ETV Bharat / bharat

ಜಿಎಸ್‌ಟಿ ವಂಚನೆ.. 6 ಸಿಎ, 3 ಸಿಇಒ, 36 ಎಂಡಿಗಳು ಸೇರಿ ಹಲವರ ಬಂಧನ

author img

By

Published : Jan 10, 2021, 8:06 PM IST

ಬಂಧಿತ ಅಪರಾಧಿಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಅಧಿಕಾರಿಗಳ ಪ್ರಕಾರ, ದೇಶದ ಹಲವಾರು ಭಾಗಗಳಲ್ಲಿ ನಕಲಿ ಜಿಎಸ್​ಟಿ ಮಸೂದೆಗಳ ಬಳಕೆ ವ್ಯಾಪಕವಾಗಿದೆ. ಆದರೆ, ಮುಂಬೈ ವಲಯದಿಂದ ಹೆಚ್ಚಿನ ಆರೋಪಿಗಳನ್ನು ಬಂಧನ ಮಾಡಲಾಗಿದೆ..

gst-fraud-6-cas-3-ceos-36-mds-directors-arrested-in-countrywide-crackdown
ಜಿಎಸ್‌ಟಿ ವಂಚನೆ

ನವದೆಹಲಿ : ನಕಲಿ ಜಿಎಸ್‌ಟಿ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು ಈವರೆಗೆ 215 ಜನರನ್ನು ಬಂಧಿಸಿದ್ದಾರೆ. ಇವರ ಮೇಲೆ 2200ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದ್ದು, ವಂಚಕರಿಂದ ₹700 ಕೋಟಿ ವಶಪಡಿಕೊಳ್ಳಲಾಗಿದೆ.

ಈವರೆಗೆ ಬಂಧಿಸಿರುವ ಒಟ್ಟು 215ರಲ್ಲಿ 17 ಜನರನ್ನು ಕಳೆದ ಎರಡು ದಿನಗಳಲ್ಲಿ ಬಂಧಿಸಲಾಗಿದೆ. ಆದಾಯ ಇಲಾಖೆಯ ಮೂಲಗಳ ಪ್ರಕಾರ, ಆರು ಚಾರ್ಟರ್ಡ್ ಅಕೌಂಟೆಂಟ್‌ಗಳು, 3 ಸಿಇಒಗಳು, 36 ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರು, 15 ಪಾಲುದಾರರು ಮತ್ತು 81 ಮಾಲೀಕರು ಸೇರಿ ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದಾರೆ.

ಘಟನೆ ಹಿನ್ನೆಲೆ ಜಿಎಸ್‌ಟಿ ಅಧಿಕಾರಿಗಳು ಈವರೆಗೆ 6,600ಕ್ಕೂ ಹೆಚ್ಚು ಜಿಎಸ್‌ಟಿ ಸಂಖ್ಯೆಯನ್ನು ರದ್ದುಪಡಿಸಿದ್ದಾರೆ. ಬಂಧಿತರಲ್ಲಿ ನಕಲಿ ಜಿಎಸ್​ಟಿ ವಿತರಕರು ಮಾತ್ರವಲ್ಲದೆ ಆಯೋಗದ ಆಧಾರದ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ವಿತರಕರೊಂದಿಗೆ ಸಂಪರ್ಕ ಸಾಧಿಸುವ ಫಲಾನುಭವಿಗಳೂ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ ಎರಡನೇ ವಾರದಲ್ಲಿ ಪ್ರಾರಂಭವಾದ ಈ ಪ್ರಕರಣ ಬೇಧಿಸುವ ಕಾರ್ಯದಲ್ಲಿ ಆರು ಚಾರ್ಟರ್ಡ್ ಅಕೌಂಟೆಂಟ್‌ಗಳ ಜೊತೆಗೆ ಒಬ್ಬ ಕಂಪನಿಯ ಕಾರ್ಯದರ್ಶಿ, ಒಬ್ಬ ಬ್ರೋಕರ್ ಮತ್ತು ಒಬ್ಬ ಜಿಎಸ್‌ಟಿ ಪ್ರಾಕ್ಟಿಶ್‌ನರ್ ಕೂಡ​ ಇದ್ದಾರೆ.

