ETV Bharat / bharat

Watch... ರಣಭೀಕರ ಮಳೆಗೆ ಮುತ್ತಿನ ನಗರಿ ತತ್ತರ.. ಹೋಟೆಲ್​, ಪ್ರಮುಖ ಸ್ಥಳಗಳಿಗೂ ನುಗ್ಗಿದ ನೀರು!

author img

By

Published : Oct 9, 2021, 5:41 PM IST

ನಿನ್ನೆ ರಾತ್ರಿ ಬರೋಬ್ಬರಿ 3 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ತೆಲಂಗಾಣದ ಅನೇಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇನ್ನಿಲ್ಲದ ಅನಾಹುತ ಸಂಭವಿಸಿವೆ.

Heavy rains Telangana
Heavy rains Telangana

ಹೈದರಾಬಾದ್​(ತೆಲಂಗಾಣ): ಮುತ್ತಿನ ನಗರಿ ಹೈದರಾಬಾದ್​ನಲ್ಲಿ ನಿನ್ನೆ ರಾತ್ರಿ ಸುರಿದ ರಣಭೀಕರ ಮಳೆಗೆ ಎಲ್ಲವೂ ಅಲ್ಲೋಲ - ಕಲ್ಲೋಲವಾಗಿದ್ದು, ನೂರಾರು ಜನರು ಇನ್ನಿಲ್ಲದ ಸಮಸ್ಯೆಗೊಳಗಾಗಿದ್ದು, ಅನೇಕ ವಾಹನ ನೀರಿನ ರಭಸಕ್ಕೆ ತೇಲಿ ಹೋಗಿವೆ.

ರಣಭೀಕರ ಮಳೆಗೆ ಮುತ್ತಿನ ನಗರಿ ತತ್ತರ

ಮಳೆಯಿಂದಾಗಿ ತೆಲಂಗಾಣದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅನೇಕ ಮನೆ, ಕಟ್ಟಡಗಳಲ್ಲಿ ನೀರು ನುಗ್ಗಿದೆ. ಮ್ಯಾನ್ ಹೋಲ್​​, ಚರಂಡಿಗಳು ತುಂಬಿ ಹರಿದ ಕಾರಣ ಅನೇಕ ರೆಸ್ಟೋರೆಂಟ್​ಗಳಲ್ಲಿ ನೀರು ನುಗ್ಗಿ, ಇನ್ನಿಲ್ಲದ ಅನಾಹುತಕ್ಕೆ ಕಾರಣವಾಗಿದೆ. ರಸ್ತೆಗಳು ಸಂಪೂರ್ಣವಾಗಿ ನೀರು ತುಂಬಿಕೊಂಡ ಕಾರಣ ಸಂಚಾರ ಅಸ್ತವ್ಯಸ್ತವಾಯಿತು.

ಇದನ್ನೂ ಓದಿರಿ: ಡ್ರಗ್ಸ್​​​ ಕೇಸ್​​ನಲ್ಲಿ ಪುತ್ರ ಆರ್ಯನ್​ ಬಂಧನ.. ಶಾರುಖ್ ಖಾನ್​​ ಜಾಹೀರಾತು ಸ್ಥಗಿತಗೊಳಿಸಿದ ಕಂಪನಿ

ಹೈದರಾಬಾದ್​- ಬೆಂಗಳೂರು ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಸೇತುವೆ ಮೇಲೆ ಲಾರಿ ಬಿದ್ದ ಕಾರಣ, ಸಂಚಾರದಲ್ಲಿ ಕೆಲಹೊತ್ತು ತೊಂದರೆಯಾಯಿತು. ಹೀಗಾಗಿ ಸುಮಾರು 3 ಕಿಲೋ ಮೀಟರ್ ದೂರ ವಾಹನಗಳು ನಿಲ್ಲುವಂತಾಯಿತು.

Heavy rains Telangana
ತೆಲಂಗಾಣದಲ್ಲಿ ಮಳೆಯಾರ್ಭಟಕ್ಕೆ ಜನರು ತತ್ತರ

ಪ್ರಮುಖವಾಗಿ ಹಯತ್​​ನಗರ, ವನಸ್ಥಲಿಪುರಂ, ಎಲ್​​ಬಿ ನಗರ, ಮನ್ಸುರಾಬಾದ್​, ನಾಗೋಲ್​, ಮೀರಪೇಟ್​ ಸೇರಿದಂತೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ. ರೆಸ್ಟೋರೆಂಟ್​ವೊಂದರಲ್ಲಿ ಮಳೆ ನೀರು ನುಗ್ಗಿದ ಕಾರಣ, ಗ್ರಾಹಕರು ಕೆಲಹೊತ್ತು ತೊಂದರೆ ಅನುಭವಿಸಿದ್ದರು.

