ETV Bharat / bharat

ಹಿಂದೆ ಬಿದ್ದು ಕಾಡುತ್ತಿದ್ದ ಕಾಮುಕನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆಗೈದ ಮಹಿಳೆ! - ತಮಿಳುನಾಡು ಕ್ರೈಮ್​ ಲೇಟೆಸ್ಟ್​ ನ್ಯೂಸ್

ತನನ್ನು ಹಿಂಬಾಲಿಸಿ, ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡು ಬೋಡಿನಾಯಕನೂರಿನ ಸಂತನಪರಾ ಬಾಲಲ್​ರಾಮ್​ನಲ್ಲಿ ನಡೆದಿದೆ.

ಹಿಂದೆ ಬಿದ್ದ ಕಾಡುತ್ತಿದ್ದ ವ್ಯಕ್ತಿಯನ್ನು ಕೊಲೆಗೈದ ಮಹಿಳೆ
Woman murdered who tortured her at tamilnadu
author img

By

Published : Mar 16, 2020, 7:39 PM IST

ಇಡುಕ್ಕಿ(ತಮಿಳುನಾಡು) : ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಮಹಿಳೆಯೇ ಹತ್ಯೆಗೈದಿರುವ ಘಟನೆ ತಮಿಳುನಾಡು ಬೋಡಿನಾಯಕನೂರಿನ ಸಂತನಪರಾ ಬಾಲ್ ರಾಮ್​ನಲ್ಲಿ ನಡೆದಿದೆ.

ರಾಜನ್ ಎಂಬ ವ್ಯಕ್ತಿ 38 ವರ್ಷದ ವಲರ್ಮತಿ ಎಂಬಾಕೆಯ ಹಿಂದೆ ಬಿದ್ದು ಕಾಡುತ್ತಿದ್ದನಂತೆ. ಇದರಿಂದ ಬೇಸತ್ತ ಮಹಿಳೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ರಾಜನ್​​​​​ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿದ್ದಾನೆ. ಅಲ್ಲದೆ, ವಲರ್ಮತಿಗೆ ಕರೆ ಮಾಡಿ, ಮನೆಗೆ ಹೋಗಿ ತೊಂದರೆ ನೀಡ್ತಿದ್ದನಂತೆ. ಇದನ್ನೆಲ್ಲ ಕಂಡ ಸ್ಥಳೀಯರು ರಾಜನ್​​ಗೆ ಎಚ್ಚರಿಕೆ ನೀಡಿದ್ರಂತೆ. ಆದ್ರೂ ಆತ ತನ್ನ ಚಾಳಿ ಮುಂದುವರಿಸಿದ್ದನು.

ಈ ಘಟನೆಗಳಿಂದ ಬೇಸತ್ತ ಮಹಿಳೆ ತನ್ನ ಸಂಬಂಧಿಕರ ಮನೆಗೆ ತೆರೆಳಿದ್ದಳು. ರಾಜನ್​ ಅಲ್ಲಿಗೂ ಹೋಗಿ ರಂಪಾಟ ಮಾಡ್ತಿದ್ದನಂತೆ. ಇವೆಲ್ಲವುಗಳಿಂದ ಕುಪಿತಳಾದ ಮಹಿಳೆ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಅವನ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ.

ಘಟನೆ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ರಾಜನ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಗಾಯಾಳು ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಹಾಗೂ ಆಕೆಯ ಪುತ್ರನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಇಡುಕ್ಕಿ(ತಮಿಳುನಾಡು) : ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಮಹಿಳೆಯೇ ಹತ್ಯೆಗೈದಿರುವ ಘಟನೆ ತಮಿಳುನಾಡು ಬೋಡಿನಾಯಕನೂರಿನ ಸಂತನಪರಾ ಬಾಲ್ ರಾಮ್​ನಲ್ಲಿ ನಡೆದಿದೆ.

ರಾಜನ್ ಎಂಬ ವ್ಯಕ್ತಿ 38 ವರ್ಷದ ವಲರ್ಮತಿ ಎಂಬಾಕೆಯ ಹಿಂದೆ ಬಿದ್ದು ಕಾಡುತ್ತಿದ್ದನಂತೆ. ಇದರಿಂದ ಬೇಸತ್ತ ಮಹಿಳೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ರಾಜನ್​​​​​ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿದ್ದಾನೆ. ಅಲ್ಲದೆ, ವಲರ್ಮತಿಗೆ ಕರೆ ಮಾಡಿ, ಮನೆಗೆ ಹೋಗಿ ತೊಂದರೆ ನೀಡ್ತಿದ್ದನಂತೆ. ಇದನ್ನೆಲ್ಲ ಕಂಡ ಸ್ಥಳೀಯರು ರಾಜನ್​​ಗೆ ಎಚ್ಚರಿಕೆ ನೀಡಿದ್ರಂತೆ. ಆದ್ರೂ ಆತ ತನ್ನ ಚಾಳಿ ಮುಂದುವರಿಸಿದ್ದನು.

ಈ ಘಟನೆಗಳಿಂದ ಬೇಸತ್ತ ಮಹಿಳೆ ತನ್ನ ಸಂಬಂಧಿಕರ ಮನೆಗೆ ತೆರೆಳಿದ್ದಳು. ರಾಜನ್​ ಅಲ್ಲಿಗೂ ಹೋಗಿ ರಂಪಾಟ ಮಾಡ್ತಿದ್ದನಂತೆ. ಇವೆಲ್ಲವುಗಳಿಂದ ಕುಪಿತಳಾದ ಮಹಿಳೆ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಅವನ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ.

ಘಟನೆ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ರಾಜನ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಗಾಯಾಳು ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಹಾಗೂ ಆಕೆಯ ಪುತ್ರನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.