BAFTA ಉಪಕರಣದ ಜೊತೆಗೆ ದತ್ತಾಂಶ ವಿಶ್ಲೇಷಣೆ, ದತ್ತಾಂಶ ಹಂಚಿಕೆ ಮತ್ತು ಎಐ ಬಳಕೆಯು ಈ ಕೃತ್ಯ ಎಸಗುವವರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಈ ವಂಚನೆ ಮಾಡಲು ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅನೇಕ ಸಂಸ್ಥೆಗಳನ್ನು ತೆರೆಯುತ್ತಿದ್ದ ಆಧಾರದ ಮೇಲೆ ಚೆನ್ನೈನ ಲೇಡಿ ಮಾಸ್ಟರ್ ಮೈಂಡ್ ಸೇರಿದಂತೆ ಒಟ್ಟು 70ಕ್ಕೂ ಹೆಚ್ಚು ಮಾಸ್ಟರ್ ಮೈಂಡ್​​ಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಮುಖ ವಿಷಯ ಅಂದರೆ ಇದರಲ್ಲಿ ಮಹಾರಾಷ್ಟ್ರದ ಪ್ರಬಲ ಶಾಸಕರೊಬ್ಬರ ಮಗ ಕೂಡ ಇದ್ದಾನೆ. ಹಾಗೆ ಹಲವಾರು ಪ್ರಭಾವಿ ವ್ಯಕ್ತಿಗಳನ್ನು ಕೂಡ ಬಂಧಿಸಲಾಗಿದೆ. ಬಂಧಿಸಲ್ಪಟ್ಟವರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು, ಮಾಲೀಕರು ಮತ್ತು ವಿವಿಧ ವ್ಯಾಪಾರ ಮತ್ತು ವ್ಯಾಪಾರ ಘಟಕಗಳ ಪಾಲುದಾರರು ಸೇರಿದ್ದಾರೆ. ಅನರ್ಹ ಐಟಿಸಿಯನ್ನು ಮೋಸದಿಂದ ಬಳಸಿಕೊಳ್ಳುವಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಂಧಿತ ಅಪರಾಧಿಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಅಧಿಕಾರಿಗಳ ಪ್ರಕಾರ, ದೇಶದ ಹಲವಾರು ಭಾಗಗಳಲ್ಲಿ ನಕಲಿ ಜಿಎಸ್​ಟಿ ಮಸೂದೆಗಳ ಬಳಕೆ ವ್ಯಾಪಕವಾಗಿದೆ. ಆದರೆ, ಮುಂಬೈ ವಲಯದಿಂದ ಹೆಚ್ಚಿನ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಅಹಮದಾಬಾದ್ ವಲಯದಲ್ಲಿ ಕಳೆದ ಎರಡು ದಿನಗಳಲ್ಲಿ 14 ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಅಸ್ತಿತ್ವದಲ್ಲಿಲ್ಲದ ಎಂಟು ಘಟಕಗಳನ್ನು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು 113 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೋಸ ಮಾಡಲಾಗಿದೆ ಎನ್ನಲಾಗಿದೆ.

ಈ ನಕಲಿ ಘಟಕಗಳು ಉಡುಪುಗಳು, ತಾಮ್ರ ತ್ಯಾಜ್ಯ ಸ್ಕ್ರ್ಯಾಪ್, ಔಷಧಿಗಳು, ಫೆರಸ್ ತ್ಯಾಜ್ಯ ಮತ್ತು ಸ್ಕ್ರ್ಯಾಪ್, ಸಿಮೆಂಟ್ ಮತ್ತು ಕಲ್ಲಿದ್ದಲು ವ್ಯಾಪಾರದಲ್ಲಿ ತೊಡಗಿದ್ದವು ಎಂದು ತಿಳಿದು ಬಂದಿದೆ.

ನವದೆಹಲಿ : ನಕಲಿ ಜಿಎಸ್‌ಟಿ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು ಈವರೆಗೆ 215 ಜನರನ್ನು ಬಂಧಿಸಿದ್ದಾರೆ. ಇವರ ಮೇಲೆ 2200ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದ್ದು, ವಂಚಕರಿಂದ ₹700 ಕೋಟಿ ವಶಪಡಿಕೊಳ್ಳಲಾಗಿದೆ.

ಈವರೆಗೆ ಬಂಧಿಸಿರುವ ಒಟ್ಟು 215ರಲ್ಲಿ 17 ಜನರನ್ನು ಕಳೆದ ಎರಡು ದಿನಗಳಲ್ಲಿ ಬಂಧಿಸಲಾಗಿದೆ. ಆದಾಯ ಇಲಾಖೆಯ ಮೂಲಗಳ ಪ್ರಕಾರ, ಆರು ಚಾರ್ಟರ್ಡ್ ಅಕೌಂಟೆಂಟ್‌ಗಳು, 3 ಸಿಇಒಗಳು, 36 ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರು, 15 ಪಾಲುದಾರರು ಮತ್ತು 81 ಮಾಲೀಕರು ಸೇರಿ ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದಾರೆ.

