ETV Bharat / bharat

ಸಂಸತ್ತಿನಲ್ಲಿಯ ಚರ್ಚೆಯ ಕೊರತೆಯನ್ನು 'ವಿಷಾದದ ಸ್ಥಿತಿ' ಎಂದ ಸಿಜೆಐ ರಮಣ

author img

By

Published : Aug 15, 2021, 3:31 PM IST

Updated : Aug 15, 2021, 3:47 PM IST

ಸರಿಯಾದ ಚರ್ಚೆ ನಡೆಯಲಿಲ್ಲ. ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ನಷ್ಟವಾಗಿದೆ..

ಸಿಜೆಐ ರಮಣ
ಸಿಜೆಐ ರಮಣ

ನವದೆಹಲಿ : ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಂಸತ್ತಿನ ಕಾರ್ಯ ನಿರ್ವಹಣೆಯನ್ನು ಇಂದು ಪ್ರಬಲವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸಂಸತ್ತಿನ ಮುಂಗಾರು ಅಧಿವೇಶನವು ನಿಗದಿತ ಸಮಯಕ್ಕಿಂತ ಎರಡು ದಿನಗಳ ಮೊದಲು ಕೊನೆಗೊಂಡಿರುವುದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಗುಣಮಟ್ಟದ ಚರ್ಚೆಗಳ ಅನುಪಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಿಜೆಐ ರಮಣ

ಸಿಜೆಐ ಸಂಸತ್ತಿನಲ್ಲಿನ ಚರ್ಚೆಯ ಕೊರತೆಯನ್ನು "ವಿಷಾದದ ಸ್ಥಿತಿ" ಎಂದು ಕರೆದಿದ್ದಾರೆ. ಸದನದಲ್ಲಿ "ಸರಿಯಾದ ಚರ್ಚೆ ನಡೆಯಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ನಷ್ಟವಾಗಿದೆ" ಎಂದು ಅವರು ಹೇಳಿದರು.

"ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ, ಅವರಲ್ಲಿ ಹಲವರು ಕಾನೂನು ಬದ್ಧತೆಯಲ್ಲಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರು ವಕೀಲರ ಸಮುದಾಯದಿಂದ ತುಂಬಿದ್ದರು" ಎಂದು ಮುಖ್ಯನ್ಯಾಯಮೂರ್ತಿ ರಮಣ ಹೇಳಿದ್ದಾರೆ.

"ನೀವು ಈಗ ಸದನಗಳಲ್ಲಿ ನೋಡುತ್ತಿರುವ ಪರಿಸ್ಥಿತಿ ದುರದೃಷ್ಟಕರವಾಗಿದೆ. ಆಗಿನ ಕಲಾಪಗಳಲ್ಲಿ ಚರ್ಚೆಗಳು ಬಹಳ ರಚನಾತ್ಮಕವಾಗಿದ್ದವು. ಹಣಕಾಸಿನ ಮಸೂದೆಗಳ ಮೇಲಿನ ಚರ್ಚೆಗಳನ್ನು ನಾನು ನೋಡಿರುವೆ ಮತ್ತು ರಚನಾತ್ಮಕ ಅಂಶಗಳನ್ನು ಚರ್ಚಿಸಲಾಗುತ್ತಿತ್ತು ಎಂದಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನವು ಪೆಗಾಸಸ್ ಸ್ಪೈವೇರ್ ಹಗರಣದ ಬಗೆಗಿನ ಕೋಲಾಹಲದ ನಡುವೆ ಆರಂಭವಾಯಿತು. ಅಡೆತಡೆಗಳ ನಡುವೆಯೂ ಹಲವಾರು ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿತು. ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಸ್ಪೈವೇರ್ ಬಳಕೆಯ ಆರೋಪಗಳ ಕುರಿತು ಚರ್ಚೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು, ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಗಮನ ಸೆಳೆದವು.

