ETV Bharat / bharat

ಶಿಕ್ಷಕರ ನೇಮಕಾತಿ ಹಗರಣದ ಹಣ ವಿದೇಶಿ ಕಂಪನಿಗಳಲ್ಲಿ ಹೂಡಿದ ಆರೋಪಿಗಳು!

author img

By

Published : Mar 25, 2023, 7:29 PM IST

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಹಣವನ್ನು ಆರೋಪಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿದ್ದಾರೆ ಎಂದು ಸಿಬಿಐ ಬಹಿರಂಗಪಡಿಸಿದೆ.

cbi-claims-money-from-teacher-recruitment-scam-invested-in-other-countries
ಶಿಕ್ಷಕರ ನೇಮಕಾತಿ ಹಗರಣದ ಹಣ ಸಂಬಂಧಿಕರ ಹೆಸರಿನಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿದ ಆರೋಪಿಗಳು

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಂಶ ಹೊರಬಿದ್ದಿದೆ. ಈ ಹಗರಣದ ಹಣವನ್ನು ಆರೋಪಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಗಳು ತಿಳಿಸಿವೆ.

ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ನಡೆಸಿದ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಆರೋಪ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವೂ ಕೇಳಿ ಬಂದಿದ್ದು, ಈ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆ ಕೈಗೊಂಡಿದೆ. ಇದೀಗ ವಿದೇಶಿ ಕಂಪನಿಗಳಲ್ಲಿ ಆರೋಪಿಗಳು ಹಣ ಹೂಡಿಕೆ ಮಾಡಿದ್ದಾರೆ. ಇಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿ ಹಗರಣದ ಹಣವನ್ನು ಆರೋಪಿಗಳು ಲಪಟಾಯಿಸಿದ್ದಾರೆ ಎಂದು ತನಿಖಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಸುಬಿರೇಶ್ ಭಟ್ಟಾಚಾರ್ಯ ನಿಕಟ ಸಂಬಂಧಿ ಹೆಸರು ತಳುಕು: ಆದರೆ, ಇಂತಹ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದೇ ವೇಳೆ ಸಿಬಿಐ ಮೂಲಗಳ ಪ್ರಕಾರ, ಎಸ್‌ಎಸ್‌ಸಿ ಮಾಜಿ ಅಧ್ಯಕ್ಷ ಸುಬಿರೇಶ್ ಭಟ್ಟಾಚಾರ್ಯ ಅವರ ನಿಕಟ ಸಂಬಂಧಿಯ ಹೆಸರು ತನಿಖೆಯ ಸಮಯದಲ್ಲಿ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಭಟ್ಟಾಚಾರ್ಯ, ಉತ್ತರ ಬಂಗಾಳ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶೀಘ್ರದಲ್ಲೇ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯಲ್ಲಿ ಸುಬಿರೇಶ್ ಭಟ್ಟಾಚಾರ್ಯ ಅವರ ಹತ್ತಿರದ ಸಂಬಂಧಿಯನ್ನು ವಿಚಾರಣೆಗೆ ಕರೆಸಲಾಗುವುದು. ಇದಾದ ನಂತರವೇ ಮಾತ್ರ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗುವುದು. ಭಟ್ಟಾಚಾರ್ಯ ನಿಕಟ ಸಂಬಂಧಿಯ ವಿಚಾರಣೆಯಿಂದ ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: SSC recruitment scam: ಪಾರ್ಥ ಸಾರಥಿ- ಅರ್ಪಿತಾ ಸಹಭಾಗಿತ್ವದ ಕಂಪನಿಗಳು ಪತ್ತೆ

ಜೊತೆಗೆ ಇವರ ವಿಚಾರಣೆಯ ಬಳಿಕ ತನಿಖೆಯ ಭವಿಷ್ಯದ ಹಾದಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸದೆ. ಇದೇ ವೇಳೆ ವಿದೇಶಗಳಿಗೆ ಎಷ್ಟು ಹಣ ಹರಿದು ಹೋಗಿದೆ ಎಂಬ ತನಿಖೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಸಿಬಿಐ ಅಧಿಕಾರಿಗಳು, ಕೋಲ್ಕತ್ತಾ ಸೇರಿದಂತೆ ಸುಬೀರೇಶ್ ಭಟ್ಟಾಚಾರ್ಯ ಅವರ ಸೇರಿದ ಹಲವು ಮನೆಗಳನ್ನು ಶೋಧ ಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಸುಬಿರೇಶ್​ರನ್ನು ಬಂಧಿಸಲಾಗಿತ್ತು ಎಂದೂ ಸಿಬಿಐ ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಕಪ್ಪುಹಣವನ್ನು ವಿವಿಧ ರೀತಿಯಲ್ಲಿ ಬಿಳಿ ಸಂಪತ್ತನ್ನಾಗಿ ಪರಿವರ್ತಿಸಲಾಗಿತ್ತು ಎಂದು ಕೇಂದ್ರ ಸಂಸ್ಥೆಯ ತನಿಖೆಯು ಈಗಾಗಲೇ ಬಹಿರಂಗವಾಗಿದೆ. ಇದೇ ನೇಮಕಾತಿ ಹಗರಣದಲ್ಲಿ ಈ ಹಿಂದೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನೂ ಬಂಧಿಸಲಾಗಿದೆ. ಆಗ ಅರೆಸ್ಟ್​ ಮೆಮೋದಲ್ಲಿ ಇಡಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಿತ್ತು.

