ETV Bharat / bharat

ಬೆಳ್ಳಂಬೆಳಗ್ಗೆ ತೆಲುಗು ನಾಡಲ್ಲಿ ಜವರಾಯನ ಅಟ್ಟಹಾಸ.. ಪ್ರತ್ಯೇಕ ಅಪಘಾತದಲ್ಲಿ 9 ಜನ ಸಾವು!

author img

By

Published : Jan 2, 2021, 9:07 AM IST

Updated : Jan 2, 2021, 11:50 AM IST

ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ್ದಾರೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದಲ್ಲಿ ಜವರಾಯನ ಅಟ್ಟಹಾಸ

ಆಂಧ್ರಪ್ರದೇಶದ ಪೂರ್ವ ಗೋದಾವರಿ, ವಿಜಯನಗರಂ ಮತ್ತು ಪ್ರಕಾಶಂ ಜಿಲ್ಲೆ ಮತ್ತು ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದ ಅಪಘಾತಗಳಲ್ಲಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ.

ಪೂರ್ವ ಗೋದಾವರಿ...

ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ತಾಲೂಕಿನ ಗೋಪಾಲಪುರಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದಲ್ಲಿ ಜವರಾಯನ ಅಟ್ಟಹಾಸ

ಕಡಪ ಜಿಲ್ಲೆ ಮೈದುಕೂರುನಿಂದ ಕಾಕಿನಾಡಗೆ ಟೊಮೊಟೊ ತುಂಬಿದ್ದ ವ್ಯಾನ್ ಬೆಳಗಿನ ಜಾವ ಗೋಪಾಲಪುರಕ್ಕೆ ತಲುಪಿತ್ತು. ಬಳಿಕ ರಾಷ್ಟ್ರೀಯ ಹೈವೇಯಲ್ಲಿ ಬೈಕ್​ ಡಿಕ್ಕಿ ಹೊಡೆದು ನೆಲಕ್ಕುರುಳಿ ಬಿದ್ದಿದೆ. ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರ ಕಂಡೆಲ್ಲಿ ಸತೀಶ್​ (21) ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿದ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಗಾಯಾಳುಗಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಕೊಂಡೇಟಿ ಚಂಟಿ (20) ಪ್ರಾಣ ಬಿಟ್ಟಿದ್ದಾರೆ. ಕೊತ್ತಪೇಟ ತಾಲೂಕಿನ ಕಂಡ್ರಿಗ ಗ್ರಾಮದ ವಂಗಲಪುಡಿ ಸುರೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಈ ಘಟನೆ ಕುರಿತು ಗೋಪಾಲಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯನಗರಂ...

ಕೆಲ ಗಂಟೆಗಳ ಹಿಂದೆ ವಿಜಯನಗರಂ ಜಿಲ್ಲೆಯ ಸೀತಾನಗರಂ ತಾಲೂಕಿನ ಲಚ್ಚಯ್ಯಪೇಟ ಬಳಿ ಆಟೋ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋ ಚಾಲಕ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆಯರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆ ಕುರಿತು ಲಚ್ಚಯ್ಯಪೇಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ವಿಜಯನಗರಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಪ್ರಕಾಶಂ ಜಿಲ್ಲೆ...

ನಿಂತ ಲಾರಿಗೆ ಟ್ರಾಲಿ ವಾಹನ ಡಿಕ್ಕಿ ಹೊಡೆದಿರುವುದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂ ಜಿಲ್ಲೆಯ ಬೇಸ್ತವಾರಿಪೇಟ ತಾಲೂಕಿನ ಮೋಕ್ಷಗುಂಡಂ ಬಳಿ ನಡೆದಿದೆ.

ಹೈದರಾಬಾದ್​ನಿಂದ ವ್ಯಕ್ತಿಯೊಬ್ಬರ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ಸಂದಂರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ಪ್ರಕಾಶಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಈ ಘಟನೆ ಕುರಿತು ಬೇಸ್ತವಾರಿಪೇಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತೆಲಂಗಾಣದ ಖಮ್ಮಂ ಜಿಲ್ಲೆ...

ಬೈಕ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಖಮ್ಮಂ ಜಿಲ್ಲೆಯ ಕಾಮೇಪಲ್ಲಿ ತಾಲೂಕಿನ ಪೊನ್ನಕಲ್​ ಬುಗ್ಗವಾಗು ಬಳಿ ನಡೆದಿದೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ಖಮ್ಮಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಮಹಾಬೂಬಾಬಾದ್​ನಲ್ಲಿ ನಡೆದ ಶುಭಕಾರ್ಯಕ್ಕೆ ಹೋಗಿ ಬರುತ್ತಿದ್ದ ವೇಳೆ ಬೈಕ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಖಮ್ಮಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ

ಈ ಘಟನೆ ಕುರಿತು ಕಾಮೇಪಲ್ಲಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ, ವಿಜಯನಗರಂ ಮತ್ತು ಪ್ರಕಾಶಂ ಜಿಲ್ಲೆ ಮತ್ತು ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದ ಅಪಘಾತಗಳಲ್ಲಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ.

