ETV Bharat / bharat

2 ಕೋಟಿ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಣಿಯ ರೆಸಾರ್ಟ್​ ನೆಲಸಮ! - etv bharat kannada

ರಾಜಸ್ತಾನದಲ್ಲೂ ಬುಲ್ ಡೋಜರ್ ಸದ್ದು ಮಾಡಲಾರಂಭಿಸಿವೆ. ಎರಡು ಕೋಟಿ ರೂಪಾಯಿ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ಅಧಿಕಾರಿಯ ಲಕ್ಸುರಿ ರೆಸಾರ್ಟ್ ಒಂದನ್ನು ಬುಲ್​ಡೋಜರ್​ನಿಂದ ನೆಲಸಮ ಮಾಡಲಾಗುತ್ತಿದೆ.

ರಾಜಸ್ತಾನದಲ್ಲೂ ಬುಲ್​ಡೋಜರ್ ಸದ್ದು: ಭ್ರಷ್ಟ ಅಧಿಕಾರಿಣಿಯ ರೆಸಾರ್ಟ್​ ನೆಲಸಮ!
bulldozer-sound-in-rajasthan-too-corrupt-officers-resort-demolished
author img

By

Published : Mar 3, 2023, 12:38 PM IST

ಉದಯಪುರ (ರಾಜಸ್ತಾನ್) : 2 ಕೋಟಿ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಸದ್ಯ ಸೇವೆಯಿಂದ ಅಮಾನತಾಗಿ ಜೈಲಿನಲ್ಲಿರುವ ಎಸ್​ಓಜಿ ಯ ಹೆಚ್ಚುವರಿ ಎಸ್​ಪಿ ದಿವ್ಯಾ ಮಿತ್ತಲ್ ಅವರ ಉದಯಪುರದ ಲಕ್ಸುರಿ ರೆಸಾರ್ಟ್​ ಮೇಲೆ ಸರ್ಕಾರಿ ಬುಲ್​ಡೋಜರ್​ ಕಾರ್ಯಾಚರಣೆ ನಡೆಸುತ್ತಿವೆ. ಉದಯಪುರದ ಯುಐಟಿ ತಂಡವು ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಅತಿಕ್ರಮಣ ತೆರವು ಕೆಲಸ ಆರಂಭವಾಗಿದೆ. ಉದಯಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನೇಚರ್ ಹಿಲ್ಸ್ ಪ್ಯಾಲೇಸ್ ರೆಸಾರ್ಟ್ ಅಕ್ರಮ ಒತ್ತುವರಿ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.

2 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಜೈಲಿನಲ್ಲಿರುವ ದಿವ್ಯಾ ಮಿತ್ತಲ್ ಅವರ ವಿರುದ್ಧ ಸರ್ಕಾರ ಈಗ ಕ್ರಮ ಕೈಗೊಳ್ಳಲು ಆರಂಭಿಸಿದೆ. ಉದಯಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅವರ ರೆಸಾರ್ಟ್‌ನ ಅತಿಕ್ರಮಣವನ್ನು ಒಡೆಯಲು ಯುಐಟಿಯ ಬುಲ್ಡೋಜರ್ ಕೆಲಸ ಮಾಡುತ್ತಿವೆ. ಇದಕ್ಕಾಗಿ ಗುರುವಾರ ಸಂಜೆಯಿಂದಲೇ ಯುಐಟಿ ಅಧಿಕಾರಿಗಳು ರೆಸಾರ್ಟ್ ತೆರವು ಆರಂಭಿಸಿದ್ದರು. ಮಾರ್ಚ್ 1ರಂದು ಅಕ್ರಮ ರೆಸಾರ್ಟ್ ನಿರ್ಮಾಣದ ಕುರಿತು ಯುಐಟಿ ನೋಟಿಸ್ ನೀಡಿತ್ತು. ಸದ್ಯ ಯುಐಟಿಯ ಬುಲ್ಡೋಜರ್ ಗಳು ನಿರಂತರವಾಗಿ ಅಕ್ರಮ ಒತ್ತುವರಿ ತೆರವು ಕಾರ್ಯದಲ್ಲಿ ನಿರತವಾಗಿವೆ.

