ETV Bharat / bharat

ಮಳೆಗೆ ಪಶ್ಚಿಮ ಒಡಿಶಾ ತತ್ತರ.. ರೈಲಿನ ಇಂಜಿನ್​ಗೆ ಬಡಿದ ಬೃಹತ್​ ಕಲ್ಲುಬಂಡೆ, 11 ಜಿಲ್ಲೆಗಳ ಶಾಲೆಗಳಿಗೆ ರಜೆ

author img

By

Published : Aug 2, 2023, 1:46 PM IST

ಪಶ್ಚಿಮ ಒಡಿಶಾ ಮಳೆಗೆ ತತ್ತರಿಸಿದೆ. ಒಂದು ಕಡೆ ಹಳಿ ಮೇಲೆ ಬಂಡೆಕಲ್ಲು ಬಿದ್ದ ಪರಿಣಾಮ ರೈಲು ಇಂಜಿನ್​ಗೆ ಹಾನಿಯಾಗಿದೆ. ಇನ್ನೊಂದೆಡೆ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಷ್ಟೇ ಅಲ್ಲ ಮಳೆ ಹಿನ್ನೆಲೆ ಸುಮಾರು 11 ಜಿಲ್ಲೆಗಳ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Heavy rain Odisha  goods train engine derails  goods train engine derails in angul  engine derails in angul after being hit by boulder  ಹಳಿ ತಪ್ಪಿದ ಉಗಿಬಂಡಿ  ರೈಲಿನ ಇಂಜಿನ್​ಗೆ ಬಡಿದ ಬೃಹತ್​ ಕಲ್ಲುಬಂಡೆ  ಮಳೆಗೆ ಪಶ್ಚಿಮ ಒಡಿಶಾ ತತ್ತರ  11 ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ  ಪಶ್ಚಿಮ ಒಡಿಶಾ ಮಳೆಗೆ ತತ್ತರ  ಹಳಿ ಮೇಲೆ ಬಂಡೆಕಲ್ಲು  ಬಂಡೆಕಲ್ಲು ಬಿದ್ದ ಪರಿಣಾಮ ರೈಲು ಇಂಜಿನ್​ಗೆ ಹಾನಿ  ಸರಕು ಸಾಗಣೆ ರೈಲು  ರೈಲಿನ ಹಳಿ ತಪ್ಪಿರುವ ಘಟನೆ
ರೈಲಿನ ಇಂಜಿನ್​ಗೆ ಬಡಿದ ಬೃಹತ್​ ಕಲ್ಲುಬಂಡೆ