ಹೈದರಾಬಾದ್​(ತೆಲಂಗಾಣ): ಮುತ್ತಿನ ನಗರಿ ಹೈದರಾಬಾದ್​ನಲ್ಲಿ ನಿನ್ನೆ ರಾತ್ರಿ ಸುರಿದ ರಣಭೀಕರ ಮಳೆಗೆ ಎಲ್ಲವೂ ಅಲ್ಲೋಲ - ಕಲ್ಲೋಲವಾಗಿದ್ದು, ನೂರಾರು ಜನರು ಇನ್ನಿಲ್ಲದ ಸಮಸ್ಯೆಗೊಳಗಾಗಿದ್ದು, ಅನೇಕ ವಾಹನ ನೀರಿನ ರಭಸಕ್ಕೆ ತೇಲಿ ಹೋಗಿವೆ.

ರಣಭೀಕರ ಮಳೆಗೆ ಮುತ್ತಿನ ನಗರಿ ತತ್ತರ

ಮಳೆಯಿಂದಾಗಿ ತೆಲಂಗಾಣದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅನೇಕ ಮನೆ, ಕಟ್ಟಡಗಳಲ್ಲಿ ನೀರು ನುಗ್ಗಿದೆ. ಮ್ಯಾನ್ ಹೋಲ್​​, ಚರಂಡಿಗಳು ತುಂಬಿ ಹರಿದ ಕಾರಣ ಅನೇಕ ರೆಸ್ಟೋರೆಂಟ್​ಗಳಲ್ಲಿ ನೀರು ನುಗ್ಗಿ, ಇನ್ನಿಲ್ಲದ ಅನಾಹುತಕ್ಕೆ ಕಾರಣವಾಗಿದೆ. ರಸ್ತೆಗಳು ಸಂಪೂರ್ಣವಾಗಿ ನೀರು ತುಂಬಿಕೊಂಡ ಕಾರಣ ಸಂಚಾರ ಅಸ್ತವ್ಯಸ್ತವಾಯಿತು.

ಇದನ್ನೂ ಓದಿರಿ: ಡ್ರಗ್ಸ್​​​ ಕೇಸ್​​ನಲ್ಲಿ ಪುತ್ರ ಆರ್ಯನ್​ ಬಂಧನ.. ಶಾರುಖ್ ಖಾನ್​​ ಜಾಹೀರಾತು ಸ್ಥಗಿತಗೊಳಿಸಿದ ಕಂಪನಿ

ಹೈದರಾಬಾದ್​- ಬೆಂಗಳೂರು ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಸೇತುವೆ ಮೇಲೆ ಲಾರಿ ಬಿದ್ದ ಕಾರಣ, ಸಂಚಾರದಲ್ಲಿ ಕೆಲಹೊತ್ತು ತೊಂದರೆಯಾಯಿತು. ಹೀಗಾಗಿ ಸುಮಾರು 3 ಕಿಲೋ ಮೀಟರ್ ದೂರ ವಾಹನಗಳು ನಿಲ್ಲುವಂತಾಯಿತು.

Heavy rains Telangana
ತೆಲಂಗಾಣದಲ್ಲಿ ಮಳೆಯಾರ್ಭಟಕ್ಕೆ ಜನರು ತತ್ತರ

ಪ್ರಮುಖವಾಗಿ ಹಯತ್​​ನಗರ, ವನಸ್ಥಲಿಪುರಂ, ಎಲ್​​ಬಿ ನಗರ, ಮನ್ಸುರಾಬಾದ್​, ನಾಗೋಲ್​, ಮೀರಪೇಟ್​ ಸೇರಿದಂತೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ. ರೆಸ್ಟೋರೆಂಟ್​ವೊಂದರಲ್ಲಿ ಮಳೆ ನೀರು ನುಗ್ಗಿದ ಕಾರಣ, ಗ್ರಾಹಕರು ಕೆಲಹೊತ್ತು ತೊಂದರೆ ಅನುಭವಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.