ETV Bharat / bharat

ಸಿಆರ್​ಪಿಎಫ್ ಬಂಕರ್​ ಮೇಲೆ ದಾಳಿಗೆ ಉಗ್ರರ ಯತ್ನ: ಅದೃಷ್ಟವಶಾತ್ ಸಿಡಿಯದ ​ಗ್ರೆನೇಡ್

author img

By

Published : Aug 21, 2021, 3:01 AM IST

ಶ್ರೀನಗರದ ನಾವಾ ಕರ್ದಾಲ್ ಪ್ರದೇಶದಲ್ಲಿರುವ ಸಿಆರ್​ಪಿಎಫ್ ಬಂಕರ್ ಅನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಯತ್ನಿಸಿದ್ದು, ದಾಳಿ ವಿಫಲವಾಗಿದೆ.

Grenade hurled at CRPF bunker in J-K's Srinagar
ಸಿಆರ್​ಪಿಎಫ್ ಬಂಕರ್​ ಮೇಲೆ ದಾಳಿಗೆ ಉಗ್ರರ ಯತ್ನ: ಅದೃಷ್ಟವಶಾತ್ ಸಿಡಿಯದ ​ಗ್ರೆನೇಡ್

ಶ್ರೀನಗರ, ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಭಯೋತ್ಪಾದಕರ ಹಾವಳಿ ತೀವ್ರವಾಗುತ್ತಿದ್ದು, ಅಪರಿಚಿತ ಉಗ್ರರು ಸಿಆರ್​ಪಿಎಫ್ ಬಂಕರ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಯತ್ನಿಸಿ, ವಿಫಲರಾಗಿದ್ದಾರೆ.

ಶುಕ್ರವಾರ ರಾತ್ರಿ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದು, ಶ್ರೀನಗರದ ನಾವಾ ಕರ್ದಾಲ್ ಪ್ರದೇಶದಲ್ಲಿರುವ ಸಿಆರ್​ಪಿಎಫ್ ಬಂಕರ್ ಅನ್ನು ಗುರಿಯಾಗಿಸಿ, ದಾಳಿ ನಡೆಸಲಾಗಿದೆ. ಅದೃಷ್ಟವಶಾತ್​ ಅವರು ಎಸೆದ ಗ್ರೆನೇಡ್ ಸಿಡಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ದರ್ಯಾಸ್ನ ಠಾಣೆಯ ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಪ್ರಿಯತಮೆಯ ಕೊಲ್ಲಲು ಯತ್ನ

ಶ್ರೀನಗರ, ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಭಯೋತ್ಪಾದಕರ ಹಾವಳಿ ತೀವ್ರವಾಗುತ್ತಿದ್ದು, ಅಪರಿಚಿತ ಉಗ್ರರು ಸಿಆರ್​ಪಿಎಫ್ ಬಂಕರ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಯತ್ನಿಸಿ, ವಿಫಲರಾಗಿದ್ದಾರೆ.

ಶುಕ್ರವಾರ ರಾತ್ರಿ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದು, ಶ್ರೀನಗರದ ನಾವಾ ಕರ್ದಾಲ್ ಪ್ರದೇಶದಲ್ಲಿರುವ ಸಿಆರ್​ಪಿಎಫ್ ಬಂಕರ್ ಅನ್ನು ಗುರಿಯಾಗಿಸಿ, ದಾಳಿ ನಡೆಸಲಾಗಿದೆ. ಅದೃಷ್ಟವಶಾತ್​ ಅವರು ಎಸೆದ ಗ್ರೆನೇಡ್ ಸಿಡಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ದರ್ಯಾಸ್ನ ಠಾಣೆಯ ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಪ್ರಿಯತಮೆಯ ಕೊಲ್ಲಲು ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.