ETV Bharat / bharat

ಹಬ್ಬದ ದಿನಗಳಲ್ಲಿ ವಿವಿಧ ಭಕ್ಷ್ಯ ಸೇವಿಸಿ ಆರೋಗ್ಯ ಹದಗೆಟ್ಟಿದೆಯೇ?: ದೇಹಾರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ!

author img

By

Published : Oct 26, 2022, 10:11 AM IST

ಹಬ್ಬ ಹರಿದಿನಗಳಲ್ಲಿ ಜನರು ಅನಾರೋಗ್ಯಕರ ಪದಾರ್ಥ ಹೆಚ್ಚು ಸೇವನೆ ಮಾಡುತ್ತಾರೆ. ದೀಪಾವಳಿಯಲ್ಲಿ ನೀವು ವಿವಿಧ ಬಗೆಯ ಸಿಹಿ ತಿಂಡಿ ಮತ್ತು ಬಹಳಷ್ಟು ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Detoxing the body after festivals to avoid diseases
ಆರೋಗ್ಯಕರ ಪದಾರ್ಥ

ಹೈದರಾಬಾದ್: ಹಬ್ಬ ಹರಿದಿನಗಳಲ್ಲಿ ಆಹಾರ ಸೇವನೆ ಅಥವಾ ದಿನಚರಿಯಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಬ್ಬ ಮುಗಿದ ನಂತರ ಹೆಚ್ಚಿನ ಜನರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಮತ್ತು ಇತರ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು ಹಬ್ಬದ ನಂತರ ದೇಹವನ್ನು ನಿರ್ವಿಷಗೊಳಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ.

ದಸರಾ, ದೀಪಾವಳಿ ಮತ್ತು ಭಾಯಿ ದೂಜ್ ಸೇರಿದಂತೆ ಈ ಬಾರಿ ಹಬ್ಬಗಳನ್ನು ಸರಣಿಯಲ್ಲಿ ಆಚರಿಸುತ್ತಿದ್ದೇವೆ. ಈ ಹಬ್ಬಗಳಲ್ಲಿ ಜನರು ವಿವಿಧ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ತಿಂದು ಆನಂದಿಸುತ್ತಾರೆ. ಇದು ಹಬ್ಬ ಮುಗಿದ ನಂತರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

ಆಹಾರ ದಿನಚರಿ ಬಗ್ಗೆ ಜಾಗ್ರತೆಯಿಂದಿರಿ: ದೆಹಲಿಯ ಆಹಾರ ತಜ್ಞೆ ಡಾ. ದಿವ್ಯಾ ಶರ್ಮಾ ಮಾತನಾಡಿ, ಹಬ್ಬಗಳ ಅವಧಿಯಲ್ಲಿ ಜನರು ಹೆಚ್ಚಾಗಿ ಆಹಾರ ಸೇವಿಸುತ್ತಾರೆ. ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ನಮ್ಮ ದೇಹದಲ್ಲಿ ಹಾನಿಕಾರಕ ಪದಾರ್ಥಗಳು ಅಥವಾ ವಿಷಕಾರಿ ಪದಾರ್ಥಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ.

ಜೀರ್ಣಾಂಗ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅಜೀರ್ಣ, ಅತಿಸಾರ, ಮಲಬದ್ಧತೆ, ಹೊಟ್ಟೆ ಉರಿ, ಗ್ಯಾಸ್ ಅಥವಾ ಉಬ್ಬುವುದು, ಸುಸ್ತು, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ, ಅತಿಯಾದ ನಿದ್ರಾಹೀನತೆ ಇತ್ಯಾದಿಗಳು ಇದಕ್ಕೆ ಉದಾಹರಣೆ. ದೀಪಾವಳಿಯ ನಂತರ ಜನರು ತಮ್ಮ ದೇಹವನ್ನು ನಿರ್ವಿಷಗೊಳಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ತಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ಜಾಗೃತರಾಗಬೇಕು ಎಂದಿದ್ದಾರೆ.