ಭುವನೇಶ್ವರ, ಒಡಿಶಾ: ಸರಕು ಸಾಗಣೆ ರೈಲು ಹಳಿ ಸಾಗುತ್ತಿದ್ದ ವೇಳೆ ಬಂಡೆಗಲ್ಲುಗಳು ಹಳಿಯ ಬಿದ್ದಿದ್ದು, ರೈಲಿನ ಹಳಿ ತಪ್ಪಿರುವ ಘಟನೆ ಅಂಗೋಲ್ ಜಿಲ್ಲೆಯ ಬಿಂದಾ ಬಳಿ ನಡೆದಿದೆ. ತಾಲ್ಚೇರ್‌ನಿಂದ ಸಂಬಲ್‌ಪುರಕ್ಕೆ ತೆರಳುತ್ತಿದ್ದಾಗ ಸರಕು ಸಾಗಣೆ ರೈಲಿನ ಇಂಜಿನ್‌ ಮೇಲೆ ಬೃಹತ್​ ಆಕಾರದ ಕಲ್ಲುಗಳು ಬಿದ್ದು ರೈಲು ಎಂಜಿನ್‌ ಕೆಟ್ಟು ಹೋಗಿದು, ಹಳಿ ತಪ್ಪಿದೆ. ಈ ವೇಳೆ ರೈಲ್ವೇ ಸಿಬ್ಬಂದಿ ಸುರಕ್ಷಿತವಾಗಿದ್ದು, ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮತ್ತೊಂದೆಡೆ, ಸಂಬಲ್‌ಪುರ ಮತ್ತು ಅನುಗೋಲ್ ನಡುವಿನ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಸಂಬಲ್‌ಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದೆಡೆ ಅನುಗೋಳ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಅನುಗೋಳ ಜಿಲ್ಲೆಯ ವಿವಿಧೆಡೆ ಹಗಲಿನಲ್ಲಿ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃತಕ ನದಿಯ ವಾತಾವರಣ ಸೃಷ್ಟಿಯಾಗಿದೆ. ಅದೇ ರೀತಿ ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 55ರಲ್ಲಿ ತುರಂಗ ಗ್ರಾಮದ ಬಳಿ ಮೊಣಕಾಲುಗಿಂತಲೂ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಳೆದ ತಿಂಗಳು, ಪರದೀಪ್ ತೈಲ ಸಂಸ್ಕರಣಾಗಾರಕ್ಕೆ ತೆರಳುತ್ತಿದ್ದ ಕಾರ್ಗೋ ರೈಲು ರಂಗಿಯಾಗಢ್ ಬಳಿ ಹಳಿತಪ್ಪಿತ್ತು. ರೈಲಿನ ಏಳು ಬೋಗಿಗಳು ಹಳಿಯಿಂದ ಬಿದ್ದಿರುವುದು ಕಂಡು ಬಂದಿತ್ತು. ಘಟನಾ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದು, ಇಲಾಖೆ ತನಿಖೆ ಆರಂಭಿಸಿದೆ. ಸರಕು ಸಾಗಣೆ ರೈಲಿನಲ್ಲಿ ಬೆಲೆಬಾಳುವ ಪೆಟ್‌ಕೋಕ್ ಇದ್ದ ಕಾರಣ ರೈಲ್ವೆ ಇಲಾಖೆ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದು, ಸ್ಥಳದಲ್ಲಿ ಲೈಟಿನ ವ್ಯವಸ್ಥೆ ಮಾಡಲಾಗಿತ್ತು.

11 ಜಿಲ್ಲೆಗಳಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ: ಧಾರಾಕಾರ ಮಳೆಗೆ ಪಶ್ಚಿಮ ಒಡಿಶಾದವರೆಗೆ ಎಲ್ಲೆಡೆ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಕಿಯೋಂಜಾರ್, ಬಲಂಗೀರ್, ಬಾಲೇಶ್ವರ, ನುವಾಪಾದ, ಕಲಹಂಡಿ, ಸುವರ್ಣಪುರ, ನಯಾಗಢ, ಸಂಬಲ್‌ಪುರ್, ಮಯೂರ್‌ಭಂಜ್, ಧೆಂಕನಾಲ್ ಸೇರಿದಂತೆ 11 ಜಿಲ್ಲೆಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನೂ ಮುಚ್ಚಲಾಗಿದೆ. ಧಾರಾಕಾರ ಮಳೆಯಿಂದಾಗಿ ಶಾಲೆ ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಕಿಯೋಂಜಾರ್ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗಿನ ಜಾವದವರೆಗೂ ಮಳೆ ಸುರಿಯುತ್ತಿರುವ ಹಿನ್ನೆಲೆ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಡಳಿತ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಮಾರ್ಟ್ ಸಿಟಿ ಭುವನೇಶ್ವರಿ ಬಗ್ಗೆ ಮಾತನಾಡದಿರುವುದು ಉತ್ತಮ. ಧಾರಾಕಾರ ಮಳೆಯಿಂದಾಗಿ ರಾಜಧಾನಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಮೊಣಕಾಲು ಎತ್ತರದ ನೀರು ಹರಿಯುತ್ತಿದ್ದರೆ, ಜನರ ಮನೆಯೊಳಗೆ ನೀರು ನುಗ್ಗುತ್ತಿದೆ. ಜನರು ಹಸಿವಿನಿಂದ, ನಿದ್ದೆಯಿಲ್ಲದೇ ಮನೆಗಳಲ್ಲಿ ದಿನ ಕಳೆಯುತ್ತಿದ್ದಾರೆ. ನೀರಿನಲ್ಲಿ ಹಲವು ಪ್ರಮುಖ ಕಾಗದ ಪತ್ರಗಳು ನಾಶವಾಗಿವೆ.

