ETV Bharat / bharat

ಅಕ್ಟೋಬರ್​​ನಲ್ಲಿ 'ಗಗನಯಾನ' ಮೊದಲ ಪ್ರಾಯೋಗಿಕ ಹಾರಾಟ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

author img

By ETV Bharat Karnataka Team

Published : Sep 3, 2023, 1:20 PM IST

ಇಡೀ ವಿಶ್ವವೇ ಕಾಯುತ್ತಿದ್ದ ಆದಿತ್ಯ-ಎಲ್‌1 ಉಡಾವಣೆಯನ್ನು ಭಾರತದ 'Sunshine Moment' ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬಣ್ಣಿಸಿದ್ದಾರೆ.

minsiter Jitendra Singh
ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ: ಆದಿತ್ಯ-ಎಲ್‌1 ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್, ಮುಂದಿನ ಅಕ್ಟೋಬರ್‌ನಲ್ಲಿ 'ಗಗನಯಾನ' ಯೋಜನೆಯ ಮೊದಲ ಪ್ರಯೋಗ ನಡೆಯಲಿದೆ ಎಂದು ಹೇಳಿದ್ದಾರೆ.

ಆದಿತ್ಯ-ಎಲ್ 1 ಉಡಾವಣೆಯನ್ನು ಭಾರತ 'ಪ್ರಜ್ವಲಿಸುವ ಕ್ಷಣ' ಎಂದು ಕರೆದ ಜಿತೇಂದ್ರ ಸಿಂಗ್​, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಹರಿಕೋಟಾದಲ್ಲಿ ಅವಕಾಶದ ದ್ವಾರಗಳನ್ನು ತೆರೆದಿದ್ದರಿಂದ ಇದು ಸಾಧ್ಯವಾಗಿದೆ ಎಂದರು. ಇದು ಭಾರತಕ್ಕೆ ಅಮೂಲ್ಯ ಘಳಿಗೆ. ಚಂದ್ರಯಾನದಂತೆ ಇಲ್ಲಿಯೂ ಇಡೀ ರಾಷ್ಟ್ರವೇ ತೊಡಗಿಸಿಕೊಂಡಿದೆ ಎಂದರು.

ಇದನ್ನೂ ಓದಿ: ಚಂದ್ರಯಾನ-3, ಆದಿತ್ಯ-ಎಲ್1 ಯಶಸ್ಸಿನ ಬಳಿಕ ಇಸ್ರೋದ ಮುಂದಿನ ಯೋಜನೆ ಏನು?: ಇಲ್ಲಿದೆ ಮಾಹಿತಿ

ಆದಿತ್ಯ-ಎಲ್‌1 ಬಗ್ಗೆ ಒಂದಿಷ್ಟು..: ಆದಿತ್ಯ-ಎಲ್‌1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ವೀಕ್ಷಣಾಲಯ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡು ಹಿಡಿಯಲಿದೆ. ನೌಕೆಯು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಯೋಗಗಳಿಗೆ ಒಳಗಾಗುತ್ತದೆ. ನಂತರ ಆದಿತ್ಯ-ಎಲ್‌1 ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಕುಶಲತೆಗೆ ಒಳಗಾಗುತ್ತದೆ. ಅದು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಎಲ್‌1 ಪಾಯಿಂಟ್ ತಲುಪಲು ಉಪಗ್ರಹ ಸುಮಾರು 15 ಮಿಲಿಯನ್ ಕಿ.ಮೀ ಪ್ರಯಾಣಿಸಲಿದೆ.

ಇದನ್ನೂ ಓದಿ: ಚಂದ್ರಯಾನ-3: ಕೆಲಸ ಮುಗಿಸಿ 'ಸ್ಲೀಪ್​ ಮೋಡ್​'ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ

ಎಲ್‌1 ಪಾಯಿಂಟ್​ಗೆ ಆಗಮಿಸಿದ ನಂತರ, ಮತ್ತೊಂದು ಕುಶಲತೆ ಆದಿತ್ಯ-ಎಲ್ 1ನ್ನು ಎಲ್ 1 ಸುತ್ತ ಕಕ್ಷೆಗೆ ಬಂಧಿಸುತ್ತದೆ. ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳ. ಭೂಮಿ ಮತ್ತು ಸೂರ್ಯನನ್ನು ಸೇರುವ ರೇಖೆಗೆ ಲಂಬವಾಗಿರುವ ಸಮತಲದಲ್ಲಿ ಅನಿಯಮಿತ ಆಕಾರದ ಕಕ್ಷೆಯಲ್ಲಿ ಎಲ್ 1 ಸುತ್ತ ಸುತ್ತುತ್ತಿರುವ ಉಪಗ್ರಹ ತನ್ನ ಸಂಪೂರ್ಣ ಕಾರ್ಯಾಚರಣೆಯ ಜೀವನವನ್ನು ಕಳೆಯುತ್ತದೆ ಎಂದು ಇಸ್ರೊ ಹೇಳಿದೆ. ಸೂರ್ಯನಿಂದ ನೂರಾರು ಕಿ.ಮೀ ದೂರದಲ್ಲಿದ್ದರೂ, ಆದಿತ್ಯ ಎಲ್ 1 ಅದನ್ನು ನಿರಂತರವಾಗಿ ಗಮನಿಸುತ್ತದೆ.

'ಸೂರ್ಯನ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಲಾಗುವುದು. ಚಂದ್ರಯಾನ-3 ರಂತೆಯೇ, ಆದಿತ್ಯ-ಎಲ್ 1 ಮಿಷನ್ ಕೂಡ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಶಿಸಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ನಾಯಕರು ಆದಿತಾ-ಎಲ್ 1 ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದರು.

