ETV Bharat / bharat

ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳ ರಚನೆ: ಸಿಎಂ ಗೆಹ್ಲೋಟ್ ಘೋಷಣೆ

author img

By

Published : Mar 17, 2023, 11:05 PM IST

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ 19 ಹೊಸ ಜಿಲ್ಲೆಗಳು ಹಾಗೂ ಮೂರು ಹೊಸ ವಿಭಾಗಗಳನ್ನು ಘೋಷಣೆ ಮಾಡಿದ್ದಾರೆ.

cm-ashok-gehlot-announced-19-new-districts-and-three-new-divisions
ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳ ರಚನೆ: ಸಿಎಂ ಗೆಹ್ಲೋಟ್ ಘೋಷಣೆ

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳ ರಚನೆ ಬಗ್ಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹೊಸ 19 ಜಿಲ್ಲೆಗಳ ಮೂಲಕ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾದರೆ, ಒಟ್ಟಾರೆ 10 ವಿಭಾಗಗಳನ್ನು ರಾಜಸ್ಥಾನ ಹೊಂದಲಿದೆ.

ಶುಕ್ರವಾರ ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿಯು ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿದೆ. ಇದರ ಅಂತಿಮ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಲಾಗಿತ್ತು. ಇದರ ನಂತರ ಈ ಹೊಸ ಜಿಲ್ಲೆಗಳು ಮತ್ತು ವಿಭಾಗಗಳ ರಚನೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಗೆಹ್ಲೋಟ್​ ತಿಳಿಸಿದರು.

ಪ್ರಮುಖವಾಗಿ ರಾಜಸ್ಥಾನವು ದೇಶದ ಅತಿದೊಡ್ಡ ರಾಜ್ಯವಾಗಿದೆ. ಬಹುತೇಕ ಜಿಲ್ಲೆ ಕೇಂದ್ರಗಳ ದೂರವು 100 ಕಿ.ಮೀಗಳಿಗಿಂತ ಹೆಚ್ಚು ಇದೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಹಲವು ಜಿಲ್ಲೆಗಳ ಜನಸಂಖ್ಯೆಯೂ ಅಧಿಕವಾಗಿದೆ. ತುಲನಾತ್ಮಕವಾಗಿ ಚಿಕ್ಕ ಜಿಲ್ಲೆಯಾಗಿರುವುದರಿಂದ ಆಡಳಿತದ ಮೇಲ್ವಿಚಾರಣೆ, ಆಡಳಿತ ನಿರ್ವಹಣೆಯ ಮೇಲಿನ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸುಲಭವಾಗಲಿದೆ ಎಂದು ಹೇಳಿದರು.

ಹೊಸ ವಿಭಾಗಗಳು ಮತ್ತು ಜಿಲ್ಲೆಗಳು: ಸಿಎಂ ಸಿಎಂ ಗೆಹ್ಲೋಟ್​ ಅವರು ಬನ್ಸ್ವಾರಾ, ಪಾಲಿ ಮತ್ತು ಸಿಕರ್ ಹೊಸ ವಿಭಾಗಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಜೈಪುರ ಜಿಲ್ಲೆಯನ್ನು ಜೈಪುರ ಉತ್ತರ, ಜೈಪುರ ದಕ್ಷಿಣ, ಡುಡು ಮತ್ತು ಕೊಟ್‌ಪುಟ್ಲಿ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಸಿಎಂ ಗೆಹ್ಲೋಟ್ ಅವರ ತವರು ಜಿಲ್ಲೆ ಜೋಧ್‌ಪುರವನ್ನು ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ ಮತ್ತು ಫಲೋಡಿ ಎಂದು ವಿಂಗಡನೆ ಮಾಡಲಾಗಿದೆ.

ಸಿಕರ್ ಜಿಲ್ಲೆಯನ್ನು ಬೇವು, ಅಲ್ವಾರ್ ಜಿಲ್ಲೆಯನ್ನು ಖೈರ್ತಾಲ್, ಅಜ್ಮೀರ್ ಜಿಲ್ಲೆಯನ್ನು ಏಡಿ ಮತ್ತು ಬೀವರ್, ಭರತಪುರ್ ಜಿಲ್ಲೆಯನ್ನು ದೀಗ್, ಉದಯಪುರ ಜಿಲ್ಲೆಯನ್ನು ಸಲಂಬರ್, ಭಿಲ್ವಾರ ಜಿಲ್ಲೆಯನ್ನು ಶಹಪುರ, ಸವಾಯಿ ಮಾಧೋಪುರ್ ಜಿಲ್ಲೆಯನ್ನು ಗಂಗಾಪುರ ನಗರ, ನಾಗೌರ್ ಜಿಲ್ಲೆಯನ್ನು ದಿದ್ವಾನ - ಕುಚಮನ್, ಗಂಗಾನಗರ ಜಿಲ್ಲೆಯನ್ನು ಅನುಪ್‌ಘರ್ ಎಂದು ವಿಂಗಡಿಸಿ ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ.

