ETV Bharat / bharat

ಬದುಕಿದೆಯಾ ಬಡಜೀವ.. ಪ್ರಪಾತಕ್ಕೆ ಬೀಳಬೇಕಾದ ಬಸ್​ ಅದೃಷ್ಟವಶಾತ್​ ಪಾರು.. 20 ಮಂದಿ ಬಚಾವ್​..

ಅಲ್ಮೋರಾದ ಭಟ್ರೌಂಜ್ ಖಾನ್​ನಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್‌ವೊಂದು ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ರಸ್ತೆಯಿಂದ ಹೊರ ಬಂದು ಪ್ರಪಾತದೆಡೆಗೆ ನುಗ್ಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್​ ಪ್ರಪಾತದ ಅಂಚಿನಲ್ಲಿ ನಿಂತುಕೊಂಡಿದೆ..

author img

By

Published : Dec 7, 2021, 7:12 PM IST

bus that survived
ಬಸ್​ ಅದೃಷ್ಟವಶಾತ್​ ಪಾರು

ಅಲ್ಮೋರಾ(ಉತ್ತರಾಖಂಡ): ಈ ಚಿತ್ರ ನೋಡ್ತಿದ್ರೆ ಯಾವುದೋ ಹಾಲಿವುಡ್​ ಸಿನಿಮಾದ ಸಾಹಸ ದೃಶ್ಯವೇನೋ ಎಂಬಂತಿದೆ. ರಸ್ತೆ ಮೇಲೆ ಚಲಿಸಬೇಕಾದ ಬಸ್​ ಪ್ರಪಾತದೆಡೆಗೆ ಮುಖಮಾಡಿದೆ. ಬಸ್​ನ ಮುಂದಿನ ಭಾಗ ಗಾಳಿಯಲ್ಲಿ ತೇಲುತ್ತಿದೆ..

ಪ್ರಪಾತಕ್ಕೆ ಬೀಳಬೇಕಾದ ಬಸ್​ ಅದೃಷ್ಟವಶಾತ್​ ಪಾರು
ಪ್ರಪಾತಕ್ಕೆ ಬೀಳಬೇಕಾದ ಬಸ್​ ಅದೃಷ್ಟವಶಾತ್​ ಪಾರು

ಇದು ಉತ್ತರಾಖಂಡದ ಪಾನುವದೋಖಾನ್​ ಎಂಬ ಕಡಿದಾದ ಪ್ರದೇಶದಲ್ಲಿ ಕಂಡು ಬಂದ ಬಸ್​ ಅಪಘಾತದ ದೃಶ್ಯ. ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್​ ಅಂಚಿನಲ್ಲಿ ನಿಂತು ನಡೆಯಬಹುದಾಗಿದ್ದ ಬಹುದೊಡ್ಡ ಅಪಘಾತದಿಂದ ಪಾರಾಗಿದೆ.

ಅಲ್ಮೋರಾದ ಭಟ್ರೌಂಜ್ ಖಾನ್​ನಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್‌ವೊಂದು ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ರಸ್ತೆಯಿಂದ ಹೊರ ಬಂದು ಪ್ರಪಾತದೆಡೆಗೆ ನುಗ್ಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್​ ಪ್ರಪಾತದ ಅಂಚಿನಲ್ಲಿ ನಿಂತುಕೊಂಡಿದೆ.

ಈ ವೇಳೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಜನರು ಕಿರುಚಾಡಿದ್ದಾರೆ. ಬಳಿಕ ಅಲ್ಲಿದ್ದವರು ತಿಳಿಹೇಳಿ ಎಲ್ಲರನ್ನೂ ಸುರಕ್ಷಿತವಾಗಿ ಬಸ್​ನಿಂದ ಹೊರಗೆ ಕರೆತಂದು ರಕ್ಷಿಸಿದ್ದಾರೆ. ಪ್ರಪಾತದ ಅಂಚಿಗೆ ನಿಂತ ಬಸ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಎರಡು ದಿನಗಳ ಭಾರಿ ನಷ್ಟದ ಬಳಿಕ ಷೇರುಪೇಟೆ ಚೇತರಿಕೆ ; ಸೆನ್ಸೆಕ್ಸ್‌ 887 ಅಂಕಗಳ ಜಿಗಿತ

ಕಿರಿದಾದ ರಸ್ತೆಯಿಂದಾಗಿ ಬಸ್ ಪ್ರಪಾತಕ್ಕೆ ಬೀಳುವ ಅಪಘಾತದಿಂದ ಪಾರಾಗಿದೆ. ಏತನ್ಮಧ್ಯೆ, ಬಸ್​ನಲ್ಲಿ 20 ಪ್ರಯಾಣಿಕರು ಇದ್ದರು.

