ETV Bharat / bharat

ವಿವಾಹೇತರ ಸಂಬಂಧ.. ಸಾಫ್ಟ್‌ವೇರ್ ಉದ್ಯೋಗಿ ಕೊಲೆ: ಆರೋಪಿ ಪಾರು ಮಾಡಲು ಇಬ್ಬರು ಬ್ರೋಕರ್​ಗಳು ನಡುವೆ ಪೈಪೋಟಿ.. ಮುಂದಾಗಿದ್ದೇನು?

author img

By

Published : Oct 4, 2022, 10:30 PM IST

Updated : Oct 4, 2022, 10:43 PM IST

ವಿವಾಹೇತರ ಸಂಬಂಧದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯನ್ನು ಕೊಲೆ ಮಾಡಿದ ಆರೋಪಿಯನ್ನು ಪಾರು ಮಾಡಲು ಇಬ್ಬರು ಬ್ರೋಕರ್​ಗಳು ರಾಜೀ ಸೂತ್ರ ಎಣಿದಿದ್ದರು. ಆದರೆ, ಇದರಲ್ಲಿ ಆ ಇಬ್ಬರ ನಡುವೆಯೇ ಪೈಪೋಟಿಗೆ ಏರ್ಪಟ್ಟು ಓರ್ವ ಬ್ರೋಕರ್​ನನ್ನು ಮತ್ತೊಬ್ಬ ಬ್ರೋಕರ್​ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

extramarital-affair-with-childhood-friends-dot-ending-in-twin-murders
ಬಾಲ್ಯ ಸ್ನೇಹಿತರೊಂದಿಗೆ ವಿವಾಹೇತರ ಸಂಬಂಧ.. ಅವಳಿ ಕೊಲೆಯಲ್ಲಿ ಅಂತ್ಯ

ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಕೊಲೆ ನಡೆದಿದೆ. ಇದರ ಪ್ರಕರಣದ ರಾಜಿ ಮಾಡಲು ಇಳಿದಾಗ ಮತ್ತೊಂದು ಹತ್ಯೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

ಕೃಷ್ಣಾ ಜಿಲ್ಲೆಯ ತೊಟ್ಲವಲ್ಲೂರು ಮಂಡಲದ ಚಗಂಟಿಪಡು ಉಪನಗರದಲ್ಲಿ ಜುಲೈ 26ರಂದು ಸಾಫ್ಟ್‌ವೇರ್ ಉದ್ಯೋಗಿ ಗಾಡಿಕೊಯ್ಯ ಶ್ರೀನಿವಾಸ ರೆಡ್ಡಿ (38) ಎಂಬುವವರ ಕೊಲೆಯಾಗಿತ್ತು. ಶ್ರೀನಿವಾಸ ರೆಡ್ಡಿಯ ಬಾಲ್ಯ ಸ್ನೇಹಿತ ಅಲ್ಲಾವರಿಪಾಲೆಂನ ಶ್ರೀಕಾಂತ್ ರೆಡ್ಡಿ ಈ ಕೊಲೆ ಮಾಡಿದ್ದರು.

ಆರೋಪಿ ಶ್ರೀಕಾಂತ್ ರೆಡ್ಡಿ ಕೃಷಿ ಮಾಡುತ್ತಿದ್ದು, ಅದೇ ಗ್ರಾಮದ ಮಿಥುನಾ ಅಲಿಯಾಸ್ ಜ್ಯೋತಿ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಆದರೆ, ಈ ವಿಷಯ ತಿಳಿದ ಶ್ರೀನಿವಾಸ ರೆಡ್ಡಿ ಮಿಥುನಾರಿಗೆ ಬುದ್ಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಿಥುನಾ ಶ್ರೀಕಾಂತ್​ ರೆಡ್ಡಿಯನ್ನು ದೂರ ಇಟ್ಟಿದ್ದರು. ಮಿಥುನಾ ದೂರವಾಗಿರುವ ಹಿಂದಿನ ಸತ್ಯ ತಿಳಿದ ಶ್ರೀಕಾಂತ್ ರೆಡ್ಡಿ ತನ್ನ ಸ್ನೇಹಿತ ಶ್ರೀನಿವಾಸ ರೆಡ್ಡಿಯನ್ನು ಕೊಲೆ ಮಾಡಿದ್ದರು. ಬಳಿಕ ಮಿಥುನಾರನ್ನು ಕರೆದುಕೊಂಡು ಶ್ರೀಕಾಂತ್​ ರೆಡ್ಡಿ ಓಡಿ ಹೋಗಿದ್ದರು. ಆದರೆ, ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು, ಶ್ರೀಕಾಂತ್ ರೆಡ್ಡಿ ಮತ್ತು ಮಿಥುನಾ ಅವರನ್ನು ಬಂಧಿಸಿದ್ದರು.

