ETV Bharat / bharat

ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ: 18 ರಾಜ್ಯಗಳಲ್ಲಿ ವಿತ್ತೀಯ ಕೊರತೆ

author img

By

Published : Apr 19, 2022, 8:21 AM IST

ಕೋವಿಡ್ ಕಾರಣದಿಂದಾಗಿ ಸಾಕಷ್ಟು ಆದಾಯವಿಲ್ಲದೇ ಮೂಲಸೌಕರ್ಯಗಳ ಮೇಲೆ ಹೆಚ್ಚು ಹೂಡಿಕೆಯ ಮಾಡಬೇಕಾದ ಅನಿವಾರ್ಯತೆಯಿಂದಾಗಿ ರಾಜ್ಯಗಳಲ್ಲಿ ವಿತ್ತೀಯ ಕೊರತೆ ಉಂಟಾಗಿದ್ದು, ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞರಾದ ಸೌಮ್ಯ ಕಾಂತಿ ಘೋಷ್ ಅವರ ವಿಶ್ಲೇಷಣೆ ಇಲ್ಲಿದೆ.

Covid ravages economies of states, 18 states revise fiscal deficit by 50 basis points
ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ: 18 ರಾಜ್ಯಗಳಲ್ಲಿ ವಿತ್ತೀಯ ಕೊರತೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಎರಡು ವರ್ಷಗಳ ಕಾಲ ನಮ್ಮನ್ನು ಕಾಡಿದೆ. ಈ ಎರಡು ವರ್ಷಗಳಲ್ಲಿ ಎಲ್ಲಾ ದೇಶಗಳಂತೆ ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ರಾಜ್ಯಗಳ ಹಣಕಾಸಿನ ಸ್ಥಿತಿಗತಿ ಪಾತಾಳಕ್ಕೆ ಇಳಿದಿದೆ. ಸಾಕಷ್ಟು ಆದಾಯವಿಲ್ಲದೇ, ಆರೋಗ್ಯವಲಯದಲ್ಲಿ ಸಾಕಷ್ಟು ಹೂಡಿಕೆ ಮಾಡಬೇಕಾದ ಅಗತ್ಯತೆ ಇದ್ದ ಕಾರಣದಿಂದ ವಿತ್ತೀಯ ಕೊರತೆ ಕಾಣಿಸಿಕೊಂಡಿದೆ. ಲಭ್ಯವಿರುವ ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಅದನ್ನು ಸರಳವಾಗಿ ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ. ಈ ರೀತಿಯ ವಿತ್ತೀಯ ಕೊರತೆ ದೇಶದ ಸುಮಾರು 18 ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಅಧಿಕಾರಿಗಳು ನೀಡುವ ಮಾಹಿತಿಯಂತೆ ಅತಿ ಹೆಚ್ಚು ಎಂದರೆ ರಾಜ್ಯಗಳು ವಿಧಿಸುವ ಜಿಡಿಪಿಯ ಶೇಕಡಾ 4ರಷ್ಟು ವಿತ್ತೀಯ ಕೊರತೆ 2021-22ರ ಹಣಕಾಸು ವರ್ಷದಲ್ಲಿ ಉಂಟಾಗಿದೆ ಎಂಬುದು ಅಧಿಕೃತ ಮಾಹಿತಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞರಾದ ಸೌಮ್ಯ ಕಾಂತಿ ಘೋಷ್ ಅವರು ನಡೆಸಿದ ವಿಶ್ಲೇಷಣೆಯ ಮಾಹಿತಿಯಂತೆ 18 ರಾಜ್ಯಗಳ ಜಿಡಿಪಿಯಲ್ಲಿನ ಸರಾಸರಿ ವಿತ್ತೀಯ ಕೊರತೆಯನ್ನು ಕಳೆದ ಹಣಕಾಸು ವರ್ಷದಲ್ಲಿ 50 ಬಿಪಿಎಸ್‌ನಿಂದ ಶೇಕಡಾ 4ರವರೆಗೆ ಪರಿಷ್ಕರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 11 ರಾಜ್ಯಗಳು ತಮ್ಮ ವಿತ್ತೀಯ ಕೊರತೆಯನ್ನು ಹೇಳಿಕೊಂಡಿದ್ದವು.ಈಗ ತಮ್ಮ ಬಜೆಟ್ ಗುರಿಗಿಂತ ಸಮನಾಗಿ ಅಥವಾ ಕಡಿಮೆ ವೆಚ್ಚವನ್ನು ಇರಿಸಿಕೊಳ್ಳಲು ಸಮರ್ಥವಾಗಿದ್ದರೂ ಏಳು ರಾಜ್ಯಗಳ ವಿತ್ತೀಯ ಕೊರತೆಯು ಬಜೆಟ್ ಗುರಿಯನ್ನು ಮೀರಿದೆ ಎಂದು ವಿಶ್ಲೇಷಣೆ ತೋರಿಸುತ್ತದೆ.

ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು ರೂ. 7.2 ಲಕ್ಷ ಕೋಟಿ: ಬಿಹಾರದ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 8.3ರಷ್ಟಿದೆ. ಅಂದರೆ ಬಜೆಟ್ ಅಂದಾಜಿಗಿಂತ 54,327 ಕೋಟಿ ರೂಪಾಯಿ ಹೆಚ್ಚಿಗೆ ವೆಚ್ಚ ಮಾಡಲಾಗಿದೆ. ಅಸ್ಸಾಂನ ವಿತ್ತೀಯ ಕೊರತೆಯು ಶೇಕಡಾ 4.5ರಷ್ಟಿದೆ. ಅಂದರೆ ಅದು ಘೋಷಿಸಿದ್ದ ಆದಾಯಕ್ಕಿಂತ 21,935 ಕೋಟಿ ಹೆಚ್ಚಿಗೆ ವೆಚ್ಚ ಮಾಡಿದೆ. ಈ ಎರಡು ರಾಜ್ಯಗಳಲ್ಲಿ, ವಿತ್ತೀಯ ಕೊರತೆಯು ಗಮನಾರ್ಹವಾಗಿ ಏರಿಕೆಯಾಗಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಬಜೆಟ್ ಗುರಿಗಿಂತ ಹೆಚ್ಚಿನ ವಿತ್ತೀಯ ಕೊರತೆಯನ್ನು ವರದಿ ಮಾಡಿದೆ. ಈ ತಿಂಗಳು ಆರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಜ್ಯಗಳ ಕಡಿಮೆ ವಿತ್ತೀಯ ಕೊರತೆ ಶೇಕಡಾ 3.4ರಷ್ಟಿದೆ. 18 ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು 7.2 ಲಕ್ಷ ಕೋಟಿ ರೂಪಾಯಿ ಇದೆ.ಕೆಲವು ರಾಜ್ಯಗಳಲ್ಲಿ ಹಣಕಾಸಿನ ಶಿಸ್ತಿಲ್ಲದ ಕಾರಣದಿಂದ ಆದಾಯ ಸಂಗ್ರಹಣೆ ಕಾರ್ಯ ಕಷ್ಟಕರವಾಗಿದೆ.

ಸೌಮ್ಯ ಕಾಂತಿ ಘೋಷ್ ಅವರ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳ ಬೆಳವಣಿಗೆಯಲ್ಲಿ ದ್ವಂದ್ವತೆ ಇದೆ. ಆಂಧ್ರ ಪ್ರದೇಶ, ಅಸ್ಸಾಂ, ಗುಜರಾತ್, ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ನೈಜ ಜಿಎಸ್‌ಡಿಪಿ ಬೆಳವಣಿಗೆಯನ್ನು ತೋರಿಸುವುದರಿಂದ ಅಸಮತೋಲನವು ಮುಂದುವರಿಯುತ್ತದೆ. ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಗಿಂತ 17 ರಾಜ್ಯಗಳ ಒಟ್ಟಾರೆ ಬೆಳವಣಿಗೆ ಭಾರತದ ನೈಜ ಜಿಡಿಪಿ ಬೆಳವಣಿಗೆಗಿಂತ ಸ್ವಲ್ಪ ಕಡಿಮೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡುವ ಭಾರತದ ಜಿಡಿಪಿ ಮತ್ತು ಜಿಎಸ್‌ಡಿಪಿ ನಡುವೆ ಯಾವಾಗಲೂ ಅಂತರವಿರುತ್ತದೆ.

