ETV Bharat / bharat

ಗಂಗಾನದಿಯಲ್ಲಿ 17 ಟ್ರಕ್​​ಗಳನ್ನು​ ಹೊತ್ತು ಸಾಗುತ್ತಿದ್ದ ಕಾರ್ಗೋ ಹಡಗು ನೀರುಪಾಲು!

author img

By

Published : Mar 25, 2022, 10:36 AM IST

Updated : Mar 25, 2022, 11:48 AM IST

ಜಾರ್ಖಂಡ್​ನ ಸಾಹಿಬ್‌ಗಂಜ್‌ನಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಗಂಗಾನದಿಯಲ್ಲಿ 17 ಹೈವಾ ಟ್ರಕ್‌ಗಳನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಕಾರ್ಗೋ ಹಡಗು ಭಾಗಶಃ ಮುಳುಗಿದ್ದು, ಅನೇಕ ಜನರು ನೀರುಪಾಲಾಗಿರುವ ಭೀತಿ ಎದುರಾಗಿದೆ.

Cargo ship capsizes in Sahibganj  Cargo ship capsizes in Jharkhand  Cargo ship capsizes news  Jharkhand ganga river news  ಸಾಹಿಬ್​ಗಂಜ್​ನಲ್ಲಿ ಟ್ರಕ್​ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು  ಜಾರ್ಖಂಡ್​ನಲ್ಲಿ ಟ್ರಕ್​ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು  ಕಾರ್ಗೋ ಹಡುಗು ಮುಳುಗಿದ ಸುದ್ದಿ  ಜಾರ್ಖಂಡ್​ನ ಗಂಗಾ ನದಿ ಸುದ್ದಿ
ಟ್ರಕ್​ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು

ಸಾಹಿಬ್‌ಗಂಜ್: ಅಂತಾರಾಜ್ಯ ದೋಣಿ ಸೇವೆ ಘಾಟ್ ಸಾಹಿಬ್‌ಗಂಜ್ ಮತ್ತು ಮಣಿಹಾರಿ ನಡುವೆ ಸಾಗುತ್ತಿದ್ದ ಕಾರ್ಗೋ ಹಡಗು ಭಾಗಶಃ ಮುಳುಗಿದೆ. ಗುರುವಾರ ರಾತ್ರಿ 12 ರಿಂದ 1:00 ರ (ಇಂದು ನಸುಕಿನ ಜಾವ) ನಡುವೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ದುರ್ಘಟನೆಯಲ್ಲಿ ಕಲ್ಲುಗಳು ಮತ್ತು ಚಿಪ್ಸ್ ತುಂಬಿದ 9ಕ್ಕೂ ಹೆಚ್ಚು ಟ್ರಕ್​ಗಳು ಹಾಗೂ ಅನೇಕ ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಟ್ರಕ್​ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು

ಓದಿ: ಕೆಎಎಸ್ ಅಧಿಕಾರಿ ಮನೆ, ಟ್ರಸ್ಟ್, ಶಾಲೆ ಮೇಲೆ ದಾಳಿ ನಡೆಸಿದ ಎಸಿಬಿ!

ಏನಿದು ಘಟನೆ: ಸಿಕ್ಕಿರುವ ಮಾಹಿತಿ ಪ್ರಕಾರ, ರಾತ್ರಿ ಹೆಚ್ಚು ಟ್ರಿಪ್ ಹೊಡೆದು ಹಣ ಗಳಿಸಲು ಯತ್ನಿಸಿದ್ದಾರೆ ಎಂಬ ಅನುಮಾನ ಮೂಡಿದೆ. ರಾತ್ರಿ 12ರಿಂದ 1 ಗಂಟೆಯವರೆಗೆ ಗರಂ ಘಾಟ್‌ನಿಂದ ಸರಕು ಸಾಗಣೆ ಹಡಗು ಕಾರ್ಗೋದಲ್ಲಿ 17 ಓವರ್‌ಲೋಡ್ ಟ್ರಕ್‌ ತುಂಬಿಕೊಂಡು ಮಣಿಹಾರಿಗೆ ಸಾಗುತ್ತಿತ್ತು. ಗಂಗೆಯ ಮಧ್ಯದಲ್ಲಿ ಬಲವಾದ ಗಾಳಿ ಬೀಸಿದ ಕಾರಣ ಹಡಗು ನಿಯಂತ್ರಣ ಕಳೆದುಕೊಂಡಿದ್ದು, ಅರ್ಧ ಭಾಗ ನೀರಿನಲ್ಲಿ ಮುಳುಗಿದೆ. ಈ ವೇಳೆ 9 ಟ್ರಕ್‌ಗಳು ಗಂಗಾನದಿಯ ಮಧ್ಯದಲ್ಲಿ ನೀರುಪಾಲಾಗಿವೆ. ಅದರ ಜೊತೆ ಡ್ರೈವರ್​ ಮತ್ತು ಕ್ಲಿನರ್​ ಸೇರಿದಂತೆ ಹಲವು ಮಂದಿ ನೀರುಪಾಲು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಓದಿ: ನ್ಯಾಯಾಲಯ ತನ್ನೆಲ್ಲ ಮಿತಿಗಳನ್ನು ಮೀರಿದೆ: ಅಧಿಕಾರ ವಿಕೇಂದ್ರೀಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಜಗನ್​ ಘೋಷಣೆ

ಇನ್ನು ಈ ಸುದ್ದಿ ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜನರನ್ನು ರಕ್ಷಿಸಲು ರಕ್ಷಣಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾತ್ರಿ ವೇಳೆ ಸರಕು ಸಾಗಣೆ ನೌಕೆ ನಡೆಸುವುದು ಕಾನೂನು ಬಾಹಿರವಾಗಿದೆ. ದೊಡ್ಡ ದುರಂತವಾಗಿರುವ ಕಾರಣಕ್ಕೆ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.