ರಾಜೀ ಮಾಡಲು ನಡೆದಿತ್ತು ತಂತ್ರ: ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಇತ್ಯರ್ಥಪಡಿಸಲು ಮತ್ತು ರಾಜಿ ಮಾಡಿಕೊಳ್ಳಲು ನರೇಂದ್ರರೆಡ್ಡಿ ಎಂಬುವವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದರು. ಈ ಕುರಿತು ಆರೋಪಿಯ ತಂದೆಯನ್ನು ಸಂಪರ್ಕಿಸಿದ್ದ ನರೇಂದ್ರರೆಡ್ಡಿ, ಪೊಲೀಸರು ಹಾಗೂ ಮೃತನ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರು.

ಅಂತೆಯೇ, ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐನೊಂದಿಗೆ ಮೊದಲ ಕಂತಿನಲ್ಲಿ 22 ಲಕ್ಷ ರೂ. ನೀಡಲು ಮಾತುಕತೆ ಮಾಡಿದ್ದರು. ಜೊತೆಗೆ ಸಿಐಗೆ ನರೇಂದ್ರರೆಡ್ಡಿ ಹಣವನ್ನೂ ನೀಡಿದ್ದರು. ಈ ಮಧ್ಯೆ ಅದೇ ಗ್ರಾಮದ ಪುಚ್ಚಕಾಯಲ ಶ್ರೀನಿವಾಸ ರೆಡ್ಡಿ ಎಂಬುವರಿಗೆ ಈ ವಿಷಯ ತಿಳಿದು ರಿಮಾಂಡ್‌ನಲ್ಲಿರುವ ಆರೋಪಿಯನ್ನು ಭೇಟಿಯಾಗಿದ್ದಾರೆ. ಆಗ 22 ಲಕ್ಷ ಬದಲಿಗೆ ಕೇವಲ 20 ಲಕ್ಷಕ್ಕೆ ರಾಜಿ ಮಾಡಿಕೊಳ್ಳುವುದಾಗಿ ಈ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

ಇದನ್ನು ಗ್ರಹಿಸಿದ ನರೇಂದ್ರರೆಡ್ಡಿ, ಪಚ್ಚಕಾಯಾಲ ಶ್ರೀನಿವಾಸ ರೆಡ್ಡಿ ತನ್ನ ಡೀಲ್​ಗೆ ಅಡ್ಡಿಯಾಗುತ್ತಿದ್ದಾನೆ ಎಂದು ಅರಿತಿದ್ದಾರೆ. ಹೀಗಾಗಿಯೇ ಶ್ರೀನಿವಾಸ ರೆಡ್ಡಿಯನ್ನು ಕೊಲೆ ಮಾಡಲು ನರೇಂದ್ರರೆಡ್ಡಿ ಯೋಜನೆ ಸಿದ್ಧಪಡಿಸಿದ್ದಾರೆ. ಅಂತೆಯೇ ಸೆ.20ರ ರಾತ್ರಿ ಶ್ರೀನಿವಾಸ ರೆಡ್ಡಿಗೆ ಡೀಲ್ ಬಗ್ಗೆ ಮಾತನಾಡೋಣ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಆಗ ಇಬ್ಬರು ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತನ್ನ ಪ್ಲಾನ್​ನಂತೆಯೇ ನರೇಂದ್ರ ರೆಡ್ಡಿಯು ತನ್ನೊಂದಿಗೆ ತಂದಿದ್ದ ನಾಯಿ ಸರವನ್ನು ಶ್ರೀನಿವಾಸ ರೆಡ್ಡಿಗೆ ನೇಣು ಬಿಗಿದು ಹತ್ಯೆ ಮಾಡಿದ್ದಾರೆ.

