ETV Bharat / bharat

ಹೆಣ್ಣು ಮಗುವೆಂದು ವಿಷ ಹಾಕಿ ಕೊಂದ ಪಾಪಿ ಪೋಷಕರಿಗೆ ಜೀವಾವಧಿ ಶಿಕ್ಷೆ - ಹೆಣ್ಣು ಮಗು ಹತ್ಯೆ ಮಾಡಿದ ತಂದೆ ತಾಯಿ

ಹೆಣ್ಣು ಮಗು ಎಂದು ನಿರ್ಲಕ್ಷ್ಯ ವಹಿಸಿದ್ದಲ್ಲದೆ ಹಾಲಿನಲ್ಲಿ ವಿಷ ಉಣಿಸಿ ಕಂದಮ್ಮನ ಸಾವಿಗೆ ಕಾರಣರಾಗಿದ್ದ ಪೋಷಕರಿಗೆ ಸೆಷನ್ಸ್​ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

court Imposed life imprisonment parents who killed baby girl with poison
ಹೆಣ್ಣು ಮಗುವೆಂದು ವಿಷ ಹಾಕಿ ಕೊಂದ ಪಾಪಿ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​
author img

By

Published : Feb 12, 2021, 3:23 PM IST

Updated : Feb 12, 2021, 3:43 PM IST

ನಲ್ಗೊಂಡಾ (ತೆಲಂಗಾಣ): ಹೆಣ್ಣು ಮಗುವನ್ನು ಸರಿಯಾಗಿ ಪೋಷಿಸದೆ ಅದರ ಸಾವಿಗೆ ಕಾರಣರಾಗಿದ್ದ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಇಲ್ಲಿನ ಜಿಲ್ಲಾ ಪ್ರಿನ್ಸಿಪಲ್ ಮತ್ತು ಸೆಷನ್ಸ್​ ಕೋರ್ಟ್​ ನ್ಯಾಯಾಧೀಶ ಎಂವಿ ರಮೇಶ್, ಹೆಣ್ಣು ಮಗುವಿಗೆ ವಿಷ ಹಾಕಿ ಸಾಯಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಲ್ಗೊಂಡಾ ಜಿಲ್ಲೆಯ ಪಾಪಳ್ಳಿ ಮಂಡಲ್​ನ ರಾಮವತ್ ಜಯರಾಮ್ ಮತ್ತು ನಾಗಮಣಿ ದಂಪತಿ ಈ ಕೃತ್ಯ ಎಸಗಿದ್ದರು,

ಹೆಣ್ಣು ಮಗು ಹುಟ್ಟಿತೆಂದು ಅದರ ಪೋಷಣೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಈ ದೂರಿನ ಮೇರೆಗೆ ದೇವರಕೊಂಡ ಕ್ಲಸ್ಟರ್ ಸಿಡಿಪಿಒ ಬುಕ್ಯ ಸುಕ್ಕುಭಾಯ್ ಮಗುವನ್ನು ರಕ್ಷಿಸಿ 2017ರಲ್ಲಿ ಅನಾಥಾಶ್ರಮಕ್ಕೆ ಸೇರಿಸಿದ್ದರು.

ಇದಾದ ಬಳಿಕ ಜಯರಾಮ್​ ಮತ್ತು ನಾಗಮಣಿ ಅನಾಥಾಶ್ರಮಕ್ಕೆ ತೆರಳಿ ಮಗುವನ್ನು ಮರಳಿ ಕರೆತಂದಿದ್ದರು. 2017ರ ಫೆ. 4ರಂದು ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಆದರೆ ಐಸಿಡಿಎಸ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಮಗು ವಿಷಪ್ರಾಶನದಿಂದ ಮೃತಪಟ್ಟಿದೆ ಎಂದು ಸಾಬೀತಾಯಿತು. ತನಿಖೆಯಲ್ಲಿ ಹಾಲಿನಲ್ಲಿ ವಿಷ ಬೆರಸಿ ಕುಡಿಸಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದರು.

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇದೀಗ ತೀರ್ಪು ಹೊರಡಿಸಿದೆ.

ಇದನ್ನೂ ಓದಿ: ಮನ ತೃಪ್ತಿಗಾಗಿ ಸುಮಾರು 50ಕ್ಕೂ ಹೆಚ್ಚು ಹುಡುಗಿಯರಿಂದ ಅಶ್ಲೀಲ ವಿಡಿಯೋ ಪಡೆದ ಬಾಲಕ!

ನಲ್ಗೊಂಡಾ (ತೆಲಂಗಾಣ): ಹೆಣ್ಣು ಮಗುವನ್ನು ಸರಿಯಾಗಿ ಪೋಷಿಸದೆ ಅದರ ಸಾವಿಗೆ ಕಾರಣರಾಗಿದ್ದ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಇಲ್ಲಿನ ಜಿಲ್ಲಾ ಪ್ರಿನ್ಸಿಪಲ್ ಮತ್ತು ಸೆಷನ್ಸ್​ ಕೋರ್ಟ್​ ನ್ಯಾಯಾಧೀಶ ಎಂವಿ ರಮೇಶ್, ಹೆಣ್ಣು ಮಗುವಿಗೆ ವಿಷ ಹಾಕಿ ಸಾಯಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಲ್ಗೊಂಡಾ ಜಿಲ್ಲೆಯ ಪಾಪಳ್ಳಿ ಮಂಡಲ್​ನ ರಾಮವತ್ ಜಯರಾಮ್ ಮತ್ತು ನಾಗಮಣಿ ದಂಪತಿ ಈ ಕೃತ್ಯ ಎಸಗಿದ್ದರು,

ಹೆಣ್ಣು ಮಗು ಹುಟ್ಟಿತೆಂದು ಅದರ ಪೋಷಣೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಈ ದೂರಿನ ಮೇರೆಗೆ ದೇವರಕೊಂಡ ಕ್ಲಸ್ಟರ್ ಸಿಡಿಪಿಒ ಬುಕ್ಯ ಸುಕ್ಕುಭಾಯ್ ಮಗುವನ್ನು ರಕ್ಷಿಸಿ 2017ರಲ್ಲಿ ಅನಾಥಾಶ್ರಮಕ್ಕೆ ಸೇರಿಸಿದ್ದರು.

ಇದಾದ ಬಳಿಕ ಜಯರಾಮ್​ ಮತ್ತು ನಾಗಮಣಿ ಅನಾಥಾಶ್ರಮಕ್ಕೆ ತೆರಳಿ ಮಗುವನ್ನು ಮರಳಿ ಕರೆತಂದಿದ್ದರು. 2017ರ ಫೆ. 4ರಂದು ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಆದರೆ ಐಸಿಡಿಎಸ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಮಗು ವಿಷಪ್ರಾಶನದಿಂದ ಮೃತಪಟ್ಟಿದೆ ಎಂದು ಸಾಬೀತಾಯಿತು. ತನಿಖೆಯಲ್ಲಿ ಹಾಲಿನಲ್ಲಿ ವಿಷ ಬೆರಸಿ ಕುಡಿಸಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದರು.

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇದೀಗ ತೀರ್ಪು ಹೊರಡಿಸಿದೆ.

ಇದನ್ನೂ ಓದಿ: ಮನ ತೃಪ್ತಿಗಾಗಿ ಸುಮಾರು 50ಕ್ಕೂ ಹೆಚ್ಚು ಹುಡುಗಿಯರಿಂದ ಅಶ್ಲೀಲ ವಿಡಿಯೋ ಪಡೆದ ಬಾಲಕ!

Last Updated : Feb 12, 2021, 3:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.