ETV Bharat / bharat

ಕೊರೊನಾ ಮಹಾಮಾರಿ: 72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೇಟ್​ ಸಿಬ್ಬಂದಿ ಸಾವು! - 72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೆಟ್​ ಸಿಬ್ಬಂದಿ ಸಾವು

ಆಂಧ್ರಪ್ರದೇಶದಲ್ಲೂ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದ್ದು, ನಿತ್ಯ ನೂರಾರು ಸೋಂಕಿತರ ಸಾವುಗಳು ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.

Four AP Secretariat employees
Four AP Secretariat employees
author img

By

Published : Apr 19, 2021, 3:02 PM IST

ವಿಜಯವಾಡ(ಆಂಧ್ರಪ್ರದೇಶ): ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ದೇಶಾದ್ಯಂತ ಸಾವಿರಾರು ಜನರು ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ. ಇದೀಗ ಆಂಧ್ರಪ್ರದೇಶದಲ್ಲಿ ಕೇವಲ 72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೇಟ್​ ಸಿಬ್ಬಂದಿ ಸಾವನ್ನಪ್ಪಿದ್ದು, ಇದೀಗ ಆಂಧ್ರದಲ್ಲಿ ಮತ್ತಷ್ಟು ತಲ್ಲಣ ಮೂಡಿಸಿದೆ.

ಆಂಧ್ರದಲ್ಲಿ ಮಹಾಮಾರಿ ಕೊರೊನಾದಿಂದ ಡಿಎಸ್​ಪಿ ಶ್ರೇಯಾಂಕದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಕುಟುಂಬದ ಸದಸ್ಯರನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬೆನ್ನಲ್ಲೇ ಕೋವಿಡ್ ಧನಾತ್ಮಕ ಪರೀಕ್ಷೆಗೊಳಗಾಗಿದ್ದ ಇಬ್ಬರು ಶಿಕ್ಷಕರು ಸಹ ಸಾವನ್ನಪ್ಪಿದ್ದಾರೆ.

72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೆಟ್​ ಸಿಬ್ಬಂದಿ ಸಾವು

ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಹೆಚ್ಚಿನ ಸಾವು ವರದಿಯಾಗುತ್ತಿದ್ದು, ನೌಕರರು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. 50 ವರ್ಷಕ್ಕಿಂತಲೂ ಮೇಲ್ಪಟ್ಟ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಸಚಿವಾಲಯದ ನೌಕರರ ಅಧ್ಯಕ್ಷ ವೆಂಕಟರಾಮ್​ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರಿ ಉದ್ಯೋಗಿಗಳು ಜ್ವರದಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಆತಂಕ ನಿರ್ಮಾಣಗೊಂಡಿದೆ. ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 7,410 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 9,62,037 ಕೋವಿಡ್​ ಪ್ರಕರಣ ದಾಖಲಾಗಿವೆ. ನಿನ್ನೆ ಒಂದೇ ದಿನ 6,582 ಕೋವಿಡ್​ ಪ್ರಕರಣ ದಾಖಲಾಗಿವೆ.

ವಿಜಯವಾಡ(ಆಂಧ್ರಪ್ರದೇಶ): ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ದೇಶಾದ್ಯಂತ ಸಾವಿರಾರು ಜನರು ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ. ಇದೀಗ ಆಂಧ್ರಪ್ರದೇಶದಲ್ಲಿ ಕೇವಲ 72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೇಟ್​ ಸಿಬ್ಬಂದಿ ಸಾವನ್ನಪ್ಪಿದ್ದು, ಇದೀಗ ಆಂಧ್ರದಲ್ಲಿ ಮತ್ತಷ್ಟು ತಲ್ಲಣ ಮೂಡಿಸಿದೆ.

ಆಂಧ್ರದಲ್ಲಿ ಮಹಾಮಾರಿ ಕೊರೊನಾದಿಂದ ಡಿಎಸ್​ಪಿ ಶ್ರೇಯಾಂಕದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಕುಟುಂಬದ ಸದಸ್ಯರನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬೆನ್ನಲ್ಲೇ ಕೋವಿಡ್ ಧನಾತ್ಮಕ ಪರೀಕ್ಷೆಗೊಳಗಾಗಿದ್ದ ಇಬ್ಬರು ಶಿಕ್ಷಕರು ಸಹ ಸಾವನ್ನಪ್ಪಿದ್ದಾರೆ.

72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೆಟ್​ ಸಿಬ್ಬಂದಿ ಸಾವು

ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಹೆಚ್ಚಿನ ಸಾವು ವರದಿಯಾಗುತ್ತಿದ್ದು, ನೌಕರರು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. 50 ವರ್ಷಕ್ಕಿಂತಲೂ ಮೇಲ್ಪಟ್ಟ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಸಚಿವಾಲಯದ ನೌಕರರ ಅಧ್ಯಕ್ಷ ವೆಂಕಟರಾಮ್​ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರಿ ಉದ್ಯೋಗಿಗಳು ಜ್ವರದಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಆತಂಕ ನಿರ್ಮಾಣಗೊಂಡಿದೆ. ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 7,410 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 9,62,037 ಕೋವಿಡ್​ ಪ್ರಕರಣ ದಾಖಲಾಗಿವೆ. ನಿನ್ನೆ ಒಂದೇ ದಿನ 6,582 ಕೋವಿಡ್​ ಪ್ರಕರಣ ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.