ETV Bharat / bharat

ಸಂಸತ್​ ಅಧಿವೇಶನದ ವೇಳೆ ಮದ್ಯದ ಬಾಟಲಿ ಎತ್ತಿ ತೋರಿಸಿದ ಬಿಜೆಪಿ ಸಂಸದ.. ಕಾರಣ?

ದೆಹಲಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ದೆಹಲಿ ಬಿಜೆಪಿ ಸಂಸದ ಪರ್ವೇಶ್​​ ಸಾಹಿಬ್​​​ ವರ್ಮಾ ಕೇಜ್ರಿವಾಲ್​​​, ಮದ್ಯ ಸೇವನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

author img

By

Published : Dec 6, 2021, 10:48 PM IST

Delhi BJP MP Parvesh in Parliament
Delhi BJP MP Parvesh in Parliament

ನವದೆಹಲಿ: ನವೆಂಬರ್​​​ 29ರಿಂದ ಚಳಿಗಾಲದ ಸಂಸತ್​​ ಅಧಿವೇಶನ ಆರಂಭಗೊಂಡಿದ್ದು, ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ವಾದ - ವಾಗ್ವಾದ ನಡೆಯುತ್ತಿವೆ. ಇದೇ ವೇಳೆ, ದೆಹಲಿಯ ಬಿಜೆಪಿ ಸಂಸದ ಪರ್ವೇಶ್​​ ಸಾಹಿಬ್​​​ ವರ್ಮಾ ಮದ್ಯದ ಬಾಟಲಿ ಎತ್ತಿ ತೋರಿಸಿದ್ದಾರೆ.

ಏನಿದು ಘಟನೆ!?

ಚಳಿಗಾಲದ ಅಧಿವೇಶನದಲ್ಲಿ ಮದ್ಯದ ಬಾಟಲಿ ಎತ್ತಿ ತೋರಿಸಿರುವ ಸಂಸದ ಪರ್ವೇಶ್​ ಸಾಹಿಬ್​​ ಸಿಂಗ್​ ವರ್ಮಾ, ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್​​ ಸರ್ಕಾರ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಮಾಡಿರುವ ಅವರು, ಕೋವಿಡ್​​ ಕಾಲದಲ್ಲಿ ದೆಹಲಿಯಲ್ಲಿ 25 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ, ದೆಹಲಿ ಸರ್ಕಾರ ಮದ್ಯದ ಬಳಕೆ ಹೆಚ್ಚಿಗೆ ಮಾಡುವ ಉದ್ದೇಶಕ್ಕಾಗಿ ಹೊಸ ಅಬಕಾರಿ ನೀತಿ ಜಾರಿಗೆ ತರಲು ನಿರತವಾಗಿತ್ತು ಎಂದರು.

  • .@ArvindKejriwal की शराब नीति से @BhagwantMann तो खुश होंगे मगर दिल्ली की जनता इस फैसले के ख़िलाफ खड़ी है।
    दिल्ली के सभी युवाओं को नशे की लत लगाने वाली आम आदमी पार्टी सरकार की शराब नीति के खिलाफ आज लोकसभा में मुद्दा उठाया।https://t.co/afMyYU980y pic.twitter.com/jyybx7JCIo

    — Parvesh Sahib Singh (@p_sahibsingh) December 6, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ವಾರಾಣಸಿಯಲ್ಲಿ ಬಿಜೆಪಿಯಿಂದ ಮೆಗಾ ಕಾರ್ಯಕ್ರಮ.. ಡಿ.13ರ ನಮೋ ವಾರಾಣಸಿ ಪ್ರವಾಸಕ್ಕೆ 12 ಸಿಎಂಗಳು ಸಾಥ್​​

ಕೋವಿಡ್ ಸಾಂಕ್ರಾಮಿಕ ವೇಳೆ ರಾಜಧಾನಿ ದೆಹಲಿಯಲ್ಲಿ 824 ಹೊಸ ಮದ್ಯದ ಅಂಗಡಿ ಒಪನ್ ಮಾಡಲಾಗಿದೆ. ಪ್ರಮುಖವಾಗಿ ಜನವಸತಿ ಪ್ರದೇಶದಲ್ಲಿ ಇವು ಓಪನ್​​ ಆಗಿದ್ದು, ಮಧ್ಯರಾತ್ರಿ 3 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದರು. ಮಧ್ಯರಾತ್ರಿ 3 ಗಂಟೆಯವರೆಗೆ ಮಹಿಳೆಯರು ಬಾರ್​​ಗಳಲ್ಲಿ ಕುಳಿತುಕೊಂಡು ಕುಡಿದರೆ ಅವರಿಗೆ ರಿಯಾಯತಿ ನೀಡಲಾಗುತ್ತಿದೆ ಎಂದಿರುವ ಅವರು, ಮದ್ಯ ಸೇವನೆ ವಯಸ್ಸಿನ ಮಿತಿ 25ರಿಂದ 21ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಪ್ರಚಾರಕ್ಕಾಗಿ ಹೆಚ್ಚಿನ ಆದಾಯ ಗಳಿಕೆ ಮಾಡುವ ಉದ್ದೇಶವನ್ನ ಕೇಜ್ರಿವಾಲ್​ ಹೊಂದಿದ್ದು, 2022ರ ಪಂಜಾಬ್​​ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ನವದೆಹಲಿ: ನವೆಂಬರ್​​​ 29ರಿಂದ ಚಳಿಗಾಲದ ಸಂಸತ್​​ ಅಧಿವೇಶನ ಆರಂಭಗೊಂಡಿದ್ದು, ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ವಾದ - ವಾಗ್ವಾದ ನಡೆಯುತ್ತಿವೆ. ಇದೇ ವೇಳೆ, ದೆಹಲಿಯ ಬಿಜೆಪಿ ಸಂಸದ ಪರ್ವೇಶ್​​ ಸಾಹಿಬ್​​​ ವರ್ಮಾ ಮದ್ಯದ ಬಾಟಲಿ ಎತ್ತಿ ತೋರಿಸಿದ್ದಾರೆ.