ಓದಿ:ಬೀದಿಯಿಂದ ಕೆಲಸದ ಸ್ಥಳದವರೆಗೂ ಮಹಿಳೆಯರಿಗೆ ಗೌರವ, ಸುರಕ್ಷತೆ ಸಿಗಬೇಕು: ಪ್ರಧಾನಿ ಮೋದಿ

ನವದೆಹಲಿ : ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಂಸತ್ತಿನ ಕಾರ್ಯ ನಿರ್ವಹಣೆಯನ್ನು ಇಂದು ಪ್ರಬಲವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸಂಸತ್ತಿನ ಮುಂಗಾರು ಅಧಿವೇಶನವು ನಿಗದಿತ ಸಮಯಕ್ಕಿಂತ ಎರಡು ದಿನಗಳ ಮೊದಲು ಕೊನೆಗೊಂಡಿರುವುದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಗುಣಮಟ್ಟದ ಚರ್ಚೆಗಳ ಅನುಪಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಿಜೆಐ ರಮಣ

ಸಿಜೆಐ ಸಂಸತ್ತಿನಲ್ಲಿನ ಚರ್ಚೆಯ ಕೊರತೆಯನ್ನು "ವಿಷಾದದ ಸ್ಥಿತಿ" ಎಂದು ಕರೆದಿದ್ದಾರೆ. ಸದನದಲ್ಲಿ "ಸರಿಯಾದ ಚರ್ಚೆ ನಡೆಯಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ನಷ್ಟವಾಗಿದೆ" ಎಂದು ಅವರು ಹೇಳಿದರು.

"ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ, ಅವರಲ್ಲಿ ಹಲವರು ಕಾನೂನು ಬದ್ಧತೆಯಲ್ಲಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರು ವಕೀಲರ ಸಮುದಾಯದಿಂದ ತುಂಬಿದ್ದರು" ಎಂದು ಮುಖ್ಯನ್ಯಾಯಮೂರ್ತಿ ರಮಣ ಹೇಳಿದ್ದಾರೆ.

"ನೀವು ಈಗ ಸದನಗಳಲ್ಲಿ ನೋಡುತ್ತಿರುವ ಪರಿಸ್ಥಿತಿ ದುರದೃಷ್ಟಕರವಾಗಿದೆ. ಆಗಿನ ಕಲಾಪಗಳಲ್ಲಿ ಚರ್ಚೆಗಳು ಬಹಳ ರಚನಾತ್ಮಕವಾಗಿದ್ದವು. ಹಣಕಾಸಿನ ಮಸೂದೆಗಳ ಮೇಲಿನ ಚರ್ಚೆಗಳನ್ನು ನಾನು ನೋಡಿರುವೆ ಮತ್ತು ರಚನಾತ್ಮಕ ಅಂಶಗಳನ್ನು ಚರ್ಚಿಸಲಾಗುತ್ತಿತ್ತು ಎಂದಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನವು ಪೆಗಾಸಸ್ ಸ್ಪೈವೇರ್ ಹಗರಣದ ಬಗೆಗಿನ ಕೋಲಾಹಲದ ನಡುವೆ ಆರಂಭವಾಯಿತು. ಅಡೆತಡೆಗಳ ನಡುವೆಯೂ ಹಲವಾರು ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿತು. ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಸ್ಪೈವೇರ್ ಬಳಕೆಯ ಆರೋಪಗಳ ಕುರಿತು ಚರ್ಚೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು, ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಗಮನ ಸೆಳೆದವು.

ಓದಿ:ಬೀದಿಯಿಂದ ಕೆಲಸದ ಸ್ಥಳದವರೆಗೂ ಮಹಿಳೆಯರಿಗೆ ಗೌರವ, ಸುರಕ್ಷತೆ ಸಿಗಬೇಕು: ಪ್ರಧಾನಿ ಮೋದಿ

Last Updated : Aug 15, 2021, 3:47 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.