ETV Bharat / bharat

ಪ್ರಧಾನಿ ಭೇಟಿ ವಿರೋಧಿಸಿ ಕಪ್ಪು ಬಲೂನ್ ಹಾರಿಸಿ ಕಾಂಗ್ರೆಸ್​​ ಪ್ರತಿಭಟನೆ.. ಹಲವರ ಬಂಧನ!

author img

By

Published : Jul 4, 2022, 5:48 PM IST

Updated : Jul 4, 2022, 6:20 PM IST

ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರು ಕಪ್ಪು ಬಲೂನ್​ ಹಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕಪ್ಪು ಬಲೂನ್​
ಕಪ್ಪು ಬಲೂನ್​

ಪಶ್ಚಿಮ ಗೋದಾವರಿ: ಜಿಲ್ಲೆಗೆ ಪ್ರಧಾನಿ ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಲವೆಡೆ ಧರಣಿ ನಡೆಸಿದರು. ಗನ್ನವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೂಡಲೇ ಕಪ್ಪು ಬಲೂನ್​ ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕಿ ಸುಂಕರ ಪದ್ಮಶ್ರೀ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. "ಮೋದಿ ಗೋ ಬ್ಯಾಕ್​" ಎಂದು ಘೋಷಣೆಗಳನ್ನು ಕೂಗಿದರು. ಭೀಮಾವರಂನಲ್ಲಿ ಕಪ್ಪು ಬಲೂನ್ ಹಿಡಿದು ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದರು. ಈ ನಡುವೆ ಪೊಲೀಸ್​ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪ್ರಧಾನಿ ಭೇಟಿ ವಿರೋಧಿಸಿ ಕಪ್ಪು ಬಲೂನ್ ಹಾರಿಸಿ ಕಾಂಗ್ರೆಸ್​​ ಪ್ರತಿಭಟನೆ

ಬಲೂನ್​ ಹಾರಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಂಧಿತ 4 ಕಾಂಗ್ರೆಸ್ ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕೃಷ್ಣಾ ಜಿಲ್ಲಾ ಡಿಎಸ್​ಪಿ ವಿಜಯ್ ಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ

#WATCH | A Congress worker released black balloons moments after PM Modi's chopper took off, during his visit to Andhra Pradesh.

(Source: unverified) pic.twitter.com/ZYRlAyUcZK

— ANI (@ANI) July 4, 2022 " class="align-text-top noRightClick twitterSection" data=" ">

ಪಶ್ಚಿಮ ಗೋದಾವರಿ: ಜಿಲ್ಲೆಗೆ ಪ್ರಧಾನಿ ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಲವೆಡೆ ಧರಣಿ ನಡೆಸಿದರು. ಗನ್ನವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೂಡಲೇ ಕಪ್ಪು ಬಲೂನ್​ ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕಿ ಸುಂಕರ ಪದ್ಮಶ್ರೀ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. "ಮೋದಿ ಗೋ ಬ್ಯಾಕ್​" ಎಂದು ಘೋಷಣೆಗಳನ್ನು ಕೂಗಿದರು. ಭೀಮಾವರಂನಲ್ಲಿ ಕಪ್ಪು ಬಲೂನ್ ಹಿಡಿದು ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದರು. ಈ ನಡುವೆ ಪೊಲೀಸ್​ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪ್ರಧಾನಿ ಭೇಟಿ ವಿರೋಧಿಸಿ ಕಪ್ಪು ಬಲೂನ್ ಹಾರಿಸಿ ಕಾಂಗ್ರೆಸ್​​ ಪ್ರತಿಭಟನೆ

ಬಲೂನ್​ ಹಾರಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಂಧಿತ 4 ಕಾಂಗ್ರೆಸ್ ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕೃಷ್ಣಾ ಜಿಲ್ಲಾ ಡಿಎಸ್​ಪಿ ವಿಜಯ್ ಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ

Last Updated : Jul 4, 2022, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.