ETV Bharat / bharat

ಮಾರ್ಚ್ 31ಕ್ಕೆ ಯುಕೆ ವಿದೇಶಾಂಗ ಕಾರ್ಯದರ್ಶಿ ಭಾರತಕ್ಕೆ ಭೇಟಿ

author img

By

Published : Mar 28, 2022, 5:03 PM IST

ಇದು ವರ್ಚುವಲ್ ಶೃಂಗಸಭೆಯ ನಂತರ ಭಾರತಕ್ಕೆ ಯುಕೆ ವಿದೇಶಾಂಗ ಕಾರ್ಯದರ್ಶಿಯ ಎರಡನೇ ಭೇಟಿಯಾಗಿದೆ. ಹಾಗೆ ವರ್ಚುವಲ್ ಶೃಂಗಸಭೆಯ ಸಮಯದಲ್ಲಿ ಪ್ರಾರಂಭಿಸಲಾದ ಮಾರ್ಗಸೂಚಿ 2030ರ ಪ್ರಗತಿಯನ್ನು ನಿರ್ಣಯಿಸಲು ಇದು ಅವಕಾಶವನ್ನು ಒದಗಿಸುತ್ತದೆ..

ಮಾರ್ಚ್ 31 ಕ್ಕೆ  ಯುಕೆ ವಿದೇಶಾಂಗ ಕಾರ್ಯದರ್ಶಿ ಭಾರತಕ್ಕೆ ಭೇಟಿ
ಮಾರ್ಚ್ 31 ಕ್ಕೆ ಯುಕೆ ವಿದೇಶಾಂಗ ಕಾರ್ಯದರ್ಶಿ ಭಾರತಕ್ಕೆ ಭೇಟಿ

ನವದೆಹಲಿ : ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಮತ್ತು ಯುನೈಟೆಡ್ ಕಿಂಗ್‌ಡಂನ ಮಹಿಳಾ ಮತ್ತು ಸಮಾನತೆಗಳ ಸಚಿವೆ ಎಲಿಜಬೆತ್ ಟ್ರಸ್ ಅವರು ಮಾರ್ಚ್ 31ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಎಂಇಎ ತಿಳಿಸಿದೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಟ್ರಸ್ ಸಮಾಲೋಚನೆ ನಡೆಸಲಿದ್ದಾರೆ.

ಇಂಡಿಯಾ-ಯುಕೆ ಸ್ಟ್ರಾಟೆಜಿಕ್ ಫ್ಯೂಚರ್ಸ್ ಫೋರಮ್‌ನ ಉದ್ಘಾಟನಾ ಆವೃತ್ತಿಯಲ್ಲಿ ಇವರು ಬಾಗವಹಿಸಲಿದ್ದಾರೆ. 4 ಮೇ, 2021ರಂದು ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳ ನಡುವೆ ನಡೆದ ಭಾರತ-ಯುಕೆ ವರ್ಚುವಲ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಯುಕೆ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಗಿತ್ತು.

ಇದನ್ನೂ ಓದಿ: ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ: ಹೇಗಿದೆ ಚಿಕಿತ್ಸೆ ಕಾರ್ಯ?

ಇದು ವರ್ಚುವಲ್ ಶೃಂಗಸಭೆಯ ನಂತರ ಭಾರತಕ್ಕೆ ಯುಕೆ ವಿದೇಶಾಂಗ ಕಾರ್ಯದರ್ಶಿಯ ಎರಡನೇ ಭೇಟಿಯಾಗಿದೆ. ಹಾಗೆ ವರ್ಚುವಲ್ ಶೃಂಗಸಭೆಯ ಸಮಯದಲ್ಲಿ ಪ್ರಾರಂಭಿಸಲಾದ ಮಾರ್ಗಸೂಚಿ 2030ರ ಪ್ರಗತಿಯನ್ನು ನಿರ್ಣಯಿಸಲು ಇದು ಅವಕಾಶವನ್ನು ಒದಗಿಸುತ್ತದೆ. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ರಕ್ಷಣೆ, ಭದ್ರತೆ, ಹವಾಮಾನ ಸಹಕಾರ, ಶಿಕ್ಷಣ ಮತ್ತು ಡಿಜಿಟಲ್ ಸಂವಹನದಂತಹ ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಈ ಭೇಟಿಯು ಸಹಕಾರಿಯಾಗಿದೆ.

ನವದೆಹಲಿ : ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಮತ್ತು ಯುನೈಟೆಡ್ ಕಿಂಗ್‌ಡಂನ ಮಹಿಳಾ ಮತ್ತು ಸಮಾನತೆಗಳ ಸಚಿವೆ ಎಲಿಜಬೆತ್ ಟ್ರಸ್ ಅವರು ಮಾರ್ಚ್ 31ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಎಂಇಎ ತಿಳಿಸಿದೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಟ್ರಸ್ ಸಮಾಲೋಚನೆ ನಡೆಸಲಿದ್ದಾರೆ.

ಇಂಡಿಯಾ-ಯುಕೆ ಸ್ಟ್ರಾಟೆಜಿಕ್ ಫ್ಯೂಚರ್ಸ್ ಫೋರಮ್‌ನ ಉದ್ಘಾಟನಾ ಆವೃತ್ತಿಯಲ್ಲಿ ಇವರು ಬಾಗವಹಿಸಲಿದ್ದಾರೆ. 4 ಮೇ, 2021ರಂದು ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳ ನಡುವೆ ನಡೆದ ಭಾರತ-ಯುಕೆ ವರ್ಚುವಲ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಯುಕೆ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಗಿತ್ತು.

ಇದನ್ನೂ ಓದಿ: ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ: ಹೇಗಿದೆ ಚಿಕಿತ್ಸೆ ಕಾರ್ಯ?

ಇದು ವರ್ಚುವಲ್ ಶೃಂಗಸಭೆಯ ನಂತರ ಭಾರತಕ್ಕೆ ಯುಕೆ ವಿದೇಶಾಂಗ ಕಾರ್ಯದರ್ಶಿಯ ಎರಡನೇ ಭೇಟಿಯಾಗಿದೆ. ಹಾಗೆ ವರ್ಚುವಲ್ ಶೃಂಗಸಭೆಯ ಸಮಯದಲ್ಲಿ ಪ್ರಾರಂಭಿಸಲಾದ ಮಾರ್ಗಸೂಚಿ 2030ರ ಪ್ರಗತಿಯನ್ನು ನಿರ್ಣಯಿಸಲು ಇದು ಅವಕಾಶವನ್ನು ಒದಗಿಸುತ್ತದೆ. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ರಕ್ಷಣೆ, ಭದ್ರತೆ, ಹವಾಮಾನ ಸಹಕಾರ, ಶಿಕ್ಷಣ ಮತ್ತು ಡಿಜಿಟಲ್ ಸಂವಹನದಂತಹ ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಈ ಭೇಟಿಯು ಸಹಕಾರಿಯಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.