ETV Bharat / bharat

Etv Exclusive: ಕೇಂದ್ರದ ಬಜೆಟ್​​ ಮಧ್ಯಮ, ಬಡವರ್ಗಕ್ಕಾಗಿ ಅಲ್ಲ.. ಶ್ರೀಮಂತರಿಗೋಸ್ಕರ ಎಂದ ಪ್ರಿಯಾಂಕಾ ವಾದ್ರಾ

author img

By

Published : Feb 2, 2022, 9:37 PM IST

Priyanka Gandhi Exclusive interview: ಉತ್ತರಾಖಂಡ ವಿಧಾನಸಭೆಗೋಸ್ಕರ ಚುನಾವಣೆ ನಡೆಯಲಿದ್ದು, ಇದಕ್ಕೋಸ್ಕರ ಕಾಂಗ್ರೆಸ್ ಪಕ್ಷದಿಂದ ಪ್ರಣಾಳಿಕೆ ರಿಲೀಸ್​ ಆಗಿದೆ. ಇದರಲ್ಲಿ ಪ್ರಮುಖವಾಗಿ ಅನೇಕ ಭರವಸೆ ಘೋಷಣೆ ಮಾಡಿರುವ ಪಕ್ಷ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ. 40ರಷ್ಟು ಉದ್ಯೋಗ ಮೀಸಲಿಡುವುದಾಗಿ ತಿಳಿಸಿದೆ.

Priyanka Gandhi with Etv Bharat
Priyanka Gandhi with Etv Bharat

ಡೆಹ್ರಾಡೂನ್​​(ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆ ಚುನಾಚಣೆಗೋಸ್ಕರ ಕಾಂಗ್ರೆಸ್​​​ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಈ ವೇಳೆ 'ಈಟಿವಿ ಭಾರತ'​ ವರದಿಗಾರನೊಂದಿಗೆ ಎಕ್ಸ್​​ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದರು.

ಉತ್ತರಾಖಂಡದಲ್ಲಿ ನನಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ. ಉತ್ತರಾಖಂಡ ಜನರು ರಾಜ್ಯದಲ್ಲಿನ ಅಭಿವೃದ್ಧಿ ಮತ್ತು ಭವಿಷ್ಯದ ನಿರೀಕ್ಷೆ ಗಮನದಲ್ಲಿಟ್ಟುಕೊಂಡು ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು.

ಈಟಿವಿ ಭಾರತ್ ಜೊತೆ ಪ್ರಿಯಾಂಕಾ ವಾದ್ರಾ ಮಾತು

ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ವಾದ್ರಾ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್​ ಕೇವಲ ಶ್ರೀಮಂತ ವರ್ಗಕ್ಕೆ ಮೀಸಲಾಗಿದೆ. ಇದರಲ್ಲಿ ಮಧ್ಯಮ ವರ್ಗ ಹಾಗೂ ಬಡವರ ಬಗ್ಗೆ ಯಾವುದೇ ರೀತಿಯ ಯೋಜನೆಗಳು ಘೋಷಣೆಯಾಗಿಲ್ಲ. ಇದೊಂದು ಶೂನ್ಯ ಬಜೆಟ್ ಎಂದು ಟೀಕಿಸಿದರು.

ಮಧ್ಯಮ ವರ್ಗ, ರೈತರಿಗೆ ಯೋಜನೆ ಘೋಷಣೆ ಮಾಡುವ ಬದಲು ಮೇಲ್ವರ್ಗದ ಜನರು ಹಾಗೂ ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಉದ್ಯಮಿ ಸ್ನೇಹಿತರಿಗಾಗಿ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿರಿ: '₹16 ಸಾವಿರ ಕೋಟಿ ನೀಡಿ ಹೆಲಿಕಾಪ್ಟರ್ ಖರೀದಿಸುವ ಪ್ರಧಾನಿಗೆ ರೈತರ ಕಬ್ಬಿನ ಬಾಕಿ ನೀಡಲು ಆಗ್ತಿಲ್ಲ': ಪ್ರಿಯಾಂಕಾ

ಪಂಚ ರಾಜ್ಯ ಚುನಾವಣೆಗಳಲ್ಲಿ ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರದ ಹಣ ಬಳಕೆ ಮಾಡ್ತಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಥಗಿತಗೊಂಡಿರುವ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗುತ್ತದೆ. ತಾನು ಮಾಡಿರುವ ಕೆಲಸಗಳನ್ನ ತೋರಿಸಲು ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದ್ದು, ಅದಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಕೈ ಹಾಕಿದೆ ಎಂಬ ಆರೋಪ ಮಾಡಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಡೆಹ್ರಾಡೂನ್​​(ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆ ಚುನಾಚಣೆಗೋಸ್ಕರ ಕಾಂಗ್ರೆಸ್​​​ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಈ ವೇಳೆ 'ಈಟಿವಿ ಭಾರತ'​ ವರದಿಗಾರನೊಂದಿಗೆ ಎಕ್ಸ್​​ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದರು.

ಉತ್ತರಾಖಂಡದಲ್ಲಿ ನನಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ. ಉತ್ತರಾಖಂಡ ಜನರು ರಾಜ್ಯದಲ್ಲಿನ ಅಭಿವೃದ್ಧಿ ಮತ್ತು ಭವಿಷ್ಯದ ನಿರೀಕ್ಷೆ ಗಮನದಲ್ಲಿಟ್ಟುಕೊಂಡು ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು.

ಈಟಿವಿ ಭಾರತ್ ಜೊತೆ ಪ್ರಿಯಾಂಕಾ ವಾದ್ರಾ ಮಾತು

ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ವಾದ್ರಾ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್​ ಕೇವಲ ಶ್ರೀಮಂತ ವರ್ಗಕ್ಕೆ ಮೀಸಲಾಗಿದೆ. ಇದರಲ್ಲಿ ಮಧ್ಯಮ ವರ್ಗ ಹಾಗೂ ಬಡವರ ಬಗ್ಗೆ ಯಾವುದೇ ರೀತಿಯ ಯೋಜನೆಗಳು ಘೋಷಣೆಯಾಗಿಲ್ಲ. ಇದೊಂದು ಶೂನ್ಯ ಬಜೆಟ್ ಎಂದು ಟೀಕಿಸಿದರು.

ಮಧ್ಯಮ ವರ್ಗ, ರೈತರಿಗೆ ಯೋಜನೆ ಘೋಷಣೆ ಮಾಡುವ ಬದಲು ಮೇಲ್ವರ್ಗದ ಜನರು ಹಾಗೂ ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಉದ್ಯಮಿ ಸ್ನೇಹಿತರಿಗಾಗಿ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿರಿ: '₹16 ಸಾವಿರ ಕೋಟಿ ನೀಡಿ ಹೆಲಿಕಾಪ್ಟರ್ ಖರೀದಿಸುವ ಪ್ರಧಾನಿಗೆ ರೈತರ ಕಬ್ಬಿನ ಬಾಕಿ ನೀಡಲು ಆಗ್ತಿಲ್ಲ': ಪ್ರಿಯಾಂಕಾ

ಪಂಚ ರಾಜ್ಯ ಚುನಾವಣೆಗಳಲ್ಲಿ ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರದ ಹಣ ಬಳಕೆ ಮಾಡ್ತಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಥಗಿತಗೊಂಡಿರುವ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗುತ್ತದೆ. ತಾನು ಮಾಡಿರುವ ಕೆಲಸಗಳನ್ನ ತೋರಿಸಲು ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದ್ದು, ಅದಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಕೈ ಹಾಕಿದೆ ಎಂಬ ಆರೋಪ ಮಾಡಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.