ETV Bharat / bharat

Delhi high court: ವರದಕ್ಷಿಣೆ ಕಿರುಕುಳ, ಅತ್ಯಾಚಾರದ ಸುಳ್ಳು ಆರೋಪಕ್ಕೆ ಯಾವುದೇ ಕ್ಷಮೆ ಇಲ್ಲ; ಹೈಕೋರ್ಟ್ ಗರಂ

author img

By ETV Bharat Karnataka Team

Published : Sep 4, 2023, 9:13 AM IST

ಮಹಿಳೆಯೊಬ್ಬಳು ವರದಕ್ಷಿಣೆ ಕಿರುಕುಳ ಮಾತ್ರವಲ್ಲದೇ ಪತಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಮಾಡಿದ್ದ ಅತ್ಯಾಚಾರದ ಆರೋಪಗಳು ಸುಳ್ಳು ಎಂದು ಸಾಬೀತಾಗಿರುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ. ಇದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

Delhi high court
ವರದಕ್ಷಿಣೆ ಕಿರುಕುಳ, ಅತ್ಯಾಚಾರದ ಸುಳ್ಳು ಆರೋಪ ತೀವ್ರ ಕ್ರೌರ್ಯ: ಹೈಕೋರ್ಟ್

ನವದೆಹಲಿ: ಪತಿಯ ಕುಟುಂಬದ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ಅಥವಾ ಅತ್ಯಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದು ಅತ್ಯಂತ ಕ್ರೌರ್ಯವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೆ, ಯಾವುದೇ ವೈವಾಹಿಕ ಸಂಬಂಧದ ತಳಹದಿಯು ಸಹಬಾಳ್ವೆ ದಾಂಪತ್ಯ ಸಂಬಂಧವಾಗಿದೆ ಎಂದು ತಿಳಿಸಿದೆ.

ಮಾನಸಿಕ ಕ್ರೌರ್ಯದ ನಿದರ್ಶನ: ಈ ಕ್ರೌರ್ಯದ ಆಧಾರದ ಮೇಲೆ ತನ್ನ ಪತಿ ಪರವಾಗಿ ವಿಚ್ಛೇದನದ ತೀರ್ಪು ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಮಹಿಳೆ ಮೇಲ್ಮನವಿ ಸಲ್ಲಿಸಿದ್ದಳು. ಈ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿಯಾಗಿ ಹೇಳಿದೆ. ಪ್ರಸ್ತುತ ಈ ದಂಪತಿ 2014ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದು ಅವರು ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಪರಸ್ಪರ ಒಡನಾಟ ಮತ್ತು ವೈವಾಹಿಕ ಸಂಬಂಧದಿಂದ ಪರಸ್ಪರ ವಂಚಿತರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಸುಮಾರು ಒಂಬತ್ತು ವರ್ಷಗಳ ಕಾಲ ಇಂತಹ ಪ್ರತ್ಯೇಕತೆಯು ಅತ್ಯಂತ ಮಾನಸಿಕ ಕ್ರೌರ್ಯದ ನಿದರ್ಶನವಾಗಿದೆ. ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ವೈವಾಹಿಕ ಸಂಬಂಧ ಕಡಿದುಕೊಂಡಿದೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಹೇಳಿದೆ.

ಈ ಕ್ರೌರ್ಯದ ಕೃತ್ಯಕ್ಕೆ ಯಾವುದೇ ಕ್ಷಮೆಯಿಲ್ಲ- ಹೈಕೋರ್ಟ್: ಪತಿ ವಿರುದ್ಧ ಪತ್ನಿ ಸಲ್ಲಿಸಿರುವ ಸುಳ್ಳು ದೂರುಗಳು ಪುರುಷನ ವಿರುದ್ಧ ಮಾನಸಿಕ ಕ್ರೌರ್ಯವನ್ನು ರೂಪಿಸುತ್ತವೆ ಎಂದು ಪೀಠ ಹೇಳಿದೆ. ವರದಕ್ಷಿಣೆ ಕಿರುಕುಳ ಮಾತ್ರವಲ್ಲದೇ ಪ್ರತಿವಾದಿಯ (ಗಂಡನ) ಕುಟುಂಬದ ಸದಸ್ಯರ ವಿರುದ್ಧ ಅತ್ಯಾಚಾರದ ಗಂಭೀರ ಆರೋಪಗಳು ಸುಳ್ಳು ಎಂದು ಸಾಬೀತಾಗಿರುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದ್ದು, ಇದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ದೂರವಾದ ದಂಪತಿಗಳು ಸುಮಾರು 13 ತಿಂಗಳ ಕಾಲ ಒಟ್ಟಿಗೆ ವಾಸಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ದಂಪತಿ ಪರಸ್ಪರರ ಸಹವಾಸ ಮತ್ತು ವೈವಾಹಿಕ ಸಂಬಂಧದಿಂದ ವಂಚಿತರಾಗುವುದು ಕ್ರೌರ್ಯದ ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸಹ ಅನುಮೋದಿಸಿದೆ ಎಂದು ನ್ಯಾಯ ಪೀಠ ಹೇಳಿದೆ.