ಇನ್ನು, ಹೊಸ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡಲು ನಿವೃತ್ತ ಐಎಎಸ್ ಅಧಿಕಾರಿ ರಾಮಲುಭಾಯ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ಇತ್ತೀಚೆಗೆ ಈ ಅಧಿಕಾರಾವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೇ ವೇಳೆ ಶೇಖಾವತಿ, ಮಾರ್ವಾರ್ ಮತ್ತು ಮೇವಾರದ ಬುಡಕಟ್ಟು ಪ್ರದೇಶಗಳಿಗೆ ವಿಶೇಷ ಗಮನವನ್ನು ನೀಡಲಾಗಿದೆ.

ಹೊಸ ಜಿಲ್ಲೆಗಳ ಜೊತೆಗೆ ನೀರಾವರಿ ಪ್ರದೇಶ ಹೆಚ್ಚಿಸಲು ಸರ್ಕಾರ ಘೋಷಣೆ ಮಾಡಿದೆ. ಕಾಲುವೆಗಳು ಮತ್ತು ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವ ಉದ್ದೇಶದಿಂದ ವಿವಿಧ ಯೋಜನೆಗಳಿಗೆ ಸಿಎಂ ಗೆಹ್ಲೋಟ್ ಅನುಮೋದಿಸಿದ್ದಾರೆ. ಇದರಲ್ಲಿ ಬನ್ಸ್ವಾರಾ ಜಿಲ್ಲೆಯ ಕಾಗ್ಡಿ ಅಣೆಕಟ್ಟಿನ ನವೀಕರಣ ಸೇರಿ ವಿವಿಧ ಯೋಜನೆಗಳು ಸೇರಿವೆ. ಇಷ್ಟೇ ಅಲ್ಲ, ಉದಯಪುರ ಜಿಲ್ಲೆಯ 367 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು 362.13 ಕೋಟಿ ರೂ.ಗಳ ಯೋಜನೆಗೆ ಸರ್ಕಾರ ಸಮ್ಮತಿಸಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ದುಬಾರಿಯಾಗಲಿದೆ ಮದ್ಯದ ಬೆಲೆ.. ಎಣ್ಣೆ ಮೇಲೆ 10ರೂ ಹಾಲಿನ ಸೆಸ್​​!

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳ ರಚನೆ ಬಗ್ಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹೊಸ 19 ಜಿಲ್ಲೆಗಳ ಮೂಲಕ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾದರೆ, ಒಟ್ಟಾರೆ 10 ವಿಭಾಗಗಳನ್ನು ರಾಜಸ್ಥಾನ ಹೊಂದಲಿದೆ.

ಶುಕ್ರವಾರ ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿಯು ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿದೆ. ಇದರ ಅಂತಿಮ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಲಾಗಿತ್ತು. ಇದರ ನಂತರ ಈ ಹೊಸ ಜಿಲ್ಲೆಗಳು ಮತ್ತು ವಿಭಾಗಗಳ ರಚನೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಗೆಹ್ಲೋಟ್​ ತಿಳಿಸಿದರು.

ಪ್ರಮುಖವಾಗಿ ರಾಜಸ್ಥಾನವು ದೇಶದ ಅತಿದೊಡ್ಡ ರಾಜ್ಯವಾಗಿದೆ. ಬಹುತೇಕ ಜಿಲ್ಲೆ ಕೇಂದ್ರಗಳ ದೂರವು 100 ಕಿ.ಮೀಗಳಿಗಿಂತ ಹೆಚ್ಚು ಇದೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಹಲವು ಜಿಲ್ಲೆಗಳ ಜನಸಂಖ್ಯೆಯೂ ಅಧಿಕವಾಗಿದೆ. ತುಲನಾತ್ಮಕವಾಗಿ ಚಿಕ್ಕ ಜಿಲ್ಲೆಯಾಗಿರುವುದರಿಂದ ಆಡಳಿತದ ಮೇಲ್ವಿಚಾರಣೆ, ಆಡಳಿತ ನಿರ್ವಹಣೆಯ ಮೇಲಿನ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸುಲಭವಾಗಲಿದೆ ಎಂದು ಹೇಳಿದರು.