ಬೌದ್ ಜಿಲ್ಲೆಯಲ್ಲೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಕೊಳಚೆ ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಅಸ್ತವ್ಯಸ್ತ ಉಂಟಾಗಿದೆ. ಚರಂಡಿ ಸಮಸ್ಯೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕೊಳಚೆ ನೀರು ಜನರ ಮನೆಗಳಿಗೆ ನುಗ್ಗಿದೆ. ನಗರದ ವಿವಿಧ ಪ್ರದೇಶಗಳು ಜಲಾವೃತವಾಗಿವೆ.

ಓದಿ: Kodachadri Hills: ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ: ಫಾಲ್ಸ್, ಚಾರಣಕ್ಕೂ ಕಡಿವಾಣ

ಭುವನೇಶ್ವರ, ಒಡಿಶಾ: ಸರಕು ಸಾಗಣೆ ರೈಲು ಹಳಿ ಸಾಗುತ್ತಿದ್ದ ವೇಳೆ ಬಂಡೆಗಲ್ಲುಗಳು ಹಳಿಯ ಬಿದ್ದಿದ್ದು, ರೈಲಿನ ಹಳಿ ತಪ್ಪಿರುವ ಘಟನೆ ಅಂಗೋಲ್ ಜಿಲ್ಲೆಯ ಬಿಂದಾ ಬಳಿ ನಡೆದಿದೆ. ತಾಲ್ಚೇರ್‌ನಿಂದ ಸಂಬಲ್‌ಪುರಕ್ಕೆ ತೆರಳುತ್ತಿದ್ದಾಗ ಸರಕು ಸಾಗಣೆ ರೈಲಿನ ಇಂಜಿನ್‌ ಮೇಲೆ ಬೃಹತ್​ ಆಕಾರದ ಕಲ್ಲುಗಳು ಬಿದ್ದು ರೈಲು ಎಂಜಿನ್‌ ಕೆಟ್ಟು ಹೋಗಿದು, ಹಳಿ ತಪ್ಪಿದೆ. ಈ ವೇಳೆ ರೈಲ್ವೇ ಸಿಬ್ಬಂದಿ ಸುರಕ್ಷಿತವಾಗಿದ್ದು, ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮತ್ತೊಂದೆಡೆ, ಸಂಬಲ್‌ಪುರ ಮತ್ತು ಅನುಗೋಲ್ ನಡುವಿನ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಸಂಬಲ್‌ಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದೆಡೆ ಅನುಗೋಳ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಅನುಗೋಳ ಜಿಲ್ಲೆಯ ವಿವಿಧೆಡೆ ಹಗಲಿನಲ್ಲಿ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃತಕ ನದಿಯ ವಾತಾವರಣ ಸೃಷ್ಟಿಯಾಗಿದೆ. ಅದೇ ರೀತಿ ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 55ರಲ್ಲಿ ತುರಂಗ ಗ್ರಾಮದ ಬಳಿ ಮೊಣಕಾಲುಗಿಂತಲೂ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಳೆದ ತಿಂಗಳು, ಪರದೀಪ್ ತೈಲ ಸಂಸ್ಕರಣಾಗಾರಕ್ಕೆ ತೆರಳುತ್ತಿದ್ದ ಕಾರ್ಗೋ ರೈಲು ರಂಗಿಯಾಗಢ್ ಬಳಿ ಹಳಿತಪ್ಪಿತ್ತು. ರೈಲಿನ ಏಳು ಬೋಗಿಗಳು ಹಳಿಯಿಂದ ಬಿದ್ದಿರುವುದು ಕಂಡು ಬಂದಿತ್ತು. ಘಟನಾ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದು, ಇಲಾಖೆ ತನಿಖೆ ಆರಂಭಿಸಿದೆ. ಸರಕು ಸಾಗಣೆ ರೈಲಿನಲ್ಲಿ ಬೆಲೆಬಾಳುವ ಪೆಟ್‌ಕೋಕ್ ಇದ್ದ ಕಾರಣ ರೈಲ್ವೆ ಇಲಾಖೆ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದು, ಸ್ಥಳದಲ್ಲಿ ಲೈಟಿನ ವ್ಯವಸ್ಥೆ ಮಾಡಲಾಗಿತ್ತು.

