ETV Bharat / bharat

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭಾರಿ ಅವಾಂತರ, ಅಪಾರ ಪ್ರಾಣಹಾನಿ

ಗೋದಾವರಿ ನದಿಯ ಉಪನದಿಯಾದ ಮಾಂಜ್ರಾ ಬೀದರ್​ ಜಿಲ್ಲೆಯ ಮೂಲಕವೂ ಹಾದುಹೋಗುತ್ತದೆ. ಇದರಿಂದ ಬೀದರ್​ನ ಭಾಗದ ನದಿ ನೀರಿನಲ್ಲೂ ಹೆಚ್ಚಳ ಕಂಡು ಬರುವ ಸಾಧ್ಯತೆಯಿದೆ.

author img

By

Published : Sep 29, 2021, 7:46 AM IST

Updated : Sep 29, 2021, 8:36 AM IST

Heavy rains, lightning kill 13 in Maharashtra; over 560 people rescued
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಸೃಷ್ಟಿಯಾದ ಅವಾಂತರಗಳು, ಪ್ರಾಣಹಾನಿ ಮಾಹಿತಿ

ಔರಂಗಾಬಾದ್/ಮುಂಬೈ : ಗುಲಾಬ್ ಚಂಡಮಾರುತದ ಕಾರಣದಿಂದ ಮಹಾರಾಷ್ಟ್ರದ ಮರಾಠವಾಡ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ ಸಿಡಿಲಿನ ಆರ್ಭಟವೂ ನಡೆದಿದೆ. ಈ ಎಲ್ಲ ಮಳೆ ಸಂಬಂಧಿ ಕಾರಣಗಳಿಂದಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.

ಈಗಲೂ ಮಳೆ ಅವಾಂತರ ಮುಂದುವರೆದಿದ್ದು, ಸುಮಾರು 560ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎನ್​ಡಿಆರ್​ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಹೆಲಿಕಾಪ್ಟರ್ ಅನ್ನೂ ಈ ಭಾಗದಲ್ಲಿ ರಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಬರಪೀಡಿತ ಮರಾಠವಾಡದಲ್ಲಿ ಅತಿವೃಷ್ಟಿ

ಅದಲ್ಲದೇ, ಭಾನುವಾರ ಮತ್ತು ಸೋಮವಾರ ಮರಾಠವಾಡದಲ್ಲಿ ಸುರಿದ ಧಾರಾಕಾರ ಮಳೆಗೆ 200ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿಹೋಗಿವೆ. ಹಲವಾರು ಮನೆಗಳು ಹಾನಿಗೆ ಒಳಗಾಗಿವೆ. ದೀರ್ಘಕಾಲ ಬರಪೀಡಿತವಾಗಿದ್ದ ಮರಾಠವಾಡ ಭಾಗ ಈಗ ಅತಿವೃಷ್ಟಿಯಿಂದ ತತ್ತರಿಸಿದೆ. ಇದರ ಜೊತೆಗೆ ಔರಂಗಾಬಾದ್, ಲಾತೂರ್, ಉಸ್ಮಾನಾಬಾದ್, ಪರ್ಭನಿ, ನಾಂದೇಡ್, ಬೀಡ್, ಜಲ್ನಾ ಮತ್ತು ಹಿಂಗೋಲಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಅವಾಂತರ

ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಾದ ಮರಾಠವಾಡ, ಮುಂಬೈ ಮತ್ತು ಇತರ ಕೆಲವು ಭಾಗಗಳಲ್ಲಿ 'ಅತಿ ಹೆಚ್ಚು ಮಳೆಯಾಗುವ' ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಇದರಿಂದ ಮಳೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀದರ್​ನಲ್ಲೂ ಎಫೆಕ್ಟ್​..!

ಮಾಂಜ್ರಾ ನದಿ ಪಾತ್ರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣದಿಂದಾಗಿ ನದಿ ತುಂಬಿ ಹರಿಯುತ್ತಿದೆ. ಮಾಂಜ್ರಾ ನದಿಗೆ ಕಟ್ಟಲಾಗಿರುವ ಮಾಂಜ್ರಾ ಅಣೆಕಟ್ಟು ತುಂಬಿದ ಕಾರಣದಿಂದ ಎಲ್ಲ 18 ಗೇಟುಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದ್ದು, ಬೀಡ್​ ಜಿಲ್ಲೆಯ ಕೆಲವೊಂದು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ.