ರಾಜಸ್ಥಾನದ ಅಜ್ಮೀರ್‌ನ ಎಸ್‌ಒಜಿ ಹೆಚ್ಚುವರಿ ಎಸ್‌ಪಿ ಹುದ್ದೆಯಿಂದ ಅಮಾನತುಗೊಂಡಿರುವ ದಿವ್ಯಾ ಮಿತ್ತಲ್ ಎರಡು ಕೋಟಿ ರೂಪಾಯಿ ಲಂಚ ತೆಗೆದುಕೊಂಡ ಆರೋಪ ಎದುರಿಸುತ್ತಿದ್ದಾರೆ. ದಿವ್ಯಾ ಮಿತ್ತಲ್ ಎನ್‌ಡಿಪಿಎಸ್ ಆಕ್ಟ್ ಪ್ರಕರಣದಲ್ಲಿ ಅಜ್ಮೀರ್ ಸಂಶೋಧನಾ ಅಧಿಕಾರಿಯಾಗಿದ್ದರು. ಪ್ರಕರಣದ ಆರೋಪಿಯೊಬ್ಬರು ದಿವ್ಯಾ ಮಿತ್ತಲ್ ತಮ್ಮಿಂದ 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕಾಗಿ ಜೈಪುರ ಎಸಿಬಿಗೆ ದೂರು ನೀಡಿದ್ದರು. ನಂತರ ಜೈಪುರ ಎಸಿಬಿ ತಂಡವು ಸಂಪೂರ್ಣ ಪ್ರಕರಣವನ್ನು ತನಿಖೆ ನಡೆಸಿತ್ತು. ತನಿಖೆಯ ನಂತರ ದಿವ್ಯಾ ಮಿತ್ತಲ್ ಅವರ ಇಡೀ ಆಟ ಬಯಲಾಗಿತ್ತು.

ಇದರಲ್ಲಿ ದಿವ್ಯಾ ಮಿತ್ತಲ್ ಮತ್ತು ಆಕೆಯ ಏಜೆಂಟ್‌ಗಳಲ್ಲಿ ಒಬ್ಬರಾದ ಸುಮಿತ್ ಕುಮಾರ್ ಹೆಸರು ಮುಂಚೂಣಿಗೆ ಬಂದಿದೆ. ದಿವ್ಯಾ ಮಿತ್ತಲ್ ಅವರ ಸೂಚನೆಯಂತೆ ಸುಮಿತ್ ಕುಮಾರ್ ದೂರುದಾರರನ್ನು ಉದಯಪುರದ ಹಿಲ್ ವ್ಯೂ ರೆಸಾರ್ಟ್‌ಗೆ ಕರೆಸಿಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ಎಸಿಬಿ ಬಲೆ ಬೀಸಿತ್ತು. ಈ ಬಗ್ಗೆ ಬ್ರೋಕರ್ ಸುಮಿತ್ ಕುಮಾರ್​ಗೆ ಸುಳಿವು ಸಿಕ್ಕಿದ್ದರಿಂದ ಆತ ಸ್ಥಳದಿಂದ ಪರಾರಿಯಾಗಿದ್ದ. ಹೆಚ್ಚುವರಿ ಎಸ್ಪಿ ದಿವ್ಯಾ ಮಿತ್ತಲ್ ಅವರನ್ನು ಅಜ್ಮೀರ್‌ನಿಂದ ಎಸಿಬಿ ತಂಡ ಬಂಧಿಸಿದೆ.

ಲಂಚದ ಬೇಡಿಕೆ, ಅಧಿಕಾರಿಗಳ ವರ್ಗ: ಮುಂಬೈ ವಿಮಾನ ನಿಲ್ದಾಣದ ಪ್ರಧಾನ ಕಸ್ಟಮ್ಸ್ ಆಯುಕ್ತರು ಗುರುವಾರ 34 ಅಧಿಕಾರಿಗಳು ಮತ್ತು ನಾಲ್ವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಲಂಚದ ಸಮಸ್ಯೆಯನ್ನು ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಕೆಲವು ಅಧಿಕಾರಿಗಳು ಪೇಟಿಎಂ ವ್ಯಾಲೆಟ್ ಮೂಲಕ ಲಂಚ ಸ್ವೀಕರಿಸುವಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಉದಾಹರಣೆಗೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಫೆಬ್ರವರಿ 11 ರಂದು ಕಸ್ಟಮ್ಸ್ ಸೂಪರಿಂಟೆಂಡೆಂಟ್ ಅಲೋಕ್ ಕುಮಾರ್ ಅವರನ್ನು ಬಂಧಿಸಿತ್ತು. 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರದೊಂದಿಗೆ ಬಂದ ಪ್ರಯಾಣಿಕರಿಂದ 30,000 ರೂ. ಲಂಚ ಪಡೆದ ಕಾರಣಕ್ಕಾಗಿ ಇವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ : ಪ್ರಶಾಂತ್‌ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂಪಾಯಿ ಹಣ ಪತ್ತೆ!