ಗುಂಡಿಯಲ್ಲಿ ಶವ ಕೂತ ಕಿರಾತಕ: ಇತ್ತ, ಜೆಸಿಬಿ ಯುವಕನೊಂದಿಗೆ ಮೊದಲೇ ಮಾಡಿದ್ದ ನರೇಂದ್ರರೆಡ್ಡಿ ಕೆರೆಯಲ್ಲಿ ಗುಂಡಿ ತೋಡಿ ರೆಡಿ ಇರುವಂತೆ ತಿಳಿಸಿದ್ದರು. ಹಾಗೆ ಶ್ರೀನಿವಾಸ ರೆಡ್ಡಿ ಶವವನ್ನು ತಂದು ಆತ್ಕೂರಿನ ಉಪನಗರವಾದ ಬಲಿಪರ್ರು ಗ್ರಾಮಕ್ಕೆ ತಂದು ಹೂಳಲಾಗಿತ್ತು. ಇದಾದ ನಂತರ ಈ ಶ್ರೀನಿವಾಸ ರೆಡ್ಡಿ ಹತ್ಯೆಯ ವಿಷಯ ಹೊರಬಿದ್ದಿದೆ. ಸ್ಥಳಕ್ಕಾಗಮಿಸಿದ ಆತ್ಕೂರಿನ ಪೊಲೀಸರು ಆರೋಪಿ ನರೇಂದ್ರರೆಡ್ಡಿ ಹಾಗೂ ಇತರ ಮೂವರು ಸಹಚರರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಹೊರಬಿದ್ದ ಅಸಲಿ ಸತ್ಯ: ಆತ್ಕೂರು ಪೊಲೀಸರು ನರೇಂದ್ರ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಸಾಫ್ಟ್‌ವೇರ್ ಉದ್ಯೋಗಿ ಶ್ರೀನಿವಾಸ ರೆಡ್ಡಿ ಕೊಲೆಯ ಪ್ರಕರಣದ ರಾಜೀ ವಿಷಯ ಬಯಲಾಗಿದೆ. ಅಲ್ಲದೇ, ಸಿಐಗೆ ರೂ. 22 ಲಕ್ಷ ರೂ. ನೀಡಿರುವ ವಿಷಯವನ್ನೂ ನರೇಂದ್ರ ರೆಡ್ಡಿ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಆತ್ಕೂರು ಪೊಲೀಸರು ಕೃಷ್ಣಾ ಎಸ್ಪಿ ಅವರ ಗಮನಕ್ಕೆ ತಂದಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿ ಹತ್ಯೆ ಪ್ರಕರಣದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ ಎಸ್​ಐ ಹಾಗೂ ಸಿಐ ಅವರನ್ನು ವಜಾ ಮಾಡಲಾಗಿದೆ.

ಅಲ್ಲದೇ, ಈ ಪ್ರಕರಣದ ತನಿಖೆಯ ಹೊಣೆಯನ್ನು ಹೆಚ್ಚುವರಿ ಎಸ್ಪಿಗೆ ವಹಿಸಲಾಗಿದೆ. ಆರೋಪಿಗಳು ಪೊಲೀಸರಿಗೆ ಹಣ ಕೊಟ್ಟಿದ್ದು ಹೇಗೆ?. ಆರೋಪಿಗಳ ನಡುವಿನ ವಹಿವಾಟು ಹೇಗೆ ನಡೆದಿದೆ ಎಂಬ ಹೆಚ್ಚುವರಿ ತನಿಖೆ ನಡೆಸಿದ್ದು, ಇದರಲ್ಲಿ ಬ್ಯಾಂಕ್ ವಹಿವಾಟು ನಿರ್ಣಾಯಕವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಪೊಲೀಸರಿಗೆ ಭಾಗಿಯಾಗಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಸ್ನೇಹಿತನ ಕತ್ತು ಕೊಯ್ದು ಹತ್ಯೆ

ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಕೊಲೆ ನಡೆದಿದೆ. ಇದರ ಪ್ರಕರಣದ ರಾಜಿ ಮಾಡಲು ಇಳಿದಾಗ ಮತ್ತೊಂದು ಹತ್ಯೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

ಕೃಷ್ಣಾ ಜಿಲ್ಲೆಯ ತೊಟ್ಲವಲ್ಲೂರು ಮಂಡಲದ ಚಗಂಟಿಪಡು ಉಪನಗರದಲ್ಲಿ ಜುಲೈ 26ರಂದು ಸಾಫ್ಟ್‌ವೇರ್ ಉದ್ಯೋಗಿ ಗಾಡಿಕೊಯ್ಯ ಶ್ರೀನಿವಾಸ ರೆಡ್ಡಿ (38) ಎಂಬುವವರ ಕೊಲೆಯಾಗಿತ್ತು. ಶ್ರೀನಿವಾಸ ರೆಡ್ಡಿಯ ಬಾಲ್ಯ ಸ್ನೇಹಿತ ಅಲ್ಲಾವರಿಪಾಲೆಂನ ಶ್ರೀಕಾಂತ್ ರೆಡ್ಡಿ ಈ ಕೊಲೆ ಮಾಡಿದ್ದರು.

