ETV Bharat / bharat

ಕೃಷ್ಣಾ ನದಿಯಲ್ಲಿ ದುರಂತ: ಸ್ನಾನಕ್ಕೆ ಇಳಿದಿದ್ದ ಶಿಕ್ಷಕ, ಐವರು ವಿದ್ಯಾರ್ಥಿಗಳು ನೀರುಪಾಲು

ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವೇದ ವೇದಾಂತ ಗುರುಕುಲ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳೊಂದಿಗೆ ಗುರೂಜಿ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದರು. ಗುರೂಜಿ ಮತ್ತು ಆರು ವಿದ್ಯಾರ್ಥಿಗಳು ಮಾತ್ರ ನದಿಗೆ ಇಳಿದಿದ್ದರು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನದಿಯ ಆಳಕ್ಕೆ ಜಾರಿದ್ದಾರೆ.

author img

By

Published : Dec 11, 2021, 2:51 AM IST

Updated : Dec 11, 2021, 3:07 PM IST

students and a teacher drowned in Krishna River
ಕೃಷ್ಣಾ ನದಿಯಲ್ಲಿ ದುರಂತ

ಗುಂಟೂರು(ಆಂಧ್ರಪ್ರದೇಶ): ಜಿಲ್ಲೆಯ ಅಚ್ಚಂಪೇಟ ಮಂಡಲದ ಮಡಿಪಾಡು ಸಮೀಪ ಕೃಷ್ಣಾ ನದಿಯಲ್ಲಿ ದುರಂತ ಸಂಭವಿಸಿದೆ. ನದಿಗೆ ಸ್ನಾನಕ್ಕೆ ತೆರಳಿದ್ದ ಮಡಿಪಾಡು ಗ್ರಾಮದ ಶ್ವೇತಾ ಶೃಂಗಾಚಲಂ ವೇದಾಂತ ಗುರುಕುಲ ವೇದ ಶಾಲೆಯ ಐವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ(ಗುರೂಜಿ) ನೀರುಪಾಲಾಗಿದ್ದಾರೆ.

ನದಿ ದಡಕ್ಕೆ 8 ಮಂದಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತೆರಳಿದ್ದರು. ಅವರಲ್ಲಿ 7 ಮಂದಿ ಸ್ನಾನಕ್ಕೆ ಇಳಿದಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಿ 6 ಜನರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು, ಪೊಲೀಸರು ಹಾಗೂ ಈಜುಗಾರರ ತಂಡವು ಶೋಧ ಕಾರ್ಯ ನಡೆಸಿ ಆರು ಮಂದಿಯ ಶವಗಳನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ತೇನಪಲ್ಲಿ ಪೊಲೀಸ್ ಉಪಾಧೀಕ್ಷಕ ವಿಜಯ ಭಾಸ್ಕರ್ ರೆಡ್ಡಿ, ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವೇದ ವೇದಾಂತ ಗುರುಕುಲ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳೊಂದಿಗೆ ಗುರೂಜಿ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದರು. ಗುರೂಜಿ ಮತ್ತು ಆರು ವಿದ್ಯಾರ್ಥಿಗಳು ಮಾತ್ರ ನದಿಗೆ ಇಳಿದಿದ್ದರು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನದಿಯ ಆಳಕ್ಕೆ ಜಾರಿದ್ದಾರೆ. ಆಗ ಈಜು ಬಾರದ್ದರಿಂದ ನೀರಿನಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಹಾಗೂ ಗುರೂಜಿ ಮೃತಪಟ್ಟಿದ್ದಾರೆ. ಈಜು ಬಲ್ಲ ಓರ್ವ ವಿದ್ಯಾರ್ಥಿ ಬದುಕುಳಿದಿದ್ದು, ನದಿ ದಡದಲ್ಲೇ ಕುಳಿತಿದ್ದ ಉಳಿದ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ ಎಂದು ಹೇಳಿದರು.

ದುರಂತದಲ್ಲಿ ಸುಬ್ರಮಣಿಯನ್ ಶರ್ಮಾ, ಹರ್ಷಿತ್ ಶುಕ್ಲಾ, ಶುಭಂ ತ್ರಿವೇದಿ, ಅಂಶುಮಾನ್ ಶುಕ್ಲಾ, ಶಿವ ಶರ್ಮಾ ಮತ್ತು ನಿತೀಶ್ ಕುಮಾರ್ ಎಂಬುವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಸುಬ್ರಮಣಿಯನ್ ಶರ್ಮಾ ಎಂಬಾತ ನರಸರಾವ್ ಪೇಟೆ, ಶಿವ ಶರ್ಮಾ ಮಧ್ಯಪ್ರದೇಶ ಹಾಗೂ ಉಳಿದ ನಾಲ್ವರು ಉತ್ತರ ಪ್ರದೇಶದವರು. ಮೃತದೇಹಗಳನ್ನು ಅವರವರ ಊರುಗಳಿಗೆ ಸ್ಥಳಾಂತರಿಸಲು ಪೊಲೀಸರು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯಪಾಲರಿಂದ ಸಂತಾಪ:

