ETV Bharat / bharat

190ಕ್ಕೂ ಹೆಚ್ಚು ವಿಶ್ವ ನಾಯಕರು ಬರೆದಿರುವ ಪತ್ರದಲ್ಲೇನಿದೆ..?

author img

By

Published : Mar 11, 2023, 8:44 PM IST

190ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ವಿಶ್ವ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು, ನಾಗರಿಕ ಸಮಾಜ ಸಂಸ್ಥೆಗಳು, ನಂಬಿಕಸ್ಥ ನಾಯಕರು ಮತ್ತು ಆರೋಗ್ಯ ತಜ್ಞರು ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಲವು ವಿಚಾರಗಳ ಬಗ್ಗೆ ಸರ್ಕಾರಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

COVID 19
190ಕ್ಕೂ ಹೆಚ್ಚು ವಿಶ್ವ ನಾಯಕರು ಬರೆದ ಪತ್ರದಲ್ಲೇನಿದೆ..?

ನವದೆಹಲಿ: 190ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ವಿಶ್ವ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು, ನಾಗರಿಕ ಸಮಾಜ ಸಂಸ್ಥೆಗಳು, ನಂಬಿಕಸ್ಥ ನಾಯಕರು ಮತ್ತು ಆರೋಗ್ಯ ತಜ್ಞರು ಸರ್ಕಾರಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಲವು ವಿಚಾರಗಳ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. "ಲಾಭದಾಯಕ ಹಾಗೂ ರಾಷ್ಟ್ರೀಯತೆ" ಮುಂದೆ ತರಲು ಎಂದಿಗೂ ಅವಕಾಶ ನೀಡಬಾರದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತೋರಿಸುವ ಮಾನವೀಯತೆ ಅಗತ್ಯತೆಯ ಕುರಿತು ಚರ್ಚಿಸಿದ್ದಾರೆ.

ಲ್ಯಾನ್ಸೆಟ್‌ ಅಧ್ಯಯನದಲ್ಲಿ ಏನಿದೆ?: ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆ ರೋಲ್‌ಔಟ್‌ನ ಮೊದಲ ವರ್ಷದಲ್ಲಿ ಪ್ರತಿ 24 ಸೆಕೆಂಡಿಗೆ ಒಂದು ಸಾವಿಗೆ ಕಾರಣವಾದ ಕೋವಿಡ್, ಹಾಗೂ ಅದರ​​ ತಡೆಗಟ್ಟುವಿಕೆಗಾಗಿ ಕಂಡು ಹಿಡಿದ ಲಸಿಕೆಯಲ್ಲಿನ ಅಸಮಾನತೆಯನ್ನ ಖಂಡಿಸಲಾಗಿದೆ. ಆಗ ಜೀವಗಳನ್ನು ಉಳಿಸಲು ಸಾಧ್ಯವಾಗದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇದು "ಜಗತ್ತಿನ ಆತ್ಮಸಾಕ್ಷಿಯ ಮೇಲಿನ ಗಾಯವಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

ವಿಷಾದ ವ್ಯಕ್ತಪಡಿಸಿದ ವಿಶ್ವ ನಾಯಕರು: ಕೋವಿಡ್-19 ನ್ನು ತಡೆಗಟ್ಟಲು ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗಿದೆ. ಅಪಾರ ಸಾರ್ವಜನಿಕ ನಿಧಿಯೊಂದಿಗೆ ಈ ಲಸಿಕೆಗಳನ್ನ ವಿತರಿಸಲಾಗಿದೆ. ಇದರಿಂದ ಅವೆಲ್ಲ ಈಗ "ಜನರ ಲಸಿಕೆಗಳು, ಜನರ ಪರೀಕ್ಷೆಗಳು ಮತ್ತು ಜನರ ಚಿಕಿತ್ಸೆ'' ಗಾಗಿ ಜನ್ಮ ತಾಳಿದವುಗಳಾಗಿವೆ ಎಂದು ಒಬ್ಬ ವಿಶ್ವ ನಾಯಕರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಜನರ ಅಗತ್ಯವನ್ನು ಆಧರಿಸಿ ಕೋವಿಡ್ -19 ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳನ್ನು ನೀಡುವ ಬದಲು, ಔಷಧೀಯ ಕಂಪನಿಗಳು ಶ್ರೀಮಂತ ದೇಶಗಳಿಗೆ ಮೊದಲು ಲಸಿಕೆಗಳನ್ನು ಮಾರಾಟ ಮಾಡಿದ ಬಗ್ಗೆ ಭಾರಿ ಟೀಕೆಗಳನ್ನು ಹಲವು ವಿಶ್ವ ನಾಯಕರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ತಮ್ಮ ಪತ್ರಗಳಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

