ETV Bharat / bharat

ಲಾಲೂ ಪ್ರಸಾದ್​ ಯಾದವ್​ ಕಿಡ್ನಿಗಳು ಯಾವಾಗ ಬೇಕಾದರೂ ಹಾಳಾಗಬಹುದು: ವೈದ್ಯ ಉಮೇಶ್ - ಮೇವು ಹಗರಣ ಪ್ರಕರಣದ ದೋಷಿ ಲಾಲೂ ಪ್ರಸಾದ್ ಯಾದವ್

lalu-prasad-yadav
ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
author img

By

Published : Dec 12, 2020, 6:22 PM IST

Updated : Dec 12, 2020, 6:57 PM IST

18:09 December 12

ವೈದ್ಯರಿಂದ ಆಘಾತಕಾರಿ ಮಾಹಿತಿ ಬಿಡುಗಡೆ

ವೈದ್ಯ ಉಮೇಶ್ ಪ್ರಸಾದ್

ರಾಂಚಿ (ಜಾರ್ಖಂಡ್‌): ಮೇವು ಹಗರಣ ಪ್ರಕರಣದ ದೋಷಿ ಮತ್ತು ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ ಮೂತ್ರಪಿಂಡ ಸಮಸ್ಯೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರ ಮೂತ್ರಪಿಂಡಗಳು ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಹದಗೆಡಬಹುದು. ಹೀಗಾಗಿ, ಅವರ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​​​ನಲ್ಲಿ ಆರ್‌ಜೆಡಿ ಮುಖ್ಯಸ್ಥರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಉಮೇಶ್ ಪ್ರಸಾದ್ ಹೇಳಿದ್ದಾರೆ.

ಲಾಲು ಪ್ರಸಾದ್​​ ಯಾದವ್​ ಅವರ ಕಿಡ್ನಿಗಳು ಶೇ.75ರಷ್ಟು ಹಾಳಾಗಿದ್ದು, ಸದ್ಯ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಅವರ ಕಿಡ್ನಿಗಳ ಕಾರ್ಯ ಯಾವಾಗ ಬೇಕಾದರೂ ನಿಂತು ಹೋಗಬಹುದು. ಇಂತಹ ಪರಿಸ್ಥಿತಿಯಲ್ಲಿ ಡಯಾಲಿಸಿಸ್​ ಚಿಕಿತ್ಸೆ ಅಗತ್ಯವಿದೆ. ಇದು ಆತಂಕಕಾರಿ ಎಂದು ಈ ಕುರಿತ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾಲು ಪ್ರಸಾದ್​​ ಅವರು ಮಧುಮೇಹ, ರಕ್ತದೊತ್ತಡ, ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 71ರ ಹರೆಯದ ಅವರು, ಮೇವು ಹಗರಣಕ್ಕೆ ಸಂಬಂಧಿಸಿದಂತೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 

ಮೇವು ಹಗರಣ ಪ್ರಕರಣದಲ್ಲಿ ಲಾಲು ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಆರ್​​ಜೆಡಿ ಮುಖ್ಯಸ್ಥರ ವಕೀಲರ ಕೋರಿಕೆಯ ನಂತರ ಆರು ವಾರಗಳವರೆಗೆ ಮುಂದೂಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

18:09 December 12

ವೈದ್ಯರಿಂದ ಆಘಾತಕಾರಿ ಮಾಹಿತಿ ಬಿಡುಗಡೆ

ವೈದ್ಯ ಉಮೇಶ್ ಪ್ರಸಾದ್

ರಾಂಚಿ (ಜಾರ್ಖಂಡ್‌): ಮೇವು ಹಗರಣ ಪ್ರಕರಣದ ದೋಷಿ ಮತ್ತು ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ ಮೂತ್ರಪಿಂಡ ಸಮಸ್ಯೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರ ಮೂತ್ರಪಿಂಡಗಳು ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಹದಗೆಡಬಹುದು. ಹೀಗಾಗಿ, ಅವರ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​​​ನಲ್ಲಿ ಆರ್‌ಜೆಡಿ ಮುಖ್ಯಸ್ಥರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಉಮೇಶ್ ಪ್ರಸಾದ್ ಹೇಳಿದ್ದಾರೆ.

ಲಾಲು ಪ್ರಸಾದ್​​ ಯಾದವ್​ ಅವರ ಕಿಡ್ನಿಗಳು ಶೇ.75ರಷ್ಟು ಹಾಳಾಗಿದ್ದು, ಸದ್ಯ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಅವರ ಕಿಡ್ನಿಗಳ ಕಾರ್ಯ ಯಾವಾಗ ಬೇಕಾದರೂ ನಿಂತು ಹೋಗಬಹುದು. ಇಂತಹ ಪರಿಸ್ಥಿತಿಯಲ್ಲಿ ಡಯಾಲಿಸಿಸ್​ ಚಿಕಿತ್ಸೆ ಅಗತ್ಯವಿದೆ. ಇದು ಆತಂಕಕಾರಿ ಎಂದು ಈ ಕುರಿತ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾಲು ಪ್ರಸಾದ್​​ ಅವರು ಮಧುಮೇಹ, ರಕ್ತದೊತ್ತಡ, ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 71ರ ಹರೆಯದ ಅವರು, ಮೇವು ಹಗರಣಕ್ಕೆ ಸಂಬಂಧಿಸಿದಂತೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 

ಮೇವು ಹಗರಣ ಪ್ರಕರಣದಲ್ಲಿ ಲಾಲು ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಆರ್​​ಜೆಡಿ ಮುಖ್ಯಸ್ಥರ ವಕೀಲರ ಕೋರಿಕೆಯ ನಂತರ ಆರು ವಾರಗಳವರೆಗೆ ಮುಂದೂಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

Last Updated : Dec 12, 2020, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.