ಸಾಹಿಬ್‌ಗಂಜ್: ಅಂತಾರಾಜ್ಯ ದೋಣಿ ಸೇವೆ ಘಾಟ್ ಸಾಹಿಬ್‌ಗಂಜ್ ಮತ್ತು ಮಣಿಹಾರಿ ನಡುವೆ ಸಾಗುತ್ತಿದ್ದ ಕಾರ್ಗೋ ಹಡಗು ಭಾಗಶಃ ಮುಳುಗಿದೆ. ಗುರುವಾರ ರಾತ್ರಿ 12 ರಿಂದ 1:00 ರ (ಇಂದು ನಸುಕಿನ ಜಾವ) ನಡುವೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ದುರ್ಘಟನೆಯಲ್ಲಿ ಕಲ್ಲುಗಳು ಮತ್ತು ಚಿಪ್ಸ್ ತುಂಬಿದ 9ಕ್ಕೂ ಹೆಚ್ಚು ಟ್ರಕ್​ಗಳು ಹಾಗೂ ಅನೇಕ ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಟ್ರಕ್​ಗಳನ್ನು ಹೊತ್ತು ಸಾಗುತ್ತಿದ್ದ ಕಾರ್ಗೋ ಹಡುಗು ನೀರುಪಾಲು

ಓದಿ: ಕೆಎಎಸ್ ಅಧಿಕಾರಿ ಮನೆ, ಟ್ರಸ್ಟ್, ಶಾಲೆ ಮೇಲೆ ದಾಳಿ ನಡೆಸಿದ ಎಸಿಬಿ!

ಏನಿದು ಘಟನೆ: ಸಿಕ್ಕಿರುವ ಮಾಹಿತಿ ಪ್ರಕಾರ, ರಾತ್ರಿ ಹೆಚ್ಚು ಟ್ರಿಪ್ ಹೊಡೆದು ಹಣ ಗಳಿಸಲು ಯತ್ನಿಸಿದ್ದಾರೆ ಎಂಬ ಅನುಮಾನ ಮೂಡಿದೆ. ರಾತ್ರಿ 12ರಿಂದ 1 ಗಂಟೆಯವರೆಗೆ ಗರಂ ಘಾಟ್‌ನಿಂದ ಸರಕು ಸಾಗಣೆ ಹಡಗು ಕಾರ್ಗೋದಲ್ಲಿ 17 ಓವರ್‌ಲೋಡ್ ಟ್ರಕ್‌ ತುಂಬಿಕೊಂಡು ಮಣಿಹಾರಿಗೆ ಸಾಗುತ್ತಿತ್ತು. ಗಂಗೆಯ ಮಧ್ಯದಲ್ಲಿ ಬಲವಾದ ಗಾಳಿ ಬೀಸಿದ ಕಾರಣ ಹಡಗು ನಿಯಂತ್ರಣ ಕಳೆದುಕೊಂಡಿದ್ದು, ಅರ್ಧ ಭಾಗ ನೀರಿನಲ್ಲಿ ಮುಳುಗಿದೆ. ಈ ವೇಳೆ 9 ಟ್ರಕ್‌ಗಳು ಗಂಗಾನದಿಯ ಮಧ್ಯದಲ್ಲಿ ನೀರುಪಾಲಾಗಿವೆ. ಅದರ ಜೊತೆ ಡ್ರೈವರ್​ ಮತ್ತು ಕ್ಲಿನರ್​ ಸೇರಿದಂತೆ ಹಲವು ಮಂದಿ ನೀರುಪಾಲು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಓದಿ: ನ್ಯಾಯಾಲಯ ತನ್ನೆಲ್ಲ ಮಿತಿಗಳನ್ನು ಮೀರಿದೆ: ಅಧಿಕಾರ ವಿಕೇಂದ್ರೀಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಜಗನ್​ ಘೋಷಣೆ

ಇನ್ನು ಈ ಸುದ್ದಿ ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜನರನ್ನು ರಕ್ಷಿಸಲು ರಕ್ಷಣಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾತ್ರಿ ವೇಳೆ ಸರಕು ಸಾಗಣೆ ನೌಕೆ ನಡೆಸುವುದು ಕಾನೂನು ಬಾಹಿರವಾಗಿದೆ. ದೊಡ್ಡ ದುರಂತವಾಗಿರುವ ಕಾರಣಕ್ಕೆ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.


Last Updated : Mar 25, 2022, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.