ETV Bharat / bharat

ಅಸ್ಸೋಂನಲ್ಲಿ ದೋಣಿ ಮುಳುಗಿ 7 ಮಂದಿ ನಾಪತ್ತೆ.. ಶೋಧ ಕಾರ್ಯಾಚರಣೆ ಮುಂದುವರಿಕೆ

ಅಸ್ಸೋಂನಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. 30 ಜನರಿದ್ದ ದೋಣಿ ಮುಳುಗಿದ್ದು 7 ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

author img

By

Published : Oct 2, 2022, 12:25 PM IST

boat-capsized-in-brahmaputra-river-in-assam
ಅಸ್ಸೋಂನಲ್ಲಿ ದೋಣಿ ಮುಳುಗಿ 7 ಮಂದಿ ನಾಪತ್ತೆ

ಗುವಾಹಟಿ(ಅಸ್ಸೋಂ): ಇಲ್ಲಿನ ಬ್ರಹ್ಮಪುತ್ರ ನದಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 7 ಮಂದಿ ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ. ದೋಣಿಯಲ್ಲಿ ಸರ್ಕಲ್​ ಆಫೀಸರ್​ ಕೂಡ ಪ್ರಯಾಣಿಸುತ್ತಿದ್ದು, ಅವರೂ ಕಣ್ಮರೆಯಾಗಿದ್ದಾರೆ.

ದೋಣಿ ಮುಳುಗಲು ಅಧಿಕ ಭಾರ ಅಥವಾ ಇನ್ನೇನು ಕಾರಣ ಎಂಬುದು ತಿಳಿದುಬಂದಿಲ್ಲ. ದೋಣಿ ಮುಳುಗಿದ ತಕ್ಷಣ ಕೆಲವರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಎಸ್​ಡಿಎಆರ್​ಆರ್​ಎಫ್​ ಮತ್ತು ಬಿಎಸ್​ಎಫ್​ ತಂಡಗಳು ಶೋಧ ಕಾರ್ಯಾಚರಣೆಗಿಳಿದು ಕೆಲವರನ್ನು ರಕ್ಷಿಸಿವೆ.

10 ಮಂದಿ ಮುಳುಗು ತಜ್ಞರು ಕೂಡ ಕಣ್ಮರೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ (ಸೆಪ್ಟೆಂಬರ್ 29) 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸೇತುವೆಯ ಪೋಸ್ಟ್‌ಗೆ ಡಿಕ್ಕಿ ಹೊಡೆದು ಮಗುಚಿಬಿದ್ದು ಸರ್ಕಲ್​ ಆಫೀಸರ್​ ಮೃತಪಟ್ಟಿದ್ದರು. 72 ಗಂಟೆಗಳ ಬಳಿಕ ಅವರ ಶವ ಪತ್ತೆಯಾಗಿದೆ.

ಓದಿ: ನವಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು

ಗುವಾಹಟಿ(ಅಸ್ಸೋಂ): ಇಲ್ಲಿನ ಬ್ರಹ್ಮಪುತ್ರ ನದಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 7 ಮಂದಿ ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ. ದೋಣಿಯಲ್ಲಿ ಸರ್ಕಲ್​ ಆಫೀಸರ್​ ಕೂಡ ಪ್ರಯಾಣಿಸುತ್ತಿದ್ದು, ಅವರೂ ಕಣ್ಮರೆಯಾಗಿದ್ದಾರೆ.

ದೋಣಿ ಮುಳುಗಲು ಅಧಿಕ ಭಾರ ಅಥವಾ ಇನ್ನೇನು ಕಾರಣ ಎಂಬುದು ತಿಳಿದುಬಂದಿಲ್ಲ. ದೋಣಿ ಮುಳುಗಿದ ತಕ್ಷಣ ಕೆಲವರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಎಸ್​ಡಿಎಆರ್​ಆರ್​ಎಫ್​ ಮತ್ತು ಬಿಎಸ್​ಎಫ್​ ತಂಡಗಳು ಶೋಧ ಕಾರ್ಯಾಚರಣೆಗಿಳಿದು ಕೆಲವರನ್ನು ರಕ್ಷಿಸಿವೆ.

10 ಮಂದಿ ಮುಳುಗು ತಜ್ಞರು ಕೂಡ ಕಣ್ಮರೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ (ಸೆಪ್ಟೆಂಬರ್ 29) 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸೇತುವೆಯ ಪೋಸ್ಟ್‌ಗೆ ಡಿಕ್ಕಿ ಹೊಡೆದು ಮಗುಚಿಬಿದ್ದು ಸರ್ಕಲ್​ ಆಫೀಸರ್​ ಮೃತಪಟ್ಟಿದ್ದರು. 72 ಗಂಟೆಗಳ ಬಳಿಕ ಅವರ ಶವ ಪತ್ತೆಯಾಗಿದೆ.

ಓದಿ: ನವಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.