ETV Bharat / bharat

ನಕಲಿ ಬ್ಯಾಂಕ್​ ಸೃಜಿಸಿ ಗ್ರಾಹಕರ 2 ಕೋಟಿಗೂ ಅಧಿಕ ಹಣ ನುಂಗಿದ ವಂಚಕರು

ತಮಿಳುನಾಡಿನಲ್ಲಿ ನಕಲಿ ಬ್ಯಾಂಕ್ ಸೃಷ್ಟಿಸಿ ಜನರಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ನಡೆದಿದೆ. 3 ಸಾವಿರಕ್ಕೂ ಅಧಿಕ ಜನರ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

author img

By

Published : Nov 9, 2022, 4:57 PM IST

cheat-customers-by-creating-fake-bank-in-tamil-nadu
ನಕಲಿ ಬ್ಯಾಂಕ್​ ಸೃಜಿಸಿ ಗ್ರಾಹಕರ ₹2 ಕೋಟಿಗೂ ಅಧಿಕ ಹಣ ನುಂಗಿದ ವಂಚಕರು

ಚೆನ್ನೈ(ತಮಿಳುನಾಡು): ನಕಲಿ ಗ್ರಾಮೀಣ ಮತ್ತು ಕೃಷಿ ಸಹಕಾರಿ ಬ್ಯಾಂಕ್​ ತೆರೆದು ಗ್ರಾಹಕರನ್ನು ವಂಚಿಸಿದ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ವಿವಿಧೆಡೆ ಬ್ಯಾಂಕ್ ಶಾಖೆಗಳನ್ನು ಆರಂಭಿಸಿ 2 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಬ್ಯಾಂಕ್​ ಖಾತೆಯಲ್ಲಿದ್ದ 57 ಲಕ್ಷ ಹಣವನ್ನು ಜಪ್ತಿ ಮಾಡಿ, ಬ್ಯಾಂಕ್​ ಮಾಲೀಕನನ್ನು ಬಂಧಿಸಲಾಗಿದೆ.

6 ವರ್ಷದ ಹಿಂದೆ ಬ್ಯಾಂಕ್​ ಆರಂಭ: ಬ್ಯಾಂಕ್​ ಆರಂಭಿಸಲು ರಿಸರ್ವ್ ಬ್ಯಾಂಕ್​ ಆಫ್​ ಇಂಡಿಯಾಗೆ ದಾಖಲೆ ಸಲ್ಲಿಸಬೇಕು. ಬಳಿಕ ಲೀಡ್​ ಬ್ಯಾಂಕಿನಿಂದ ಅನುಮೋದನೆ ಪಡೆದು, ಬ್ಯಾಂಕ್​ ಆರಂಭಿಸಬೇಕು. ಈ ಎಲ್ಲ ದಾಖಲೆಗಳನ್ನು ನಕಲು ಮಾಡಿದ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಚಂದ್ರಬೋಸ್ ಎಂಬಾತ ತಮಿಳುನಾಡಿನ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾನೆ.

2016 ರಲ್ಲಿ ಸಹಕಾರಿ ಸಂಘದ ರೂಪದಲ್ಲಿ ನಕಲಿ ಬ್ಯಾಂಕ್​ ಸೃಷ್ಟಿಸಿ, ಆಕರ್ಷಕ ಸಾಲ ಸೌಲಭ್ಯಗಳನ್ನು ಘೋಷಿಸಿ ಜನರು ಹಣ ಡೆಪಾಸಿಟ್​​ ಮಾಡುವಂತೆ ನೋಡಿದ್ದಾನೆ. ಬ್ಯಾಂಕ್​ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು, ಪಾಸ್‌ಬುಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಚಿನ್ನಾಭರಣಗಳು ಮತ್ತು ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿಗಳು ನಡೆದಿವೆ. ತಿರುಮಂಗಲಂ, ನಾಮಕ್ಕಲ್, ತಿರುವಣ್ಣಾಮಲೈ, ವಿರುಧಾಚಲಂ, ಪೆರಂಬದೂರ್ ಮತ್ತು ಸೇಲಂ ಸೇರಿದಂತೆ 10 ಕ್ಕೂ ಹೆಚ್ಚು ಕಡೆ ಶಾಖೆಗಳನ್ನು ಸ್ಥಾಪಿಸಲಾಗಿದೆ.

