ETV Bharat / bharat

ದೆಹಲಿಯ ವಿಷಕಾರಿ ಗಾಳಿ ತಡೆಯಲು 'ಕೃತಕ ಮಳೆ' ಕಂಡು ಹಿಡಿದ ಐಐಟಿ - ಕಾನ್ಪುರ

ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಸೂಚ್ಯಂಕವು ಕ್ಷೀಣಿಸುತ್ತಿರುವುದರಿಂದ ಐಐಟಿ - ಕಾನ್ಪುರವು ಕೃತಕ ಮಳೆಯನ್ನು ಉಂಟು ಮಾಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ.

author img

By ETV Bharat Karnataka Team

Published : Nov 7, 2023, 9:39 PM IST

ಕೃತಕ ಮಳೆ
ಕೃತಕ ಮಳೆ

ನವದೆಹಲಿ: ದೆಹಲಿಯಲ್ಲಿನ ಗಾಳಿಯ ಗುಣಮಟ್ಟದ ಸೂಚ್ಯಂಕವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)-ಕಾನ್ಪುರವು 'ಕೃತಕ ಮಳೆ'ಯನ್ನು ಉಂಟುಮಾಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದು ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಸಮಸ್ಯೆಗೆ ಸಂಭಾವ್ಯ ಪರಿಹಾರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ಮನೀಂದ್ರ ಅಗರವಾಲ್ ಅವರು ಈ ವಿಶಿಷ್ಟ ಯೋಜನೆಯನ್ನು ಕೈಗೊಂಡಿದ್ದಾರೆ. ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಎಂದೂ ಕರೆಯಲ್ಪಡುವ 'ಕೃತಕ ಮಳೆ'ಯು ಹವಾಮಾನ ಮಾರ್ಪಾಡು ತಂತ್ರವಾಗಿದ್ದು, ಮೋಡಗಳೊಳಗಿನ ಸೂಕ್ಷ್ಮ ಭೌತಿಕ ಪ್ರಕ್ರಿಯೆಗಳನ್ನು ಬದಲಾಯಿಸುವ ಮೂಲಕ ಮಳೆಯನ್ನು ಉಂಟುಮಾಡುವ ಕಾರ್ಯವಿಧಾನವಾಗಿದೆ.

ತಮ್ಮ ತಂಡವು ಈ ಕುರಿತು ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆಗೆ, ಪ್ರೊಫೆಸರ್ ಮನೀಂದ್ರ ಅವರು ಪ್ರತಿಕ್ರಿಯಿಸಿದ್ದು, "ಇದು ಐದು ವರ್ಷಗಳ ಕಠಿಣ ಪರಿಶ್ರಮದಿಂದ ಕಂಡುಕೊಳ್ಳಲಾಗಿದೆ. ವಿಮಾನದ ರೆಕ್ಕೆಗಳಲ್ಲಿ ಕೆಲವು ಮಾರ್ಪಾಡುಗಳಿವೆ ಮತ್ತು ನಾವು ಅಮೆರಿಕದಿಂದ ಕೆಲವು ಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಯಿತು'' ಎಂದಿದ್ದಾರೆ.

ಅಮೆರಿಕದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮಾತುಕತೆಯಲ್ಲಿ ಸಾಕಷ್ಟು ಸಮಯ ವ್ಯಯವಾಯಿತು. ತದನಂತರ ಕೋವಿಡ್ ಕೂಡ ಬಂತು. ಹಾಗಾಗಿ ಅವರು ನಮ್ಮ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು . ಪ್ರಧಾನ ಮಂತ್ರಿಗಳ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಗೃಹ ಸಚಿವಾಲಯ ಮತ್ತು ವಿಶೇಷ ರಕ್ಷಣಾ ಗುಂಪು (SPG) ಸೇರಿದಂತೆ ಅನೇಕ ಅನುಮೋದನೆಗಳನ್ನು ಪಡೆದಿದ್ದೇವೆ ಎಂದಿದ್ದಾರೆ.

"ಐಐಟಿ-ಕಾನ್ಪುರ್ ಹವಾಮಾನ ಸುಧಾರಣೆಗಾಗಿ ಸ್ವಂತ ವಿಮಾನವನ್ನು ಹೊಂದಿದ್ದು, ಮತ್ತು ನಾವು ಅದರ ರೆಕ್ಕೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇವೆ. ಇದರಿಂದ ಮೋಡಗಳಿಗೆ ಉಪ್ಪನ್ನು ಸಿಂಪಡಿಸಬಹುದು. ಈ ಹಾರಾಟ ಮಾಡುವುದಕ್ಕಾಗಿ DGCAಯಿಂದ ಅನುಮೋದನೆ ಕೂಡಾ ಪಡೆದಿದ್ದೇವೆ ಎಂದು ಮನೀಂದ್ರ ಅಗರ್​ವಾಲ್​ ಹೇಳಿದ್ದಾರೆ.