ರಾಜ್ಯ ಸರ್ಕಾರಗಳ ಹಣಕಾಸಿನ ಆರೋಗ್ಯ ಮತ್ತು ಬಂಡವಾಳ ವೆಚ್ಚವನ್ನು ಟ್ರ್ಯಾಕ್ ಮಾಡುವ ಆರ್ಥಿಕ ತಜ್ಞರಿಗೆ ಗೊತ್ತಾಗಿರುವ ವಿಚಾರವೆಂದರೆ, ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳ ಕ್ಯಾಪೆಕ್ಸ್ (CapEx-Capital Expenditure) ಅಂದರೆ ಬಂಡವಾಳ ವೆಚ್ಚ ಶೇಕಡಾ 36.2ರಷ್ಟು ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ, ನೀರು ಸರಬರಾಜು ಮತ್ತು ನೈರ್ಮಲ್ಯ, ನೀರಾವರಿ ಮತ್ತು ಸಾರಿಗೆಗಾಗಿ ಹೆಚ್ಚು ವ್ಯಯಿಸಬೇಕಾದ ಅಗತ್ಯದ ಕಾರಣದಿಂದ ಬಂಡವಾಳ ವೆಚ್ಚದ ಪ್ರಮಾಣ ಹೆಚ್ಚಾಗಿದೆ.

2020-21ರ ಆರ್ಥಿಕ ವರ್ಷದಲ್ಲಿ ಸೆಸ್ ಸಂಗ್ರಹದಲ್ಲಿನ ಕೊರತೆಯನ್ನು ಸರಿದೂಗಿಸಲು 1.10 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವುದಾಗಿ ಅಕ್ಟೋಬರ್ 2020ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಹಲವಾರು ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ಕೋರಿವೆ. ಈ ಮೂಲಕ ಕೆಲವು ವರ್ಷಗಳವರೆಗೆ ವಿತ್ತೀಯ ಕೊರತೆಯನ್ನು ಸರಿದೂಗಿಸುವ ಉಪಾಯ ಕೂಡಾ ಇದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ₹3.39 ಲಕ್ಷ ಕೋಟಿ ನಷ್ಟ!