ಗೋದಾವರಿ ನದಿಯ ಉಪನದಿಯಾದ ಮಾಂಜ್ರಾ ಬೀದರ್​ ಜಿಲ್ಲೆಯ ಮೂಲಕವೂ ಹಾದು ಹೋಗುತ್ತದೆ. ಇದರಿಂದ ಬೀದರ್​ನ ಭಾಗದ ನದಿ ನೀರಿನಲ್ಲೂ ಹೆಚ್ಚಳ ಕಂಡು ಬರುವ ಸಾಧ್ಯತೆಯಿದೆ. ಈಗ ಮಾಂಜ್ರಾದ 18 ಗೇಟ್‌ಗಳನ್ನು ಮತ್ತು ಮಜಲಗಾಂವ್ ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆಯಲಾಗಿದ್ದು, ಇದರ ಪರಿಣಾಮವಾಗಿ ಕ್ರಮವಾಗಿ 78,397 ಕ್ಯೂಸೆಕ್ 80,534 ಕ್ಯೂಸೆಕ್ ನೀರನ್ನು ಹೊರಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಪ್ರಾಣಹಾನಿ?

ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ 13 ಮಂದಿ ಸಾವನ್ನಪ್ಪಿದ್ದು, 136 ಮಂದಿ ಗಾಯಗೊಂಡಿದ್ದಾರೆ. ಯವತ್ಮಾಲ್​ನಲ್ಲಿ ಬಸ್ ಕೊಚ್ಚಿ ಹೋಗಿ ಮೂವರು ಸೇರಿದಂತೆ ಮರಾಠವಾಡ ಮತ್ತು ವಿದರ್ಭ ಭಾಗದಲ್ಲೇ 12 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇನ್ನುಳಿದ ಒಬ್ಬ ವ್ಯಕ್ತಿ ನಾಸಿಕ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾನೆ.

ಜೂನ್ 1ರಿಂದ ಮಹಾರಾಷ್ಟ್ರದಲ್ಲಿ ಆದ ಮಳೆಗೆ ಸುಮಾರು 434 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಾರಿಯ ಮಳೆಗೆ ಇನ್ನೂ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

ಪ್ರಾಣಿಗಳೂ ತತ್ತರ..

ಧಾರಾಕಾರ ಮಳೆಯಿಂದಾಗಿ ಕೇವಲ 2 ದಿನದಲ್ಲಿ ಸುಮಾರು 205 ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಅಥವಾ ಪ್ರಾಣಬಿಟ್ಟಿವೆ. ಅದರಲ್ಲಿ 60ಕ್ಕೂ ಹೆಚ್ಚು ಜಾನುವಾರುಗಳಿವೆ ಎಂದು ಉಲ್ಲೇಖ ಮಾಡಲಾಗಿದೆ.

ಅಂದರೆ ಈವರೆಗೆ ಜೂನ್ ಒಂದರಿಂದ ಹಸುಗಳು, ಮೇಕೆಗಳು, ಎಮ್ಮೆಗಳು ಸೇರಿದಂತೆ 1,632 ಪ್ರಾಣಿಗಳು ಸಾವನ್ನಪ್ಪಿವೆ. ಇದರ ಜೊತೆಗೆ ಕುಕ್ಕುಟೋದ್ಯಮದ 91,510 ಕೋಳಿ ಹಾಗೂ ಕೋಳಿ ಜಾತಿಗೆ ಸೇರಿದ ಪಕ್ಷಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆ ಅಲ್ಲೋಲ-ಕಲ್ಲೋಲ!