6.8 ಮಿಲಿಯನ್‌ಗಿಂತಲೂ ಹೆಚ್ಚು ಜನ ಬಲಿ : ಕೋವಿಡ್​-19 ಕಾಯಿಲೆ ಜಾಗತಿಕವಾಗಿ 6.8 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಈ ಅಂಕಿ- ಅಂಶವು ಕಡಿಮೆ ಅಂದಾಜು ಎಂದು ವ್ಯಾಪಕವಾಗಿ ಭಾವಿಸಲಾಗಿದೆ. ಈ ಪತ್ರದ ಮೂಲಕ ವಿಶ್ವ ನಾಯಕರನ್ನು ಪ್ರತಿಜ್ಞೆ ಮೂಲಕ ಕರೆ ನೀಡಿದ್ದಾರೆ. "ಶ್ರೀಮಂತ ದೇಶಗಳಲ್ಲಿನ ಜನರ ಜೀವನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ದಕ್ಷಿಣದ ಜನರ ಜೀವನವನ್ನು ನಿರ್ಲಕ್ಷಿಸಲಾಗಿದೆ. ಸಾರ್ವಜನಿಕ ಹಣ ಪಡೆದು ವಿಜ್ಞಾನವು ಖಾಸಗಿ ಏಕಸ್ವಾಮ್ಯಗಳ ಹಿಂದೆ ಎಂದಿಗೂ ಬಂಧಿಯಾಗಬಾರದು. ಇನ್ನೆಂದಿಗೂ ಕಂಪನಿಗಳು ಲಾಭದ ಆಸೆಗಾಗಿ ಮಾನವೀಯತೆಯ ಅಗತ್ಯತೆಗಳನ್ನು ಎಂದಿಗೂ ಮರೆಯಬಾರದು ಎಂದಿದ್ದಾರೆ.

ಜೋಸ್ ರಾಮೋಸ್ ಅಭಿಪ್ರಾಯ: ''ಕೋವಿಡ್​-19 ಸಾಂಕ್ರಾಮಿಕದಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಲಸಿಕೆಗಳನ್ನು ನೀಡದೇ ಹಿಂದಕ್ಕೆ ತಳ್ಳಿರುವುದು ಸರಿಯಲ್ಲ. ಈ ಮೂಲಕ ಹೊಸ ತಂತ್ರಜ್ಞಾನಗಳ ಪ್ರಯೋಜನಗಳ ಪ್ರವೇಶವನ್ನು ನಿರಾಕರಿಸಲಾಯಿತು. ಮೂರು ವರ್ಷಗಳ ನಂತರ, ಈ ಅನ್ಯಾಯವು ಪ್ರತಿ ದೇಶದ ಜನರ ಸುರಕ್ಷತೆಯನ್ನು ದುರ್ಬಲಗೊಳಿಸಿದೆ'' ಎಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್ ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್ ಅವರು, ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್: ಈ ಕಳೆದ ಮೂರು ವರ್ಷಗಳು ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸಬೇಕು. ನಮ್ಮ ತಯಾರಿಕೆಯಲ್ಲಿ ಮತ್ತು ಜಾಗತಿಕ ಬೆದರಿಕೆಗಳ ಪ್ರತಿಕ್ರಿಯೆಯಲ್ಲಿ ರಾಷ್ಟ್ರಗಳ ನಡುವಿನ ನಿಜವಾದ ಸಹಕಾರದ ಅಗತ್ಯತೆ ಇದೆ ಎಂದು ವಿಶ್ವಸಂಸ್ಥೆಯ ಎಂಟನೇ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪ್ರಾಸ್ಪೇಟ್​ ಕ್ಯಾನ್ಸರ್​ ತಡೆಗೆ ಮೆಡಿಟರೇನಿಯನ್​ ಡಯಟ್​ ಪರಿಣಾಮಕಾರಿ

