ETV Bharat / bharat

ಸಂತಸದ ಸುದ್ದಿ: ಭಾರತದಲ್ಲಿ ಮುಂದಿನ 4ರಿಂದ 6 ವಾರಗಳಲ್ಲಿ ಕೋವಿಡ್ ಕೇಸ್​ ಇಳಿಕೆ ಸಾಧ್ಯತೆ- ICMR ವಿಜ್ಞಾನಿಗಳು

ಈಗಿನ ಪರಿಸ್ಥಿತಿಯ ಅರಿವಾದ ಬಳಿಕ ಕೇಂದ್ರ ಗೃಹ ಸಚಿವಾಲಯವು ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಠಿಣವಾದ ಸ್ಥಳೀಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ. ಕಳೆದ ಒಂದು ವಾರದಲ್ಲಿ ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣವು ಶೇ 10ಕ್ಕಿಂತ ಹೆಚ್ಚಾಗಿದೆ. ಹಾಸಿಗೆ ಹಂಚಿಕೆ ಶೇ 60ಕ್ಕಿಂತ ಅಧಿಕ ಏರಿಕೆಯಾಗಿದೆ. ಇಂತಹ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಗೃಹ ಸಚಿವಾಲಯ ತಾಕೀತು ಮಾಡಿದೆ.

author img

By

Published : Apr 30, 2021, 9:00 PM IST

covid19
covid19

ನವದೆಹಲಿ: ಆಮ್ಲಜನಕ ಮಟ್ಟ ಕುಸಿತದಿಂದ ವಿಜೂ ವಿಜಯನ್ (32) ಮತ್ತು ಆತನ ತಂದೆ ವಿ ವಿಜಯಾನ್ (70) ನೋಯ್ಡಾ ಆಸ್ಪತ್ರೆಗೆ ದಾಖಲಾಗಿದ್ದು. ಅವರ ಕುಟುಂಬ ಸದಸ್ಯರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಾರೆ ಎಂದು ಎದುರು ನೋಡುತ್ತಿದ್ದರು. ಕೆಲವು ದಿನಗಳ ಆಸ್ಪತ್ರೆಯಲ್ಲಿ ಕಳೆದ ನಂತರ ತಂದೆ ಮತ್ತು ಮಗ ಜೀವನದ ಅಂತಿಮ ಯಾತ್ರೆ ಮುಗಿಸಿದರು. ಅದೇ ರೀತಿ ನೋಯ್ಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 36 ವರ್ಷದ ಸುಶೀಲ್ ಶರ್ಮಾ ತಮ್ಮ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು ಹೆಂಡತಿಯನ್ನು ಬಿಟ್ಟು ಅಗಲಿದರು.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ನಿರಾಲಾ ಎಸ್ಟೇಟ್ ವಸತಿ ಸಮುಚ್ಚಯದಲ್ಲಿ ಅನೇಕ ಕುಟುಂಬಗಳು ಇದೇ ರೀತಿಯ ಪರಿಸ್ಥಿತಿ ಒಳಗಾಗಿವೆ. ಕಳೆದ 10-14 ದಿನಗಳಲ್ಲಿ 11ಕ್ಕೂ ಹೆಚ್ಚು ಜನರು ಸೋಂಕಿಗೆ ಸಾವನ್ನಪ್ಪಿದ್ದಾರೆ. ಕೋವಿಡ್ -19ರ ಎರಡನೇ ಅಲೆ ಉಂಟು ಮಾಡಿದ ಜೀವ ಹಾನಿ ಇಂತಹ ಅನೇಕ ಹೃದಯ ವಿದ್ರಾವಕ ಕಥೆಗಳು ಭಾರತದಾದ್ಯಂತ ಕಂಡು ಬರುತ್ತಿವೆ.

ಬೇರೆ ದೇಶಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆಯೇ?

ಕೋವಿಡ್ ಎರಡನೇ ಅಲೆಯು ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಮಾರಕವೆಂಬುದು ಸಾಬೀತಾಗಿದೆ. ಆದರೂ ವೈರಸ್‌ನಿಂದ ಭಾರತದ ಸಾವಿನ ಪ್ರಮಾಣ ಇತರ ದೇಶಗಳಿಗಿಂತ ತುಲನಾತ್ಮಕವಾಗಿ ನೋಡಿದರೆ ಸ್ವಲ್ಪ ಕಡಿಮೆಯಾಗಿದೆ.

ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈಟಿವಿ ಭಾರತ ಜತೆ ಮಾತನಾಡಿದ್ದು, ವೈರಸ್ ವೇಗವಾಗಿ ಹರಡುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ವಿದೇಶಿ ರೂಪಾಂತರಗಳಿಂದಾಗಿ ಪ್ರಸ್ತುತ ಉಲ್ಬಣ ಮತ್ತು ಸಾವುಗಳು ಸಂಭವಿಸುತ್ತಿವೆ ಎಂದಲ್ಲ. ಈಗಿನ ಪರಿಸ್ಥಿತಿಗೆ ಅನೇಕ ಕಾರಣಗಳಿವೆ ಎನ್ನುತ್ತಾರೆ ಐಸಿಎಂಆರ್ ವಕ್ತಾರ ಡಾ.ಲೋಕೇಶ್.

ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣದಲ್ಲಿ ಗಣನೀಯ ಹೆಚ್ಚಳ

ಈಗಿನ ಪರಿಸ್ಥಿತಿಯ ಅರಿವಾದ ಬಳಿಕ ಕೇಂದ್ರ ಗೃಹ ಸಚಿವಾಲಯವು ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಠಿಣವಾದ ಸ್ಥಳೀಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ. ಕಳೆದ ಒಂದು ವಾರದಲ್ಲಿ ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣವು ಶೇ 10ಕ್ಕಿಂತ ಹೆಚ್ಚಾಗಿದೆ. ಹಾಸಿಗೆ ಹಂಚಿಕೆ ಶೇ 60ಕ್ಕಿಂತ ಅಧಿಕ ಏರಿಕೆಯಾಗಿದೆ. ಇಂತಹ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಗೃಹ ಸಚಿವಾಲಯ ತಾಕೀತು ಮಾಡಿದೆ.

ದೇಶದ ಆರೋಗ್ಯ ವ್ಯವಸ್ಥೆಯನ್ನು ಕುಸಿಯುತ್ತಿರುವ ಕಾರಣ ಈಗಿನ ಪರಿಸ್ಥಿತಿ ನಿಯಂತ್ರಿಸಲು ಕಠಿಣವಾಗಿದೆ. ಮುಂದಿನ 4-6 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಪ್ರಸ್ತುತ ಏರಿಕೆ ಪ್ರಮಾಣ ಕಡಿಮೆಯಾಗುತ್ತದೆ. ಡಾ.ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಗಳ ಸರಾಸರಿಯಲ್ಲಿ ಗಣನೀಯ ಏರಿಕೆಯೇ ಕಳವಳಕ್ಕೆ ಕಾರಣ

ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ ಎರಡನೇ ಅಲೆಯಲ್ಲಿ ಘಾತೀಯವಾಗಿದೆ. ಕಳೆದ ವರ್ಷ ಜೂನ್ 18ರಂದು ಭಾರತವು 11,000 ಪ್ರಕರಣಗಳನ್ನು ದಾಖಲಿಸಿತ್ತು. ಮುಂದಿನ 60 ದಿನಗಳಲ್ಲಿ ಇದು ಪ್ರತಿದಿನ ಸರಾಸರಿ 35,000 ಹೊಸ ಪ್ರಕರಣಗಳನ್ನು ಸೇರಿಸಿದೆ. ಫೆಬ್ರವರಿ 10ರಂದು ಎರಡನೇ ಅಲೆಯ ಆರಂಭದಲ್ಲಿ ಭಾರತವು 11,000 ಪ್ರಕರಣಗಳನ್ನು ದೃಢಪಡಿಸಿತು. ಮುಂದಿನ 50 ದಿನಗಳಲ್ಲಿ ನಿತ್ಯದ ಸರಾಸರಿ 22,000 ಪ್ರಕರಣಗಳಿವೆ. ವಿಪರ್ಯಾಸವೆಂದರೆ ಅದಾದ ಮುಂದಿನ 10 ದಿನಗಳಲ್ಲಿ ದೈನಂದಿನ ಸರಾಸರಿ ಸುಮಾರು 90,000ಕ್ಕೆ ತಲುಪಿದ್ದು ಆತಂಕಕಾರಿಯಾಗಿತ್ತು.

