ETV Bharat / bharat

ತರಕಾರಿ ಮಾರುಕಟ್ಟೆಯಲ್ಲಿ ರೌದ್ರನರ್ತನ ತೋರಿದ ಕೊರೊನಾ

author img

By

Published : May 5, 2020, 8:14 PM IST

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿನ ತರಕಾರಿ ಮಾರುಕಟ್ಟೆಗಳು ಕೊರೊನಾ ಹಾಟ್​ಸ್ಪಾಟ್​ ಆಗುತ್ತಿದ್ದು, ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 24 ತರಕಾರಿ ಮಾರಾಟಗಾರರು ಕೊರೊನಾ ವೈರಸ್​ಗೆ ತುತ್ತಾಗಿದ್ದಾರೆ.

vegetable vendors
ತರಕಾರಿ ಮಾರುಕಟ್ಟೆ

ಲಖನೌ(ಉತ್ತರ ಪ್ರದೇಶ): ಮೀರತ್‌ನಲ್ಲಿ ಇಪ್ಪತ್ನಾಲ್ಕು, ಆಗ್ರಾದಲ್ಲಿ ಇಪ್ಪತ್ತೆಂಟು ಮತ್ತು ಲಖನೌದಲ್ಲಿ ನಾಲ್ಕು ತರಕಾರಿ ಮಾರಾಟಗಾರರು ಕೊರೊನಾ ವೈರಸ್‌ಗೆ ಟಾರ್ಗೆಟ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಸಗಟು ತರಕಾರಿ ಮಾರುಕಟ್ಟೆಯು ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ.

ಕಳೆದ ಎರಡು ದಿನಗಳಿಂದ ಈ ಮಾರುಕಟ್ಟೆ ಸೀಲ್​ ಮಾಡಲಾಗಿದ್ದು, ಮೀರತ್‌ನಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಸಣ್ಣ ಅಂಗಡಿ ಮಾಲೀಕರಿಗೆ ತರಕಾರಿಗಳನ್ನು ಈ ಮಾರುಕಟ್ಟೆಯಿಂದಲೇ ಪೂರೈಕೆ ಮಾಡಲಾಗುತ್ತಿತ್ತು.

ಒಂದೇ ದಿನದಲ್ಲಿ ಆದ ಬೆಳವಣಿಗೆ ಕಂಡು ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಈ ಮಾರುಕಟ್ಟೆಯಲ್ಲಿನ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ ಇತರರನ್ನು ಪತ್ತೆ ಹಚ್ಚುವಂತೆ ಹೇಳಿದ್ದಾರೆ.

ಈಗಾಗಲೇ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ತೀವ್ರವಾಗಿ ವ್ಯಾಪಿಸಿದ್ದು, ತರಕಾರಿಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.

ಆಗ್ರಾದಲ್ಲಿ, ಕಳೆದ ಒಂದು ವಾರದಲ್ಲಿ 28 ತರಕಾರಿ ಮಾರಾಟಗಾರರು ಕೊರೊನಾ ವೈರಸ್​​ಗೆ ತುತ್ತಾಗಿದ್ದಾರೆ. ಈ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ಶತಾಯಗತಾಯು ಪ್ರಯತ್ನಿಸುತ್ತಿದ್ದು, ಇನ್ನೂ ಕೂಡ ಸರಿಯಾದ ಮಾಹಿತಿ ದೊರೆತಿಲ್ಲ.

