ETV Bharat / bharat

ಚಮೋಲಿ ದುರಂತ: ಒಂದು ವರ್ಷದ ನಂತರ ಮೃತದೇಹ ಪತ್ತೆ

author img

By

Published : Feb 22, 2022, 3:19 AM IST

ಫೆಬ್ರವರಿ 7, 2021ರಲ್ಲಿ ನಡೆದಿದ್ದ ಚಮೋಲಿ ಹಿಮನದಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ವ್ಯಕ್ತಿ ಶವವಾಗಿ ಸುಮಾರು ಒಂದು ವರ್ಷದ ನಂತರ ಪತ್ತೆಯಾಗಿದ್ದಾನೆ.

Chamoli Floods: Dead body found in Tapovan Tunnel after one year
ಚಮೋಲಿ ದುರಂತ: ಒಂದು ವರ್ಷದ ನಂತರ ಮೃತದೇಹ ಪತ್ತೆ

ಚಮೋಲಿ, ಉತ್ತರಾಖಂಡ್: ಸುಮಾರು ಒಂದು ವರ್ಷದ ಹಿಂದೆ ನಡೆದ ಚಮೋಲಿ ದುರಂತದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಚಮೋಲಿ ಪ್ರವಾಹದ ವೇಳೆ ರೈನಿ ಗ್ರಾಮದಲ್ಲಿಈ ವ್ಯಕ್ತಿ ದುರಂತದ ವೇಳೆ ನಾಪತ್ತೆಯಾಗಿದ್ದನು.

ಮೃತದೇಹ ತಪೋವನ ಸುರಂಗದಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯನ್ನು 21 ವರ್ಷದ ರೋಹಿತ್ ಭಂಡಾರಿ ಎಂದು ಗುರ್ತಿಸಲಾಗಿದೆ. ಜೋಶಿಮಠದ ಕಿಮನಾ ಗ್ರಾಮದ ನಿವಾಸಿಯಾಗಿರುವ ಈತ ನೀರಿನಲ್ಲಿ ಕೊಚ್ಚಿ ಹೋಗಿದ್ದನು.

ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿ 16ರಂದು ಗೌರವ್ ಪ್ರಸಾದ್ ಎಂಬುವವರ ಮೃತದೇಹ ಸುರಂಗವೊಂದರಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್

ಫೆಬ್ರವರಿ 7, 2021ರಂದು ಪ್ರವಾಹ ಉಂಟಾಗಿದ್ದು, ನಾಪತ್ತೆಯಾದ 205 ಜನರ ಪೈಕಿ 137 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ನಿರ್ಮಿಸುತ್ತಿರುವ 520 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳೂ ಹಲವು ತಿಂಗಳುಗಳಿಂದ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದವು.

ಚಮೋಲಿ, ಉತ್ತರಾಖಂಡ್: ಸುಮಾರು ಒಂದು ವರ್ಷದ ಹಿಂದೆ ನಡೆದ ಚಮೋಲಿ ದುರಂತದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಚಮೋಲಿ ಪ್ರವಾಹದ ವೇಳೆ ರೈನಿ ಗ್ರಾಮದಲ್ಲಿಈ ವ್ಯಕ್ತಿ ದುರಂತದ ವೇಳೆ ನಾಪತ್ತೆಯಾಗಿದ್ದನು.

ಮೃತದೇಹ ತಪೋವನ ಸುರಂಗದಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯನ್ನು 21 ವರ್ಷದ ರೋಹಿತ್ ಭಂಡಾರಿ ಎಂದು ಗುರ್ತಿಸಲಾಗಿದೆ. ಜೋಶಿಮಠದ ಕಿಮನಾ ಗ್ರಾಮದ ನಿವಾಸಿಯಾಗಿರುವ ಈತ ನೀರಿನಲ್ಲಿ ಕೊಚ್ಚಿ ಹೋಗಿದ್ದನು.

ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿ 16ರಂದು ಗೌರವ್ ಪ್ರಸಾದ್ ಎಂಬುವವರ ಮೃತದೇಹ ಸುರಂಗವೊಂದರಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಪರಿಶೀಲಿಸಿದ ರಾಷ್ಟ್ರಪತಿ ಕೋವಿಂದ್

ಫೆಬ್ರವರಿ 7, 2021ರಂದು ಪ್ರವಾಹ ಉಂಟಾಗಿದ್ದು, ನಾಪತ್ತೆಯಾದ 205 ಜನರ ಪೈಕಿ 137 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ನಿರ್ಮಿಸುತ್ತಿರುವ 520 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳೂ ಹಲವು ತಿಂಗಳುಗಳಿಂದ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.