ಅಲ್ಮೋರಾ(ಉತ್ತರಾಖಂಡ): ಈ ಚಿತ್ರ ನೋಡ್ತಿದ್ರೆ ಯಾವುದೋ ಹಾಲಿವುಡ್​ ಸಿನಿಮಾದ ಸಾಹಸ ದೃಶ್ಯವೇನೋ ಎಂಬಂತಿದೆ. ರಸ್ತೆ ಮೇಲೆ ಚಲಿಸಬೇಕಾದ ಬಸ್​ ಪ್ರಪಾತದೆಡೆಗೆ ಮುಖಮಾಡಿದೆ. ಬಸ್​ನ ಮುಂದಿನ ಭಾಗ ಗಾಳಿಯಲ್ಲಿ ತೇಲುತ್ತಿದೆ..

ಪ್ರಪಾತಕ್ಕೆ ಬೀಳಬೇಕಾದ ಬಸ್​ ಅದೃಷ್ಟವಶಾತ್​ ಪಾರು
ಪ್ರಪಾತಕ್ಕೆ ಬೀಳಬೇಕಾದ ಬಸ್​ ಅದೃಷ್ಟವಶಾತ್​ ಪಾರು

ಇದು ಉತ್ತರಾಖಂಡದ ಪಾನುವದೋಖಾನ್​ ಎಂಬ ಕಡಿದಾದ ಪ್ರದೇಶದಲ್ಲಿ ಕಂಡು ಬಂದ ಬಸ್​ ಅಪಘಾತದ ದೃಶ್ಯ. ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್​ ಅಂಚಿನಲ್ಲಿ ನಿಂತು ನಡೆಯಬಹುದಾಗಿದ್ದ ಬಹುದೊಡ್ಡ ಅಪಘಾತದಿಂದ ಪಾರಾಗಿದೆ.

ಅಲ್ಮೋರಾದ ಭಟ್ರೌಂಜ್ ಖಾನ್​ನಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್‌ವೊಂದು ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ರಸ್ತೆಯಿಂದ ಹೊರ ಬಂದು ಪ್ರಪಾತದೆಡೆಗೆ ನುಗ್ಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್​ ಪ್ರಪಾತದ ಅಂಚಿನಲ್ಲಿ ನಿಂತುಕೊಂಡಿದೆ.

ಈ ವೇಳೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಜನರು ಕಿರುಚಾಡಿದ್ದಾರೆ. ಬಳಿಕ ಅಲ್ಲಿದ್ದವರು ತಿಳಿಹೇಳಿ ಎಲ್ಲರನ್ನೂ ಸುರಕ್ಷಿತವಾಗಿ ಬಸ್​ನಿಂದ ಹೊರಗೆ ಕರೆತಂದು ರಕ್ಷಿಸಿದ್ದಾರೆ. ಪ್ರಪಾತದ ಅಂಚಿಗೆ ನಿಂತ ಬಸ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಎರಡು ದಿನಗಳ ಭಾರಿ ನಷ್ಟದ ಬಳಿಕ ಷೇರುಪೇಟೆ ಚೇತರಿಕೆ ; ಸೆನ್ಸೆಕ್ಸ್‌ 887 ಅಂಕಗಳ ಜಿಗಿತ

ಕಿರಿದಾದ ರಸ್ತೆಯಿಂದಾಗಿ ಬಸ್ ಪ್ರಪಾತಕ್ಕೆ ಬೀಳುವ ಅಪಘಾತದಿಂದ ಪಾರಾಗಿದೆ. ಏತನ್ಮಧ್ಯೆ, ಬಸ್​ನಲ್ಲಿ 20 ಪ್ರಯಾಣಿಕರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.