ನವದೆಹಲಿ: 190ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ವಿಶ್ವ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು, ನಾಗರಿಕ ಸಮಾಜ ಸಂಸ್ಥೆಗಳು, ನಂಬಿಕಸ್ಥ ನಾಯಕರು ಮತ್ತು ಆರೋಗ್ಯ ತಜ್ಞರು ಸರ್ಕಾರಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಲವು ವಿಚಾರಗಳ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. "ಲಾಭದಾಯಕ ಹಾಗೂ ರಾಷ್ಟ್ರೀಯತೆ" ಮುಂದೆ ತರಲು ಎಂದಿಗೂ ಅವಕಾಶ ನೀಡಬಾರದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತೋರಿಸುವ ಮಾನವೀಯತೆ ಅಗತ್ಯತೆಯ ಕುರಿತು ಚರ್ಚಿಸಿದ್ದಾರೆ.

ಲ್ಯಾನ್ಸೆಟ್‌ ಅಧ್ಯಯನದಲ್ಲಿ ಏನಿದೆ?: ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆ ರೋಲ್‌ಔಟ್‌ನ ಮೊದಲ ವರ್ಷದಲ್ಲಿ ಪ್ರತಿ 24 ಸೆಕೆಂಡಿಗೆ ಒಂದು ಸಾವಿಗೆ ಕಾರಣವಾದ ಕೋವಿಡ್, ಹಾಗೂ ಅದರ​​ ತಡೆಗಟ್ಟುವಿಕೆಗಾಗಿ ಕಂಡು ಹಿಡಿದ ಲಸಿಕೆಯಲ್ಲಿನ ಅಸಮಾನತೆಯನ್ನ ಖಂಡಿಸಲಾಗಿದೆ. ಆಗ ಜೀವಗಳನ್ನು ಉಳಿಸಲು ಸಾಧ್ಯವಾಗದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇದು "ಜಗತ್ತಿನ ಆತ್ಮಸಾಕ್ಷಿಯ ಮೇಲಿನ ಗಾಯವಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

ವಿಷಾದ ವ್ಯಕ್ತಪಡಿಸಿದ ವಿಶ್ವ ನಾಯಕರು: ಕೋವಿಡ್-19 ನ್ನು ತಡೆಗಟ್ಟಲು ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗಿದೆ. ಅಪಾರ ಸಾರ್ವಜನಿಕ ನಿಧಿಯೊಂದಿಗೆ ಈ ಲಸಿಕೆಗಳನ್ನ ವಿತರಿಸಲಾಗಿದೆ. ಇದರಿಂದ ಅವೆಲ್ಲ ಈಗ "ಜನರ ಲಸಿಕೆಗಳು, ಜನರ ಪರೀಕ್ಷೆಗಳು ಮತ್ತು ಜನರ ಚಿಕಿತ್ಸೆ'' ಗಾಗಿ ಜನ್ಮ ತಾಳಿದವುಗಳಾಗಿವೆ ಎಂದು ಒಬ್ಬ ವಿಶ್ವ ನಾಯಕರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಜನರ ಅಗತ್ಯವನ್ನು ಆಧರಿಸಿ ಕೋವಿಡ್ -19 ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳನ್ನು ನೀಡುವ ಬದಲು, ಔಷಧೀಯ ಕಂಪನಿಗಳು ಶ್ರೀಮಂತ ದೇಶಗಳಿಗೆ ಮೊದಲು ಲಸಿಕೆಗಳನ್ನು ಮಾರಾಟ ಮಾಡಿದ ಬಗ್ಗೆ ಭಾರಿ ಟೀಕೆಗಳನ್ನು ಹಲವು ವಿಶ್ವ ನಾಯಕರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ತಮ್ಮ ಪತ್ರಗಳಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