ಪೂರ್ವ ಗೋದಾವರಿ...

ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ತಾಲೂಕಿನ ಗೋಪಾಲಪುರಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದಲ್ಲಿ ಜವರಾಯನ ಅಟ್ಟಹಾಸ

ಕಡಪ ಜಿಲ್ಲೆ ಮೈದುಕೂರುನಿಂದ ಕಾಕಿನಾಡಗೆ ಟೊಮೊಟೊ ತುಂಬಿದ್ದ ವ್ಯಾನ್ ಬೆಳಗಿನ ಜಾವ ಗೋಪಾಲಪುರಕ್ಕೆ ತಲುಪಿತ್ತು. ಬಳಿಕ ರಾಷ್ಟ್ರೀಯ ಹೈವೇಯಲ್ಲಿ ಬೈಕ್​ ಡಿಕ್ಕಿ ಹೊಡೆದು ನೆಲಕ್ಕುರುಳಿ ಬಿದ್ದಿದೆ. ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರ ಕಂಡೆಲ್ಲಿ ಸತೀಶ್​ (21) ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿದ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಗಾಯಾಳುಗಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಕೊಂಡೇಟಿ ಚಂಟಿ (20) ಪ್ರಾಣ ಬಿಟ್ಟಿದ್ದಾರೆ. ಕೊತ್ತಪೇಟ ತಾಲೂಕಿನ ಕಂಡ್ರಿಗ ಗ್ರಾಮದ ವಂಗಲಪುಡಿ ಸುರೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಈ ಘಟನೆ ಕುರಿತು ಗೋಪಾಲಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯನಗರಂ...

ಕೆಲ ಗಂಟೆಗಳ ಹಿಂದೆ ವಿಜಯನಗರಂ ಜಿಲ್ಲೆಯ ಸೀತಾನಗರಂ ತಾಲೂಕಿನ ಲಚ್ಚಯ್ಯಪೇಟ ಬಳಿ ಆಟೋ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋ ಚಾಲಕ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆಯರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆ ಕುರಿತು ಲಚ್ಚಯ್ಯಪೇಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ವಿಜಯನಗರಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಪ್ರಕಾಶಂ ಜಿಲ್ಲೆ...

ನಿಂತ ಲಾರಿಗೆ ಟ್ರಾಲಿ ವಾಹನ ಡಿಕ್ಕಿ ಹೊಡೆದಿರುವುದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂ ಜಿಲ್ಲೆಯ ಬೇಸ್ತವಾರಿಪೇಟ ತಾಲೂಕಿನ ಮೋಕ್ಷಗುಂಡಂ ಬಳಿ ನಡೆದಿದೆ.

ಹೈದರಾಬಾದ್​ನಿಂದ ವ್ಯಕ್ತಿಯೊಬ್ಬರ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ಸಂದಂರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ಪ್ರಕಾಶಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಈ ಘಟನೆ ಕುರಿತು ಬೇಸ್ತವಾರಿಪೇಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತೆಲಂಗಾಣದ ಖಮ್ಮಂ ಜಿಲ್ಲೆ...

ಬೈಕ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಖಮ್ಮಂ ಜಿಲ್ಲೆಯ ಕಾಮೇಪಲ್ಲಿ ತಾಲೂಕಿನ ಪೊನ್ನಕಲ್​ ಬುಗ್ಗವಾಗು ಬಳಿ ನಡೆದಿದೆ.

Five deaths in two separate accidents, Five deaths in two separate accidents at Andhra Pradesh, Andhra Pradesh road accident, Andhra Pradesh road accident news, ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ, ಆಂಧ್ರಪ್ರದೇಶ ರಸ್ತೆ ಅಪಘಾತ ಸುದ್ದಿ,
ಖಮ್ಮಂ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ

ಮಹಾಬೂಬಾಬಾದ್​ನಲ್ಲಿ ನಡೆದ ಶುಭಕಾರ್ಯಕ್ಕೆ ಹೋಗಿ ಬರುತ್ತಿದ್ದ ವೇಳೆ ಬೈಕ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಖಮ್ಮಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ

ಈ ಘಟನೆ ಕುರಿತು ಕಾಮೇಪಲ್ಲಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jan 2, 2021, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.