ಮಹಿಳೆ ತನ್ನ ಪತಿ ಮತ್ತು ಸೋದರ ಮಾವನ ವಿರುದ್ಧ ಅತ್ಯಾಚಾರ ಮತ್ತು ಕ್ರೌರ್ಯದ ಆರೋಪಗಳೊಂದಿಗೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಳು. ಇಬ್ಬರು ಪುರುಷರನ್ನು ವಿಚಾರಣಾ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಕೋರ್ಟ್​ ಗಮನಿಸಿದೆ. ಈ ನ್ಯಾಯಾಲಯದಲ್ಲಿ ಬಾಕಿ ಇರುವ ಖುಲಾಸೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ ಮಹಿಳೆ ತನ್ನ ಆರೋಪಗಳನ್ನು ಮುಂದುವರಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಲಾಗಿದೆಯಾದರೂ, ಆರೋಪಗಳು ಸುಳ್ಳು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಅವಲೋಕನ ಮಾಡಿದ್ದರು. ಗಮನಾರ್ಹವೆಂದರೆ, ಎಫ್‌ಐಆರ್ ದಾಖಲಾಗಿರುವ ದೂರನ್ನು ಸಲ್ಲಿಸುವ ಮೊದಲು ಮೇಲ್ಮನವಿದಾರರು ವಕೀಲರನ್ನು ಸಂಪರ್ಕಿಸಿದ್ದರು ಎಂದು ಕೂಡಾ ಸಾಕ್ಷ್ಯದಿಂದ ತಿಳಿದಿದೆ ಎಂದು ಹೈಕೋರ್ಟ್ ಹೇಳಿದೆ. (ಪಿಟಿಐ)

ಇದನ್ನೂ ಓದಿ: ಲಾಠಿ ಚಾರ್ಜ್ ಘಟನೆ​ ಬಳಿಕ ಅಧಿಕಾರ ವಹಿಸಿಕೊಂಡ ನೂತನ ಎಸ್​ಪಿ.. ಜಲ್ನಾದಲ್ಲಿ ಇಂದಿನಿಂದ ಸೆ. 17ರ ವರೆಗೆ ಕರ್ಫ್ಯೂ ಜಾರಿ

ನವದೆಹಲಿ: ಪತಿಯ ಕುಟುಂಬದ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ಅಥವಾ ಅತ್ಯಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದು ಅತ್ಯಂತ ಕ್ರೌರ್ಯವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೆ, ಯಾವುದೇ ವೈವಾಹಿಕ ಸಂಬಂಧದ ತಳಹದಿಯು ಸಹಬಾಳ್ವೆ ದಾಂಪತ್ಯ ಸಂಬಂಧವಾಗಿದೆ ಎಂದು ತಿಳಿಸಿದೆ.

ಮಾನಸಿಕ ಕ್ರೌರ್ಯದ ನಿದರ್ಶನ: ಈ ಕ್ರೌರ್ಯದ ಆಧಾರದ ಮೇಲೆ ತನ್ನ ಪತಿ ಪರವಾಗಿ ವಿಚ್ಛೇದನದ ತೀರ್ಪು ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಮಹಿಳೆ ಮೇಲ್ಮನವಿ ಸಲ್ಲಿಸಿದ್ದಳು. ಈ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿಯಾಗಿ ಹೇಳಿದೆ. ಪ್ರಸ್ತುತ ಈ ದಂಪತಿ 2014ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದು ಅವರು ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಪರಸ್ಪರ ಒಡನಾಟ ಮತ್ತು ವೈವಾಹಿಕ ಸಂಬಂಧದಿಂದ ಪರಸ್ಪರ ವಂಚಿತರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಸುಮಾರು ಒಂಬತ್ತು ವರ್ಷಗಳ ಕಾಲ ಇಂತಹ ಪ್ರತ್ಯೇಕತೆಯು ಅತ್ಯಂತ ಮಾನಸಿಕ ಕ್ರೌರ್ಯದ ನಿದರ್ಶನವಾಗಿದೆ. ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ವೈವಾಹಿಕ ಸಂಬಂಧ ಕಡಿದುಕೊಂಡಿದೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಹೇಳಿದೆ.