ಆರೋಪಿ ಶ್ರೀಕಾಂತ್ ರೆಡ್ಡಿ ಕೃಷಿ ಮಾಡುತ್ತಿದ್ದು, ಅದೇ ಗ್ರಾಮದ ಮಿಥುನಾ ಅಲಿಯಾಸ್ ಜ್ಯೋತಿ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಆದರೆ, ಈ ವಿಷಯ ತಿಳಿದ ಶ್ರೀನಿವಾಸ ರೆಡ್ಡಿ ಮಿಥುನಾರಿಗೆ ಬುದ್ಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಿಥುನಾ ಶ್ರೀಕಾಂತ್​ ರೆಡ್ಡಿಯನ್ನು ದೂರ ಇಟ್ಟಿದ್ದರು. ಮಿಥುನಾ ದೂರವಾಗಿರುವ ಹಿಂದಿನ ಸತ್ಯ ತಿಳಿದ ಶ್ರೀಕಾಂತ್ ರೆಡ್ಡಿ ತನ್ನ ಸ್ನೇಹಿತ ಶ್ರೀನಿವಾಸ ರೆಡ್ಡಿಯನ್ನು ಕೊಲೆ ಮಾಡಿದ್ದರು. ಬಳಿಕ ಮಿಥುನಾರನ್ನು ಕರೆದುಕೊಂಡು ಶ್ರೀಕಾಂತ್​ ರೆಡ್ಡಿ ಓಡಿ ಹೋಗಿದ್ದರು. ಆದರೆ, ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು, ಶ್ರೀಕಾಂತ್ ರೆಡ್ಡಿ ಮತ್ತು ಮಿಥುನಾ ಅವರನ್ನು ಬಂಧಿಸಿದ್ದರು.

ರಾಜೀ ಮಾಡಲು ನಡೆದಿತ್ತು ತಂತ್ರ: ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಇತ್ಯರ್ಥಪಡಿಸಲು ಮತ್ತು ರಾಜಿ ಮಾಡಿಕೊಳ್ಳಲು ನರೇಂದ್ರರೆಡ್ಡಿ ಎಂಬುವವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದರು. ಈ ಕುರಿತು ಆರೋಪಿಯ ತಂದೆಯನ್ನು ಸಂಪರ್ಕಿಸಿದ್ದ ನರೇಂದ್ರರೆಡ್ಡಿ, ಪೊಲೀಸರು ಹಾಗೂ ಮೃತನ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರು.

ಅಂತೆಯೇ, ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐನೊಂದಿಗೆ ಮೊದಲ ಕಂತಿನಲ್ಲಿ 22 ಲಕ್ಷ ರೂ. ನೀಡಲು ಮಾತುಕತೆ ಮಾಡಿದ್ದರು. ಜೊತೆಗೆ ಸಿಐಗೆ ನರೇಂದ್ರರೆಡ್ಡಿ ಹಣವನ್ನೂ ನೀಡಿದ್ದರು. ಈ ಮಧ್ಯೆ ಅದೇ ಗ್ರಾಮದ ಪುಚ್ಚಕಾಯಲ ಶ್ರೀನಿವಾಸ ರೆಡ್ಡಿ ಎಂಬುವರಿಗೆ ಈ ವಿಷಯ ತಿಳಿದು ರಿಮಾಂಡ್‌ನಲ್ಲಿರುವ ಆರೋಪಿಯನ್ನು ಭೇಟಿಯಾಗಿದ್ದಾರೆ. ಆಗ 22 ಲಕ್ಷ ಬದಲಿಗೆ ಕೇವಲ 20 ಲಕ್ಷಕ್ಕೆ ರಾಜಿ ಮಾಡಿಕೊಳ್ಳುವುದಾಗಿ ಈ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

ಇದನ್ನು ಗ್ರಹಿಸಿದ ನರೇಂದ್ರರೆಡ್ಡಿ, ಪಚ್ಚಕಾಯಾಲ ಶ್ರೀನಿವಾಸ ರೆಡ್ಡಿ ತನ್ನ ಡೀಲ್​ಗೆ ಅಡ್ಡಿಯಾಗುತ್ತಿದ್ದಾನೆ ಎಂದು ಅರಿತಿದ್ದಾರೆ. ಹೀಗಾಗಿಯೇ ಶ್ರೀನಿವಾಸ ರೆಡ್ಡಿಯನ್ನು ಕೊಲೆ ಮಾಡಲು ನರೇಂದ್ರರೆಡ್ಡಿ ಯೋಜನೆ ಸಿದ್ಧಪಡಿಸಿದ್ದಾರೆ. ಅಂತೆಯೇ ಸೆ.20ರ ರಾತ್ರಿ ಶ್ರೀನಿವಾಸ ರೆಡ್ಡಿಗೆ ಡೀಲ್ ಬಗ್ಗೆ ಮಾತನಾಡೋಣ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಆಗ ಇಬ್ಬರು ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತನ್ನ ಪ್ಲಾನ್​ನಂತೆಯೇ ನರೇಂದ್ರ ರೆಡ್ಡಿಯು ತನ್ನೊಂದಿಗೆ ತಂದಿದ್ದ ನಾಯಿ ಸರವನ್ನು ಶ್ರೀನಿವಾಸ ರೆಡ್ಡಿಗೆ ನೇಣು ಬಿಗಿದು ಹತ್ಯೆ ಮಾಡಿದ್ದಾರೆ.