3 ಸಾವಿರ ಗ್ರಾಹಕರಿಗೆ ವಂಚನೆ: ಬ್ಯಾಂಕ್ ಹೆಸರಿನಲ್ಲಿ ಡೆಪಾಸಿಟ್​ ಮಾಡಿದ 3 ಸಾವಿರ ಗ್ರಾಹಕರ 2 ಕೋಟಿ ರೂಪಾಯಿಗೂ ಅಧಿಕ ಹಣ ನುಂಗಲಾಗಿದೆ. ಬ್ಯಾಂಕ್​ ಸಿಬ್ಬಂದಿ ಹೇರಳ ಸಾಲ ಸೌಲಭ್ಯ ಘೋಷಿಸಿದಾಗ ಅನುಮಾನ ಬಂದ ವ್ಯಕ್ತಿಯೊಬ್ಬರು ದೂರು ನೀಡಿದ್ದು, ತನಿಖೆ ನಡೆಸಿದಾಗ ಕರ್ಮಕಾಂಡ ಬಯಲಾಗಿದೆ.

ತನಿಖೆ ನಡೆಸಿದ ಪೊಲೀಸರು ಬ್ಯಾಂಕ್​ನ ಬಿಳಿಲುಗಳು ಎಲ್ಲೆಲ್ಲಿ ಹರಡಿವೆ ಎಂಬುದನ್ನು ಪತ್ತೆ ಮಾಡಿದಾಗ ರಾಜ್ಯದ ಉದ್ದಕ್ಕೂ ಈ ವಂಚನೆ ಜಾಲ ಬೀಸಿದ್ದು ಗೊತ್ತಾಗಿದೆ. ತಕ್ಷಣವೇ ಬ್ಯಾಂಕ್​ನ ಖಾತೆಯಲ್ಲಿದ್ದ 57 ಲಕ್ಷ ರೂಪಾಯಿ ಜನರ ಹಣವನ್ನು ಫ್ರೀಜ್ ಮಾಡಲಾಗಿದೆ. ಬ್ಯಾಂಕ್​ನಲ್ಲಿ ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಥೇಟ್​ ಬ್ಯಾಂಕ್ ಮಾದರಿಯಲ್ಲೇ ವಹಿವಾಟು ನಡೆಸುತ್ತಿದ್ದ ವಂಚಕರು ಯಾವುದೇ ಅನುಮಾನ ಬಾರದಂತೆ ನೋಡಿಕೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದಿದ್ದೇವೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ನಕಲಿ ಬ್ಯಾಂಕ್​ ಮಾಲೀಕನ ಬಂಧನ: ಬ್ಯಾಂಕ್ ಅಸ್ತಿತ್ವಕ್ಕೆ ತಂದ ಆರೋಪಿ ಚಂದ್ರಬೋಸ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್​ ನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ವಂಚನೆಯಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ಸಾಗರೋತ್ತರ ಶಿಕ್ಷಣದ ವೆಚ್ಚ ಹೆಚ್ಚುತ್ತಿದೆಯೇ?: ಬ್ಯಾಂಕ್ ಸಾಲ ತೆಗೆದುಕೊಳ್ಳುವುದು ಹೇಗೆ ?

ಚೆನ್ನೈ(ತಮಿಳುನಾಡು): ನಕಲಿ ಗ್ರಾಮೀಣ ಮತ್ತು ಕೃಷಿ ಸಹಕಾರಿ ಬ್ಯಾಂಕ್​ ತೆರೆದು ಗ್ರಾಹಕರನ್ನು ವಂಚಿಸಿದ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ವಿವಿಧೆಡೆ ಬ್ಯಾಂಕ್ ಶಾಖೆಗಳನ್ನು ಆರಂಭಿಸಿ 2 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಬ್ಯಾಂಕ್​ ಖಾತೆಯಲ್ಲಿದ್ದ 57 ಲಕ್ಷ ಹಣವನ್ನು ಜಪ್ತಿ ಮಾಡಿ, ಬ್ಯಾಂಕ್​ ಮಾಲೀಕನನ್ನು ಬಂಧಿಸಲಾಗಿದೆ.

6 ವರ್ಷದ ಹಿಂದೆ ಬ್ಯಾಂಕ್​ ಆರಂಭ: ಬ್ಯಾಂಕ್​ ಆರಂಭಿಸಲು ರಿಸರ್ವ್ ಬ್ಯಾಂಕ್​ ಆಫ್​ ಇಂಡಿಯಾಗೆ ದಾಖಲೆ ಸಲ್ಲಿಸಬೇಕು. ಬಳಿಕ ಲೀಡ್​ ಬ್ಯಾಂಕಿನಿಂದ ಅನುಮೋದನೆ ಪಡೆದು, ಬ್ಯಾಂಕ್​ ಆರಂಭಿಸಬೇಕು. ಈ ಎಲ್ಲ ದಾಖಲೆಗಳನ್ನು ನಕಲು ಮಾಡಿದ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಚಂದ್ರಬೋಸ್ ಎಂಬಾತ ತಮಿಳುನಾಡಿನ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾನೆ.

