ನವಾಡ, ಬಿಹಾರ: ಜಿಲ್ಲೆಯಲ್ಲಿ ಸೈಬರ್ ಅಪರಾಧಿಗಳ ಗುಂಪನ್ನು ಹಿಡಿಯಲು ಬಂದ ತೆಲಂಗಾಣ ಸೈಬರ್ ಕ್ರೈಂ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಅಪರಾಧಿಗಳು ಈ ಕೃತ್ಯದ ನಡುವೆಯೂ ಪೊಲೀಸರು ಗ್ಯಾಂಗ್ನ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಅಪರಾಧಿಗಳಿಂದ 1.23 ಕೋಟಿ ರೂಪಾಯಿ ನಗದು ಹಾಗೂ ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಹಾರದ ನವಾಡ ಜಿಲ್ಲೆಯ ಯುವಕರು ಗುಂಪು ಕಟ್ಟಿಕೊಂಡು ಹಲವು ಭಾಗಗಳಲ್ಲಿ ಸೈಬರ್ ವಂಚನೆ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನ ಹಾಗೂ ದುಬಾರಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಡೀಲರ್ ಶಿಪ್ ಕೊಡಿಸುವುದಾಗಿ ಅಮಾಯಕರನ್ನು ನಂಬಿಸುತ್ತಿದ್ದಾರೆ. ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಮತ್ತು ನವಡಾ ಜಿಲ್ಲಾ ಪೊಲೀಸರು ಅಪರಾಧಿಗಳನ್ನು ತಡೆಯಲು ಜಂಟಿ ದಾಳಿ ನಡೆಸಿದರು.
![firing on Telangana police Telangana police in bihar Accused arrested by Telangana police Bihar crime news Cyber crime in India ಸೈಬರ್ ಕ್ರೈಂ ಪೊಲೀಸರು ಪೊಲೀಸರ ಮೇಲೆ ಗುಂಡಿನ ದಾಳಿ ತೆಲಂಗಾಣ ಸೈಬರ್ ಕ್ರೈಂ ಪೊಲೀಸರ ಮೇಲೆ ಗುಂಡಿನ ದಾಳಿ ಸೈಬರ್ ಕ್ರಿಮಿನಲ್](https://etvbharatimages.akamaized.net/etvbharat/prod-images/16114496_903_16114496_1660635168050.png)
ತೆಲಂಗಾಣ ಪೊಲೀಸರು ಮೂರು ದಿನಗಳ ಹಿಂದೆ ಮಧ್ಯರಾತ್ರಿ ಭವಾನಿ ಬಿಘಾ ಗ್ರಾಮಕ್ಕೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ದಾಳಿಗೆ ಸಿದ್ಧತೆ ನಡೆಸಿದ್ದರು. ಕಟ್ಟಡದ ಮೇಲ್ಛಾವಣಿಯಿಂದ ಇವರ ಚಲನವಲನಗಳನ್ನು ಗಮನಿಸಿದ ಪ್ರಮುಖ ಆರೋಪಿ ಮಿಥಿಲೇಶ್ ಪ್ರಸಾದ್ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ನಂತರ ಪೊಲೀಸರು ದಾಳಿ ನಡೆಸಿ ಭೂತಲಿರಾಮ್, ಮಹೇಶಕುಮಾರ್, ಸುರೇಂದ್ರಮಹಾತೋ, ಮತ್ತು ಜಿತೇಂದ್ರಕುಮಾರ್ನ್ನು ಬಂಧಿಸಿದರು.
ಇನ್ನು ಬಂಧಿತ ಆರೋಪಿಗಳಿಂದ 1.23 ಕೋಟಿ ರೂಪಾಯಿ ನಗದು, ಎರಡು ಕಾರುಗಳು, ವಿದೇಶಿ ಮದ್ಯ ಮತ್ತು ಐದು ಕಾರವಾನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ತಂದೆ ಸುರೇಂದ್ರ ಮಹತೋ ನಿವಾಸದಲ್ಲಿ ದುಬಾರಿ ವಾಹನಗಳಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸೈಬರ್ ಅಪರಾಧಿಗಳು ಆಂಧ್ರಪ್ರದೇಶ, ತೆಲಂಗಾಣ, ಪಾಟ್ನಾ, ಕೋಲ್ಕತ್ತಾ ಮತ್ತು ಇತರ ನಗರಗಳಲ್ಲಿ ವಾಹನ ಡೀಲರ್ಶಿಪ್ ಹೆಸರಿನಲ್ಲಿ ಹಲವರಿಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಿಟಿ ವಾರೆಂಟ್ ಮೇಲೆ ನಗರಕ್ಕೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣ ಪೊಲೀಸರ ಮೇಲೆ ಗುಂಡು ಹಾರಿಸಿದ ಭವಾನಿ ಬಿಘಾ ಗ್ರಾಮವು ಸೈಬರ್ ಕ್ರಿಮಿನಲ್ಗಳ ಸಂತಾನೋತ್ಪತ್ತಿ ಕೇಂದ್ರವಾಗಿದೆ. ಸೈಬರ್ ಗ್ಯಾಂಗ್ಗಳನ್ನು ಬಂಧಿಸಲು ವಿವಿಧ ರಾಜ್ಯಗಳ ಪೊಲೀಸರು ಆಗಾಗ್ಗೆ ಅಲ್ಲಿಗೆ ಹೋಗುತ್ತಾರೆ ಎಂಬುದು ಗಮನಾರ್ಹ.
ಓದಿ: ಶಿವಮೊಗ್ಗದಲ್ಲಿ ಗುರುವಾರದವರೆಗೆ 144 ಸೆಕ್ಷನ್ ಜಾರಿ.. ಬೈಕ್ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