ETV Bharat / bharat

ಬಿಪಿನ್ ರಾವತ್ ಸ್ವಗ್ರಾಮ ದತ್ತು ಪಡೆದ ಎನ್​ಜಿಓ: ಪ್ರವಾಸಿ ತಾಣವಾಗಿಸುವ ಗುರಿ - ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ

ಈಗಾಗಲೇ ಬಿಪಿನ್ ರಾವತ್ ಅವರ ಬಿರ್ಮೋಲಿ ಗ್ರಾಮಕ್ಕೆ ಪ್ರತಿಷ್ಠಾನದ ಪ್ರತಿನಿಧಿಗಳು ಭೇಟಿ ಕೊಟ್ಟು ಅಲ್ಲಿನ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಆಡಳಿತಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಇತರ ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಬಿಪಿನ್ ರಾವತ್ ಸ್ವಗ್ರಾಮ ದತ್ತು
ಬಿಪಿನ್ ರಾವತ್ ಸ್ವಗ್ರಾಮ ದತ್ತು
author img

By

Published : Apr 17, 2022, 10:34 PM IST

ಕೋಟ್‌ದ್ವಾರ (ಉತ್ತರಾಖಂಡ್​): ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್)ಯ ಮುಖ್ಯಸ್ಥರಾಗಿದ್ದ ದಿವಂಗತ ಬಿಪಿನ್ ರಾವತ್ ಅವರ ಸ್ವಗ್ರಾಮವನ್ನು ಮಹಾರಾಷ್ಟ್ರದ ಲಾತೂರ್​​ ಮೂಲದ 'ಹರಿವಂಶ ರಾಯ್ ಬಚ್ಚನ್ ಪ್ರಬೋಧನ್ ಪ್ರತಿಷ್ಠಾನ' ಎಂಬ ಎನ್‌ಜಿಒ ದತ್ತು ತೆಗೆದುಕೊಂಡಿದೆ. ಉತ್ತರಾಖಂಡ್​ನ ಪೌರಿ-ಗಢವಾಲ್ ಜಿಲ್ಲೆಯಲ್ಲಿರುವ ರಾವತ್ ಅವರ ಬಿರ್ಮೋಲಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಹೇಳಿರುವ ಪ್ರತಿಷ್ಠಾನದ ಪ್ರತಿನಿಧಿಗಳು, ಬಿರ್ಮೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರ್ಮೋಲಿ, ಸಾಯಿನ್ ಮತ್ತು ಮಾಥರ ಗ್ರಾಮಗಳನ್ನೂ ದತ್ತು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಿರ್ಮೋಲಿ ಗ್ರಾಮಕ್ಕೆ ಪ್ರತಿಷ್ಠಾನದ ಪ್ರತಿನಿಧಿಗಳು ಭೇಟಿ ಕೊಟ್ಟು ಅಲ್ಲಿನ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಆಡಳಿತಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಇತರ ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ, ಕಳೆದ ವರ್ಷ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಗ್ರಾಮದ ದತ್ತು ಪಡೆಯುವ ಉದ್ದೇಶವನ್ನು ಗ್ರಾಮಸ್ಥರಿಗೆ ವಿವರಿಸಿದರು. ಗ್ರಾಮವನ್ನು ಅಭಿವೃದ್ಧಿಪಡಿಸುವ ಮತ್ತು ಗ್ರಾಮದಿಂದ ಬೇರೆಡೆ ಸ್ಥಳಾಂತರಗೊಂಡ ಗ್ರಾಮಸ್ಥರನ್ನು ಮರಳಿ ತಮ್ಮೂರಿಗೆ ಕರೆತರುವ ಇಚ್ಛೆಯನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು.

ಅಲ್ಲದೇ, ಜನರಲ್ ಬಿಪಿನ್ ರಾವತ್ ತಮ್ಮ ನಿವೃತ್ತಿಯ ನಂತರ ಗ್ರಾಮಕ್ಕೆ ಹಿಂತಿರುಗಲು ಬಯಸಿದ್ದರು. ಗ್ರಾಮದ ತೊರೆದು ಹೋದವರನ್ನು ಮರಳಿ ಕರೆಸಿ ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೌಲಭ್ಯ ಕಲ್ಪಿಸಲು ಇಚ್ಛೆ ಹೊಂದಿದ್ದರು. ಅದರಂತೆ ಗ್ರಾಮದಲ್ಲಿ ಗಣನೀಯ ಕೆಲಸ ಮಾಡುವ ಅಗತ್ಯವಿದೆ. ಮುಂದಿನ ವರ್ಷದೊಳಗೆ ಅಭಿವೃದ್ಧಿ ಮಾಡುವ ಯೋಜನೆ ಇದೆ. ಗ್ರಾಮದಲ್ಲಿ ಸದ್ಯ ಶಾಲೆಯ ವ್ಯವಸ್ಥೆ ಚೆನ್ನಾಗಿದೆ. ಆದರೆ, ನಾವು ಇಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ನಿವೃತ್ತಿ ಯಾದವ್ ತಿಳಿಸಿದ್ದಾರೆ.

ಅಲ್ಲದೇ, ಈ ಪ್ರದೇಶದಲ್ಲಿ ಜನರಲ್ ಬಿಪಿನ್ ರಾವತ್ ಹೆಸರಲ್ಲಿ ಆಸ್ಪತ್ರೆ, ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ ಹೆಸರಲ್ಲಿ ಕಾಲೇಜು, ಮಧುಲಿಕಾ ರಾವತ್ ಹೆಸರಲ್ಲಿ ಬಾಲಿಕಾ ಸೈನಿಕ ಶಾಲೆ ಆರಂಭಿಸುವ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಟ್ಯಾಬ್ಲೆಟ್‌ಗಳನ್ನು ಪ್ರತಿಷ್ಠಾನದಿಂದ ವಿತರಿಸಲಾಗಿದೆ.

