ಮನೆ ಮತ್ತು ಕಾಲೇಜು ಮೇಲೆ ಎನ್ಐಎ ಅಧಿಕಾರಿಗಳು ಮಾಡಿದ್ದಾರೆ. ಮರಳೂರು ದಿಣ್ಣೆ ಮೂಲದ ನಿವಾಸಿ ಮನೆ ಮೇಲೆ ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ, ಹೆಚ್​ಎಂಎಸ್​ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್​ ವಿದ್ಯಾರ್ಥಿ ಮರಳೂರು ದಿಣ್ಣೆ ಬಡಾವಣೆಯಲ್ಲಿ ವಾಸವಿದ್ದ ಎನ್ನಲಾಗ್ತಿದೆ. ಈ ಕಾಲೇಜಿನ ಮೇಲೂ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಲ್ಲಿ ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.

ಈ ಕಾಲೇಜು ಮಾಜಿ ಶಾಸಕ ಡಾ.ರಫೀಕ್​ ಅಹ್ಮದ್​ ಅವರ ಒಡೆತನದಲ್ಲಿದೆ. ಹೆಚ್​ಎಂಎಸ್​ ಸಂಸ್ಥೆಗೆ ಸೇರಿದ ಕಟ್ಟಡವನ್ನು ಬಾಡಿಗೆ ಪಡೆದು ಮುಂಬೈ ಮೂಲದವರು ಕಾಲೇಜು ನಡೆಸುತ್ತಿದ್ದಾರೆ. ಈ ಯುನಾನಿ ಕಾಲೇಜಿಗೂ ಮತ್ತು ಹೆಚ್​ಎಂಎಸ್​ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಹೆಚ್​ಎಂಎಸ್​ ಸಂಸ್ಥೆಗೆ ಯುನಾನಿ ಕಾಲೇಜು ಸೇರಿದೆ ಎಂಬುದು ಕೇವಲ ವದಂತಿ ಎಂದು ಡಾ.ರಫೀಕ್​ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಎನ್​ಐಎ ದಾಳಿ: ವ್ಯಕ್ತಿ ವಶಕ್ಕೆ ಪಡೆದ ಅಧಿಕಾರಿಗಳು

ನವದೆಹಲಿ: ಐಸಿಸ್ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಕರ್ನಾಟಕ ಸೇರಿ ಆರು ರಾಜ್ಯಗಳ 13 ಸ್ಥಳಗಳಲ್ಲಿ ದಾಳಿ ಮಾಡಿ, ಶಂಕಿತರಿಗಾಗಿ ಶೋಧ ನಡೆಸಿದೆ.

ಕರ್ನಾಟಕದ ಭಟ್ಕಳ ಮತ್ತು ತುಮಕೂರು ನಗರ, ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸನ್, ಗುಜರಾತ್‌ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ ಜಿಲ್ಲೆ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ನಾಂದೇಡ್ ಜಿಲ್ಲೆ ಮತ್ತು ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಯಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.

  • NIA Conducts Searches at Multiple Locations in 6 States into the Activities of ISIS Module Case (RC-26/2022/NIA-DLI) pic.twitter.com/AdY6Lz63Sn

    — NIA India (@NIA_India) July 31, 2022 " class="align-text-top noRightClick twitterSection" data=" ">

ಕರ್ನಾಟಕದ ಭಟ್ಕಳದಲ್ಲಿ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಇತ್ತ, ಮಧ್ಯಪ್ರದೇಶದ ಭೋಪಾಲ್​ನಲ್ಲೂ ಓರ್ವ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಮೂರ್ನಾಲ್ಕು ಜನರನ್ನೂ ವಿಚಾರಣೆಗೊಳಪಡಿಸಲಾಗಿದೆ. ಜೊತೆಗೆ ಗುಜರಾತ್​ನ ಸೂರತ್​ನಲ್ಲೂ ಓರ್ವ ಯುವಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಜೂನ್ 25ರಂದು ಐಪಿಸಿ ಸೆಕ್ಷನ್ 153 ಎ ಮತ್ತು 153 ಬಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40ರ ಅಡಿಯಲ್ಲಿ ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇಂದು ನಡೆಸಲಾದ ದಾಳಿ ಮತ್ತು ಶೋಧ ಕಾರ್ಯವು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲು ಸಹಕಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಸ್​ ಉಗ್ರರ ನಂಟು ಶಂಕೆ: ಮನೆ-ಕಾಲೇಜು ಮೇಲೆ NIA ದಾಳಿ, ತುಮಕೂರಲ್ಲಿ ಓರ್ವ ವಶಕ್ಕೆ

ತುಮಕೂರಿನ ಮನೆ-ಕಾಲೇಜು ಮೇಲೆ ದಾಳಿ: ತುಮಕೂರಿನ‌ಲ್ಲಿ ಮನೆ ಮತ್ತು ಕಾಲೇಜು ಮೇಲೆ ಎನ್ಐಎ ಅಧಿಕಾರಿಗಳು ಮಾಡಿದ್ದಾರೆ. ಮರಳೂರು ದಿಣ್ಣೆ ಮೂಲದ ನಿವಾಸಿ ಮನೆ ಮೇಲೆ ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ, ಹೆಚ್​ಎಂಎಸ್​ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್​ ವಿದ್ಯಾರ್ಥಿ ಮರಳೂರು ದಿಣ್ಣೆ ಬಡಾವಣೆಯಲ್ಲಿ ವಾಸವಿದ್ದ ಎನ್ನಲಾಗ್ತಿದೆ. ಈ ಕಾಲೇಜಿನ ಮೇಲೂ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಲ್ಲಿ ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.

ಈ ಕಾಲೇಜು ಮಾಜಿ ಶಾಸಕ ಡಾ.ರಫೀಕ್​ ಅಹ್ಮದ್​ ಅವರ ಒಡೆತನದಲ್ಲಿದೆ. ಹೆಚ್​ಎಂಎಸ್​ ಸಂಸ್ಥೆಗೆ ಸೇರಿದ ಕಟ್ಟಡವನ್ನು ಬಾಡಿಗೆ ಪಡೆದು ಮುಂಬೈ ಮೂಲದವರು ಕಾಲೇಜು ನಡೆಸುತ್ತಿದ್ದಾರೆ. ಈ ಯುನಾನಿ ಕಾಲೇಜಿಗೂ ಮತ್ತು ಹೆಚ್​ಎಂಎಸ್​ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಹೆಚ್​ಎಂಎಸ್​ ಸಂಸ್ಥೆಗೆ ಯುನಾನಿ ಕಾಲೇಜು ಸೇರಿದೆ ಎಂಬುದು ಕೇವಲ ವದಂತಿ ಎಂದು ಡಾ.ರಫೀಕ್​ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಎನ್​ಐಎ ದಾಳಿ: ವ್ಯಕ್ತಿ ವಶಕ್ಕೆ ಪಡೆದ ಅಧಿಕಾರಿಗಳು

Last Updated : Jul 31, 2022, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.