ಈ ಕ್ರೌರ್ಯದ ಕೃತ್ಯಕ್ಕೆ ಯಾವುದೇ ಕ್ಷಮೆಯಿಲ್ಲ- ಹೈಕೋರ್ಟ್: ಪತಿ ವಿರುದ್ಧ ಪತ್ನಿ ಸಲ್ಲಿಸಿರುವ ಸುಳ್ಳು ದೂರುಗಳು ಪುರುಷನ ವಿರುದ್ಧ ಮಾನಸಿಕ ಕ್ರೌರ್ಯವನ್ನು ರೂಪಿಸುತ್ತವೆ ಎಂದು ಪೀಠ ಹೇಳಿದೆ. ವರದಕ್ಷಿಣೆ ಕಿರುಕುಳ ಮಾತ್ರವಲ್ಲದೇ ಪ್ರತಿವಾದಿಯ (ಗಂಡನ) ಕುಟುಂಬದ ಸದಸ್ಯರ ವಿರುದ್ಧ ಅತ್ಯಾಚಾರದ ಗಂಭೀರ ಆರೋಪಗಳು ಸುಳ್ಳು ಎಂದು ಸಾಬೀತಾಗಿರುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದ್ದು, ಇದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ದೂರವಾದ ದಂಪತಿಗಳು ಸುಮಾರು 13 ತಿಂಗಳ ಕಾಲ ಒಟ್ಟಿಗೆ ವಾಸಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ದಂಪತಿ ಪರಸ್ಪರರ ಸಹವಾಸ ಮತ್ತು ವೈವಾಹಿಕ ಸಂಬಂಧದಿಂದ ವಂಚಿತರಾಗುವುದು ಕ್ರೌರ್ಯದ ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸಹ ಅನುಮೋದಿಸಿದೆ ಎಂದು ನ್ಯಾಯ ಪೀಠ ಹೇಳಿದೆ.

ಮಹಿಳೆ ತನ್ನ ಪತಿ ಮತ್ತು ಸೋದರ ಮಾವನ ವಿರುದ್ಧ ಅತ್ಯಾಚಾರ ಮತ್ತು ಕ್ರೌರ್ಯದ ಆರೋಪಗಳೊಂದಿಗೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಳು. ಇಬ್ಬರು ಪುರುಷರನ್ನು ವಿಚಾರಣಾ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಕೋರ್ಟ್​ ಗಮನಿಸಿದೆ. ಈ ನ್ಯಾಯಾಲಯದಲ್ಲಿ ಬಾಕಿ ಇರುವ ಖುಲಾಸೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ ಮಹಿಳೆ ತನ್ನ ಆರೋಪಗಳನ್ನು ಮುಂದುವರಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಲಾಗಿದೆಯಾದರೂ, ಆರೋಪಗಳು ಸುಳ್ಳು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಅವಲೋಕನ ಮಾಡಿದ್ದರು. ಗಮನಾರ್ಹವೆಂದರೆ, ಎಫ್‌ಐಆರ್ ದಾಖಲಾಗಿರುವ ದೂರನ್ನು ಸಲ್ಲಿಸುವ ಮೊದಲು ಮೇಲ್ಮನವಿದಾರರು ವಕೀಲರನ್ನು ಸಂಪರ್ಕಿಸಿದ್ದರು ಎಂದು ಕೂಡಾ ಸಾಕ್ಷ್ಯದಿಂದ ತಿಳಿದಿದೆ ಎಂದು ಹೈಕೋರ್ಟ್ ಹೇಳಿದೆ. (ಪಿಟಿಐ)

ಇದನ್ನೂ ಓದಿ: ಲಾಠಿ ಚಾರ್ಜ್ ಘಟನೆ​ ಬಳಿಕ ಅಧಿಕಾರ ವಹಿಸಿಕೊಂಡ ನೂತನ ಎಸ್​ಪಿ.. ಜಲ್ನಾದಲ್ಲಿ ಇಂದಿನಿಂದ ಸೆ. 17ರ ವರೆಗೆ ಕರ್ಫ್ಯೂ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.