ಪ್ರಸ್ತುತ ಅಲೆಯು ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕವಾಗಿದೆ. ರೂಪಾಂತರವು ಶ್ವಾಸಕೋಶದ ಮೇಲೆ ನೇರವಾಗಿ ಗರಿಷ್ಠ ಸಾವಿಗೆ ಕಾರಣವಾಗುತ್ತಿದೆ ಎಂದು ಈಟಿವಿ ಭಾರತಗೆ ಆರೋಗ್ಯ ರಕ್ಷಣೆ ಸಂಘದ ಮಹಾನಿರ್ದೇಶಕ ಡಾ.ಗಿರಿಧರ್ ಗಯಾನಿ ಹೇಳಿದ್ದಾರೆ.

ನವದೆಹಲಿ: ಆಮ್ಲಜನಕ ಮಟ್ಟ ಕುಸಿತದಿಂದ ವಿಜೂ ವಿಜಯನ್ (32) ಮತ್ತು ಆತನ ತಂದೆ ವಿ ವಿಜಯಾನ್ (70) ನೋಯ್ಡಾ ಆಸ್ಪತ್ರೆಗೆ ದಾಖಲಾಗಿದ್ದು. ಅವರ ಕುಟುಂಬ ಸದಸ್ಯರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಾರೆ ಎಂದು ಎದುರು ನೋಡುತ್ತಿದ್ದರು. ಕೆಲವು ದಿನಗಳ ಆಸ್ಪತ್ರೆಯಲ್ಲಿ ಕಳೆದ ನಂತರ ತಂದೆ ಮತ್ತು ಮಗ ಜೀವನದ ಅಂತಿಮ ಯಾತ್ರೆ ಮುಗಿಸಿದರು. ಅದೇ ರೀತಿ ನೋಯ್ಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 36 ವರ್ಷದ ಸುಶೀಲ್ ಶರ್ಮಾ ತಮ್ಮ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು ಹೆಂಡತಿಯನ್ನು ಬಿಟ್ಟು ಅಗಲಿದರು.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ನಿರಾಲಾ ಎಸ್ಟೇಟ್ ವಸತಿ ಸಮುಚ್ಚಯದಲ್ಲಿ ಅನೇಕ ಕುಟುಂಬಗಳು ಇದೇ ರೀತಿಯ ಪರಿಸ್ಥಿತಿ ಒಳಗಾಗಿವೆ. ಕಳೆದ 10-14 ದಿನಗಳಲ್ಲಿ 11ಕ್ಕೂ ಹೆಚ್ಚು ಜನರು ಸೋಂಕಿಗೆ ಸಾವನ್ನಪ್ಪಿದ್ದಾರೆ. ಕೋವಿಡ್ -19ರ ಎರಡನೇ ಅಲೆ ಉಂಟು ಮಾಡಿದ ಜೀವ ಹಾನಿ ಇಂತಹ ಅನೇಕ ಹೃದಯ ವಿದ್ರಾವಕ ಕಥೆಗಳು ಭಾರತದಾದ್ಯಂತ ಕಂಡು ಬರುತ್ತಿವೆ.

ಬೇರೆ ದೇಶಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆಯೇ?

ಕೋವಿಡ್ ಎರಡನೇ ಅಲೆಯು ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಮಾರಕವೆಂಬುದು ಸಾಬೀತಾಗಿದೆ. ಆದರೂ ವೈರಸ್‌ನಿಂದ ಭಾರತದ ಸಾವಿನ ಪ್ರಮಾಣ ಇತರ ದೇಶಗಳಿಗಿಂತ ತುಲನಾತ್ಮಕವಾಗಿ ನೋಡಿದರೆ ಸ್ವಲ್ಪ ಕಡಿಮೆಯಾಗಿದೆ.

ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈಟಿವಿ ಭಾರತ ಜತೆ ಮಾತನಾಡಿದ್ದು, ವೈರಸ್ ವೇಗವಾಗಿ ಹರಡುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ವಿದೇಶಿ ರೂಪಾಂತರಗಳಿಂದಾಗಿ ಪ್ರಸ್ತುತ ಉಲ್ಬಣ ಮತ್ತು ಸಾವುಗಳು ಸಂಭವಿಸುತ್ತಿವೆ ಎಂದಲ್ಲ. ಈಗಿನ ಪರಿಸ್ಥಿತಿಗೆ ಅನೇಕ ಕಾರಣಗಳಿವೆ ಎನ್ನುತ್ತಾರೆ ಐಸಿಎಂಆರ್ ವಕ್ತಾರ ಡಾ.ಲೋಕೇಶ್.

ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣದಲ್ಲಿ ಗಣನೀಯ ಹೆಚ್ಚಳ

ಈಗಿನ ಪರಿಸ್ಥಿತಿಯ ಅರಿವಾದ ಬಳಿಕ ಕೇಂದ್ರ ಗೃಹ ಸಚಿವಾಲಯವು ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಠಿಣವಾದ ಸ್ಥಳೀಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ. ಕಳೆದ ಒಂದು ವಾರದಲ್ಲಿ ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣವು ಶೇ 10ಕ್ಕಿಂತ ಹೆಚ್ಚಾಗಿದೆ. ಹಾಸಿಗೆ ಹಂಚಿಕೆ ಶೇ 60ಕ್ಕಿಂತ ಅಧಿಕ ಏರಿಕೆಯಾಗಿದೆ. ಇಂತಹ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಗೃಹ ಸಚಿವಾಲಯ ತಾಕೀತು ಮಾಡಿದೆ.

ದೇಶದ ಆರೋಗ್ಯ ವ್ಯವಸ್ಥೆಯನ್ನು ಕುಸಿಯುತ್ತಿರುವ ಕಾರಣ ಈಗಿನ ಪರಿಸ್ಥಿತಿ ನಿಯಂತ್ರಿಸಲು ಕಠಿಣವಾಗಿದೆ. ಮುಂದಿನ 4-6 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಪ್ರಸ್ತುತ ಏರಿಕೆ ಪ್ರಮಾಣ ಕಡಿಮೆಯಾಗುತ್ತದೆ. ಡಾ.ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಗಳ ಸರಾಸರಿಯಲ್ಲಿ ಗಣನೀಯ ಏರಿಕೆಯೇ ಕಳವಳಕ್ಕೆ ಕಾರಣ

ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ ಎರಡನೇ ಅಲೆಯಲ್ಲಿ ಘಾತೀಯವಾಗಿದೆ. ಕಳೆದ ವರ್ಷ ಜೂನ್ 18ರಂದು ಭಾರತವು 11,000 ಪ್ರಕರಣಗಳನ್ನು ದಾಖಲಿಸಿತ್ತು. ಮುಂದಿನ 60 ದಿನಗಳಲ್ಲಿ ಇದು ಪ್ರತಿದಿನ ಸರಾಸರಿ 35,000 ಹೊಸ ಪ್ರಕರಣಗಳನ್ನು ಸೇರಿಸಿದೆ. ಫೆಬ್ರವರಿ 10ರಂದು ಎರಡನೇ ಅಲೆಯ ಆರಂಭದಲ್ಲಿ ಭಾರತವು 11,000 ಪ್ರಕರಣಗಳನ್ನು ದೃಢಪಡಿಸಿತು. ಮುಂದಿನ 50 ದಿನಗಳಲ್ಲಿ ನಿತ್ಯದ ಸರಾಸರಿ 22,000 ಪ್ರಕರಣಗಳಿವೆ. ವಿಪರ್ಯಾಸವೆಂದರೆ ಅದಾದ ಮುಂದಿನ 10 ದಿನಗಳಲ್ಲಿ ದೈನಂದಿನ ಸರಾಸರಿ ಸುಮಾರು 90,000ಕ್ಕೆ ತಲುಪಿದ್ದು ಆತಂಕಕಾರಿಯಾಗಿತ್ತು.

ಪ್ರಸ್ತುತ ಅಲೆಯು ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕವಾಗಿದೆ. ರೂಪಾಂತರವು ಶ್ವಾಸಕೋಶದ ಮೇಲೆ ನೇರವಾಗಿ ಗರಿಷ್ಠ ಸಾವಿಗೆ ಕಾರಣವಾಗುತ್ತಿದೆ ಎಂದು ಈಟಿವಿ ಭಾರತಗೆ ಆರೋಗ್ಯ ರಕ್ಷಣೆ ಸಂಘದ ಮಹಾನಿರ್ದೇಶಕ ಡಾ.ಗಿರಿಧರ್ ಗಯಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.