ETV Bharat / bharat

ಲಾಕ್​ಡೌನ್​ ಆಗುವ ಭಯ: ಮದ್ಯ ಅಲ್ಲ, ತಂಬಾಕು ಉತ್ಪನ್ನ ಖರೀದಿಗೆ ಅಂಗಡಿ ಮುಂದೆ 'ಕ್ಯೂ' - ತಂಬಾಕು ಉತ್ಪನ್ನ ಖರೀದಿಗೆ ಕ್ಯೂ

ಗುಜರಾತ್​ನಲ್ಲೂ ಪ್ರತಿದಿನ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಇದೀಗ ಲಾಕ್​ಡೌನ್​ ಭಯ ಶುರುವಾಗಿದ್ದು, ಇದೇ ಕಾರಣಕ್ಕಾಗಿ ಜನರು ತಮ್ಮ ಅಗತ್ಯ ವಸ್ತು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಜುನಾಗಡ್​ದಲ್ಲಿ ತಂಬಾಕು ಪ್ರೀಯರು ಅಂಗಡಿ ಮುಂದೆ ಕ್ಯೂ ನಿಂತು ತಮ್ಮ ಉತ್ಪನ್ನ ಖರೀದಿ ಮಾಡಿದ್ದಾರೆ.

Long queues of tobacco addicts
Long queues of tobacco addicts
author img

By

Published : Apr 28, 2021, 9:03 PM IST

ಜುನಾಗಡ್​​(ರಾಜಸ್ಥಾನ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಹಲವು ರಾಜ್ಯಗಳಲ್ಲಿ ಇಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿವೆ.

ತಮ್ಮ ರಾಜ್ಯದಲ್ಲೂ ಲಾಕ್​ಡೌನ್​ ಆಗಬಹುದು ಎಂಬ ಭಯದಲ್ಲಿ ರಾಜಸ್ಥಾನದ ಜುನಾಗಡ್​ದಲ್ಲಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ತಂಬಾಕು ವ್ಯಸನಿಗಳು ಅಂಗಡಿ ಹೊರಗೆ ಸರತಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಮೊದಲನೇ ಹಂತದ ಲಾಕ್​ಡೌನ್ ಘೋಷಣೆ ಮಾಡಿದ್ದ ವೇಳೆ, ತಾವು ಸಂಕಷ್ಟ ಅನುಭವಿಸಿರುವ ಕಾರಣ ಇದೀಗ ತಮಗೆ ಬೇಕಾದ ಉತ್ಪನ್ನ ಖರೀದಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ತಂಬಾಕು ಉತ್ಪನ್ನ ಖರೀದಿಗೆ ಅಂಗಡಿ ಮುಂದೆ ಕ್ಯೂ ನಿಂತ ಜನರು

ಇದನ್ನೂ ಓದಿ: ಕೊರೊನಾ ವಿಷವರ್ತುಲ: ವೈಜ್ಞಾನಿಕ ಕಾದಂಬರಿಕಾರ ಅನೀಶ್ ದೇಬ್ ನಿಧನ

ಕರ್ನಾಟಕ,ನವದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ಕಠಿಣ ನಿರ್ಬಂಧ ವಿಧಿಸಲಾಗಿದ್ದು, ಮನೆಬಿಟ್ಟು ಹೊರಗೆ ಬರುವವರ ಮೇಲೆ ಪೊಲೀಸರು ಹಲ್ಲೆ ನಡೆಸುವಂತಹ ಘಟನೆಗಳು ಸಹ ನಡೆಯುತ್ತಿವೆ.

ಜುನಾಗಡ್​​(ರಾಜಸ್ಥಾನ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಹಲವು ರಾಜ್ಯಗಳಲ್ಲಿ ಇಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿವೆ.

ತಮ್ಮ ರಾಜ್ಯದಲ್ಲೂ ಲಾಕ್​ಡೌನ್​ ಆಗಬಹುದು ಎಂಬ ಭಯದಲ್ಲಿ ರಾಜಸ್ಥಾನದ ಜುನಾಗಡ್​ದಲ್ಲಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ತಂಬಾಕು ವ್ಯಸನಿಗಳು ಅಂಗಡಿ ಹೊರಗೆ ಸರತಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಮೊದಲನೇ ಹಂತದ ಲಾಕ್​ಡೌನ್ ಘೋಷಣೆ ಮಾಡಿದ್ದ ವೇಳೆ, ತಾವು ಸಂಕಷ್ಟ ಅನುಭವಿಸಿರುವ ಕಾರಣ ಇದೀಗ ತಮಗೆ ಬೇಕಾದ ಉತ್ಪನ್ನ ಖರೀದಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ತಂಬಾಕು ಉತ್ಪನ್ನ ಖರೀದಿಗೆ ಅಂಗಡಿ ಮುಂದೆ ಕ್ಯೂ ನಿಂತ ಜನರು

ಇದನ್ನೂ ಓದಿ: ಕೊರೊನಾ ವಿಷವರ್ತುಲ: ವೈಜ್ಞಾನಿಕ ಕಾದಂಬರಿಕಾರ ಅನೀಶ್ ದೇಬ್ ನಿಧನ

ಕರ್ನಾಟಕ,ನವದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ಕಠಿಣ ನಿರ್ಬಂಧ ವಿಧಿಸಲಾಗಿದ್ದು, ಮನೆಬಿಟ್ಟು ಹೊರಗೆ ಬರುವವರ ಮೇಲೆ ಪೊಲೀಸರು ಹಲ್ಲೆ ನಡೆಸುವಂತಹ ಘಟನೆಗಳು ಸಹ ನಡೆಯುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.