ಇನ್ನು ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬ್ಲೂ ಕುಮಾರ್ ಪ್ರತಿಕ್ರಿಯಿಸಿದ್ದು, ಸೋಂಕಿತ ತರಕಾರಿ ಮಾರಾಟಗಾರರಲ್ಲಿ ಹೆಚ್ಚಿನವರು ಬಸಾಯಿ ಮತ್ತು ತಾಜ್‌ಗಂಜ್ ಮೂಲದ ಮಾರುಕಟ್ಟೆಗಳಿಂದ ಬಂದವರು. ಈ ತರಕಾರಿ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು ಈಗಾಗಲೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಹಾಗೂ ಕಂಟೇನ್ಮೆಂಟ್​ ಝೋನ್​ಗಳಲ್ಲಿ ಪ್ಯಾಕ್ ಮಾಡಿದ ತರಕಾರಿಗಳನ್ನು ಮನೆ ಬಾಗಿಲಿಗೆ ವಿತರಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಲಖನೌ(ಉತ್ತರ ಪ್ರದೇಶ): ಮೀರತ್‌ನಲ್ಲಿ ಇಪ್ಪತ್ನಾಲ್ಕು, ಆಗ್ರಾದಲ್ಲಿ ಇಪ್ಪತ್ತೆಂಟು ಮತ್ತು ಲಖನೌದಲ್ಲಿ ನಾಲ್ಕು ತರಕಾರಿ ಮಾರಾಟಗಾರರು ಕೊರೊನಾ ವೈರಸ್‌ಗೆ ಟಾರ್ಗೆಟ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಸಗಟು ತರಕಾರಿ ಮಾರುಕಟ್ಟೆಯು ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ.

ಕಳೆದ ಎರಡು ದಿನಗಳಿಂದ ಈ ಮಾರುಕಟ್ಟೆ ಸೀಲ್​ ಮಾಡಲಾಗಿದ್ದು, ಮೀರತ್‌ನಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಸಣ್ಣ ಅಂಗಡಿ ಮಾಲೀಕರಿಗೆ ತರಕಾರಿಗಳನ್ನು ಈ ಮಾರುಕಟ್ಟೆಯಿಂದಲೇ ಪೂರೈಕೆ ಮಾಡಲಾಗುತ್ತಿತ್ತು.

ಒಂದೇ ದಿನದಲ್ಲಿ ಆದ ಬೆಳವಣಿಗೆ ಕಂಡು ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಈ ಮಾರುಕಟ್ಟೆಯಲ್ಲಿನ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ ಇತರರನ್ನು ಪತ್ತೆ ಹಚ್ಚುವಂತೆ ಹೇಳಿದ್ದಾರೆ.

ಈಗಾಗಲೇ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ತೀವ್ರವಾಗಿ ವ್ಯಾಪಿಸಿದ್ದು, ತರಕಾರಿಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.

ಆಗ್ರಾದಲ್ಲಿ, ಕಳೆದ ಒಂದು ವಾರದಲ್ಲಿ 28 ತರಕಾರಿ ಮಾರಾಟಗಾರರು ಕೊರೊನಾ ವೈರಸ್​​ಗೆ ತುತ್ತಾಗಿದ್ದಾರೆ. ಈ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ಶತಾಯಗತಾಯು ಪ್ರಯತ್ನಿಸುತ್ತಿದ್ದು, ಇನ್ನೂ ಕೂಡ ಸರಿಯಾದ ಮಾಹಿತಿ ದೊರೆತಿಲ್ಲ.

ಇನ್ನು ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬ್ಲೂ ಕುಮಾರ್ ಪ್ರತಿಕ್ರಿಯಿಸಿದ್ದು, ಸೋಂಕಿತ ತರಕಾರಿ ಮಾರಾಟಗಾರರಲ್ಲಿ ಹೆಚ್ಚಿನವರು ಬಸಾಯಿ ಮತ್ತು ತಾಜ್‌ಗಂಜ್ ಮೂಲದ ಮಾರುಕಟ್ಟೆಗಳಿಂದ ಬಂದವರು. ಈ ತರಕಾರಿ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು ಈಗಾಗಲೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಹಾಗೂ ಕಂಟೇನ್ಮೆಂಟ್​ ಝೋನ್​ಗಳಲ್ಲಿ ಪ್ಯಾಕ್ ಮಾಡಿದ ತರಕಾರಿಗಳನ್ನು ಮನೆ ಬಾಗಿಲಿಗೆ ವಿತರಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.