ETV Bharat / bharat

ಪೊಲೀಸರ ದಾಳಿ ವೇಳೆ ಕೊಟ್ಟಿಗೆಯಿಂದ ಹಾರಿ ಕಾಲು ಮುರಿದುಕೊಂಡ ವ್ಯಕ್ತಿ

ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ಕೊಟ್ಟಿಗೆಯೊಂದರ ಕಟ್ಟಡದಿಂದ ಜಿಗಿದ ಕಾರಣ ಆರೋಪಿ ಕಾಲು ಮುರಿದುಕೊಂಡಿದ್ದಾನೆ.

author img

By

Published : Sep 1, 2022, 8:21 PM IST

high voltage drama Accused jumped from the barn during the police raid in Amritsar
high voltage drama Accused jumped from the barn during the police raid in Amritsar

ಅಮೃತಸರ (ಪಂಜಾಬ್​): ನಗರದಲ್ಲಿ ಪೊಲೀಸರ ದಾಳಿ ವೇಳೆ ದೊಡ್ಡ ಡ್ರಾಮಾವೊಂದು ಜರುಗಿದೆ. ಆರೋಪಿ ಬಂಧಿಸಲು ಪೊಲೀಸರು ಬಂದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಕೊಟ್ಟಿಗೆಯೊಂದರ ಕಟ್ಟಡದಿಂದ ಜಿಗಿದ ಕಾರಣ ಕಾಲು ಮುರಿದುಕೊಂಡಿದ್ದಾನೆ

ಈ ಪ್ರಕರಣವು ಅಮೃತಸರದ ಗ್ರಾಸ್ ಮಂಡಿ ಪ್ರದೇಶದಿಂದ ವರದಿಯಾಗಿದೆ. ಅಲ್ಲಿ ಎಸ್‌ಟಿಎಫ್ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಅನುಮಾನಾಸ್ಪದ ಯುವಕರನ್ನು ಬಂಧಿಸಲಾಗಿದೆ. ಪೊಲೀಸರನ್ನು ಕಂಡ ತಕ್ಷಣ ರೋಹಿತ್ ಮತ್ತು ಅವರ ಜೊತೆಗಾರ ಓಡಿಹೋಗಲು ಯತ್ನಿಸಿದ್ದಾರೆ. ಹಾಗೆ ಕಂಟ್ರಿ ಪಿಸ್ತೂಲ್‌ನೊಂದಿಗೆ ರೋಹಿತ್​ ಕಟ್ಟಡವೊಂದನ್ನು ಹತ್ತಿದ್ದಾನೆ . ತಪ್ಪಿಸಿಕೊಳ್ಳುವ ಭರದಲ್ಲಿ ಕೊಟ್ಟಿಗೆಯಿಂದ ಜಿಗಿದು ಕಾಲು ಮುರಿದುಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಡಿಎಸ್​ಪಿ ಯೋಗೇಶ್ ಶರ್ಮಾ ಅವರು ಅಮೃತಸರದ ಗ್ರಾಸ್ ಮಂಡಿ ಚೌಕ್‌ನಲ್ಲಿ ಅನುಮಾನಾಸ್ಪದ ಯುವಕರ ಬಗ್ಗೆ ತನಿಖೆ ನಡೆಸುತ್ತಿರುವಾಗ ಇವರಿಬ್ಬರೂ ಈ ರೀತಿ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಪೊಲೀಸರ ದಾಳಿ ವೇಳೆ ಕೊಟ್ಟಿಗೆಯಿಂದ ಹಾರಿ ಕಾಲು ಮುರಿದುಕೊಂಡ ವ್ಯಕ್ತಿ

ಇದನ್ನೂ ಓದಿ: ಕಿವಿ ಸಮಸ್ಯೆಗೆ ಹೋದವಳು ಕೈ ಕಳೆದುಕೊಂಡಳು: ಜೀವನವೇ ಸರ್ವನಾಶವಾಯಿತಾ ?

ಅಮೃತಸರ (ಪಂಜಾಬ್​): ನಗರದಲ್ಲಿ ಪೊಲೀಸರ ದಾಳಿ ವೇಳೆ ದೊಡ್ಡ ಡ್ರಾಮಾವೊಂದು ಜರುಗಿದೆ. ಆರೋಪಿ ಬಂಧಿಸಲು ಪೊಲೀಸರು ಬಂದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಕೊಟ್ಟಿಗೆಯೊಂದರ ಕಟ್ಟಡದಿಂದ ಜಿಗಿದ ಕಾರಣ ಕಾಲು ಮುರಿದುಕೊಂಡಿದ್ದಾನೆ

ಈ ಪ್ರಕರಣವು ಅಮೃತಸರದ ಗ್ರಾಸ್ ಮಂಡಿ ಪ್ರದೇಶದಿಂದ ವರದಿಯಾಗಿದೆ. ಅಲ್ಲಿ ಎಸ್‌ಟಿಎಫ್ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಅನುಮಾನಾಸ್ಪದ ಯುವಕರನ್ನು ಬಂಧಿಸಲಾಗಿದೆ. ಪೊಲೀಸರನ್ನು ಕಂಡ ತಕ್ಷಣ ರೋಹಿತ್ ಮತ್ತು ಅವರ ಜೊತೆಗಾರ ಓಡಿಹೋಗಲು ಯತ್ನಿಸಿದ್ದಾರೆ. ಹಾಗೆ ಕಂಟ್ರಿ ಪಿಸ್ತೂಲ್‌ನೊಂದಿಗೆ ರೋಹಿತ್​ ಕಟ್ಟಡವೊಂದನ್ನು ಹತ್ತಿದ್ದಾನೆ . ತಪ್ಪಿಸಿಕೊಳ್ಳುವ ಭರದಲ್ಲಿ ಕೊಟ್ಟಿಗೆಯಿಂದ ಜಿಗಿದು ಕಾಲು ಮುರಿದುಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಡಿಎಸ್​ಪಿ ಯೋಗೇಶ್ ಶರ್ಮಾ ಅವರು ಅಮೃತಸರದ ಗ್ರಾಸ್ ಮಂಡಿ ಚೌಕ್‌ನಲ್ಲಿ ಅನುಮಾನಾಸ್ಪದ ಯುವಕರ ಬಗ್ಗೆ ತನಿಖೆ ನಡೆಸುತ್ತಿರುವಾಗ ಇವರಿಬ್ಬರೂ ಈ ರೀತಿ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಪೊಲೀಸರ ದಾಳಿ ವೇಳೆ ಕೊಟ್ಟಿಗೆಯಿಂದ ಹಾರಿ ಕಾಲು ಮುರಿದುಕೊಂಡ ವ್ಯಕ್ತಿ

ಇದನ್ನೂ ಓದಿ: ಕಿವಿ ಸಮಸ್ಯೆಗೆ ಹೋದವಳು ಕೈ ಕಳೆದುಕೊಂಡಳು: ಜೀವನವೇ ಸರ್ವನಾಶವಾಯಿತಾ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.