ಗಾಂಧಿನಗರ: ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಹಲವು ಪ್ರದೇಶಗಳಲ್ಲಿ ಜಡಿ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲದೇ ಪ್ರವಾಹದಂತೆ ಹರಿದ ನೀರಿನಿಂದಾಗಿ ವಾಪಿ-ಸಿಲ್ವಾಸ್ಸಾ ರಾಷ್ಟ್ರೀಯ ಹೆದ್ದಾರಿ 48 ಸಂಪೂರ್ಣ ಗುಂಡಿಮಯವಾಗಿ ಪರಿವರ್ತನೆಯಾಗಿದೆ.
ಸತತ ಒಂದು ವಾರದಿಂದ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದ್ದು, ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ನಗರಗಳ ರಸ್ತೆಗಳು ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳೂ ಹಾನಿಗೀಡಾಗಿವೆ.
![ಭಾರೀ ಮಳೆಗೆ ಗುಂಡಿಮಯವಾದ ಗುಜರಾತ್ ರಸ್ತೆ](https://etvbharatimages.akamaized.net/etvbharat/prod-images/15845927_bang.jpg)
ಗುಜರಾತ್ನ ಮಳೆಪೀಡಿತ ಪ್ರದೇಶಗಳಿಂದ ಈವರೆಗೂ ಕನಿಷ್ಠ 1,300 ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ನವಸಾರಿ ಜಿಲ್ಲೆಯಿಂದ 811 ಜನರನ್ನು ಒಂದೇ ದಿನದಲ್ಲಿ ರಕ್ಷಿಸಿ ಕರೆತರಲಾಗಿದೆ. ಕೋಸ್ಟ್ ಗಾರ್ಡ್, ಎನ್ಡಿಆರ್ಎಫ್ ಮತ್ತು ಸ್ಥಳೀಯ ಈಜುಗಾರರು ರಾತ್ರಿಯಿಡೀ ಶ್ರಮಿಸಿ ಜನರನ್ನು ಪ್ರವಾಹದ ಮಧ್ಯೆ ಸುರಕ್ಷಿತವಾಗಿ ಕರೆತರಲಾಗಿದೆ.
![ಭಾರೀ ಮಳೆಗೆ ಗುಂಡಿಮಯವಾದ ಗುಜರಾತ್ ರಸ್ತೆ](https://etvbharatimages.akamaized.net/etvbharat/prod-images/15845927_bng.jpg)
ನವಸಾರಿಯಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ ಹೆಚ್ಚಿನ ತಂಡಗಳು ಸನ್ನದ್ಧವಾಗಿವೆ. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ಮುಂದಾಗಲಿವೆ.
![ಭಾರೀ ಮಳೆಗೆ ಗುಂಡಿಮಯವಾದ ಗುಜರಾತ್ ರಸ್ತೆ](https://etvbharatimages.akamaized.net/etvbharat/prod-images/15845927_banaag.jpg)
ರಾಜ್ಯದ 207 ಜಲಾಶಯಗಳಲ್ಲಿ ಶನಿವಾರದವರೆಗೆ ಶೇ.50.92ರಷ್ಟು ನೀರು ಸಂಗ್ರಹವಾಗಿದೆ. ಜೀವನವಾಡಿಯಾದ ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ 1,69,139 ಎಂಸಿಎಫ್ಟಿ, ಅಂದರೆ ಒಟ್ಟು ಶೇಖರಣಾ ಸಾಮರ್ಥ್ಯದ 50.63 ಪ್ರತಿಶತ ನೀರು ಬಂದಿದೆ. ಇದಲ್ಲದೇ, ರಾಜ್ಯದ 206 ಜಲಾಶಯಗಳಲ್ಲಿ 3,02,397 ಎಂಸಿಎಫ್ಟಿ (ಶೇ.54.18) ನೀರು ಹರಿದು ಬಂದಿದೆ.
ಇದನ್ನೂ ಓದಿ: ವೀಕ್ಷಣೆಗೆ ಹೋದಾಗ ಮಳೆ ನೀರಲ್ಲಿ ಮುಳುಗಿದ ಜಿಲ್ಲಾಧಿಕಾರಿ ಕಾರು: ವಿಡಿಯೋ