ಇದನ್ನೂ ಓದಿ: Aditya-L1 ಯು.ಆರ್‌.ರಾವ್‌ ಕನಸಿನ ಯೋಜನೆ: 'ಉಪಗ್ರಹ ಪಿತಾಮಹ'ನ ಸ್ಮರಿಸಿದ ಇಸ್ರೋ

ನವದೆಹಲಿ: ಆದಿತ್ಯ-ಎಲ್‌1 ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್, ಮುಂದಿನ ಅಕ್ಟೋಬರ್‌ನಲ್ಲಿ 'ಗಗನಯಾನ' ಯೋಜನೆಯ ಮೊದಲ ಪ್ರಯೋಗ ನಡೆಯಲಿದೆ ಎಂದು ಹೇಳಿದ್ದಾರೆ.

ಆದಿತ್ಯ-ಎಲ್ 1 ಉಡಾವಣೆಯನ್ನು ಭಾರತ 'ಪ್ರಜ್ವಲಿಸುವ ಕ್ಷಣ' ಎಂದು ಕರೆದ ಜಿತೇಂದ್ರ ಸಿಂಗ್​, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಹರಿಕೋಟಾದಲ್ಲಿ ಅವಕಾಶದ ದ್ವಾರಗಳನ್ನು ತೆರೆದಿದ್ದರಿಂದ ಇದು ಸಾಧ್ಯವಾಗಿದೆ ಎಂದರು. ಇದು ಭಾರತಕ್ಕೆ ಅಮೂಲ್ಯ ಘಳಿಗೆ. ಚಂದ್ರಯಾನದಂತೆ ಇಲ್ಲಿಯೂ ಇಡೀ ರಾಷ್ಟ್ರವೇ ತೊಡಗಿಸಿಕೊಂಡಿದೆ ಎಂದರು.

ಇದನ್ನೂ ಓದಿ: ಚಂದ್ರಯಾನ-3, ಆದಿತ್ಯ-ಎಲ್1 ಯಶಸ್ಸಿನ ಬಳಿಕ ಇಸ್ರೋದ ಮುಂದಿನ ಯೋಜನೆ ಏನು?: ಇಲ್ಲಿದೆ ಮಾಹಿತಿ

ಆದಿತ್ಯ-ಎಲ್‌1 ಬಗ್ಗೆ ಒಂದಿಷ್ಟು..: ಆದಿತ್ಯ-ಎಲ್‌1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ವೀಕ್ಷಣಾಲಯ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡು ಹಿಡಿಯಲಿದೆ. ನೌಕೆಯು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಯೋಗಗಳಿಗೆ ಒಳಗಾಗುತ್ತದೆ. ನಂತರ ಆದಿತ್ಯ-ಎಲ್‌1 ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಕುಶಲತೆಗೆ ಒಳಗಾಗುತ್ತದೆ. ಅದು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಎಲ್‌1 ಪಾಯಿಂಟ್ ತಲುಪಲು ಉಪಗ್ರಹ ಸುಮಾರು 15 ಮಿಲಿಯನ್ ಕಿ.ಮೀ ಪ್ರಯಾಣಿಸಲಿದೆ.

ಇದನ್ನೂ ಓದಿ: ಚಂದ್ರಯಾನ-3: ಕೆಲಸ ಮುಗಿಸಿ 'ಸ್ಲೀಪ್​ ಮೋಡ್​'ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ

ಎಲ್‌1 ಪಾಯಿಂಟ್​ಗೆ ಆಗಮಿಸಿದ ನಂತರ, ಮತ್ತೊಂದು ಕುಶಲತೆ ಆದಿತ್ಯ-ಎಲ್ 1ನ್ನು ಎಲ್ 1 ಸುತ್ತ ಕಕ್ಷೆಗೆ ಬಂಧಿಸುತ್ತದೆ. ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳ. ಭೂಮಿ ಮತ್ತು ಸೂರ್ಯನನ್ನು ಸೇರುವ ರೇಖೆಗೆ ಲಂಬವಾಗಿರುವ ಸಮತಲದಲ್ಲಿ ಅನಿಯಮಿತ ಆಕಾರದ ಕಕ್ಷೆಯಲ್ಲಿ ಎಲ್ 1 ಸುತ್ತ ಸುತ್ತುತ್ತಿರುವ ಉಪಗ್ರಹ ತನ್ನ ಸಂಪೂರ್ಣ ಕಾರ್ಯಾಚರಣೆಯ ಜೀವನವನ್ನು ಕಳೆಯುತ್ತದೆ ಎಂದು ಇಸ್ರೊ ಹೇಳಿದೆ. ಸೂರ್ಯನಿಂದ ನೂರಾರು ಕಿ.ಮೀ ದೂರದಲ್ಲಿದ್ದರೂ, ಆದಿತ್ಯ ಎಲ್ 1 ಅದನ್ನು ನಿರಂತರವಾಗಿ ಗಮನಿಸುತ್ತದೆ.

'ಸೂರ್ಯನ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಲಾಗುವುದು. ಚಂದ್ರಯಾನ-3 ರಂತೆಯೇ, ಆದಿತ್ಯ-ಎಲ್ 1 ಮಿಷನ್ ಕೂಡ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಶಿಸಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ನಾಯಕರು ಆದಿತಾ-ಎಲ್ 1 ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದರು.

ಇದನ್ನೂ ಓದಿ: Aditya-L1 ಯು.ಆರ್‌.ರಾವ್‌ ಕನಸಿನ ಯೋಜನೆ: 'ಉಪಗ್ರಹ ಪಿತಾಮಹ'ನ ಸ್ಮರಿಸಿದ ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.