ಘಟನೆ ಹಿನ್ನೆಲೆ ಜಿಎಸ್‌ಟಿ ಅಧಿಕಾರಿಗಳು ಈವರೆಗೆ 6,600ಕ್ಕೂ ಹೆಚ್ಚು ಜಿಎಸ್‌ಟಿ ಸಂಖ್ಯೆಯನ್ನು ರದ್ದುಪಡಿಸಿದ್ದಾರೆ. ಬಂಧಿತರಲ್ಲಿ ನಕಲಿ ಜಿಎಸ್​ಟಿ ವಿತರಕರು ಮಾತ್ರವಲ್ಲದೆ ಆಯೋಗದ ಆಧಾರದ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ವಿತರಕರೊಂದಿಗೆ ಸಂಪರ್ಕ ಸಾಧಿಸುವ ಫಲಾನುಭವಿಗಳೂ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ ಎರಡನೇ ವಾರದಲ್ಲಿ ಪ್ರಾರಂಭವಾದ ಈ ಪ್ರಕರಣ ಬೇಧಿಸುವ ಕಾರ್ಯದಲ್ಲಿ ಆರು ಚಾರ್ಟರ್ಡ್ ಅಕೌಂಟೆಂಟ್‌ಗಳ ಜೊತೆಗೆ ಒಬ್ಬ ಕಂಪನಿಯ ಕಾರ್ಯದರ್ಶಿ, ಒಬ್ಬ ಬ್ರೋಕರ್ ಮತ್ತು ಒಬ್ಬ ಜಿಎಸ್‌ಟಿ ಪ್ರಾಕ್ಟಿಶ್‌ನರ್ ಕೂಡ​ ಇದ್ದಾರೆ.

BAFTA ಉಪಕರಣದ ಜೊತೆಗೆ ದತ್ತಾಂಶ ವಿಶ್ಲೇಷಣೆ, ದತ್ತಾಂಶ ಹಂಚಿಕೆ ಮತ್ತು ಎಐ ಬಳಕೆಯು ಈ ಕೃತ್ಯ ಎಸಗುವವರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಈ ವಂಚನೆ ಮಾಡಲು ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅನೇಕ ಸಂಸ್ಥೆಗಳನ್ನು ತೆರೆಯುತ್ತಿದ್ದ ಆಧಾರದ ಮೇಲೆ ಚೆನ್ನೈನ ಲೇಡಿ ಮಾಸ್ಟರ್ ಮೈಂಡ್ ಸೇರಿದಂತೆ ಒಟ್ಟು 70ಕ್ಕೂ ಹೆಚ್ಚು ಮಾಸ್ಟರ್ ಮೈಂಡ್​​ಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಮುಖ ವಿಷಯ ಅಂದರೆ ಇದರಲ್ಲಿ ಮಹಾರಾಷ್ಟ್ರದ ಪ್ರಬಲ ಶಾಸಕರೊಬ್ಬರ ಮಗ ಕೂಡ ಇದ್ದಾನೆ. ಹಾಗೆ ಹಲವಾರು ಪ್ರಭಾವಿ ವ್ಯಕ್ತಿಗಳನ್ನು ಕೂಡ ಬಂಧಿಸಲಾಗಿದೆ. ಬಂಧಿಸಲ್ಪಟ್ಟವರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು, ಮಾಲೀಕರು ಮತ್ತು ವಿವಿಧ ವ್ಯಾಪಾರ ಮತ್ತು ವ್ಯಾಪಾರ ಘಟಕಗಳ ಪಾಲುದಾರರು ಸೇರಿದ್ದಾರೆ. ಅನರ್ಹ ಐಟಿಸಿಯನ್ನು ಮೋಸದಿಂದ ಬಳಸಿಕೊಳ್ಳುವಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಂಧಿತ ಅಪರಾಧಿಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಅಧಿಕಾರಿಗಳ ಪ್ರಕಾರ, ದೇಶದ ಹಲವಾರು ಭಾಗಗಳಲ್ಲಿ ನಕಲಿ ಜಿಎಸ್​ಟಿ ಮಸೂದೆಗಳ ಬಳಕೆ ವ್ಯಾಪಕವಾಗಿದೆ. ಆದರೆ, ಮುಂಬೈ ವಲಯದಿಂದ ಹೆಚ್ಚಿನ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಅಹಮದಾಬಾದ್ ವಲಯದಲ್ಲಿ ಕಳೆದ ಎರಡು ದಿನಗಳಲ್ಲಿ 14 ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಅಸ್ತಿತ್ವದಲ್ಲಿಲ್ಲದ ಎಂಟು ಘಟಕಗಳನ್ನು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು 113 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೋಸ ಮಾಡಲಾಗಿದೆ ಎನ್ನಲಾಗಿದೆ.

ಈ ನಕಲಿ ಘಟಕಗಳು ಉಡುಪುಗಳು, ತಾಮ್ರ ತ್ಯಾಜ್ಯ ಸ್ಕ್ರ್ಯಾಪ್, ಔಷಧಿಗಳು, ಫೆರಸ್ ತ್ಯಾಜ್ಯ ಮತ್ತು ಸ್ಕ್ರ್ಯಾಪ್, ಸಿಮೆಂಟ್ ಮತ್ತು ಕಲ್ಲಿದ್ದಲು ವ್ಯಾಪಾರದಲ್ಲಿ ತೊಡಗಿದ್ದವು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.