ಹೆಚ್ಚೆಚ್ಚು ತರಕಾರಿ ತಿನ್ನಿ: ಕೆಲವು ರೀತಿಯ ಆಹಾರ ಮತ್ತು ಪಾನೀಯಗಳು ಹಬ್ಬಗಳ ನಂತರ ದೇಹದಲ್ಲಿ ಸಂಗ್ರಹವಾದ ಹಾನಿಕಾರಕ ವಿಷವನ್ನು ಹೊರಹಾಕಲು ಮತ್ತು ಚಯಾಪಚಯವನ್ನು ಪುನಃಸ್ಥಾಪಿಸಲು ಬಹಳ ಸಹಾಯಕವಾಗಿದೆ. ಆಹಾರದಲ್ಲಿ ಸಲಾಡ್ ಮತ್ತು ತರಕಾರಿಗಳ ಸಂಖ್ಯೆಯನ್ನು ಹೆಚ್ಚಿಸುವುದು ತುಂಬಾ ಪ್ರಯೋಜನಕಾರಿ. ಇದರಲ್ಲಿ ಫೈಬರ್, ಆಂಟಿ ಆಕ್ಸಿಡೆಂಟ್​ಗಳು, ವಿಟಮಿನ್​ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಇದಲ್ಲದೇ, ಋತುಮಾನದ ಹಣ್ಣುಗಳನ್ನು ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ ಎಂದು ಡಾ. ದಿವ್ಯಾ ಹೇಳುತ್ತಾರೆ.

ಇದನ್ನೂ ಓದಿ: ಡ್ರೈ ಫ್ರೂಟ್ಸ್​ ನೆನೆಸಿ ತಿನ್ನಿ.. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

ಹಣ್ಣುಗಳು ಮತ್ತು ತರಕಾರಿಗಳ ಸೇವನೆ: ರೋಗ ನಿರೋಧಕಗಳು ಮತ್ತು ವಿಟಮಿನ್​ಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ದೇಹದಲ್ಲಿ ಸಂಗ್ರಹವಾದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ.

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಆಕ್ಸಿಡೆಂಟ್ ಕಂಡುಬರುತ್ತದೆ. ಇದನ್ನು ಪುಡಿ ಮಾಡಿದಾಗ ಇದು ಸಕ್ರಿಯವಾಗುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಹಬ್ಬದ ನಂತರ ಸಾಧ್ಯವಾದಷ್ಟು, ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬೇಕು.

ಸಂಸ್ಕರಿಸಿದ ಹಿಟ್ಟು (ಮೈದಾ) ಮತ್ತು ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಸಹ ತಪ್ಪಿಸಬೇಕು. ಆಲ್ಕೋಹಾಲ್ ಅನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಾಕಷ್ಟು ನೀರು ಕುಡಿಯುವುದು: ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವೆಂದರೆ, ಸಾಕಷ್ಟು ನೀರು ಸೇವಿಸುವುದು, ಹೌದು, ನೀರು ಕುಡಿಯುವುದರಿಂದ ನಮ್ಮ ದೇಹದ ವಿಷಗಳು ಸ್ವಯಂಚಾಲಿತವಾಗಿ ಹೊರಹಾಕಲ್ಪಡುತ್ತವೆ. ಮತ್ತೊಂದೆಡೆ, ನಮ್ಮ ದೇಹವು ಹೈಡ್ರೀಕರಿಸಲ್ಪಟ್ಟಾಗ, ಅದರ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ ಮತ್ತು ದೇಹದ ಇತರೆ ವ್ಯವಸ್ಥೆಗಳು ಸಹ ಸಕ್ರಿಯವಾಗಿರುತ್ತವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಜೊತೆಗೆ ಚರ್ಮ ಮತ್ತು ಕೂದಲು ಆರೋಗ್ಯಕರ ಮತ್ತು ಸುಂದರವಾಗಿರುತ್ತದೆ. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರಿನ ಜೊತೆಗೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ಮತ್ತು ಜೇನುತುಪ್ಪ ಹಾಕಿ ಕುಡಿಯಿರಿ. ನಿಂಬೆ ಪಾನಕ, ತೆಂಗಿನ ನೀರು, ಮೊಸರು, ಮಜ್ಜಿಗೆ, ಲಸ್ಸಿ ಮತ್ತು ಹಸಿರು ಚಹಾವನ್ನು ಸೇವಿಸುವುದರಿಂದ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಬಾದಾಮಿ ತಿನ್ನೋದು ಬೆಸ್ಟ್​!

ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು: ಕೇವಲ ಆಹಾರಕ್ರಮವಲ್ಲ, ದೇಹವನ್ನು ನಿರ್ವಿಷಗೊಳಿಸಲು ಶಿಸ್ತುಬದ್ಧ ದಿನಚರಿಯನ್ನು ಅನುಸರಿಸುವುದು ಸಹ ಬಹಳ ಮುಖ್ಯ ಎಂದು ಡಾ ದಿವ್ಯಾ ಹೇಳುತ್ತಾರೆ. ಇದಕ್ಕಾಗಿ ಮುಂಜಾನೆ ಸಮಯಕ್ಕೆ ಸರಿಯಾಗಿ ಏಳುವುದು, ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮತ್ತು ಕ್ರಿಯಾಶೀಲ ದಿನಚರಿ ಅನುಸರಿಸುವುದು ಅಗತ್ಯ. ಈ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಂಡ ನಂತರವೂ ಸಮಸ್ಯೆಗಳು ಕಡಿಮೆಯಾಗದಿದ್ದರೆ ಮತ್ತು ಆರೋಗ್ಯದ ಮೇಲೆ ಹೆಚ್ಚು ಗಂಭೀರ ಪರಿಣಾಮ ಗೋಚರಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ಹೈದರಾಬಾದ್: ಹಬ್ಬ ಹರಿದಿನಗಳಲ್ಲಿ ಆಹಾರ ಸೇವನೆ ಅಥವಾ ದಿನಚರಿಯಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಬ್ಬ ಮುಗಿದ ನಂತರ ಹೆಚ್ಚಿನ ಜನರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಮತ್ತು ಇತರ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು ಹಬ್ಬದ ನಂತರ ದೇಹವನ್ನು ನಿರ್ವಿಷಗೊಳಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ.

ದಸರಾ, ದೀಪಾವಳಿ ಮತ್ತು ಭಾಯಿ ದೂಜ್ ಸೇರಿದಂತೆ ಈ ಬಾರಿ ಹಬ್ಬಗಳನ್ನು ಸರಣಿಯಲ್ಲಿ ಆಚರಿಸುತ್ತಿದ್ದೇವೆ. ಈ ಹಬ್ಬಗಳಲ್ಲಿ ಜನರು ವಿವಿಧ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ತಿಂದು ಆನಂದಿಸುತ್ತಾರೆ. ಇದು ಹಬ್ಬ ಮುಗಿದ ನಂತರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

ಆಹಾರ ದಿನಚರಿ ಬಗ್ಗೆ ಜಾಗ್ರತೆಯಿಂದಿರಿ: ದೆಹಲಿಯ ಆಹಾರ ತಜ್ಞೆ ಡಾ. ದಿವ್ಯಾ ಶರ್ಮಾ ಮಾತನಾಡಿ, ಹಬ್ಬಗಳ ಅವಧಿಯಲ್ಲಿ ಜನರು ಹೆಚ್ಚಾಗಿ ಆಹಾರ ಸೇವಿಸುತ್ತಾರೆ. ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ನಮ್ಮ ದೇಹದಲ್ಲಿ ಹಾನಿಕಾರಕ ಪದಾರ್ಥಗಳು ಅಥವಾ ವಿಷಕಾರಿ ಪದಾರ್ಥಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ.

ಜೀರ್ಣಾಂಗ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅಜೀರ್ಣ, ಅತಿಸಾರ, ಮಲಬದ್ಧತೆ, ಹೊಟ್ಟೆ ಉರಿ, ಗ್ಯಾಸ್ ಅಥವಾ ಉಬ್ಬುವುದು, ಸುಸ್ತು, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ, ಅತಿಯಾದ ನಿದ್ರಾಹೀನತೆ ಇತ್ಯಾದಿಗಳು ಇದಕ್ಕೆ ಉದಾಹರಣೆ. ದೀಪಾವಳಿಯ ನಂತರ ಜನರು ತಮ್ಮ ದೇಹವನ್ನು ನಿರ್ವಿಷಗೊಳಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ತಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ಜಾಗೃತರಾಗಬೇಕು ಎಂದಿದ್ದಾರೆ.

ಹೆಚ್ಚೆಚ್ಚು ತರಕಾರಿ ತಿನ್ನಿ: ಕೆಲವು ರೀತಿಯ ಆಹಾರ ಮತ್ತು ಪಾನೀಯಗಳು ಹಬ್ಬಗಳ ನಂತರ ದೇಹದಲ್ಲಿ ಸಂಗ್ರಹವಾದ ಹಾನಿಕಾರಕ ವಿಷವನ್ನು ಹೊರಹಾಕಲು ಮತ್ತು ಚಯಾಪಚಯವನ್ನು ಪುನಃಸ್ಥಾಪಿಸಲು ಬಹಳ ಸಹಾಯಕವಾಗಿದೆ. ಆಹಾರದಲ್ಲಿ ಸಲಾಡ್ ಮತ್ತು ತರಕಾರಿಗಳ ಸಂಖ್ಯೆಯನ್ನು ಹೆಚ್ಚಿಸುವುದು ತುಂಬಾ ಪ್ರಯೋಜನಕಾರಿ. ಇದರಲ್ಲಿ ಫೈಬರ್, ಆಂಟಿ ಆಕ್ಸಿಡೆಂಟ್​ಗಳು, ವಿಟಮಿನ್​ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಇದಲ್ಲದೇ, ಋತುಮಾನದ ಹಣ್ಣುಗಳನ್ನು ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ ಎಂದು ಡಾ. ದಿವ್ಯಾ ಹೇಳುತ್ತಾರೆ.

