ETV Bharat / bharat

ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೆ ಅವಮಾನ; ಬಸ್​​ ಕಂಡಕ್ಟರ್ ಸಸ್ಪೆಂಡ್‌

ಭಾರತ ಅಂಗವಿಕಲ ಕ್ರಿಕೆಟ್​ ತಂಡದ ನಾಯಕ ಸಚಿನ್​ ಶಿವ ಅವರಿಗೆ ಕಂಡಕ್ಟರ್‌ವೊಬ್ಬರು​​ ಬಸ್‌ನಲ್ಲಿ​ ಪ್ರಯಾಣಿಸಲು ಅವಕಾಶವಿಲ್ಲ ಎಂದು ಅವಮಾನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

author img

By

Published : Apr 19, 2023, 5:20 PM IST

Updated : Apr 19, 2023, 5:32 PM IST

conductor-insults-captain-of-indian-cricket
ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೆ ಅವಮಾನ, ಬಸ್​​ ಕಂಡಕ್ಟರ್ ಅಮಾನತು
ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೆ ಅವಮಾನ

ಮಧುರೈ (ತಮಿಳುನಾಡು): ಭಾರತ ಅಂಗವಿಕಲರ ಕ್ರಿಕೆಟ್​ ತಂಡದ ನಾಯಕನಿಗೆ ಬಸ್​ ಕಂಡಕ್ಟರ್​​​ 'ಅಂಗವಿಕಲರಿಗೆ ಬಸ್​ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ' ಎಂದು ನಿರಾಕರಿಸಿ ಅವರ ಜೊತೆ ಅಸಭ್ಯವಾಗಿ ನಡೆದಕೊಂಡ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಸಚಿನ್​ ಶಿವ ಎಂಬವರು ಅವಮಾನ ಅನುಭವಿಸಿದ್ದಾರೆ.

ಸಚಿನ್​ ಶಿವ ನಿನ್ನೆ (ಏಪ್ರಿಲ್​) ರಾತ್ರಿ ಚೆನ್ನೈನ ಕೋಯಂಬೇಡು ಬಸ್​​​ ನಿಲ್ದಾಣದಿಂದ ಮಧುರೈಗೆ ತೆರಳಲು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಶೌಚಾಲಯ ಸೌಲಭ್ಯವುಳ್ಳ ಬಸ್​ನಲ್ಲಿ ಪ್ರಯಾಣಿಸಲು ಬಸ್​ ಹತ್ತಿದ್ದರು. ಆದರೆ, ಬಸ್ ಕಂಡಕ್ಟರ್​​​ ಬಸ್ಸಿನಲ್ಲಿ ವಿಕಲಚೇತನರಿಗೆ ಪ್ರಯಾಣಿಸಲು ಅವಕಾಶವಿಲ್ಲ, ಹತ್ತಬೇಡಿ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ಸಚಿನ್​ ಶಿವ, "ಅಂಗವಿಕಲರು ಇಂತಹ ಬಸ್​​ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ" ಎಂದು ಹೇಳಿದ್ದಾರೆ.

ಅದಕ್ಕೆ ಕಂಡಕ್ಟರ್​​, "ನಾನು ನಿನ್ನ ಮುಖ ಮುರಿಯುತ್ತೇನೆ. ನನಗೆ ಎಲ್ಲವೂ ತಿಳಿದಿದೆ" ಎಂದು ಬೆದರಿಸಿದ್ದಾನೆ. ಅಲ್ಲದೇ ಪೊಲೀಸರ ಮುಂದೆ, "ಮಧುರೈಗೆ ಬಾ ನಿನ್ನ ನೋಡಿಕೋಳ್ಳುತ್ತೇನೆ" ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿ ಸಚಿನ್​ ಅವರನ್ನು ಬಸ್​ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಾರೆ. ನಂತರ ಮತ್ತೊಂದು ಬಸ್​​ನಲ್ಲಿ ಪ್ರಯಾಣಿಸಿ ಸಚಿನ್ ಶಿವ ನಡೆದ ಕಹಿ ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತೀಯ ಅಂಗವಿಕಲರ ಕ್ರಿಕೆಟ್​​​ ತಂಡದ ನಾಯಕನಿಗೇ ಇಂತಹ ಪರಿಸ್ಥಿತಿ ಬಂದರೆ ಸರ್ಕಾರಿ ಬಸ್ಸಿನಲ್ಲಿ ಇತರ ಅಂಗವಿಕಲರು ಮತ್ತು ಅಂಧರ ಗತಿಯೇನು?. ಸರ್ಕಾರಿ ನೌಕರರು ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದು ಸಚಿನ್​ ಪ್ರಶ್ನಿಸಿದ್ದರು. ಇದೇ ವೇಳೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಬಸ್‌ ಕಂಡಕ್ಟರ್​​ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ

ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೆ ಅವಮಾನ

ಮಧುರೈ (ತಮಿಳುನಾಡು): ಭಾರತ ಅಂಗವಿಕಲರ ಕ್ರಿಕೆಟ್​ ತಂಡದ ನಾಯಕನಿಗೆ ಬಸ್​ ಕಂಡಕ್ಟರ್​​​ 'ಅಂಗವಿಕಲರಿಗೆ ಬಸ್​ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ' ಎಂದು ನಿರಾಕರಿಸಿ ಅವರ ಜೊತೆ ಅಸಭ್ಯವಾಗಿ ನಡೆದಕೊಂಡ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಸಚಿನ್​ ಶಿವ ಎಂಬವರು ಅವಮಾನ ಅನುಭವಿಸಿದ್ದಾರೆ.

ಸಚಿನ್​ ಶಿವ ನಿನ್ನೆ (ಏಪ್ರಿಲ್​) ರಾತ್ರಿ ಚೆನ್ನೈನ ಕೋಯಂಬೇಡು ಬಸ್​​​ ನಿಲ್ದಾಣದಿಂದ ಮಧುರೈಗೆ ತೆರಳಲು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಶೌಚಾಲಯ ಸೌಲಭ್ಯವುಳ್ಳ ಬಸ್​ನಲ್ಲಿ ಪ್ರಯಾಣಿಸಲು ಬಸ್​ ಹತ್ತಿದ್ದರು. ಆದರೆ, ಬಸ್ ಕಂಡಕ್ಟರ್​​​ ಬಸ್ಸಿನಲ್ಲಿ ವಿಕಲಚೇತನರಿಗೆ ಪ್ರಯಾಣಿಸಲು ಅವಕಾಶವಿಲ್ಲ, ಹತ್ತಬೇಡಿ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ಸಚಿನ್​ ಶಿವ, "ಅಂಗವಿಕಲರು ಇಂತಹ ಬಸ್​​ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ" ಎಂದು ಹೇಳಿದ್ದಾರೆ.

ಅದಕ್ಕೆ ಕಂಡಕ್ಟರ್​​, "ನಾನು ನಿನ್ನ ಮುಖ ಮುರಿಯುತ್ತೇನೆ. ನನಗೆ ಎಲ್ಲವೂ ತಿಳಿದಿದೆ" ಎಂದು ಬೆದರಿಸಿದ್ದಾನೆ. ಅಲ್ಲದೇ ಪೊಲೀಸರ ಮುಂದೆ, "ಮಧುರೈಗೆ ಬಾ ನಿನ್ನ ನೋಡಿಕೋಳ್ಳುತ್ತೇನೆ" ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿ ಸಚಿನ್​ ಅವರನ್ನು ಬಸ್​ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಾರೆ. ನಂತರ ಮತ್ತೊಂದು ಬಸ್​​ನಲ್ಲಿ ಪ್ರಯಾಣಿಸಿ ಸಚಿನ್ ಶಿವ ನಡೆದ ಕಹಿ ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತೀಯ ಅಂಗವಿಕಲರ ಕ್ರಿಕೆಟ್​​​ ತಂಡದ ನಾಯಕನಿಗೇ ಇಂತಹ ಪರಿಸ್ಥಿತಿ ಬಂದರೆ ಸರ್ಕಾರಿ ಬಸ್ಸಿನಲ್ಲಿ ಇತರ ಅಂಗವಿಕಲರು ಮತ್ತು ಅಂಧರ ಗತಿಯೇನು?. ಸರ್ಕಾರಿ ನೌಕರರು ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದು ಸಚಿನ್​ ಪ್ರಶ್ನಿಸಿದ್ದರು. ಇದೇ ವೇಳೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಬಸ್‌ ಕಂಡಕ್ಟರ್​​ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ

Last Updated : Apr 19, 2023, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.