ಮಳೆಯ ಆರ್ಭಟ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಗಾಢವಾಗಿಯೇ ಬೀರಿದೆ. ಯಾವತ್ಮಾಲ್​​ನಲ್ಲಿ ರಾಜ್ಯ ಸಾರಿಗೆ ಬಸ್​ ಕೊಚ್ಚಿ ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಉಮರ್​ಕೇಡ್ ತೆಹಸಿಲ್​ನ ದಹಾಗಾಂವ್ ಸೇತುವೆ ದಾಟುವ ವೇಳೆ ಬೆಳಗ್ಗೆ 8 ಗಂಟೆಗೆ ಸೆಮಿ ಲಕ್ಸುರಿ ಬಸ್ ಕೊಚ್ಚಿ ಹೋಗಿದೆ. ಬಹುತೇಕ ಭಾಗಗಳಲ್ಲಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಔರಂಗಾಬಾದ್/ಮುಂಬೈ : ಗುಲಾಬ್ ಚಂಡಮಾರುತದ ಕಾರಣದಿಂದ ಮಹಾರಾಷ್ಟ್ರದ ಮರಾಠವಾಡ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ ಸಿಡಿಲಿನ ಆರ್ಭಟವೂ ನಡೆದಿದೆ. ಈ ಎಲ್ಲ ಮಳೆ ಸಂಬಂಧಿ ಕಾರಣಗಳಿಂದಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.

ಈಗಲೂ ಮಳೆ ಅವಾಂತರ ಮುಂದುವರೆದಿದ್ದು, ಸುಮಾರು 560ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎನ್​ಡಿಆರ್​ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಹೆಲಿಕಾಪ್ಟರ್ ಅನ್ನೂ ಈ ಭಾಗದಲ್ಲಿ ರಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಬರಪೀಡಿತ ಮರಾಠವಾಡದಲ್ಲಿ ಅತಿವೃಷ್ಟಿ

ಅದಲ್ಲದೇ, ಭಾನುವಾರ ಮತ್ತು ಸೋಮವಾರ ಮರಾಠವಾಡದಲ್ಲಿ ಸುರಿದ ಧಾರಾಕಾರ ಮಳೆಗೆ 200ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿಹೋಗಿವೆ. ಹಲವಾರು ಮನೆಗಳು ಹಾನಿಗೆ ಒಳಗಾಗಿವೆ. ದೀರ್ಘಕಾಲ ಬರಪೀಡಿತವಾಗಿದ್ದ ಮರಾಠವಾಡ ಭಾಗ ಈಗ ಅತಿವೃಷ್ಟಿಯಿಂದ ತತ್ತರಿಸಿದೆ. ಇದರ ಜೊತೆಗೆ ಔರಂಗಾಬಾದ್, ಲಾತೂರ್, ಉಸ್ಮಾನಾಬಾದ್, ಪರ್ಭನಿ, ನಾಂದೇಡ್, ಬೀಡ್, ಜಲ್ನಾ ಮತ್ತು ಹಿಂಗೋಲಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಅವಾಂತರ

ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಾದ ಮರಾಠವಾಡ, ಮುಂಬೈ ಮತ್ತು ಇತರ ಕೆಲವು ಭಾಗಗಳಲ್ಲಿ 'ಅತಿ ಹೆಚ್ಚು ಮಳೆಯಾಗುವ' ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಇದರಿಂದ ಮಳೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀದರ್​ನಲ್ಲೂ ಎಫೆಕ್ಟ್​..!

ಮಾಂಜ್ರಾ ನದಿ ಪಾತ್ರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣದಿಂದಾಗಿ ನದಿ ತುಂಬಿ ಹರಿಯುತ್ತಿದೆ. ಮಾಂಜ್ರಾ ನದಿಗೆ ಕಟ್ಟಲಾಗಿರುವ ಮಾಂಜ್ರಾ ಅಣೆಕಟ್ಟು ತುಂಬಿದ ಕಾರಣದಿಂದ ಎಲ್ಲ 18 ಗೇಟುಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದ್ದು, ಬೀಡ್​ ಜಿಲ್ಲೆಯ ಕೆಲವೊಂದು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ.