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಎರಡು ವರ್ಷಗಳ ಕಾಲ ನಮ್ಮನ್ನು ಕಾಡಿದೆ. ಈ ಎರಡು ವರ್ಷಗಳಲ್ಲಿ ಎಲ್ಲಾ ದೇಶಗಳಂತೆ ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ರಾಜ್ಯಗಳ ಹಣಕಾಸಿನ ಸ್ಥಿತಿಗತಿ ಪಾತಾಳಕ್ಕೆ ಇಳಿದಿದೆ. ಸಾಕಷ್ಟು ಆದಾಯವಿಲ್ಲದೇ, ಆರೋಗ್ಯವಲಯದಲ್ಲಿ ಸಾಕಷ್ಟು ಹೂಡಿಕೆ ಮಾಡಬೇಕಾದ ಅಗತ್ಯತೆ ಇದ್ದ ಕಾರಣದಿಂದ ವಿತ್ತೀಯ ಕೊರತೆ ಕಾಣಿಸಿಕೊಂಡಿದೆ. ಲಭ್ಯವಿರುವ ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಅದನ್ನು ಸರಳವಾಗಿ ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ. ಈ ರೀತಿಯ ವಿತ್ತೀಯ ಕೊರತೆ ದೇಶದ ಸುಮಾರು 18 ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಅಧಿಕಾರಿಗಳು ನೀಡುವ ಮಾಹಿತಿಯಂತೆ ಅತಿ ಹೆಚ್ಚು ಎಂದರೆ ರಾಜ್ಯಗಳು ವಿಧಿಸುವ ಜಿಡಿಪಿಯ ಶೇಕಡಾ 4ರಷ್ಟು ವಿತ್ತೀಯ ಕೊರತೆ 2021-22ರ ಹಣಕಾಸು ವರ್ಷದಲ್ಲಿ ಉಂಟಾಗಿದೆ ಎಂಬುದು ಅಧಿಕೃತ ಮಾಹಿತಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞರಾದ ಸೌಮ್ಯ ಕಾಂತಿ ಘೋಷ್ ಅವರು ನಡೆಸಿದ ವಿಶ್ಲೇಷಣೆಯ ಮಾಹಿತಿಯಂತೆ 18 ರಾಜ್ಯಗಳ ಜಿಡಿಪಿಯಲ್ಲಿನ ಸರಾಸರಿ ವಿತ್ತೀಯ ಕೊರತೆಯನ್ನು ಕಳೆದ ಹಣಕಾಸು ವರ್ಷದಲ್ಲಿ 50 ಬಿಪಿಎಸ್‌ನಿಂದ ಶೇಕಡಾ 4ರವರೆಗೆ ಪರಿಷ್ಕರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 11 ರಾಜ್ಯಗಳು ತಮ್ಮ ವಿತ್ತೀಯ ಕೊರತೆಯನ್ನು ಹೇಳಿಕೊಂಡಿದ್ದವು.ಈಗ ತಮ್ಮ ಬಜೆಟ್ ಗುರಿಗಿಂತ ಸಮನಾಗಿ ಅಥವಾ ಕಡಿಮೆ ವೆಚ್ಚವನ್ನು ಇರಿಸಿಕೊಳ್ಳಲು ಸಮರ್ಥವಾಗಿದ್ದರೂ ಏಳು ರಾಜ್ಯಗಳ ವಿತ್ತೀಯ ಕೊರತೆಯು ಬಜೆಟ್ ಗುರಿಯನ್ನು ಮೀರಿದೆ ಎಂದು ವಿಶ್ಲೇಷಣೆ ತೋರಿಸುತ್ತದೆ.

ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು ರೂ. 7.2 ಲಕ್ಷ ಕೋಟಿ: ಬಿಹಾರದ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 8.3ರಷ್ಟಿದೆ. ಅಂದರೆ ಬಜೆಟ್ ಅಂದಾಜಿಗಿಂತ 54,327 ಕೋಟಿ ರೂಪಾಯಿ ಹೆಚ್ಚಿಗೆ ವೆಚ್ಚ ಮಾಡಲಾಗಿದೆ. ಅಸ್ಸಾಂನ ವಿತ್ತೀಯ ಕೊರತೆಯು ಶೇಕಡಾ 4.5ರಷ್ಟಿದೆ. ಅಂದರೆ ಅದು ಘೋಷಿಸಿದ್ದ ಆದಾಯಕ್ಕಿಂತ 21,935 ಕೋಟಿ ಹೆಚ್ಚಿಗೆ ವೆಚ್ಚ ಮಾಡಿದೆ. ಈ ಎರಡು ರಾಜ್ಯಗಳಲ್ಲಿ, ವಿತ್ತೀಯ ಕೊರತೆಯು ಗಮನಾರ್ಹವಾಗಿ ಏರಿಕೆಯಾಗಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಬಜೆಟ್ ಗುರಿಗಿಂತ ಹೆಚ್ಚಿನ ವಿತ್ತೀಯ ಕೊರತೆಯನ್ನು ವರದಿ ಮಾಡಿದೆ. ಈ ತಿಂಗಳು ಆರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಜ್ಯಗಳ ಕಡಿಮೆ ವಿತ್ತೀಯ ಕೊರತೆ ಶೇಕಡಾ 3.4ರಷ್ಟಿದೆ. 18 ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು 7.2 ಲಕ್ಷ ಕೋಟಿ ರೂಪಾಯಿ ಇದೆ.ಕೆಲವು ರಾಜ್ಯಗಳಲ್ಲಿ ಹಣಕಾಸಿನ ಶಿಸ್ತಿಲ್ಲದ ಕಾರಣದಿಂದ ಆದಾಯ ಸಂಗ್ರಹಣೆ ಕಾರ್ಯ ಕಷ್ಟಕರವಾಗಿದೆ.