6.8 ಮಿಲಿಯನ್‌ಗಿಂತಲೂ ಹೆಚ್ಚು ಜನ ಬಲಿ : ಕೋವಿಡ್​-19 ಕಾಯಿಲೆ ಜಾಗತಿಕವಾಗಿ 6.8 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಈ ಅಂಕಿ- ಅಂಶವು ಕಡಿಮೆ ಅಂದಾಜು ಎಂದು ವ್ಯಾಪಕವಾಗಿ ಭಾವಿಸಲಾಗಿದೆ. ಈ ಪತ್ರದ ಮೂಲಕ ವಿಶ್ವ ನಾಯಕರನ್ನು ಪ್ರತಿಜ್ಞೆ ಮೂಲಕ ಕರೆ ನೀಡಿದ್ದಾರೆ. "ಶ್ರೀಮಂತ ದೇಶಗಳಲ್ಲಿನ ಜನರ ಜೀವನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ದಕ್ಷಿಣದ ಜನರ ಜೀವನವನ್ನು ನಿರ್ಲಕ್ಷಿಸಲಾಗಿದೆ. ಸಾರ್ವಜನಿಕ ಹಣ ಪಡೆದು ವಿಜ್ಞಾನವು ಖಾಸಗಿ ಏಕಸ್ವಾಮ್ಯಗಳ ಹಿಂದೆ ಎಂದಿಗೂ ಬಂಧಿಯಾಗಬಾರದು. ಇನ್ನೆಂದಿಗೂ ಕಂಪನಿಗಳು ಲಾಭದ ಆಸೆಗಾಗಿ ಮಾನವೀಯತೆಯ ಅಗತ್ಯತೆಗಳನ್ನು ಎಂದಿಗೂ ಮರೆಯಬಾರದು ಎಂದಿದ್ದಾರೆ.

ಜೋಸ್ ರಾಮೋಸ್ ಅಭಿಪ್ರಾಯ: ''ಕೋವಿಡ್​-19 ಸಾಂಕ್ರಾಮಿಕದಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಲಸಿಕೆಗಳನ್ನು ನೀಡದೇ ಹಿಂದಕ್ಕೆ ತಳ್ಳಿರುವುದು ಸರಿಯಲ್ಲ. ಈ ಮೂಲಕ ಹೊಸ ತಂತ್ರಜ್ಞಾನಗಳ ಪ್ರಯೋಜನಗಳ ಪ್ರವೇಶವನ್ನು ನಿರಾಕರಿಸಲಾಯಿತು. ಮೂರು ವರ್ಷಗಳ ನಂತರ, ಈ ಅನ್ಯಾಯವು ಪ್ರತಿ ದೇಶದ ಜನರ ಸುರಕ್ಷತೆಯನ್ನು ದುರ್ಬಲಗೊಳಿಸಿದೆ'' ಎಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್ ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್ ಅವರು, ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್: ಈ ಕಳೆದ ಮೂರು ವರ್ಷಗಳು ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸಬೇಕು. ನಮ್ಮ ತಯಾರಿಕೆಯಲ್ಲಿ ಮತ್ತು ಜಾಗತಿಕ ಬೆದರಿಕೆಗಳ ಪ್ರತಿಕ್ರಿಯೆಯಲ್ಲಿ ರಾಷ್ಟ್ರಗಳ ನಡುವಿನ ನಿಜವಾದ ಸಹಕಾರದ ಅಗತ್ಯತೆ ಇದೆ ಎಂದು ವಿಶ್ವಸಂಸ್ಥೆಯ ಎಂಟನೇ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪ್ರಾಸ್ಪೇಟ್​ ಕ್ಯಾನ್ಸರ್​ ತಡೆಗೆ ಮೆಡಿಟರೇನಿಯನ್​ ಡಯಟ್​ ಪರಿಣಾಮಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.