ದೆಹಲಿ ಸರ್ಕಾರದಿಂದ ಸಂವಹನದ ಕುರಿತು ಮಾತನಾಡಿದ ಅವರು, "ನಾವು ಅವರಿಂದ ಸಂವಹನವನ್ನು ಸ್ವೀಕರಿಸಿದ್ದೇವೆ. ಅವರೊಂದಿಗೆ ಸಕ್ರಿಯ ಸಂವಾದದಲ್ಲಿದ್ದೇವೆ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (CII) ಸಹ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ" ಎಂದಿದ್ದಾರೆ. ಅಲ್ಲದೇ, ಸೆಪ್ಟೆಂಬರ್‌ನಲ್ಲಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ವಾಯುಮಾಲಿನ್ಯವನ್ನು ಎದುರಿಸಲು ಚಳಿಗಾಲದ ಕ್ರಿಯಾ ಯೋಜನೆಗಾಗಿ ಮೋಡ ಬಿತ್ತನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ದೆಹಲಿಯ ಆಸ್ಪತ್ರೆಗಳು ಈ ವಿಷಕಾರಿ ಗಾಳಿಯ ಪ್ರಭಾವಕ್ಕೆ ಸಾಕ್ಷಿಯಾಗುತ್ತಿವೆ. ಉಸಿರಾಟದ ತೊಂದರೆಗಳ ಬಗ್ಗೆ ದೂರು ನೀಡುವ ರೋಗಿಗಳಲ್ಲಿ ಹೆಚ್ಚಳವಾಗಿದೆ. ಕಳೆದ 10 ದಿನಗಳಿಂದ ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರ ಹಾಗೂ ಅಪಾಯಕಾರಿ ಮಟ್ಟದಲ್ಲಿದೆ. ಹೀಗಾಗಿ ಐಐಟಿ ಕಾನ್ಪುರ್ ಈ ತಂತ್ರಜ್ಞಾನ ಕಂಡು ಹಿಡಿದಿದ್ದು, ಮಾಲಿನ್ಯ ನಿವಾರಣೆಗೆ ಶ್ರಮಿಸಲು ಮುಂದಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ವಿಷವಾದ ಗಾಳಿ: ವಾಯು ಗುಣಮಟ್ಟ ತೀವ್ರ ಕಳಪೆ - 504 ಎಕ್ಯೂಐ ದಾಖಲು!

ನವದೆಹಲಿ: ದೆಹಲಿಯಲ್ಲಿನ ಗಾಳಿಯ ಗುಣಮಟ್ಟದ ಸೂಚ್ಯಂಕವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)-ಕಾನ್ಪುರವು 'ಕೃತಕ ಮಳೆ'ಯನ್ನು ಉಂಟುಮಾಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದು ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಸಮಸ್ಯೆಗೆ ಸಂಭಾವ್ಯ ಪರಿಹಾರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ಮನೀಂದ್ರ ಅಗರವಾಲ್ ಅವರು ಈ ವಿಶಿಷ್ಟ ಯೋಜನೆಯನ್ನು ಕೈಗೊಂಡಿದ್ದಾರೆ. ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಎಂದೂ ಕರೆಯಲ್ಪಡುವ 'ಕೃತಕ ಮಳೆ'ಯು ಹವಾಮಾನ ಮಾರ್ಪಾಡು ತಂತ್ರವಾಗಿದ್ದು, ಮೋಡಗಳೊಳಗಿನ ಸೂಕ್ಷ್ಮ ಭೌತಿಕ ಪ್ರಕ್ರಿಯೆಗಳನ್ನು ಬದಲಾಯಿಸುವ ಮೂಲಕ ಮಳೆಯನ್ನು ಉಂಟುಮಾಡುವ ಕಾರ್ಯವಿಧಾನವಾಗಿದೆ.

ತಮ್ಮ ತಂಡವು ಈ ಕುರಿತು ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆಗೆ, ಪ್ರೊಫೆಸರ್ ಮನೀಂದ್ರ ಅವರು ಪ್ರತಿಕ್ರಿಯಿಸಿದ್ದು, "ಇದು ಐದು ವರ್ಷಗಳ ಕಠಿಣ ಪರಿಶ್ರಮದಿಂದ ಕಂಡುಕೊಳ್ಳಲಾಗಿದೆ. ವಿಮಾನದ ರೆಕ್ಕೆಗಳಲ್ಲಿ ಕೆಲವು ಮಾರ್ಪಾಡುಗಳಿವೆ ಮತ್ತು ನಾವು ಅಮೆರಿಕದಿಂದ ಕೆಲವು ಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಯಿತು'' ಎಂದಿದ್ದಾರೆ.

ಅಮೆರಿಕದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮಾತುಕತೆಯಲ್ಲಿ ಸಾಕಷ್ಟು ಸಮಯ ವ್ಯಯವಾಯಿತು. ತದನಂತರ ಕೋವಿಡ್ ಕೂಡ ಬಂತು. ಹಾಗಾಗಿ ಅವರು ನಮ್ಮ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು . ಪ್ರಧಾನ ಮಂತ್ರಿಗಳ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಗೃಹ ಸಚಿವಾಲಯ ಮತ್ತು ವಿಶೇಷ ರಕ್ಷಣಾ ಗುಂಪು (SPG) ಸೇರಿದಂತೆ ಅನೇಕ ಅನುಮೋದನೆಗಳನ್ನು ಪಡೆದಿದ್ದೇವೆ ಎಂದಿದ್ದಾರೆ.

"ಐಐಟಿ-ಕಾನ್ಪುರ್ ಹವಾಮಾನ ಸುಧಾರಣೆಗಾಗಿ ಸ್ವಂತ ವಿಮಾನವನ್ನು ಹೊಂದಿದ್ದು, ಮತ್ತು ನಾವು ಅದರ ರೆಕ್ಕೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇವೆ. ಇದರಿಂದ ಮೋಡಗಳಿಗೆ ಉಪ್ಪನ್ನು ಸಿಂಪಡಿಸಬಹುದು. ಈ ಹಾರಾಟ ಮಾಡುವುದಕ್ಕಾಗಿ DGCAಯಿಂದ ಅನುಮೋದನೆ ಕೂಡಾ ಪಡೆದಿದ್ದೇವೆ ಎಂದು ಮನೀಂದ್ರ ಅಗರ್​ವಾಲ್​ ಹೇಳಿದ್ದಾರೆ.

ದೆಹಲಿ ಸರ್ಕಾರದಿಂದ ಸಂವಹನದ ಕುರಿತು ಮಾತನಾಡಿದ ಅವರು, "ನಾವು ಅವರಿಂದ ಸಂವಹನವನ್ನು ಸ್ವೀಕರಿಸಿದ್ದೇವೆ. ಅವರೊಂದಿಗೆ ಸಕ್ರಿಯ ಸಂವಾದದಲ್ಲಿದ್ದೇವೆ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (CII) ಸಹ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ" ಎಂದಿದ್ದಾರೆ. ಅಲ್ಲದೇ, ಸೆಪ್ಟೆಂಬರ್‌ನಲ್ಲಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ವಾಯುಮಾಲಿನ್ಯವನ್ನು ಎದುರಿಸಲು ಚಳಿಗಾಲದ ಕ್ರಿಯಾ ಯೋಜನೆಗಾಗಿ ಮೋಡ ಬಿತ್ತನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ದೆಹಲಿಯ ಆಸ್ಪತ್ರೆಗಳು ಈ ವಿಷಕಾರಿ ಗಾಳಿಯ ಪ್ರಭಾವಕ್ಕೆ ಸಾಕ್ಷಿಯಾಗುತ್ತಿವೆ. ಉಸಿರಾಟದ ತೊಂದರೆಗಳ ಬಗ್ಗೆ ದೂರು ನೀಡುವ ರೋಗಿಗಳಲ್ಲಿ ಹೆಚ್ಚಳವಾಗಿದೆ. ಕಳೆದ 10 ದಿನಗಳಿಂದ ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರ ಹಾಗೂ ಅಪಾಯಕಾರಿ ಮಟ್ಟದಲ್ಲಿದೆ. ಹೀಗಾಗಿ ಐಐಟಿ ಕಾನ್ಪುರ್ ಈ ತಂತ್ರಜ್ಞಾನ ಕಂಡು ಹಿಡಿದಿದ್ದು, ಮಾಲಿನ್ಯ ನಿವಾರಣೆಗೆ ಶ್ರಮಿಸಲು ಮುಂದಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ವಿಷವಾದ ಗಾಳಿ: ವಾಯು ಗುಣಮಟ್ಟ ತೀವ್ರ ಕಳಪೆ - 504 ಎಕ್ಯೂಐ ದಾಖಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.