ಸೌಮ್ಯ ಕಾಂತಿ ಘೋಷ್ ಅವರ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳ ಬೆಳವಣಿಗೆಯಲ್ಲಿ ದ್ವಂದ್ವತೆ ಇದೆ. ಆಂಧ್ರ ಪ್ರದೇಶ, ಅಸ್ಸಾಂ, ಗುಜರಾತ್, ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ನೈಜ ಜಿಎಸ್‌ಡಿಪಿ ಬೆಳವಣಿಗೆಯನ್ನು ತೋರಿಸುವುದರಿಂದ ಅಸಮತೋಲನವು ಮುಂದುವರಿಯುತ್ತದೆ. ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಗಿಂತ 17 ರಾಜ್ಯಗಳ ಒಟ್ಟಾರೆ ಬೆಳವಣಿಗೆ ಭಾರತದ ನೈಜ ಜಿಡಿಪಿ ಬೆಳವಣಿಗೆಗಿಂತ ಸ್ವಲ್ಪ ಕಡಿಮೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡುವ ಭಾರತದ ಜಿಡಿಪಿ ಮತ್ತು ಜಿಎಸ್‌ಡಿಪಿ ನಡುವೆ ಯಾವಾಗಲೂ ಅಂತರವಿರುತ್ತದೆ.

ರಾಜ್ಯ ಸರ್ಕಾರಗಳ ಹಣಕಾಸಿನ ಆರೋಗ್ಯ ಮತ್ತು ಬಂಡವಾಳ ವೆಚ್ಚವನ್ನು ಟ್ರ್ಯಾಕ್ ಮಾಡುವ ಆರ್ಥಿಕ ತಜ್ಞರಿಗೆ ಗೊತ್ತಾಗಿರುವ ವಿಚಾರವೆಂದರೆ, ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳ ಕ್ಯಾಪೆಕ್ಸ್ (CapEx-Capital Expenditure) ಅಂದರೆ ಬಂಡವಾಳ ವೆಚ್ಚ ಶೇಕಡಾ 36.2ರಷ್ಟು ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ, ನೀರು ಸರಬರಾಜು ಮತ್ತು ನೈರ್ಮಲ್ಯ, ನೀರಾವರಿ ಮತ್ತು ಸಾರಿಗೆಗಾಗಿ ಹೆಚ್ಚು ವ್ಯಯಿಸಬೇಕಾದ ಅಗತ್ಯದ ಕಾರಣದಿಂದ ಬಂಡವಾಳ ವೆಚ್ಚದ ಪ್ರಮಾಣ ಹೆಚ್ಚಾಗಿದೆ.

2020-21ರ ಆರ್ಥಿಕ ವರ್ಷದಲ್ಲಿ ಸೆಸ್ ಸಂಗ್ರಹದಲ್ಲಿನ ಕೊರತೆಯನ್ನು ಸರಿದೂಗಿಸಲು 1.10 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವುದಾಗಿ ಅಕ್ಟೋಬರ್ 2020ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಹಲವಾರು ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ಕೋರಿವೆ. ಈ ಮೂಲಕ ಕೆಲವು ವರ್ಷಗಳವರೆಗೆ ವಿತ್ತೀಯ ಕೊರತೆಯನ್ನು ಸರಿದೂಗಿಸುವ ಉಪಾಯ ಕೂಡಾ ಇದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ₹3.39 ಲಕ್ಷ ಕೋಟಿ ನಷ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.