ಇದನ್ನೂ ಓದಿ: ಪ್ರಚೋದನಕಾರಿ-ದೇಶದ್ರೋಹ ಲೇಖನ: ಕಾಶ್ಮೀರದಲ್ಲಿ ಪಿಎಚ್‌ಡಿ ಸ್ಕಾಲರ್ ಬಂಧನ

ಕೋಟ್‌ದ್ವಾರ (ಉತ್ತರಾಖಂಡ್​): ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್)ಯ ಮುಖ್ಯಸ್ಥರಾಗಿದ್ದ ದಿವಂಗತ ಬಿಪಿನ್ ರಾವತ್ ಅವರ ಸ್ವಗ್ರಾಮವನ್ನು ಮಹಾರಾಷ್ಟ್ರದ ಲಾತೂರ್​​ ಮೂಲದ 'ಹರಿವಂಶ ರಾಯ್ ಬಚ್ಚನ್ ಪ್ರಬೋಧನ್ ಪ್ರತಿಷ್ಠಾನ' ಎಂಬ ಎನ್‌ಜಿಒ ದತ್ತು ತೆಗೆದುಕೊಂಡಿದೆ. ಉತ್ತರಾಖಂಡ್​ನ ಪೌರಿ-ಗಢವಾಲ್ ಜಿಲ್ಲೆಯಲ್ಲಿರುವ ರಾವತ್ ಅವರ ಬಿರ್ಮೋಲಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಹೇಳಿರುವ ಪ್ರತಿಷ್ಠಾನದ ಪ್ರತಿನಿಧಿಗಳು, ಬಿರ್ಮೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರ್ಮೋಲಿ, ಸಾಯಿನ್ ಮತ್ತು ಮಾಥರ ಗ್ರಾಮಗಳನ್ನೂ ದತ್ತು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಿರ್ಮೋಲಿ ಗ್ರಾಮಕ್ಕೆ ಪ್ರತಿಷ್ಠಾನದ ಪ್ರತಿನಿಧಿಗಳು ಭೇಟಿ ಕೊಟ್ಟು ಅಲ್ಲಿನ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಆಡಳಿತಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಇತರ ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ, ಕಳೆದ ವರ್ಷ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಗ್ರಾಮದ ದತ್ತು ಪಡೆಯುವ ಉದ್ದೇಶವನ್ನು ಗ್ರಾಮಸ್ಥರಿಗೆ ವಿವರಿಸಿದರು. ಗ್ರಾಮವನ್ನು ಅಭಿವೃದ್ಧಿಪಡಿಸುವ ಮತ್ತು ಗ್ರಾಮದಿಂದ ಬೇರೆಡೆ ಸ್ಥಳಾಂತರಗೊಂಡ ಗ್ರಾಮಸ್ಥರನ್ನು ಮರಳಿ ತಮ್ಮೂರಿಗೆ ಕರೆತರುವ ಇಚ್ಛೆಯನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು.

ಅಲ್ಲದೇ, ಜನರಲ್ ಬಿಪಿನ್ ರಾವತ್ ತಮ್ಮ ನಿವೃತ್ತಿಯ ನಂತರ ಗ್ರಾಮಕ್ಕೆ ಹಿಂತಿರುಗಲು ಬಯಸಿದ್ದರು. ಗ್ರಾಮದ ತೊರೆದು ಹೋದವರನ್ನು ಮರಳಿ ಕರೆಸಿ ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೌಲಭ್ಯ ಕಲ್ಪಿಸಲು ಇಚ್ಛೆ ಹೊಂದಿದ್ದರು. ಅದರಂತೆ ಗ್ರಾಮದಲ್ಲಿ ಗಣನೀಯ ಕೆಲಸ ಮಾಡುವ ಅಗತ್ಯವಿದೆ. ಮುಂದಿನ ವರ್ಷದೊಳಗೆ ಅಭಿವೃದ್ಧಿ ಮಾಡುವ ಯೋಜನೆ ಇದೆ. ಗ್ರಾಮದಲ್ಲಿ ಸದ್ಯ ಶಾಲೆಯ ವ್ಯವಸ್ಥೆ ಚೆನ್ನಾಗಿದೆ. ಆದರೆ, ನಾವು ಇಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ನಿವೃತ್ತಿ ಯಾದವ್ ತಿಳಿಸಿದ್ದಾರೆ.

ಅಲ್ಲದೇ, ಈ ಪ್ರದೇಶದಲ್ಲಿ ಜನರಲ್ ಬಿಪಿನ್ ರಾವತ್ ಹೆಸರಲ್ಲಿ ಆಸ್ಪತ್ರೆ, ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ ಹೆಸರಲ್ಲಿ ಕಾಲೇಜು, ಮಧುಲಿಕಾ ರಾವತ್ ಹೆಸರಲ್ಲಿ ಬಾಲಿಕಾ ಸೈನಿಕ ಶಾಲೆ ಆರಂಭಿಸುವ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಟ್ಯಾಬ್ಲೆಟ್‌ಗಳನ್ನು ಪ್ರತಿಷ್ಠಾನದಿಂದ ವಿತರಿಸಲಾಗಿದೆ.

ಇದನ್ನೂ ಓದಿ: ಪ್ರಚೋದನಕಾರಿ-ದೇಶದ್ರೋಹ ಲೇಖನ: ಕಾಶ್ಮೀರದಲ್ಲಿ ಪಿಎಚ್‌ಡಿ ಸ್ಕಾಲರ್ ಬಂಧನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.