11 ಜಿಲ್ಲೆಗಳಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ: ಧಾರಾಕಾರ ಮಳೆಗೆ ಪಶ್ಚಿಮ ಒಡಿಶಾದವರೆಗೆ ಎಲ್ಲೆಡೆ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಕಿಯೋಂಜಾರ್, ಬಲಂಗೀರ್, ಬಾಲೇಶ್ವರ, ನುವಾಪಾದ, ಕಲಹಂಡಿ, ಸುವರ್ಣಪುರ, ನಯಾಗಢ, ಸಂಬಲ್‌ಪುರ್, ಮಯೂರ್‌ಭಂಜ್, ಧೆಂಕನಾಲ್ ಸೇರಿದಂತೆ 11 ಜಿಲ್ಲೆಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನೂ ಮುಚ್ಚಲಾಗಿದೆ. ಧಾರಾಕಾರ ಮಳೆಯಿಂದಾಗಿ ಶಾಲೆ ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಕಿಯೋಂಜಾರ್ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗಿನ ಜಾವದವರೆಗೂ ಮಳೆ ಸುರಿಯುತ್ತಿರುವ ಹಿನ್ನೆಲೆ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಡಳಿತ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಮಾರ್ಟ್ ಸಿಟಿ ಭುವನೇಶ್ವರಿ ಬಗ್ಗೆ ಮಾತನಾಡದಿರುವುದು ಉತ್ತಮ. ಧಾರಾಕಾರ ಮಳೆಯಿಂದಾಗಿ ರಾಜಧಾನಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಮೊಣಕಾಲು ಎತ್ತರದ ನೀರು ಹರಿಯುತ್ತಿದ್ದರೆ, ಜನರ ಮನೆಯೊಳಗೆ ನೀರು ನುಗ್ಗುತ್ತಿದೆ. ಜನರು ಹಸಿವಿನಿಂದ, ನಿದ್ದೆಯಿಲ್ಲದೇ ಮನೆಗಳಲ್ಲಿ ದಿನ ಕಳೆಯುತ್ತಿದ್ದಾರೆ. ನೀರಿನಲ್ಲಿ ಹಲವು ಪ್ರಮುಖ ಕಾಗದ ಪತ್ರಗಳು ನಾಶವಾಗಿವೆ.

ಬೌದ್ ಜಿಲ್ಲೆಯಲ್ಲೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಕೊಳಚೆ ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಅಸ್ತವ್ಯಸ್ತ ಉಂಟಾಗಿದೆ. ಚರಂಡಿ ಸಮಸ್ಯೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕೊಳಚೆ ನೀರು ಜನರ ಮನೆಗಳಿಗೆ ನುಗ್ಗಿದೆ. ನಗರದ ವಿವಿಧ ಪ್ರದೇಶಗಳು ಜಲಾವೃತವಾಗಿವೆ.

ಓದಿ: Kodachadri Hills: ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ: ಫಾಲ್ಸ್, ಚಾರಣಕ್ಕೂ ಕಡಿವಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.