ಆಂಧ್ರಪ್ರದೇಶ: ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಬ್ಬರಲ್ಲಿ ಓರ್ವ ಮಾಲೀಕನಿಗೆ ಗನ್ ತೋರಿಸಿ ಕದಿಯಲು ಮುಂದಾಗಿದ್ದಾನೆ. ಆಗ ಮಾಲೀಕ ಅವನನ್ನು ಹಿಡಿಯಲು ಮುಂದಾಗಿದ್ದು, ಕಳ್ಳ ತಪ್ಪಿಸಿಕೊಳ್ಳುವ ಭರದಲ್ಲಿ ಮೊಬೈಲ್ ಬಿಟ್ಟು ಹೋಗಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಬೈಕಿನಲ್ಲಿ ಬಂದ ಇಬ್ಬರು ಕಳ್ಳರಲ್ಲಿ, ಒಬ್ಬ ಅಂಗಡಿಯೊಳಗೆ ಹೋಗಿದ್ರೆ ಮತ್ತೊಬ್ಬ ಹೊರಗಡೆ ನಿಂತುಕೊಂಡು ನೋಡುತ್ತಿರುತ್ತಾನೆ. ಹೀಗೆ ಆಭರಣಗಳನ್ನು ನೋಡುತ್ತಾ ಆತ ತನ್ನ ಜೇಬಿನಿಂದ ಗನ್ ತೆಗೆದು ಮಾಲೀಕನಿಗೆ ತೋರಿಸಿ ಚಿನ್ನವನ್ನು ಕದಿಯಲು ಮುಂದಾಗುತ್ತಾನೆ. ಆಗ ಮಾಲೀಕ ವಾಸುದೇವ್ ಮತ್ತು ಕಳ್ಳನ ನಡುವೆ ಸಂಘರ್ಷ ನಡೆದು, ಕಳ್ಳ ಓಡುವ ಭರದಲ್ಲಿ ಮೊಬೈಲ್ ಅನ್ನು ಮಾಲೀಕನ ಕೈಯಲ್ಲೇ ಬಿಟ್ಟು ಓಡುತ್ತಾನೆ.
ಓದಿ: ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿ: 8 ಜನರ ಬಂಧನ
ಕಳ್ಳ ಮತ್ತು ಮಾಲೀಕನ ನಡುವೆ ನಡೆದ ಈ ಸಂಘರ್ಷದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಘಟನೆಯ ಬಗ್ಗೆ ತನಿಖೆ ನಡೆಸಿದರು.