2016 ರಲ್ಲಿ ಸಹಕಾರಿ ಸಂಘದ ರೂಪದಲ್ಲಿ ನಕಲಿ ಬ್ಯಾಂಕ್​ ಸೃಷ್ಟಿಸಿ, ಆಕರ್ಷಕ ಸಾಲ ಸೌಲಭ್ಯಗಳನ್ನು ಘೋಷಿಸಿ ಜನರು ಹಣ ಡೆಪಾಸಿಟ್​​ ಮಾಡುವಂತೆ ನೋಡಿದ್ದಾನೆ. ಬ್ಯಾಂಕ್​ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು, ಪಾಸ್‌ಬುಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಚಿನ್ನಾಭರಣಗಳು ಮತ್ತು ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿಗಳು ನಡೆದಿವೆ. ತಿರುಮಂಗಲಂ, ನಾಮಕ್ಕಲ್, ತಿರುವಣ್ಣಾಮಲೈ, ವಿರುಧಾಚಲಂ, ಪೆರಂಬದೂರ್ ಮತ್ತು ಸೇಲಂ ಸೇರಿದಂತೆ 10 ಕ್ಕೂ ಹೆಚ್ಚು ಕಡೆ ಶಾಖೆಗಳನ್ನು ಸ್ಥಾಪಿಸಲಾಗಿದೆ.

3 ಸಾವಿರ ಗ್ರಾಹಕರಿಗೆ ವಂಚನೆ: ಬ್ಯಾಂಕ್ ಹೆಸರಿನಲ್ಲಿ ಡೆಪಾಸಿಟ್​ ಮಾಡಿದ 3 ಸಾವಿರ ಗ್ರಾಹಕರ 2 ಕೋಟಿ ರೂಪಾಯಿಗೂ ಅಧಿಕ ಹಣ ನುಂಗಲಾಗಿದೆ. ಬ್ಯಾಂಕ್​ ಸಿಬ್ಬಂದಿ ಹೇರಳ ಸಾಲ ಸೌಲಭ್ಯ ಘೋಷಿಸಿದಾಗ ಅನುಮಾನ ಬಂದ ವ್ಯಕ್ತಿಯೊಬ್ಬರು ದೂರು ನೀಡಿದ್ದು, ತನಿಖೆ ನಡೆಸಿದಾಗ ಕರ್ಮಕಾಂಡ ಬಯಲಾಗಿದೆ.

ತನಿಖೆ ನಡೆಸಿದ ಪೊಲೀಸರು ಬ್ಯಾಂಕ್​ನ ಬಿಳಿಲುಗಳು ಎಲ್ಲೆಲ್ಲಿ ಹರಡಿವೆ ಎಂಬುದನ್ನು ಪತ್ತೆ ಮಾಡಿದಾಗ ರಾಜ್ಯದ ಉದ್ದಕ್ಕೂ ಈ ವಂಚನೆ ಜಾಲ ಬೀಸಿದ್ದು ಗೊತ್ತಾಗಿದೆ. ತಕ್ಷಣವೇ ಬ್ಯಾಂಕ್​ನ ಖಾತೆಯಲ್ಲಿದ್ದ 57 ಲಕ್ಷ ರೂಪಾಯಿ ಜನರ ಹಣವನ್ನು ಫ್ರೀಜ್ ಮಾಡಲಾಗಿದೆ. ಬ್ಯಾಂಕ್​ನಲ್ಲಿ ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಥೇಟ್​ ಬ್ಯಾಂಕ್ ಮಾದರಿಯಲ್ಲೇ ವಹಿವಾಟು ನಡೆಸುತ್ತಿದ್ದ ವಂಚಕರು ಯಾವುದೇ ಅನುಮಾನ ಬಾರದಂತೆ ನೋಡಿಕೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದಿದ್ದೇವೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ನಕಲಿ ಬ್ಯಾಂಕ್​ ಮಾಲೀಕನ ಬಂಧನ: ಬ್ಯಾಂಕ್ ಅಸ್ತಿತ್ವಕ್ಕೆ ತಂದ ಆರೋಪಿ ಚಂದ್ರಬೋಸ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್​ ನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ವಂಚನೆಯಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ಸಾಗರೋತ್ತರ ಶಿಕ್ಷಣದ ವೆಚ್ಚ ಹೆಚ್ಚುತ್ತಿದೆಯೇ?: ಬ್ಯಾಂಕ್ ಸಾಲ ತೆಗೆದುಕೊಳ್ಳುವುದು ಹೇಗೆ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.