ಕಡಪ (ಆಂಧ್ರಪ್ರದೇಶ): ಕಬಡ್ಡಿ ಆಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಚೆನ್ನೂರು ಮಂಡಲದ ಕೊಂಡಪೇಟ ನಿವಾಸಿ, ಎಂ.ಕಾಂ ಪದವೀಧರ ನರೇಂದ್ರ ಮೃತ ಯುವಕ. ಕಡಪ ಜಿಲ್ಲೆಯ ಗಂಗಣ್ಣಪಲ್ಲಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಆಟದ ವೇಳೆ ಎದುರಾಳಿ ತಂಡದ ಸದಸ್ಯರು ನರೇಂದ್ರನನ್ನು ಹಿಡಿದು ಬೀಳಿಸಿ ಔಟ್ ಮಾಡಿದ್ದರು. ಆದರೆ ಆತ ಎದ್ದು ನಿಂತು ಹಿಂದಿರುಗಿ ಹೋಗಲು ಎರಡು ಹೆಜ್ಜೆ ಮುಂದಿಟ್ಟ ಕೂಡಲೇ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ನರೇಂದ್ರ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ರಸ್ತೆ ದಾಟುವ ವೇಳೆ ಲಾರಿ ಗುದ್ದಿ 40 ವರ್ಷದ ಗಜರಾಜ ಸಾವು
"ನಾನು ಸ್ಪರ್ಧೆಯಲ್ಲಿ ಗೆದ್ದು ಕಪ್ನೊಂದಿಗೆ ಮನೆಗೆ ಮರಳುತ್ತೇನೆ" ಎಂದು ನರೇಂದ್ರ ಹೇಳಿದ್ದ ಕೊನೆಯ ಮಾತನ್ನು ಆತನ ತಾಯಿ ನೆನೆದು ಕಣ್ಣೀರಿಡುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.