ETV Bharat / bharat

ಸಮಾಜದಲ್ಲಿ ಗೌರವ ಸಿಗದಿರುವುದೇ ದಲಿತರು ಕ್ರೈಸ್ತಮತ ಸೇರಲು ಕಾರಣ: ತೆಲಂಗಾಣ ಸಿಎಂ

author img

By

Published : Jun 24, 2021, 9:48 AM IST

ನಾನೊಬ್ಬ ಹಿಂದೂ, ಆದರೆ ದಲಿತರು ಇನ್ನೂ ಬಡತನದಲ್ಲಿಯೇ ಇರುವುದರಿಂದ ಬೇಜಾರಾಗುತ್ತದೆ. ದೇಶದ ಪ್ರತಿಯೊಬ್ಬರೂ ಬಡವರು ಮತ್ತು ದಲಿತರಿಗೆ ಸಹಾಯ ಮಾಡಲು ಮುಂದಾಗಬೇಕೆಂದು ತೆಲಂಗಾಣ ಕೆಸಿಆರ್ ಕರೆ ನೀಡಿದ್ದಾರೆ.

Dalits not getting respect so converting to Christianity: KCR
ಸಮಾಜದಲ್ಲಿ ಗೌರವ ಸಿಗದ ಕಾರಣವೇ ದಲಿತರ ಮತಾಂತರ: ತೆಲಂಗಾಣ ಸಿಎಂ

ಕಮ್ಮಾರೆಡ್ಡಿ(ತೆಲಂಗಾಣ): ಸಮಾಜದಲ್ಲಿ ಗೌರವ ಸಿಗದಿರುವುದರಿಂದಲೇ ದಲಿತರು ಕ್ರೈಸ್ತಮತಕ್ಕೆ ಮತಾಂತರವಾಗುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಕಮ್ಮಾರೆಡ್ಡಿ ಜಿಲ್ಲೆಯ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ದಲಿತರು ಇನ್ನೂ ಅಭಿವೃದ್ಧಿ ಸಾಧಿಸಬೇಕಿದೆ. ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಕ್ರೈಸ್ತಧರ್ಮದಲ್ಲಿ ಅವರಿಗೆ ಗೌರವ ಸಿಗುತ್ತದೆ ಎಂಬ ಭರವಸೆ ಅವರಲ್ಲಿರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಇಂದು ಪ್ರಧಾನಿ ಮೋದಿಯೊಂದಿಗೆ ಜಮ್ಮು ಕಾಶ್ಮೀರದ ಸರ್ವಪಕ್ಷ ನಾಯಕರ ಸಭೆ

ನಾನೊಬ್ಬ ಹಿಂದೂ, ಆದರೆ ದಲಿತರು ಇನ್ನೂ ಬಡತನದಲ್ಲಿಯೇ ಇರುವುದರಿಂದ ಬೇಜಾರಾಗುತ್ತದೆ. ದೇಶದ ಪ್ರತಿಯೊಬ್ಬರೂ ಕೂಡಾ ಬಡವರು ಮತ್ತು ದಲಿತರಿಗೆ ಸಹಾಯ ಮಾಡಲು ಮುಂದಾಗಬೇಕೆಂದು ಇದೇ ವೇಳೆ ಕೆಸಿಆರ್ ಕರೆ ನೀಡಿದರು.

ಕಮ್ಮಾರೆಡ್ಡಿ(ತೆಲಂಗಾಣ): ಸಮಾಜದಲ್ಲಿ ಗೌರವ ಸಿಗದಿರುವುದರಿಂದಲೇ ದಲಿತರು ಕ್ರೈಸ್ತಮತಕ್ಕೆ ಮತಾಂತರವಾಗುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಕಮ್ಮಾರೆಡ್ಡಿ ಜಿಲ್ಲೆಯ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ದಲಿತರು ಇನ್ನೂ ಅಭಿವೃದ್ಧಿ ಸಾಧಿಸಬೇಕಿದೆ. ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಕ್ರೈಸ್ತಧರ್ಮದಲ್ಲಿ ಅವರಿಗೆ ಗೌರವ ಸಿಗುತ್ತದೆ ಎಂಬ ಭರವಸೆ ಅವರಲ್ಲಿರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಇಂದು ಪ್ರಧಾನಿ ಮೋದಿಯೊಂದಿಗೆ ಜಮ್ಮು ಕಾಶ್ಮೀರದ ಸರ್ವಪಕ್ಷ ನಾಯಕರ ಸಭೆ

ನಾನೊಬ್ಬ ಹಿಂದೂ, ಆದರೆ ದಲಿತರು ಇನ್ನೂ ಬಡತನದಲ್ಲಿಯೇ ಇರುವುದರಿಂದ ಬೇಜಾರಾಗುತ್ತದೆ. ದೇಶದ ಪ್ರತಿಯೊಬ್ಬರೂ ಕೂಡಾ ಬಡವರು ಮತ್ತು ದಲಿತರಿಗೆ ಸಹಾಯ ಮಾಡಲು ಮುಂದಾಗಬೇಕೆಂದು ಇದೇ ವೇಳೆ ಕೆಸಿಆರ್ ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.