ಏನಿದು ಘಟನೆ!?

ಚಳಿಗಾಲದ ಅಧಿವೇಶನದಲ್ಲಿ ಮದ್ಯದ ಬಾಟಲಿ ಎತ್ತಿ ತೋರಿಸಿರುವ ಸಂಸದ ಪರ್ವೇಶ್​ ಸಾಹಿಬ್​​ ಸಿಂಗ್​ ವರ್ಮಾ, ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್​​ ಸರ್ಕಾರ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಮಾಡಿರುವ ಅವರು, ಕೋವಿಡ್​​ ಕಾಲದಲ್ಲಿ ದೆಹಲಿಯಲ್ಲಿ 25 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ, ದೆಹಲಿ ಸರ್ಕಾರ ಮದ್ಯದ ಬಳಕೆ ಹೆಚ್ಚಿಗೆ ಮಾಡುವ ಉದ್ದೇಶಕ್ಕಾಗಿ ಹೊಸ ಅಬಕಾರಿ ನೀತಿ ಜಾರಿಗೆ ತರಲು ನಿರತವಾಗಿತ್ತು ಎಂದರು.

  • .@ArvindKejriwal की शराब नीति से @BhagwantMann तो खुश होंगे मगर दिल्ली की जनता इस फैसले के ख़िलाफ खड़ी है।
    दिल्ली के सभी युवाओं को नशे की लत लगाने वाली आम आदमी पार्टी सरकार की शराब नीति के खिलाफ आज लोकसभा में मुद्दा उठाया।https://t.co/afMyYU980y pic.twitter.com/jyybx7JCIo

    — Parvesh Sahib Singh (@p_sahibsingh) December 6, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ವಾರಾಣಸಿಯಲ್ಲಿ ಬಿಜೆಪಿಯಿಂದ ಮೆಗಾ ಕಾರ್ಯಕ್ರಮ.. ಡಿ.13ರ ನಮೋ ವಾರಾಣಸಿ ಪ್ರವಾಸಕ್ಕೆ 12 ಸಿಎಂಗಳು ಸಾಥ್​​

ಕೋವಿಡ್ ಸಾಂಕ್ರಾಮಿಕ ವೇಳೆ ರಾಜಧಾನಿ ದೆಹಲಿಯಲ್ಲಿ 824 ಹೊಸ ಮದ್ಯದ ಅಂಗಡಿ ಒಪನ್ ಮಾಡಲಾಗಿದೆ. ಪ್ರಮುಖವಾಗಿ ಜನವಸತಿ ಪ್ರದೇಶದಲ್ಲಿ ಇವು ಓಪನ್​​ ಆಗಿದ್ದು, ಮಧ್ಯರಾತ್ರಿ 3 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದರು. ಮಧ್ಯರಾತ್ರಿ 3 ಗಂಟೆಯವರೆಗೆ ಮಹಿಳೆಯರು ಬಾರ್​​ಗಳಲ್ಲಿ ಕುಳಿತುಕೊಂಡು ಕುಡಿದರೆ ಅವರಿಗೆ ರಿಯಾಯತಿ ನೀಡಲಾಗುತ್ತಿದೆ ಎಂದಿರುವ ಅವರು, ಮದ್ಯ ಸೇವನೆ ವಯಸ್ಸಿನ ಮಿತಿ 25ರಿಂದ 21ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಪ್ರಚಾರಕ್ಕಾಗಿ ಹೆಚ್ಚಿನ ಆದಾಯ ಗಳಿಕೆ ಮಾಡುವ ಉದ್ದೇಶವನ್ನ ಕೇಜ್ರಿವಾಲ್​ ಹೊಂದಿದ್ದು, 2022ರ ಪಂಜಾಬ್​​ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.