ETV Bharat / bharat

ಬಹುಮತವಿದ್ದರೂ ಕೇಜ್ರಿವಾಲ್​ ಇಂದು ವಿಶ್ವಾಸಮತ ಯಾಚನೆ.. ಬಿಜೆಪಿಗೆ ಸೆಡ್ಡು ಹೊಡೆಯುವ ತಂತ್ರ

author img

By

Published : Aug 29, 2022, 10:27 AM IST

ಬಿಜೆಪಿ ಮೇಲೆ ಆಪರೇಷನ್​ ಕಮಲ ಆರೋಪ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ವಿಧಾನಸಭೆಯಲ್ಲಿ ನಡೆಯುವ ವಿಶೇಷ ಅಧಿವೇಶನದಲ್ಲಿ ಇಂದು ವಿಶ್ವಾಸಮತ ಕೋರಲಿದ್ದಾರೆ.

delhi-cm-arvind-kejriwal
ಬಹುಮತವಿದ್ದರೂ ಅರವಿಂದ್​ ಕೇಜ್ರಿವಾಲ್​ ಇಂದು ವಿಶ್ವಾಸಮತಯಾಚನೆ

ನವದೆಹಲಿ: ಉಪಮುಖ್ಯಮಂತ್ರಿ, ತನ್ನ ಬಲಗೈ ಬಂಟ ಮನೀಶ್​ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ಬಳಿಕ ಸಿಡಿದೆದ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಿದ್ದಾರೆ.

ಆಮ್​ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಆಪರೇಷನ್​ ಕಮಲ ಮಾಡಲು ಮುಂದಾಗಿದೆ ಎಂದೂ ಆರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ. ಇದರಿಂದ ಸರ್ಕಾರದ ಸ್ಥಿರತೆ ಪರೀಕ್ಷಿಸಲು ತಾವೇ ವಿಶ್ವಾಸಮತಯಾಚನೆಗೆ ಮುಂದಾಗಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಆಪ್​ ಶಾಸಕರಿದ್ದರೆ, 8 ಮಂದಿ ಮಾತ್ರ ಬಿಜೆಪಿಗರಿದ್ದಾರೆ.

ಬಿಜೆಪಿ ವಿರುದ್ಧ ಆರೋಪ: ಹಲವು ರಾಜ್ಯಗಳಲ್ಲಿ ನಡೆಸಿದಂತೆ ಬಿಜೆಪಿ ದೆಹಲಿಯಲ್ಲೂ ಆಪರೇಷನ್​ ಕಮಲಕ್ಕೆ ಮುಂದಾಗಿದೆ. ಇದಕ್ಕಾಗ ಪ್ರತಿ ಆಪ್​ ಶಾಸಕರಿಗೆ 20 ಕೋಟಿ ರೂಪಾಯಿ ನೀಡುವ ಆಫರ್​ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಪ್​ ಶಾಸಕರು ಈ ಆಫರ್​ ಅನ್ನು ನಿರಾಕರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳ ಮೂಲಕ ದಾಳಿ ನಡೆಸಿ ದೆಹಲಿ ಸರ್ಕಾರವನ್ನು ಅಸ್ಥಿರ ಮಾಡಲು ಕೇಂದ್ರ ಸರ್ಕಾರ ಸಂಚು ಹೂಡುತ್ತಿದೆ. ಇದರಿಂದ ಸೋಮವಾರ ನಡೆಯುವ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಉಳಿವಿಗಾಗಿ ವಿಶ್ವಾಸಮತಯಾಚನೆ ನಡೆಯಲಿದೆ. ಆಪರೇಷನ್​ ಕಮಲವನ್ನು ಆಪರೇಷನ್​ ಕಿಚಡ್​(ಕೆಸರು) ಮಾಡಲಿದ್ದೇವೆ ಎಂದಿ ಕೇಜ್ರಿವಾಲ್​ ಹೇಳಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿದೆ. ಅಬಕಾರಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿ ದಾಳಿ ನಡೆಸಿತ್ತು.

ಓದಿ: ಸೆಂಟ್ರಲ್​ ಜೈಲ್​ನಲ್ಲಿ ಐಷಾರಾಮಿ ಸೌಲಭ್ಯ.. ಮುಜಗರದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ

ನವದೆಹಲಿ: ಉಪಮುಖ್ಯಮಂತ್ರಿ, ತನ್ನ ಬಲಗೈ ಬಂಟ ಮನೀಶ್​ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ಬಳಿಕ ಸಿಡಿದೆದ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಿದ್ದಾರೆ.

ಆಮ್​ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಆಪರೇಷನ್​ ಕಮಲ ಮಾಡಲು ಮುಂದಾಗಿದೆ ಎಂದೂ ಆರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ. ಇದರಿಂದ ಸರ್ಕಾರದ ಸ್ಥಿರತೆ ಪರೀಕ್ಷಿಸಲು ತಾವೇ ವಿಶ್ವಾಸಮತಯಾಚನೆಗೆ ಮುಂದಾಗಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಆಪ್​ ಶಾಸಕರಿದ್ದರೆ, 8 ಮಂದಿ ಮಾತ್ರ ಬಿಜೆಪಿಗರಿದ್ದಾರೆ.

ಬಿಜೆಪಿ ವಿರುದ್ಧ ಆರೋಪ: ಹಲವು ರಾಜ್ಯಗಳಲ್ಲಿ ನಡೆಸಿದಂತೆ ಬಿಜೆಪಿ ದೆಹಲಿಯಲ್ಲೂ ಆಪರೇಷನ್​ ಕಮಲಕ್ಕೆ ಮುಂದಾಗಿದೆ. ಇದಕ್ಕಾಗ ಪ್ರತಿ ಆಪ್​ ಶಾಸಕರಿಗೆ 20 ಕೋಟಿ ರೂಪಾಯಿ ನೀಡುವ ಆಫರ್​ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಪ್​ ಶಾಸಕರು ಈ ಆಫರ್​ ಅನ್ನು ನಿರಾಕರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳ ಮೂಲಕ ದಾಳಿ ನಡೆಸಿ ದೆಹಲಿ ಸರ್ಕಾರವನ್ನು ಅಸ್ಥಿರ ಮಾಡಲು ಕೇಂದ್ರ ಸರ್ಕಾರ ಸಂಚು ಹೂಡುತ್ತಿದೆ. ಇದರಿಂದ ಸೋಮವಾರ ನಡೆಯುವ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಉಳಿವಿಗಾಗಿ ವಿಶ್ವಾಸಮತಯಾಚನೆ ನಡೆಯಲಿದೆ. ಆಪರೇಷನ್​ ಕಮಲವನ್ನು ಆಪರೇಷನ್​ ಕಿಚಡ್​(ಕೆಸರು) ಮಾಡಲಿದ್ದೇವೆ ಎಂದಿ ಕೇಜ್ರಿವಾಲ್​ ಹೇಳಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿದೆ. ಅಬಕಾರಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿ ದಾಳಿ ನಡೆಸಿತ್ತು.

ಓದಿ: ಸೆಂಟ್ರಲ್​ ಜೈಲ್​ನಲ್ಲಿ ಐಷಾರಾಮಿ ಸೌಲಭ್ಯ.. ಮುಜಗರದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.