ಉದಯಪುರ (ರಾಜಸ್ತಾನ್) : 2 ಕೋಟಿ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಸದ್ಯ ಸೇವೆಯಿಂದ ಅಮಾನತಾಗಿ ಜೈಲಿನಲ್ಲಿರುವ ಎಸ್​ಓಜಿ ಯ ಹೆಚ್ಚುವರಿ ಎಸ್​ಪಿ ದಿವ್ಯಾ ಮಿತ್ತಲ್ ಅವರ ಉದಯಪುರದ ಲಕ್ಸುರಿ ರೆಸಾರ್ಟ್​ ಮೇಲೆ ಸರ್ಕಾರಿ ಬುಲ್​ಡೋಜರ್​ ಕಾರ್ಯಾಚರಣೆ ನಡೆಸುತ್ತಿವೆ. ಉದಯಪುರದ ಯುಐಟಿ ತಂಡವು ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಅತಿಕ್ರಮಣ ತೆರವು ಕೆಲಸ ಆರಂಭವಾಗಿದೆ. ಉದಯಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನೇಚರ್ ಹಿಲ್ಸ್ ಪ್ಯಾಲೇಸ್ ರೆಸಾರ್ಟ್ ಅಕ್ರಮ ಒತ್ತುವರಿ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.

2 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಜೈಲಿನಲ್ಲಿರುವ ದಿವ್ಯಾ ಮಿತ್ತಲ್ ಅವರ ವಿರುದ್ಧ ಸರ್ಕಾರ ಈಗ ಕ್ರಮ ಕೈಗೊಳ್ಳಲು ಆರಂಭಿಸಿದೆ. ಉದಯಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅವರ ರೆಸಾರ್ಟ್‌ನ ಅತಿಕ್ರಮಣವನ್ನು ಒಡೆಯಲು ಯುಐಟಿಯ ಬುಲ್ಡೋಜರ್ ಕೆಲಸ ಮಾಡುತ್ತಿವೆ. ಇದಕ್ಕಾಗಿ ಗುರುವಾರ ಸಂಜೆಯಿಂದಲೇ ಯುಐಟಿ ಅಧಿಕಾರಿಗಳು ರೆಸಾರ್ಟ್ ತೆರವು ಆರಂಭಿಸಿದ್ದರು. ಮಾರ್ಚ್ 1ರಂದು ಅಕ್ರಮ ರೆಸಾರ್ಟ್ ನಿರ್ಮಾಣದ ಕುರಿತು ಯುಐಟಿ ನೋಟಿಸ್ ನೀಡಿತ್ತು. ಸದ್ಯ ಯುಐಟಿಯ ಬುಲ್ಡೋಜರ್ ಗಳು ನಿರಂತರವಾಗಿ ಅಕ್ರಮ ಒತ್ತುವರಿ ತೆರವು ಕಾರ್ಯದಲ್ಲಿ ನಿರತವಾಗಿವೆ.