ಇದನ್ನೂ ಓದಿ: ಡ್ರೈ ಫ್ರೂಟ್ಸ್​ ನೆನೆಸಿ ತಿನ್ನಿ.. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

ಹಣ್ಣುಗಳು ಮತ್ತು ತರಕಾರಿಗಳ ಸೇವನೆ: ರೋಗ ನಿರೋಧಕಗಳು ಮತ್ತು ವಿಟಮಿನ್​ಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ದೇಹದಲ್ಲಿ ಸಂಗ್ರಹವಾದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ.

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಆಕ್ಸಿಡೆಂಟ್ ಕಂಡುಬರುತ್ತದೆ. ಇದನ್ನು ಪುಡಿ ಮಾಡಿದಾಗ ಇದು ಸಕ್ರಿಯವಾಗುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಹಬ್ಬದ ನಂತರ ಸಾಧ್ಯವಾದಷ್ಟು, ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬೇಕು.

ಸಂಸ್ಕರಿಸಿದ ಹಿಟ್ಟು (ಮೈದಾ) ಮತ್ತು ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಸಹ ತಪ್ಪಿಸಬೇಕು. ಆಲ್ಕೋಹಾಲ್ ಅನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಾಕಷ್ಟು ನೀರು ಕುಡಿಯುವುದು: ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವೆಂದರೆ, ಸಾಕಷ್ಟು ನೀರು ಸೇವಿಸುವುದು, ಹೌದು, ನೀರು ಕುಡಿಯುವುದರಿಂದ ನಮ್ಮ ದೇಹದ ವಿಷಗಳು ಸ್ವಯಂಚಾಲಿತವಾಗಿ ಹೊರಹಾಕಲ್ಪಡುತ್ತವೆ. ಮತ್ತೊಂದೆಡೆ, ನಮ್ಮ ದೇಹವು ಹೈಡ್ರೀಕರಿಸಲ್ಪಟ್ಟಾಗ, ಅದರ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ ಮತ್ತು ದೇಹದ ಇತರೆ ವ್ಯವಸ್ಥೆಗಳು ಸಹ ಸಕ್ರಿಯವಾಗಿರುತ್ತವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಜೊತೆಗೆ ಚರ್ಮ ಮತ್ತು ಕೂದಲು ಆರೋಗ್ಯಕರ ಮತ್ತು ಸುಂದರವಾಗಿರುತ್ತದೆ. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರಿನ ಜೊತೆಗೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ಮತ್ತು ಜೇನುತುಪ್ಪ ಹಾಕಿ ಕುಡಿಯಿರಿ. ನಿಂಬೆ ಪಾನಕ, ತೆಂಗಿನ ನೀರು, ಮೊಸರು, ಮಜ್ಜಿಗೆ, ಲಸ್ಸಿ ಮತ್ತು ಹಸಿರು ಚಹಾವನ್ನು ಸೇವಿಸುವುದರಿಂದ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಬಾದಾಮಿ ತಿನ್ನೋದು ಬೆಸ್ಟ್​!

ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು: ಕೇವಲ ಆಹಾರಕ್ರಮವಲ್ಲ, ದೇಹವನ್ನು ನಿರ್ವಿಷಗೊಳಿಸಲು ಶಿಸ್ತುಬದ್ಧ ದಿನಚರಿಯನ್ನು ಅನುಸರಿಸುವುದು ಸಹ ಬಹಳ ಮುಖ್ಯ ಎಂದು ಡಾ ದಿವ್ಯಾ ಹೇಳುತ್ತಾರೆ. ಇದಕ್ಕಾಗಿ ಮುಂಜಾನೆ ಸಮಯಕ್ಕೆ ಸರಿಯಾಗಿ ಏಳುವುದು, ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮತ್ತು ಕ್ರಿಯಾಶೀಲ ದಿನಚರಿ ಅನುಸರಿಸುವುದು ಅಗತ್ಯ. ಈ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಂಡ ನಂತರವೂ ಸಮಸ್ಯೆಗಳು ಕಡಿಮೆಯಾಗದಿದ್ದರೆ ಮತ್ತು ಆರೋಗ್ಯದ ಮೇಲೆ ಹೆಚ್ಚು ಗಂಭೀರ ಪರಿಣಾಮ ಗೋಚರಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.