ಗೋದಾವರಿ ನದಿಯ ಉಪನದಿಯಾದ ಮಾಂಜ್ರಾ ಬೀದರ್​ ಜಿಲ್ಲೆಯ ಮೂಲಕವೂ ಹಾದು ಹೋಗುತ್ತದೆ. ಇದರಿಂದ ಬೀದರ್​ನ ಭಾಗದ ನದಿ ನೀರಿನಲ್ಲೂ ಹೆಚ್ಚಳ ಕಂಡು ಬರುವ ಸಾಧ್ಯತೆಯಿದೆ. ಈಗ ಮಾಂಜ್ರಾದ 18 ಗೇಟ್‌ಗಳನ್ನು ಮತ್ತು ಮಜಲಗಾಂವ್ ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆಯಲಾಗಿದ್ದು, ಇದರ ಪರಿಣಾಮವಾಗಿ ಕ್ರಮವಾಗಿ 78,397 ಕ್ಯೂಸೆಕ್ 80,534 ಕ್ಯೂಸೆಕ್ ನೀರನ್ನು ಹೊರಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಪ್ರಾಣಹಾನಿ?

ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ 13 ಮಂದಿ ಸಾವನ್ನಪ್ಪಿದ್ದು, 136 ಮಂದಿ ಗಾಯಗೊಂಡಿದ್ದಾರೆ. ಯವತ್ಮಾಲ್​ನಲ್ಲಿ ಬಸ್ ಕೊಚ್ಚಿ ಹೋಗಿ ಮೂವರು ಸೇರಿದಂತೆ ಮರಾಠವಾಡ ಮತ್ತು ವಿದರ್ಭ ಭಾಗದಲ್ಲೇ 12 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇನ್ನುಳಿದ ಒಬ್ಬ ವ್ಯಕ್ತಿ ನಾಸಿಕ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾನೆ.

ಜೂನ್ 1ರಿಂದ ಮಹಾರಾಷ್ಟ್ರದಲ್ಲಿ ಆದ ಮಳೆಗೆ ಸುಮಾರು 434 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಾರಿಯ ಮಳೆಗೆ ಇನ್ನೂ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

ಪ್ರಾಣಿಗಳೂ ತತ್ತರ..

ಧಾರಾಕಾರ ಮಳೆಯಿಂದಾಗಿ ಕೇವಲ 2 ದಿನದಲ್ಲಿ ಸುಮಾರು 205 ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಅಥವಾ ಪ್ರಾಣಬಿಟ್ಟಿವೆ. ಅದರಲ್ಲಿ 60ಕ್ಕೂ ಹೆಚ್ಚು ಜಾನುವಾರುಗಳಿವೆ ಎಂದು ಉಲ್ಲೇಖ ಮಾಡಲಾಗಿದೆ.

ಅಂದರೆ ಈವರೆಗೆ ಜೂನ್ ಒಂದರಿಂದ ಹಸುಗಳು, ಮೇಕೆಗಳು, ಎಮ್ಮೆಗಳು ಸೇರಿದಂತೆ 1,632 ಪ್ರಾಣಿಗಳು ಸಾವನ್ನಪ್ಪಿವೆ. ಇದರ ಜೊತೆಗೆ ಕುಕ್ಕುಟೋದ್ಯಮದ 91,510 ಕೋಳಿ ಹಾಗೂ ಕೋಳಿ ಜಾತಿಗೆ ಸೇರಿದ ಪಕ್ಷಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆ ಅಲ್ಲೋಲ-ಕಲ್ಲೋಲ!

ಮಳೆಯ ಆರ್ಭಟ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಗಾಢವಾಗಿಯೇ ಬೀರಿದೆ. ಯಾವತ್ಮಾಲ್​​ನಲ್ಲಿ ರಾಜ್ಯ ಸಾರಿಗೆ ಬಸ್​ ಕೊಚ್ಚಿ ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಉಮರ್​ಕೇಡ್ ತೆಹಸಿಲ್​ನ ದಹಾಗಾಂವ್ ಸೇತುವೆ ದಾಟುವ ವೇಳೆ ಬೆಳಗ್ಗೆ 8 ಗಂಟೆಗೆ ಸೆಮಿ ಲಕ್ಸುರಿ ಬಸ್ ಕೊಚ್ಚಿ ಹೋಗಿದೆ. ಬಹುತೇಕ ಭಾಗಗಳಲ್ಲಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Last Updated : Sep 29, 2021, 8:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.