ರಾಜಸ್ಥಾನದ ಅಜ್ಮೀರ್‌ನ ಎಸ್‌ಒಜಿ ಹೆಚ್ಚುವರಿ ಎಸ್‌ಪಿ ಹುದ್ದೆಯಿಂದ ಅಮಾನತುಗೊಂಡಿರುವ ದಿವ್ಯಾ ಮಿತ್ತಲ್ ಎರಡು ಕೋಟಿ ರೂಪಾಯಿ ಲಂಚ ತೆಗೆದುಕೊಂಡ ಆರೋಪ ಎದುರಿಸುತ್ತಿದ್ದಾರೆ. ದಿವ್ಯಾ ಮಿತ್ತಲ್ ಎನ್‌ಡಿಪಿಎಸ್ ಆಕ್ಟ್ ಪ್ರಕರಣದಲ್ಲಿ ಅಜ್ಮೀರ್ ಸಂಶೋಧನಾ ಅಧಿಕಾರಿಯಾಗಿದ್ದರು. ಪ್ರಕರಣದ ಆರೋಪಿಯೊಬ್ಬರು ದಿವ್ಯಾ ಮಿತ್ತಲ್ ತಮ್ಮಿಂದ 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕಾಗಿ ಜೈಪುರ ಎಸಿಬಿಗೆ ದೂರು ನೀಡಿದ್ದರು. ನಂತರ ಜೈಪುರ ಎಸಿಬಿ ತಂಡವು ಸಂಪೂರ್ಣ ಪ್ರಕರಣವನ್ನು ತನಿಖೆ ನಡೆಸಿತ್ತು. ತನಿಖೆಯ ನಂತರ ದಿವ್ಯಾ ಮಿತ್ತಲ್ ಅವರ ಇಡೀ ಆಟ ಬಯಲಾಗಿತ್ತು.

ಇದರಲ್ಲಿ ದಿವ್ಯಾ ಮಿತ್ತಲ್ ಮತ್ತು ಆಕೆಯ ಏಜೆಂಟ್‌ಗಳಲ್ಲಿ ಒಬ್ಬರಾದ ಸುಮಿತ್ ಕುಮಾರ್ ಹೆಸರು ಮುಂಚೂಣಿಗೆ ಬಂದಿದೆ. ದಿವ್ಯಾ ಮಿತ್ತಲ್ ಅವರ ಸೂಚನೆಯಂತೆ ಸುಮಿತ್ ಕುಮಾರ್ ದೂರುದಾರರನ್ನು ಉದಯಪುರದ ಹಿಲ್ ವ್ಯೂ ರೆಸಾರ್ಟ್‌ಗೆ ಕರೆಸಿಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ಎಸಿಬಿ ಬಲೆ ಬೀಸಿತ್ತು. ಈ ಬಗ್ಗೆ ಬ್ರೋಕರ್ ಸುಮಿತ್ ಕುಮಾರ್​ಗೆ ಸುಳಿವು ಸಿಕ್ಕಿದ್ದರಿಂದ ಆತ ಸ್ಥಳದಿಂದ ಪರಾರಿಯಾಗಿದ್ದ. ಹೆಚ್ಚುವರಿ ಎಸ್ಪಿ ದಿವ್ಯಾ ಮಿತ್ತಲ್ ಅವರನ್ನು ಅಜ್ಮೀರ್‌ನಿಂದ ಎಸಿಬಿ ತಂಡ ಬಂಧಿಸಿದೆ.

ಲಂಚದ ಬೇಡಿಕೆ, ಅಧಿಕಾರಿಗಳ ವರ್ಗ: ಮುಂಬೈ ವಿಮಾನ ನಿಲ್ದಾಣದ ಪ್ರಧಾನ ಕಸ್ಟಮ್ಸ್ ಆಯುಕ್ತರು ಗುರುವಾರ 34 ಅಧಿಕಾರಿಗಳು ಮತ್ತು ನಾಲ್ವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಲಂಚದ ಸಮಸ್ಯೆಯನ್ನು ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಕೆಲವು ಅಧಿಕಾರಿಗಳು ಪೇಟಿಎಂ ವ್ಯಾಲೆಟ್ ಮೂಲಕ ಲಂಚ ಸ್ವೀಕರಿಸುವಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಉದಾಹರಣೆಗೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಫೆಬ್ರವರಿ 11 ರಂದು ಕಸ್ಟಮ್ಸ್ ಸೂಪರಿಂಟೆಂಡೆಂಟ್ ಅಲೋಕ್ ಕುಮಾರ್ ಅವರನ್ನು ಬಂಧಿಸಿತ್ತು. 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರದೊಂದಿಗೆ ಬಂದ ಪ್ರಯಾಣಿಕರಿಂದ 30,000 ರೂ. ಲಂಚ ಪಡೆದ ಕಾರಣಕ್ಕಾಗಿ ಇವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ : ಪ್ರಶಾಂತ್‌ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂಪಾಯಿ ಹಣ ಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.