ಗುಂಟೂರಿನಲ್ಲಿನ ವೇದ ಶಾಲೆಯ ವಿದ್ಯಾರ್ಥಿಗಳ ಸಾವಿಗೆ ರಾಜ್ಯಪಾಲ ಬಿಶ್ವಭೂಷಣ ಹರಿಚಂದನ್ ಮತ್ತು ಸಚಿವ ಆದಿಮುಲ್ಕು ಸುರೇಶ್ ಆಘಾತ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ಸಂಸ್ಥೆಗಳ ವ್ಯವಸ್ಥಾಪಕರಿಗೆ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ ಶಾಲೆ ಬಿಟ್ಟು ಹೋಗಬೇಡಿ ಸರ್​​.. ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು

ಗುಂಟೂರು(ಆಂಧ್ರಪ್ರದೇಶ): ಜಿಲ್ಲೆಯ ಅಚ್ಚಂಪೇಟ ಮಂಡಲದ ಮಡಿಪಾಡು ಸಮೀಪ ಕೃಷ್ಣಾ ನದಿಯಲ್ಲಿ ದುರಂತ ಸಂಭವಿಸಿದೆ. ನದಿಗೆ ಸ್ನಾನಕ್ಕೆ ತೆರಳಿದ್ದ ಮಡಿಪಾಡು ಗ್ರಾಮದ ಶ್ವೇತಾ ಶೃಂಗಾಚಲಂ ವೇದಾಂತ ಗುರುಕುಲ ವೇದ ಶಾಲೆಯ ಐವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ(ಗುರೂಜಿ) ನೀರುಪಾಲಾಗಿದ್ದಾರೆ.

ನದಿ ದಡಕ್ಕೆ 8 ಮಂದಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತೆರಳಿದ್ದರು. ಅವರಲ್ಲಿ 7 ಮಂದಿ ಸ್ನಾನಕ್ಕೆ ಇಳಿದಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಿ 6 ಜನರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು, ಪೊಲೀಸರು ಹಾಗೂ ಈಜುಗಾರರ ತಂಡವು ಶೋಧ ಕಾರ್ಯ ನಡೆಸಿ ಆರು ಮಂದಿಯ ಶವಗಳನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ತೇನಪಲ್ಲಿ ಪೊಲೀಸ್ ಉಪಾಧೀಕ್ಷಕ ವಿಜಯ ಭಾಸ್ಕರ್ ರೆಡ್ಡಿ, ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವೇದ ವೇದಾಂತ ಗುರುಕುಲ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳೊಂದಿಗೆ ಗುರೂಜಿ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದರು. ಗುರೂಜಿ ಮತ್ತು ಆರು ವಿದ್ಯಾರ್ಥಿಗಳು ಮಾತ್ರ ನದಿಗೆ ಇಳಿದಿದ್ದರು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನದಿಯ ಆಳಕ್ಕೆ ಜಾರಿದ್ದಾರೆ. ಆಗ ಈಜು ಬಾರದ್ದರಿಂದ ನೀರಿನಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಹಾಗೂ ಗುರೂಜಿ ಮೃತಪಟ್ಟಿದ್ದಾರೆ. ಈಜು ಬಲ್ಲ ಓರ್ವ ವಿದ್ಯಾರ್ಥಿ ಬದುಕುಳಿದಿದ್ದು, ನದಿ ದಡದಲ್ಲೇ ಕುಳಿತಿದ್ದ ಉಳಿದ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ ಎಂದು ಹೇಳಿದರು.

ದುರಂತದಲ್ಲಿ ಸುಬ್ರಮಣಿಯನ್ ಶರ್ಮಾ, ಹರ್ಷಿತ್ ಶುಕ್ಲಾ, ಶುಭಂ ತ್ರಿವೇದಿ, ಅಂಶುಮಾನ್ ಶುಕ್ಲಾ, ಶಿವ ಶರ್ಮಾ ಮತ್ತು ನಿತೀಶ್ ಕುಮಾರ್ ಎಂಬುವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಸುಬ್ರಮಣಿಯನ್ ಶರ್ಮಾ ಎಂಬಾತ ನರಸರಾವ್ ಪೇಟೆ, ಶಿವ ಶರ್ಮಾ ಮಧ್ಯಪ್ರದೇಶ ಹಾಗೂ ಉಳಿದ ನಾಲ್ವರು ಉತ್ತರ ಪ್ರದೇಶದವರು. ಮೃತದೇಹಗಳನ್ನು ಅವರವರ ಊರುಗಳಿಗೆ ಸ್ಥಳಾಂತರಿಸಲು ಪೊಲೀಸರು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯಪಾಲರಿಂದ ಸಂತಾಪ:

ಗುಂಟೂರಿನಲ್ಲಿನ ವೇದ ಶಾಲೆಯ ವಿದ್ಯಾರ್ಥಿಗಳ ಸಾವಿಗೆ ರಾಜ್ಯಪಾಲ ಬಿಶ್ವಭೂಷಣ ಹರಿಚಂದನ್ ಮತ್ತು ಸಚಿವ ಆದಿಮುಲ್ಕು ಸುರೇಶ್ ಆಘಾತ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ಸಂಸ್ಥೆಗಳ ವ್ಯವಸ್ಥಾಪಕರಿಗೆ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ ಶಾಲೆ ಬಿಟ್ಟು ಹೋಗಬೇಡಿ ಸರ್​​.. ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು

Last Updated : Dec 11, 2021, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.