ETV Bharat / bharat

ಮರಳು ತುಂಬುತ್ತಿದ್ದಾಗ ದಿಢೀರ್​ ಪ್ರವಾಹ: ಟಿಪ್ಪರ್​ ಸಹಿತ ಕೊಚ್ಚಿಹೋದ ಚಾಲಕ, ಸಹಾಯಕ

author img

By

Published : Jul 8, 2022, 3:19 PM IST

Updated : Jul 8, 2022, 4:01 PM IST

ಟಿಪ್ಪರ್ ಚಾಲಕ ಮತ್ತು ಸಹಾಯಕ ವಾಹನದ ಜೊತೆಗೆ ಕೊಚ್ಚಿಹೋಗಿದ್ದಾರೆ. ಇಬ್ಬರೂ ಟಿಪ್ಪರ್‌ಗೆ ಮರಳು ತುಂಬುತ್ತಿದ್ದಾಗ ಧರಹಳ್ಳಿ ನಾಲಾದಲ್ಲಿ ದಿಢೀರನೇ ಪ್ರವಾಹ ಉಂಟಾಗಿದೆ.

ಪ್ರವಾಹಕ್ಕೆ ಟಿಪ್ಪರ್​ ಸಹಿತ ಕೊಚ್ಚಿಹೋದ ಚಾಲಕ ಹಾಗೂ ಸಹಾಯಕ
ಪ್ರವಾಹಕ್ಕೆ ಟಿಪ್ಪರ್​ ಸಹಿತ ಕೊಚ್ಚಿಹೋದ ಚಾಲಕ ಹಾಗೂ ಸಹಾಯಕ

ರಾಜೌರಿ ( ಜಮ್ಮು ಕಾಶ್ಮೀರ) : ನಿನ್ನೆ ರಾತ್ರಿ ರಾಜೌರಿ ಜಿಲ್ಲೆಯ ದರ್ಹಳ್ಳಿ ನಾಲಾದಲ್ಲಿ ಹಠಾತ್ ಪ್ರವಾಹಕ್ಕೆ ಟಿಪ್ಪರ್ ಚಾಲಕ ಮತ್ತು ಸಹಾಯಕ ವಾಹನದ ಜೊತೆಗೆ ಕೊಚ್ಚಿಹೋಗಿದ್ದಾರೆ. ಸೋಕರ್ ಕೊಟ್ರಂಕದ ನಿವಾಸಿಗಳಾದ ಮೊಹಮ್ಮದ್ ಅಸ್ಲಾಂ ಅವರ ಪುತ್ರ ಸಜಾದ್ ಅಹ್ಮದ್ ಮತ್ತು ಜಮಾಲ್ ದಿನ್ ಅವರ ಪುತ್ರ ಅಬ್ರಾರ್ ಅಹ್ಮದ್ ಇಬ್ಬರೂ ಟಿಪ್ಪರ್‌ಗೆ ಮರಳು ತುಂಬುತ್ತಿದ್ದಾಗ ಧರಹಳ್ಳಿ ನಾಲಾದಲ್ಲಿ ಕೊಚ್ಚಿಹೋಗಿದ್ದಾರೆ.

ಲೋಡಿಂಗ್​ ಸಮಯದಲ್ಲಿ ನಲ್ಲಾದಲ್ಲಿ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಇದು ಘಟನೆಗೆ ಕಾರಣವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಣೆಯಾದವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಮತ್ತು ಸೇನೆಯ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಚಾಲಕನ ದೇಹವನ್ನು ನಾಲಾದಿಂದ ಹೊರತೆಗೆಯಲಾಗಿದೆ.

ಮರಳು ತುಂಬುತ್ತಿದ್ದಾಗ ದಿಢೀರ್​ ಪ್ರವಾಹ: ಟಿಪ್ಪರ್​ ಸಹಿತ ಕೊಚ್ಚಿಹೋದ ಚಾಲಕ, ಸಹಾಯಕ

ಸಹಾಯಕ ಇನ್ನೂ ಪತ್ತೆಯಾಗಿಲ್ಲ. ಸಹಾಯಕನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಎಸ್‌ಪಿ ಮೊಹಮ್ಮದ್ ಅಸ್ಲಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಎರಡು ಸರ್ಕಾರಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ: 10ಕ್ಕೂ ಹೆಚ್ಚು ಜನರಿಗೆ ಗಾಯ

ರಾಜೌರಿ ( ಜಮ್ಮು ಕಾಶ್ಮೀರ) : ನಿನ್ನೆ ರಾತ್ರಿ ರಾಜೌರಿ ಜಿಲ್ಲೆಯ ದರ್ಹಳ್ಳಿ ನಾಲಾದಲ್ಲಿ ಹಠಾತ್ ಪ್ರವಾಹಕ್ಕೆ ಟಿಪ್ಪರ್ ಚಾಲಕ ಮತ್ತು ಸಹಾಯಕ ವಾಹನದ ಜೊತೆಗೆ ಕೊಚ್ಚಿಹೋಗಿದ್ದಾರೆ. ಸೋಕರ್ ಕೊಟ್ರಂಕದ ನಿವಾಸಿಗಳಾದ ಮೊಹಮ್ಮದ್ ಅಸ್ಲಾಂ ಅವರ ಪುತ್ರ ಸಜಾದ್ ಅಹ್ಮದ್ ಮತ್ತು ಜಮಾಲ್ ದಿನ್ ಅವರ ಪುತ್ರ ಅಬ್ರಾರ್ ಅಹ್ಮದ್ ಇಬ್ಬರೂ ಟಿಪ್ಪರ್‌ಗೆ ಮರಳು ತುಂಬುತ್ತಿದ್ದಾಗ ಧರಹಳ್ಳಿ ನಾಲಾದಲ್ಲಿ ಕೊಚ್ಚಿಹೋಗಿದ್ದಾರೆ.

ಲೋಡಿಂಗ್​ ಸಮಯದಲ್ಲಿ ನಲ್ಲಾದಲ್ಲಿ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಇದು ಘಟನೆಗೆ ಕಾರಣವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಣೆಯಾದವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಮತ್ತು ಸೇನೆಯ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಚಾಲಕನ ದೇಹವನ್ನು ನಾಲಾದಿಂದ ಹೊರತೆಗೆಯಲಾಗಿದೆ.

ಮರಳು ತುಂಬುತ್ತಿದ್ದಾಗ ದಿಢೀರ್​ ಪ್ರವಾಹ: ಟಿಪ್ಪರ್​ ಸಹಿತ ಕೊಚ್ಚಿಹೋದ ಚಾಲಕ, ಸಹಾಯಕ

ಸಹಾಯಕ ಇನ್ನೂ ಪತ್ತೆಯಾಗಿಲ್ಲ. ಸಹಾಯಕನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಎಸ್‌ಪಿ ಮೊಹಮ್ಮದ್ ಅಸ್ಲಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಎರಡು ಸರ್ಕಾರಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ: 10ಕ್ಕೂ ಹೆಚ್ಚು ಜನರಿಗೆ ಗಾಯ

Last Updated : Jul 8, 2022, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.