ಹೊಸ ವಿಭಾಗಗಳು ಮತ್ತು ಜಿಲ್ಲೆಗಳು: ಸಿಎಂ ಸಿಎಂ ಗೆಹ್ಲೋಟ್​ ಅವರು ಬನ್ಸ್ವಾರಾ, ಪಾಲಿ ಮತ್ತು ಸಿಕರ್ ಹೊಸ ವಿಭಾಗಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಜೈಪುರ ಜಿಲ್ಲೆಯನ್ನು ಜೈಪುರ ಉತ್ತರ, ಜೈಪುರ ದಕ್ಷಿಣ, ಡುಡು ಮತ್ತು ಕೊಟ್‌ಪುಟ್ಲಿ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಸಿಎಂ ಗೆಹ್ಲೋಟ್ ಅವರ ತವರು ಜಿಲ್ಲೆ ಜೋಧ್‌ಪುರವನ್ನು ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ ಮತ್ತು ಫಲೋಡಿ ಎಂದು ವಿಂಗಡನೆ ಮಾಡಲಾಗಿದೆ.

ಸಿಕರ್ ಜಿಲ್ಲೆಯನ್ನು ಬೇವು, ಅಲ್ವಾರ್ ಜಿಲ್ಲೆಯನ್ನು ಖೈರ್ತಾಲ್, ಅಜ್ಮೀರ್ ಜಿಲ್ಲೆಯನ್ನು ಏಡಿ ಮತ್ತು ಬೀವರ್, ಭರತಪುರ್ ಜಿಲ್ಲೆಯನ್ನು ದೀಗ್, ಉದಯಪುರ ಜಿಲ್ಲೆಯನ್ನು ಸಲಂಬರ್, ಭಿಲ್ವಾರ ಜಿಲ್ಲೆಯನ್ನು ಶಹಪುರ, ಸವಾಯಿ ಮಾಧೋಪುರ್ ಜಿಲ್ಲೆಯನ್ನು ಗಂಗಾಪುರ ನಗರ, ನಾಗೌರ್ ಜಿಲ್ಲೆಯನ್ನು ದಿದ್ವಾನ - ಕುಚಮನ್, ಗಂಗಾನಗರ ಜಿಲ್ಲೆಯನ್ನು ಅನುಪ್‌ಘರ್ ಎಂದು ವಿಂಗಡಿಸಿ ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ.

ಇನ್ನು, ಹೊಸ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡಲು ನಿವೃತ್ತ ಐಎಎಸ್ ಅಧಿಕಾರಿ ರಾಮಲುಭಾಯ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ಇತ್ತೀಚೆಗೆ ಈ ಅಧಿಕಾರಾವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೇ ವೇಳೆ ಶೇಖಾವತಿ, ಮಾರ್ವಾರ್ ಮತ್ತು ಮೇವಾರದ ಬುಡಕಟ್ಟು ಪ್ರದೇಶಗಳಿಗೆ ವಿಶೇಷ ಗಮನವನ್ನು ನೀಡಲಾಗಿದೆ.

ಹೊಸ ಜಿಲ್ಲೆಗಳ ಜೊತೆಗೆ ನೀರಾವರಿ ಪ್ರದೇಶ ಹೆಚ್ಚಿಸಲು ಸರ್ಕಾರ ಘೋಷಣೆ ಮಾಡಿದೆ. ಕಾಲುವೆಗಳು ಮತ್ತು ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವ ಉದ್ದೇಶದಿಂದ ವಿವಿಧ ಯೋಜನೆಗಳಿಗೆ ಸಿಎಂ ಗೆಹ್ಲೋಟ್ ಅನುಮೋದಿಸಿದ್ದಾರೆ. ಇದರಲ್ಲಿ ಬನ್ಸ್ವಾರಾ ಜಿಲ್ಲೆಯ ಕಾಗ್ಡಿ ಅಣೆಕಟ್ಟಿನ ನವೀಕರಣ ಸೇರಿ ವಿವಿಧ ಯೋಜನೆಗಳು ಸೇರಿವೆ. ಇಷ್ಟೇ ಅಲ್ಲ, ಉದಯಪುರ ಜಿಲ್ಲೆಯ 367 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು 362.13 ಕೋಟಿ ರೂ.ಗಳ ಯೋಜನೆಗೆ ಸರ್ಕಾರ ಸಮ್ಮತಿಸಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ದುಬಾರಿಯಾಗಲಿದೆ ಮದ್ಯದ ಬೆಲೆ.. ಎಣ್ಣೆ ಮೇಲೆ 10ರೂ ಹಾಲಿನ ಸೆಸ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.