ಗುಂಡಿಯಲ್ಲಿ ಶವ ಕೂತ ಕಿರಾತಕ: ಇತ್ತ, ಜೆಸಿಬಿ ಯುವಕನೊಂದಿಗೆ ಮೊದಲೇ ಮಾಡಿದ್ದ ನರೇಂದ್ರರೆಡ್ಡಿ ಕೆರೆಯಲ್ಲಿ ಗುಂಡಿ ತೋಡಿ ರೆಡಿ ಇರುವಂತೆ ತಿಳಿಸಿದ್ದರು. ಹಾಗೆ ಶ್ರೀನಿವಾಸ ರೆಡ್ಡಿ ಶವವನ್ನು ತಂದು ಆತ್ಕೂರಿನ ಉಪನಗರವಾದ ಬಲಿಪರ್ರು ಗ್ರಾಮಕ್ಕೆ ತಂದು ಹೂಳಲಾಗಿತ್ತು. ಇದಾದ ನಂತರ ಈ ಶ್ರೀನಿವಾಸ ರೆಡ್ಡಿ ಹತ್ಯೆಯ ವಿಷಯ ಹೊರಬಿದ್ದಿದೆ. ಸ್ಥಳಕ್ಕಾಗಮಿಸಿದ ಆತ್ಕೂರಿನ ಪೊಲೀಸರು ಆರೋಪಿ ನರೇಂದ್ರರೆಡ್ಡಿ ಹಾಗೂ ಇತರ ಮೂವರು ಸಹಚರರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಹೊರಬಿದ್ದ ಅಸಲಿ ಸತ್ಯ: ಆತ್ಕೂರು ಪೊಲೀಸರು ನರೇಂದ್ರ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಸಾಫ್ಟ್‌ವೇರ್ ಉದ್ಯೋಗಿ ಶ್ರೀನಿವಾಸ ರೆಡ್ಡಿ ಕೊಲೆಯ ಪ್ರಕರಣದ ರಾಜೀ ವಿಷಯ ಬಯಲಾಗಿದೆ. ಅಲ್ಲದೇ, ಸಿಐಗೆ ರೂ. 22 ಲಕ್ಷ ರೂ. ನೀಡಿರುವ ವಿಷಯವನ್ನೂ ನರೇಂದ್ರ ರೆಡ್ಡಿ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಆತ್ಕೂರು ಪೊಲೀಸರು ಕೃಷ್ಣಾ ಎಸ್ಪಿ ಅವರ ಗಮನಕ್ಕೆ ತಂದಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿ ಹತ್ಯೆ ಪ್ರಕರಣದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ ಎಸ್​ಐ ಹಾಗೂ ಸಿಐ ಅವರನ್ನು ವಜಾ ಮಾಡಲಾಗಿದೆ.

ಅಲ್ಲದೇ, ಈ ಪ್ರಕರಣದ ತನಿಖೆಯ ಹೊಣೆಯನ್ನು ಹೆಚ್ಚುವರಿ ಎಸ್ಪಿಗೆ ವಹಿಸಲಾಗಿದೆ. ಆರೋಪಿಗಳು ಪೊಲೀಸರಿಗೆ ಹಣ ಕೊಟ್ಟಿದ್ದು ಹೇಗೆ?. ಆರೋಪಿಗಳ ನಡುವಿನ ವಹಿವಾಟು ಹೇಗೆ ನಡೆದಿದೆ ಎಂಬ ಹೆಚ್ಚುವರಿ ತನಿಖೆ ನಡೆಸಿದ್ದು, ಇದರಲ್ಲಿ ಬ್ಯಾಂಕ್ ವಹಿವಾಟು ನಿರ್ಣಾಯಕವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಪೊಲೀಸರಿಗೆ ಭಾಗಿಯಾಗಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಸ್ನೇಹಿತನ ಕತ್ತು ಕೊಯ್ದು ಹತ್ಯೆ

Last Updated : Oct 4, 2022, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.