ಇದನ್ನೂ ಓದಿ: ಪಾರ್ಥ ಚಟರ್ಜಿ ಅರೆಸ್ಟ್​ ಮೆಮೋದಲ್ಲಿ ಸಿಎಂ ಮಮತಾ ಹೆಸರು, ಮೊಬೈಲ್ ನಂಬರ್​!

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಂಶ ಹೊರಬಿದ್ದಿದೆ. ಈ ಹಗರಣದ ಹಣವನ್ನು ಆರೋಪಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಗಳು ತಿಳಿಸಿವೆ.

ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ನಡೆಸಿದ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಆರೋಪ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವೂ ಕೇಳಿ ಬಂದಿದ್ದು, ಈ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆ ಕೈಗೊಂಡಿದೆ. ಇದೀಗ ವಿದೇಶಿ ಕಂಪನಿಗಳಲ್ಲಿ ಆರೋಪಿಗಳು ಹಣ ಹೂಡಿಕೆ ಮಾಡಿದ್ದಾರೆ. ಇಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿ ಹಗರಣದ ಹಣವನ್ನು ಆರೋಪಿಗಳು ಲಪಟಾಯಿಸಿದ್ದಾರೆ ಎಂದು ತನಿಖಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಸುಬಿರೇಶ್ ಭಟ್ಟಾಚಾರ್ಯ ನಿಕಟ ಸಂಬಂಧಿ ಹೆಸರು ತಳುಕು: ಆದರೆ, ಇಂತಹ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದೇ ವೇಳೆ ಸಿಬಿಐ ಮೂಲಗಳ ಪ್ರಕಾರ, ಎಸ್‌ಎಸ್‌ಸಿ ಮಾಜಿ ಅಧ್ಯಕ್ಷ ಸುಬಿರೇಶ್ ಭಟ್ಟಾಚಾರ್ಯ ಅವರ ನಿಕಟ ಸಂಬಂಧಿಯ ಹೆಸರು ತನಿಖೆಯ ಸಮಯದಲ್ಲಿ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಭಟ್ಟಾಚಾರ್ಯ, ಉತ್ತರ ಬಂಗಾಳ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶೀಘ್ರದಲ್ಲೇ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯಲ್ಲಿ ಸುಬಿರೇಶ್ ಭಟ್ಟಾಚಾರ್ಯ ಅವರ ಹತ್ತಿರದ ಸಂಬಂಧಿಯನ್ನು ವಿಚಾರಣೆಗೆ ಕರೆಸಲಾಗುವುದು. ಇದಾದ ನಂತರವೇ ಮಾತ್ರ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗುವುದು. ಭಟ್ಟಾಚಾರ್ಯ ನಿಕಟ ಸಂಬಂಧಿಯ ವಿಚಾರಣೆಯಿಂದ ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: SSC recruitment scam: ಪಾರ್ಥ ಸಾರಥಿ- ಅರ್ಪಿತಾ ಸಹಭಾಗಿತ್ವದ ಕಂಪನಿಗಳು ಪತ್ತೆ

ಜೊತೆಗೆ ಇವರ ವಿಚಾರಣೆಯ ಬಳಿಕ ತನಿಖೆಯ ಭವಿಷ್ಯದ ಹಾದಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸದೆ. ಇದೇ ವೇಳೆ ವಿದೇಶಗಳಿಗೆ ಎಷ್ಟು ಹಣ ಹರಿದು ಹೋಗಿದೆ ಎಂಬ ತನಿಖೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಸಿಬಿಐ ಅಧಿಕಾರಿಗಳು, ಕೋಲ್ಕತ್ತಾ ಸೇರಿದಂತೆ ಸುಬೀರೇಶ್ ಭಟ್ಟಾಚಾರ್ಯ ಅವರ ಸೇರಿದ ಹಲವು ಮನೆಗಳನ್ನು ಶೋಧ ಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಸುಬಿರೇಶ್​ರನ್ನು ಬಂಧಿಸಲಾಗಿತ್ತು ಎಂದೂ ಸಿಬಿಐ ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಕಪ್ಪುಹಣವನ್ನು ವಿವಿಧ ರೀತಿಯಲ್ಲಿ ಬಿಳಿ ಸಂಪತ್ತನ್ನಾಗಿ ಪರಿವರ್ತಿಸಲಾಗಿತ್ತು ಎಂದು ಕೇಂದ್ರ ಸಂಸ್ಥೆಯ ತನಿಖೆಯು ಈಗಾಗಲೇ ಬಹಿರಂಗವಾಗಿದೆ. ಇದೇ ನೇಮಕಾತಿ ಹಗರಣದಲ್ಲಿ ಈ ಹಿಂದೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನೂ ಬಂಧಿಸಲಾಗಿದೆ. ಆಗ ಅರೆಸ್ಟ್​ ಮೆಮೋದಲ್ಲಿ ಇಡಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಿತ್ತು.

ಇದನ್ನೂ ಓದಿ: ಪಾರ್ಥ ಚಟರ್ಜಿ ಅರೆಸ್ಟ್​ ಮೆಮೋದಲ್ಲಿ ಸಿಎಂ ಮಮತಾ ಹೆಸರು, ಮೊಬೈಲ್ ನಂಬರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.