ನಾಗ್ಪುರ: ಹುಲಿ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೋಲ್ಕತ್ತಾದಿಂದ ಹೊರಟ ಪಶ್ಚಿಮ ಬಂಗಾಳದ ಜೋಡಿಯೊಂದು ಇದೀಗ ಮಹಾರಾಷ್ಟ್ರ ತಲುಪಿದ್ದು, 4,000 ಕಿ.ಮೀ. ದೂರ ಪ್ರಯಾಣ ಪೂರೈಸಿದ್ದಾರೆ.
ರತೀಂದ್ರದಾಸ್ ಮತ್ತು ಗೀತಾಂಜಲಿ ಎಂಬ ದಂಪತಿ ಈ ಬಗ್ಗೆ ಮಾತನಾಡಿ, ಫೆಬ್ರವರಿ 15ಕ್ಕೆ ಈ ಸಂಚಾರ ಆರಂಭವಾಗಿದ್ದು, ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮಧ್ಯಪ್ರದೇಶದಲ್ಲಿನ ಹೊಶಂಗಾಬಾದ್ನ ಸತ್ಪುರ ಹುಲಿಗಳಿರುವ ಪ್ರದೆಶಕ್ಕೆ ತೆರಳುವಾಗ ದಣಿದು ಒಂದು ಮರದಡಿ ಕುಳಿತೆವು. ಶಾಲಾ ವಿದ್ಯಾರ್ಥಿಯೋರ್ವ ಹಳ್ಳಿಗರ ಬಳಿ ನಮ್ಮ ಬಗ್ಗೆ ತಿಳಿಸಿದ್ದು, ಅವರು ನಮ್ಮನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಗ್ರಹಿಸಿ ಬೆದರಿಕೆ ಹಾಕಿದರು. ಆದರೆ ಆ ಸನ್ನಿವೇಶವನ್ನು ನಿಭಾಯಿಸಿ ನಮ್ಮ ಬಗ್ಗೆ ಹೇಳಿಕೊಂಡು ಹೊರಗೆ ಬಂದೆವು ಎಂದರು.
ಹುಲಿ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ಸಂಚಾರದ ಉದ್ದೇಶವಾಗಿದೆ. ನಾವು ದೇಶದಾದ್ಯಂತ ಅರಣ್ಯ ಮೀಸಲು ಪ್ರದೇಶಗಳಿಗೆ ಪ್ರವಾಸ ಮಾಡುತ್ತಿದ್ದೇವೆ. ಅರಣ್ಯವಾಸಿಗಳು ಸೇರಿದಂತೆ ಅರಣ್ಯ ರಕ್ಷಕರೊಂದಿಗೆ ಮಾತನಾಡಿದ್ದೇವೆ. ಮಹಾರಾಷ್ಟ್ರದ ನಂತರ ನಾವು ಗೋವಾಕ್ಕೆ ಮತ್ತು ನಂತರ ದಕ್ಷಿಣ ರಾಜ್ಯಗಳಿಗೆ ಮುಂದುವರೆಯಲು ಯೋಜನೆ ಹಾಕಿಕೊಂಡಿದ್ದೇವೆಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ಧಾರೆ. ನಮ್ಮ ಈ ಪ್ರಯತ್ನಕ್ಕೆ ಫೇಸ್ಬುಕ್ ಸ್ನೇಹಿತರು 80 ಪ್ರತಿಶತದಷ್ಟು ಹಣಕಾಸು ಒದಗಿಸುತ್ತಿದ್ದಾರೆ. ಜೊತೆಗೆ ಸಾರ್ವಜನಿಕರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.